CHITRADURGA NEWS | 25 OCTOBER 2025
ಚಿತ್ರದುರ್ಗ: ನಾಡಿನ ಅನ್ನದಾತರ ನಿತ್ಯ ಸಂಜೀವಿನಿ, ಜಲಕಲ್ಯಾಣವೇ ಜನಕಲ್ಯಾಣದ ಮಹೋನ್ನತಿಯ ಸಾಕರ ಮೂರ್ತಿಗಳಾದ ಶ್ರೀ ತರಳಬಾಳು ಜಗದ್ಗುರು ಶ್ರೀ ೧೧೦೮ ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರ ಕರಣಧಾರತ್ವದ ಯಶೋಗಾಥೆಗೆ ಸಾಕ್ಷಿಯಾದ ಜಗಳೂರು ತಾಲ್ಲೂಕು 57 ಕೆರೆಗಳಿಗೆ ಏತ ನೀರಾವರಿ ಯೋಜನೆ ಅನ್ನದಾತರು ಬಾಳಿನಲಿ ನಂಗೆ ಬೆಳದಿಂಗಳನ್ನು ನೂರ್ಮಡಿಗೊಳಿಸಿದೆ.
ಇದನ್ನೂ ಓದಿ: ಚಿತ್ರದುರ್ಗ ಮಾರುಕಟ್ಟೆಯಲ್ಲಿ ಇಂದಿನ ಹತ್ತಿ ರೇಟ್ ಎಷ್ಟಿದೆ?
ಬರವನ್ನೆ ಹೊದ್ದು ಮಲಗಿದ್ದ ಜಗಳೂರು ತಾಲ್ಲೂಕಿಗೆ ಶ್ರೀ ಜಗದ್ಗುರುಗಳವರ ಕೆರೆ ತುಂಬಿಸುವ ಯೋಜನೆಯಿಂದ ಮಲೆನಾಡಿನ ಸೊಬಗಿನ ಕನಸನ್ನು ನನಸಾಗಿಸುತ್ತಿದೆ.
ತಾಲ್ಲೂಕಿನ ಬಹುತೇಕ ಕೆರೆಗಳು ಏತ ನೀರಾವರಿ ಯೋಜನೆಯ ಪರಿಣಾಮ ತುಂಬಿ ಹರಿಯುತ್ತಿವೆ. ಮೈಸೂರು ಸಂಸ್ಥಾನದಲ್ಲಿಮಂತ್ರಿಯಾಗಿದ್ದ ಜೆ.ಎಂ.ಇಮಾಂ ಸಾಹೇಬರು ಕಟ್ಟಿಸಿದ ಗಡಿ ಮಾಕುಂಟೆ ಕೆರೆ ತುಂಬಿ ಕೋಡಿ ಬಿದ್ದಿದ್ದು ಈ ಭಾಗದ ರೈತರಲ್ಲಿಸಂತಸದ ಹೊನಲು ಹರಿದಿದೆ.
ಜಗಳೂರು ತಾಲೂಕಿನ ಗಡಿಮಾಕುಂಟೆ ಕೆರೆ 50 ವರ್ಷಗಳ ಹಿಂದೆ ನಿರ್ಮಾಣವಾಗಿತ್ತು. 25 ವರ್ಷಗಳಿಂದ ನೀರಿಲ್ಲದೆ ಒಣಗಿತ್ತು. 57 ಕೆರೆ ತುಂಬಿಸುವ ಏತ ಕಾಮಗಾರಿ ನಂತರ ಸತತ ಎರಡು ವರ್ಷಗಳಿಂದ ಕೆರೆ ಕೋಡಿ ಹರಿಯುತ್ತಿದೆ. ಇದರಿಂದ ರೈತರು ಸಂತಸಗೊಂಡಿದ್ದಾರೆ. ಕೆರೆಯ ನೀರು ಹಳ್ಳದ ಮೂಲಕ ಮಾಲವಿ ಜಲಾಶಯ ಸೇರುತ್ತದೆ. ಇದರಿಂದ ಅಂತರ್ಜಲ ಮಟ್ಟ ಹೆಚ್ಚಾಗಿ ಬೋರ್ವೆಲ್ಗಳು ಪುನಶ್ಚೇತನಗೊಂಡಿವೆ. ರೈತರು ಬಹು ವಾರ್ಷಿಕ ಬೆಳೆ ಬೆಳೆಯಲು ಅನುಕೂಲವಾಗಿದೆ.
ಇದನ್ನೂ ಓದಿ: ಸುತ್ತೋಲೆ ಹಿಂಪಡೆಯಲು ಉಪನ್ಯಾಸಕರು, ಪ್ರಚಾರ್ಯರಿಂದ ಮನವಿ
ಕೊಟ್ಟೂರು ಹಾಗೂ ಜಗಳೂರು ತಾಲೂಕಿನ ಗಡಿಭಾಗದಲ್ಲಿರುವ ಗಡಿ ಮಾಕುಂಟೆ ಕೆರೆಯನ್ನು 5 ದಶಕಗಳ ಹಿಂದೆ ಕಟ್ಟಿಸಲಾಗಿದೆ. ಕಳೆದ 25 ವರ್ಷಗಳಿಂದಲೂ ನೀರಿಲ್ಲದೇ ಮರು ಭೂಮಿಯಂತಿತ್ತು. ಆದರೆ 57 ಕೆರೆ ತುಂಬಿಸುವ ಏತ ಕಾಮಗಾರಿ ಪೂರ್ಣ ನಂತರ ಸತತ ಎರಡು ವರ್ಷಗಳಿಂದ ಕೋಡಿ ಬೀಳುತ್ತಿದ್ದು ರೈತರ ಸಂತಸಕ್ಕೆ ಪಾರವೇ ಇಲ್ಲದಂತಾಗಿದೆ.
ಈ ಕೆರೆ ಗಡಿ ಮಾಕುಂಟಿ ಗ್ರಾಮಕ್ಕೆ ಮಾತ್ರ ಸೀಮಿತವಾಗಿಲ್ಲ, ಅಲ್ಲಿಂದ ಅದರ ಕೋಡಿಯ ನೀರು ಹಳ್ಳದ ಮೂಲಕ ಗೋಪಲಾಪುರ, ಚಿಕ್ಕಬಂಟನಹಳ್ಳಿ, ಸೊಕ್ಕೆ, ಕೊಟ್ಟೂರು ತಾಲೂಕಿನ ತೂಲಹಳ್ಳಿ, ಕುರುಬನಹಳ್ಳಿ, ನಾಗರಕಟ್ಟೆ, ಕೋಣನಹಳ್ಳಿ, ಮಂಗನಹಳ್ಳಿ, ಜೋಳದ ಕೂಡ್ಲಿಗಿ, ಚೀರನಹಳ್ಳಿಯ ಮುಖಾಂತರವಾಗಿ ಅಯ್ಯನಹಳ್ಳಿ ದೊಡ್ಡ ಹಳ್ಳಕ್ಕೆ ಸೇರಿ ಅಲ್ಲಿಂದ ಮಾಲವಿ ಜಲಾಶಯಕ್ಕೆ ಈ ನೀರು ಹರಿಯುತ್ತದೆ. ಹೀಗಾಗಿ ಇದು ಕೇವಲ ಹಳ್ಳವಾಗಿದೆ ಚಿಕ್ಕ ನದಿಯಂತೆ ಹರಿಯುತ್ತಿದ್ದು ಈ ಭಾಗದ ರೈತರ ಜೀವನಾಡಿಯಾಗಿದೆ.

ಈ ಹಳ್ಳಕ್ಕೆ ಪ್ರತಿಯೊಂದು ಗ್ರಾಮದಲ್ಲಿಯೂ ಅಡ್ಡಲಾಗಿ ಚೆಕ್ ಡ್ಯಾಮ್ ನಿರ್ಮಿಸಲಾಗಿದೆ. ಹಾಗಾಗಿ ಪ್ರತಿಯೊಂದು ಊರಿನಲ್ಲಿಯೂ ಕೂಡ ಸಣ್ಣ ಕೆರೆಯಂತೆ ನೀರು ಶೇಖರಣೆಯಾಗುತ್ತದೆ. ಇದರಿಂದ ಅಂತರ್ಜಲ ಮಟ್ಟ ಹೆಚ್ಚಾಗುತ್ತಿರುವುದು ವಿಶೇಷ. ನೀರಿನ ಶೇಖರಣೆ ಮತ್ತು ಹಳ್ಳದ ಹರಿವುನಿಂದಾಗಿ ಬಂದ್ ಆಗಿದ್ದ ಬೋರ್ ವೆಲ್ ಗಳಲ್ಲಿಗಂಗಾವತರಣವಾಗುತ್ತಿದೆ.
90 ರ ದಶಕದಿಂದ ಈಚೆಗೆ ಈ ಭಾಗದ ರೈತರು ತುಂಬಾ ಕಷ್ಟ ಅನುಭವಿಸುತ್ತಿದ್ದರು. ಈ ಭಾಗ ಒಣ ಭೂಮಿ ಎಂದೇ ಹೆಸರಾಗಿತ್ತು. ಈಗ ಕೆರೆಯ ಕೋಡಿ ಬಿದ್ದಿರುವುದರಿಂದ ಉತ್ತಮ ನೀರಾವರಿ ಸೌಲಭ್ಯ ದೊರೆಯುತ್ತಿದೆ. ಇದರಿಂದ ಇನ್ನು ಮುಂದೆ ಈ ಭಾಗದ ರೈತರು ಅಡಕೆ, ತೆಂಗು, ಮೆಣಸು, ಬಾಳೆ ಸೇರಿ ಬಹು ವಾರ್ಷಿಕ ಬೆಳೆ ಬೆಳೆಯ ವ್ಯಾಪ್ತಿಯೂ ಹಿಗ್ಗಲಿದೆ ಎಂದು ರೈತರು ಸಂತಸದಲ್ಲಿ ಇದ್ದಾರೆ.
ಶಾಸಕರಿಂದ ಬಾಗೀನ
ಬೆಳಕಿನ ಹಬ್ಬ ದೀಪಾವಳಿ ಸಂದರ್ಭದಲ್ಲಿಶಾಸಕ ಬಿ.ದೇವೇಂದ್ರಪ್ಪ ಬಾಗೀನ ಅರ್ಪಿಸಿದರು. ಕಳೆದ ವರ್ಷವೂ ಕೆರೆ ಕೋಡಿ ಬಿದ್ದಿತ್ತು, ಈ ವರ್ಷವೂ ಕೋಡಿ ಬಿದ್ದಿದ್ದು ರೈತರ ನೆಮ್ಮದಿಗೆ ದಾರಿಯಾಗಲಿದೆ. ತರಳಬಾಳು ಶ್ರೀಗಳ ಶ್ರಮ ಮತ್ತು ಸರಕಾರದ ಹಣ ವ್ಯರ್ಥವಾಗಲಿಲ್ಲ, ಇಂತಹ ಯೋಜನೆ ಜನರ ಜೀವನ ಮಟ್ಟವನ್ನೇ ಬದಲಿಸಲಿವೆ ಎಂದು ಶಾಸಕ ದೇವೇಂದ್ರಪ್ಪ ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನೂ ಓದಿ: ಹಕ್ಕು ಪಡೆಯದ ಠೇವಣಿಗಳ ಇತ್ಯರ್ಥಿಪಡಿಸುವ ಅಭಿಯಾನ | ಡಿಸಿ ಚಾಲನೆ
ಶ್ರೀ ತರಳಬಾಳು ಜಗದ್ಗುರು ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳ ಕನಸು ಹಾಗೂ ಜಗಳೂರು ಕ್ಷೇತ್ರದ ಜನ ಪ್ರತಿನಿಧಿಗಳಾದ ಎಸ್ . ವಿ.ರಾಮಚಂದ್ರಪ್ಪ, ಎಚ್ .ಪಿ.ರಾಜೇಶ್ ಹಾಗೂ ಹಾಲಿ ಶಾಸಕ ದೇವೇಂದ್ರಪ್ಪ ಇವರ ಪರಿಶ್ರಮ ಮತ್ತು ಆಸಕ್ತಿಯಿಂದ ಈ ಭಾಗದ ರೈತರಿಗೆ ಶಾಶ್ವತ ನೀರಿನ ವ್ಯವಸ್ಥೆ ಆದಂತಾಗಿದೆ ಎಂದು ಈ ಭಾಗದ ಯುವ ರೈತ ಪ್ರದೀಪ್ ತೂಲಹಳ್ಳಿ ಆಶಯ ವ್ಯಕ್ತಪಡಿಸಿದ್ದಾರೆ.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

