
CHITRADURGA NEWS | 27 JANUARY 2026
ಚಿತ್ರದುರ್ಗ: 19ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಖ್ಯಾತ ಲೇಖಕಿ ಡಾ.ಕೆ.ಆರ್.ಸಂಧ್ಯಾರೆಡ್ಡಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಕೆ.ಎಂ.ಶಿವಸ್ವಾಮಿ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಧ್ಯಾರೆಡ್ಡಿ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ ಎಂದರು.
ಫೆಬ್ರವರಿ 17 ಮತ್ತು 18 ರಂದು ಸಮ್ಮೇಳನ ನಡೆಯಲಿದೆ. ಈ ಸಮ್ಮೇಳನಕ್ಕೆ ಲೇಖಕಿ ಸಂಧ್ಯಾರೆಡ್ಡಿ ಅವರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎಂದರು.
ಕಳೆದ ಒಂದು ವಾರದಿಂದ ಈ ಬಗ್ಗೆ ಚರ್ಚೆ ನಡೆಸಿದ್ದು, ಡಾ.ಬಿ.ಎಕ್.ವೇಣು ಸೇರಿದಂತೆ ಹಲವು ಹಿರಿಯರು, ಸಾಹಿತಿಗಳು ಮಹಿಳೆಯರಿಗೆ ಅವಕಾಶ ಮಾಡಿಕೊಡಬೇಕು ಎಂದು ಸಲಹೆ ನೀಡಿದ್ದು, ಡಾ.ಕೆ.ಸಂಧ್ಯಾರೆಡ್ಡಿ ಅವರ ಸಮ್ಮತಿ ಪಡೆದು ಘೋಷಣೆ ಮಾಡಲಾಗಿದೆ ಎಂದರು.
ತಾಲೂಕು ಕಸಾಪ ಅಧ್ಯಕ್ಷ ವಿ.ಎಲ್.ಪ್ರಶಾಂತ್ ಮಾತನಾಡಿ, ಈವರೆಗೆ ಮಹಿಳೆಯರನ್ನು ಗುರುತಿಸಿರಲಿಲ್ಲ ಎಂಬ ಕೊರಗು ಇತ್ತು. ಅದನ್ನು ನಿವಾರಿಸುವ ದೃಷ್ಟಿಯಿಂದ ಮಹತ್ವದ ಲೇಖಕಿ ಸಂಧ್ಯಾರೆಡ್ಡಿ ಅವರನ್ನು ಆಯ್ಕೆ ಮಾಡಿ ತವರಿಗೆ ಕರೆದಿದ್ದೇವೆ ಎಂದರು.
ನಗರದ ಜಿ.ಜಿ.ಸಮುದಾಯ ಭವನದಲ್ಲಿ ಎರಡು ದಿನಗಳ ಈ ಸಮ್ಮೇಳನ ನಡೆಯಲಿದೆ ಎಂದು ವಿವರಿಸಿದರು.
ಪ್ರಕಟಿತ ಸಾಹಿತ್ಯ ಕೃತಿಗಳು
ಕಾವ್ಯ : ಮೂವತ್ತೈದರ ಹೊಸ್ತಿಲು 1990 ಈ ಪ್ರೀತಿಯೊಳಗೆ – 1996 ಇನ್ನೊಂದು ದನಿ (ಅನುವಾದಿತ ಕವಿತೆಗಳು) – 2004 ಇದು ಇನ್ನೊಂದು ಲೋಕ – 2009 ಮಲ್ಲಿಗೆಯ ಅವಸಾನ (ಸಮಗ್ರ ಕವಿತೆಗಳು)-2015 ಪುಟಾಣಿ ಪದ್ಯಗಳು – 2018
ಕಥಾ ಸಂಕಲನ : ಬೇರೊಂದು ದಾರಿ 1998
ಅಂಕಣಬರಹ: ಕಂಡದ್ದು ಅನಿಸಿದ್ದು – 2008
ಜೀವನ ಚರಿತ್ರೆ : ಮರೆತೋರ ಮನೆಯ ಮುರಿದಾಳು – 2014
1. ಕೆ.ಸಿ.ರೆಡ್ಡಿ (ಮೈಸೂರು ರಾಜ್ಯದ ಪ್ರಥಮ ಮುಖ್ಯಮಂತ್ರಿ ಕ್ಯಾಸಂಬಳ್ಳಿ ಚಂಗಲರಾಯ ರೆಡ್ಡಿಯವರ ಜೀವನ, ಸಾಧನೆ – ಪ್ರತಿಭಾವಂತ ಸಂಸದೀಯ ಪಟುಗಳ ಮಾಲಿಕೆಯಲ್ಲಿ ಪ್ರಕಟಣೆ – 2000.
2. ಪ್ರಿಯ ಬಂಧು (ಸಂಸತ್ ಪಟು ಶ್ರೀ ಮುಲ್ಕಾಗೋವಿಂದರೆಡ್ಡಿಯವರ ಜೀವನ ಚರಿತ್ರೆ) – 2005,
ಲೇಖಕಿ ಅನಸೂಯ ರಾಮರೆಡ್ಡಿಯವರ ಜೀವನ ಚರಿತ್ರೆ – 2005.
3. ಅನಸೂಯಾ ರಾಮರೆಡ್ಡಿ
4. ಅಪೂರ್ವ ಜೀವ (ಸಂಸತ್ ಪುಟು ಎಂ.ಗೋವಿಂದರೆಡ್ಡಿಯವರ ಬದುಕು-ಬರಹ) – 2014
5. ಸಾಹಿತ್ಯ ತಪಸ್ವಿ ಮಲ್ಲಿಕಾ ಕಡಿದಾಳ್ – 2018
6. ಅನನ್ಯ ಚೇತನ- ಉಷಾ ಪಿ. ರೈ-2018
7. ಸರ್. ಕಟ್ಟಮಂಚಿ ರಾಮಲಿಂಗಾ ರೆಡ್ಡಿ – ನಾವು ಮರೆತ ಮಹನೀಯ
8. ನೆಲೆಯಾದ ಜೀವಗಳು (ವ್ಯಕ್ತಿ ಚಿತ್ರಗಳು)- 2015.
ಜನಾಂಗೀಯ ಅಧ್ಯಯನ : ಕರ್ನಾಟಕದಲ್ಲಿ ರೆಡ್ಡಿ ಸಮುದಾಯ – 2019
ಡಾ.ಕೆ.ಆರ್.ಸಂಧ್ಯಾರೆಡ್ಡಿ ಪರಿಚಯ:
ಹಾಯ್ಕಲ್ ಗ್ರಾಮದ ಡಾ.ಕೆ.ಸಂಧ್ಯಾರೆಡ್ಡಿ ಅವರು 1953 ಜೂನ್ 22 ರಂದು ಜನಿಸಿದ್ದು, ಇವರ ತಂದೆ ಶಿಕ್ಷಣ ತಜ್ಞರಾದ ಕೆ.ರಾಮರೆಡ್ಡಿ ತಾಯಿ ಲೇಖಕಿ ಅನಸೂಯಾ. ನಿವೃತ್ತ ಅಧಿಕಾರಿ ವಿ.ಶಂಕರ ರೆಡ್ಡಿ ಇವರ ಪತಿ.
ಬಿ.ಎಸ್ಸಿ. – 1971, ಎಂ.ಎ.-ಕನ್ನಡ 1973 ಪಿಹೆಚ್.ಡಿ. – ಕನ್ನಡ ಜನಪದ ಕಥೆಗಳು – 1980 ಕರ್ನಾಟಕ ಶಾಸ್ತ್ರೀಯ ಸಂಗೀತ – ಸೀನಿಯರ್ ಸಿತಾರ್ – ಜೂನಿಯರ್ ಪಡೆದಿದ್ದಾರೆ.
ಸಂಧ್ಯಾರೆಡ್ಡಿ ಅವರು ಸುಮಾರು 75 ಕೃತಿಗಳನ್ನು ಪ್ರಕಟಿಸಿದ್ದು, ಹಲವು ಪ್ರಶಸ್ತಿಗಳು ಬಂದಿವೆ. ಪ್ರಮುಖವಾಗಿ
ಮಲ್ಲಿಕಾ ದತ್ತಿನಿಧಿ ಪ್ರಶಸ್ತಿ – ಕನ್ನಡ ಸಾಹಿತ್ಯ ಪರಿಷತ್ತು – ೨೦೦೧
ಪ್ರಶಸ್ತಿಗಳು:
ಮಲ್ಲಿಕಾ ದತ್ತಿನಿಧಿ ಪ್ರಶಸ್ತಿ ಕನ್ನಡ ಸಾಹಿತ್ಯ ಪರಿಷತ್ತು – 2001 ಉತ್ತಮ ಸಂಶೋಧಕಿ ಪ್ರಶಸ್ತಿ – ಮಿಥಿಕ್ ಸೊಸೈಟಿ 2001, ಜನಪ್ರಿಯ ಲೇಖಕಿ ಪ್ರಶಸ್ತಿ ಸಮಾಜ ಸಂಪರ್ಕ ವೇದಿಕೆ 2003, ಸಾಹಿತ್ಯ ಸಾಧನೆಗಾಗಿ ಸನ್ಮಾನ – ಶ್ರವಣ ಬೆಳಗೊಳದ ಮಹಾಮಸ್ತಕಾಭಿಷೇಕ 2005, ಸುವರ್ಣ ಜಯಂತಿ ಉತ್ಸವದ ಅಂಗವಾಗಿ ಸನ್ಮಾನ – ಕರ್ನಾಟಕ ಉಚ್ಚ ನ್ಯಾಯಾಲಯ 2006, ಜಾನಪದ ಲೋಕೋತ್ಸವ ಪ್ರಶಸ್ತಿ – 2007, ಗೊರೂರು ಸಾಹಿತ್ಯ ಪ್ರಶಸ್ತಿ ಗೊರೂರು ಪ್ರತಿಷ್ಠಾನ – 2007, ಬಿ.ಎಸ್.ಚಂದ್ರಕಲಾ ಲಿಪಿಪ್ರಾಜ್ಞೆ ಪ್ರಶಸ್ತಿ – 2008, ಹ.ಕ.ರಾಜೇಗೌಡ ಜಾನಪದ ತಜ್ಞೆ ಪ್ರಶಸ್ತಿ – ಜನದನಿ ಸಂಸ್ಥೆ, ಮಂಡ್ಯ – 2008, ಜೀಶಂಪರಮಶಿವಯ್ಯ ಜಾನಪದ ಪ್ರಶಸ್ತಿ 2010 ಕರ್ನಾಟಕ ಜಾನಪದ ಅಕಾಡೆಮಿ- ಆರ್ಯಭಟ ಪ್ರಶಸ್ತಿ – 2010, ಶ್ರೀಮತಿ ಸಾವಿತ್ರಮ್ಮ ದೇಜಗೌ ಪ್ರಶಸ್ತಿ – 2012, ಅನುಪಮ ನಿರಂಜನ ಪ್ರಶಸ್ತಿ – 2013, ತೆಲುಗು ವಿಜ್ಞಾನ ಸಮಿತಿ ಪ್ರಶಸ್ತಿ – 2017
ಜಾನಪದ – ಪ್ರಕಟಿತ ಕೃತಿಗಳು
1. ಮೂವತ್ತು ಜನಪದ ಕಥೆಗಳು – 1981
2. ಕನ್ನಡ ಜನಪದ ಕಥೆಗಳು (ಮಹಾ ಪ್ರಬಂಧ) – 1982
3. ಹಳ್ಳಿಯ ಹಾಡುಗಳು – 1994
4. ರಿಚರ್ಡ್ ಎಂ.ಡಾರ್ಸನ್ 1994
6. ಜನಪದ ಸಾಹಿತ್ಯದಲ್ಲಿ ಮಹಿಳೆ – 1995
7. ಕೈಗಾರಿಕಾ ಜಾನಪದ – 1997
8. ಜಾನಪದ ಸ್ವರೂಪ ಮತ್ತು ಸಾಹಿತ್ಯ
(ಡಿ.ಲಿಂಗಯ್ಯ ಅವರೊಂದಿಗೆ) – 1997
9. ಹಾಯ್ಕಲ್ಲಿನ ಕರಿಭಂಟ – 2004
10. ಜಾನಪದ ಪರಿಶೀಲನೆ – 2004
11. ಜನಪದ ಕಥಾಲೋಕ – 2012
ಜಾನಪದ – ಸಂಪಾದಿತ ಕೃತಿಗಳು
1. ಕೊಪ್ಪಳ ಜಿಲ್ಲೆಯ ಜಾತ್ರೆಗಳು
2. ಮಂಡ್ಯ ಜಿಲ್ಲೆಯ ಜಾತ್ರೆಗಳು
3. ಗ್ರಾಮೀಣಪಶು ಸಾಕಣೆ
4. ಗ್ರಾಮೀಣ ಬೇಟೆ
5. ಗ್ರಾಮೀಣ ಉಡುಗೆತೊಡುಗೆ
6. ಗ್ರಾಮೀಣ ವೃತ್ತಿಗಳು
ಮೇಲಿನ ಕೃತಿಗಳು ಡಾ.ದೇವೇಂದ್ರ ಕುಮಾರ ಹಕಾರಿ ಅವರೊಂದಿಗೆ – 2000
7. ಮಹಿಳಾ ಜಾನಪದ – 2003
8. ಸುವರ್ಣ ಜನಪದ ಕಾವ್ಯ – 2006
9. ಪ್ರಾಣಿ ಕಥೆಗಳು – 2010
10. ಕನ್ನಡ ಜಾನಪದ ನಿಘಂಟು – 2014
ಜಾನಪದ – ಅನುವಾದಿತ ಕೃತಿಗಳು
ಕಲೆವಲ – ಫಿಫ್ರೆಂಡ್ ದೇಶದ ಜನಪದ ಮಹಾಕಾವ್ಯ – 2001.
* ಜಾನಪದ ಅಧ್ಯಯನ – ಅಲನ್ಡಂಡಸ್ ಅವರ Study of Folklore ಕೃತಿಯ ಅನುವಾದ.
ಮಹಿಳಾ ಸಾಹಿತ್ಯ ಮತ್ತು ಮಹಿಳಾ ಅಧ್ಯಯನ – ಸಂಪಾದಿತ ಕೃತಿಗಳು
ಲೇಖಲೋಕ – 3 (ಲೇಖಕಿಯರ ಆತ್ಮ ಕಥಾನಕಗಳು) – 2001. 1.
2. ಉರಿ ಬದಲಾಗಿದೆಯೆ – (ಉದ್ಯೋನ್ಮುಖ ಕವಯಿತ್ರಿಯರ ಕವಿತೆಗಳು) – 2002.
3. ಮಹಿಳಾ ಜಾನಪದ – 2003.
ಲೇಖಕಿಯರ ಸಂಘದ ಅಧ್ಯಕ್ಷರಾಗಿ
ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆಯಾಗಿ 2005 ರಿಂದ 2011ರವರೆಗೆ ಆರು ವರ್ಷ ಕಾರ್ಯ ನಿರ್ವಹಿಸಿ ಅನೇಕ ವಿಶಿಷ್ಟ ಸಾಧನೆಗಳನ್ನು ಮಾಡಿದ್ದಾರೆ.
ಲೇಖಕಿಯರ ಸಂಘವು ಮಹಿಳಾ ಸಾಹಿತ್ಯ ಕುರಿತಂತೆ ಒಂದು ಉತ್ತಮ ಮಾಹಿತಿ ಕೇಂದ್ರವಾಗಬೇಕು ಎಂಬ ನಿಟ್ಟಿನಲ್ಲಿ ಹಿರಿಯ ಲೇಖಕಿಯರ ಮತ್ತು ಸರ್ಕಾರ ಹಾಗೂ ಅಕಾಡಮಿಗಳ ಗೌರವ ಪುರಸ್ಕೃತ ಲೇಖಕಿಯರ ಭಾವಚಿತ್ರಗಳನ್ನು ಸಂಗ್ರಹಿಸಿ ಸಂಘದಲ್ಲಿ ಪ್ರದರ್ಶಿಸಿದ್ದು, ಬೇರೆಲ್ಲಿಯೂ ಇಂತಹ ಸಂಗ್ರಹ ಲಭ್ಯವಾಗುವುದಿಲ್ಲ.
ಮೊತ್ತ ಮೊದಲ ಬಾರಿಗೆ ಲೇಖಕಿಯರಿಗಾಗಿ ರಾಜ್ಯಮಟ್ಟದ ಹವ್ಯಾಸಿ ಪತ್ರಿಕೋದ್ಯಮ ಶಿಬಿರ, ನಾಟಕ ಹಾಗೂ ರೂಪಕ ರಚನೆಗಳಲ್ಲಿ ಹೆಚ್ಚು ತೊಡಗಿಕೊಳ್ಳುವಂತೆ ನಾಟಕ ಶಿಬಿರಗಳು, ಬಿಳಿಗಿರಿ ರಂಗನ ಬೆಟ್ಟದಲ್ಲಿ ಪ್ರವಾಸಸಾಹಿತ್ಯ ಶಿಬಿರ, ರಾಜ್ಯ ಮಟ್ಟದ ರಂಗೋಲಿಕಮ್ಮಟ, ಪಾಂಡಿಚೆರಿಯ ಕರ್ನಾಟಕ ಸಂಘದ ಸಹಯೋಗದೊಂದಿಗೆ ವಿವಿಧ ಭಾಷಾ ಲೇಖಕಿಯರ ಸಮಾವೇಶ, ಗ್ರಾಮಾಂತರ ಪ್ರದೇಶದ ಮಹಿಳೆಯರು ಹಾಗೂ ಲೇಖಕಿಯರಿಗಾಗಿ ಹೊಸಕೋಟೆ, ರಾಮನಗರ, ಗುಡಿಬಂಡೆ, ಗುಲ್ಬರ್ಗ, ತುಮಕೂರು, ಮಂಡ್ಯ ಮುಂತಾದ ಕಡೆಗಳಲ್ಲಿ ಕಥಾಕಮ್ಮಟ, ಕಾವ್ಯಕಮ್ಮಟ, ಆರೋಗ್ಯ ಸಾಹಿತ್ಯ ಶಿಬಿರಗಳು ಉಲ್ಲೇಖನೀಯ. ಲೇಖಕಿಯರ ಸಮ್ಮೇಳನದಲ್ಲಿ ಗ್ರಾಮಾಂತರ ಮಹಿಳೆಯರೂ ಪಾಲ್ಗೊಳ್ಳುವಂತಾಗಬೇಕು ಎಂಬ ನಿಟ್ಟಿನಲ್ಲಿ ಮಂಡ್ಯದಲ್ಲಿ ಅಖಿಲ ಕರ್ನಾಟಕ ಲೇಖಕಿಯರ ಸಮ್ಮೇಳನ ನಡೆಸಲಾಯಿತು. (2007)
ಹೀಗೆ ಎಲ್ಲ ವರ್ಗಗಳ ಎಲ್ಲ ಸ್ಥರಗಳ ಹಾಗೂ ಬೇರೆ ಬೇರೆ ಪ್ರದೇಶಗಳ ಮಹಿಳೆಯರನ್ನು, ಲೇಖಕಿಯರನ್ನು ಒಳಗೊಳ್ಳುವಂತೆ ವೈವಿಧ್ಯಪೂರ್ಣವಾದ ಹಾಗೂ ಉಪಯುಕ್ತವಾದ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಲೇಖಕಿಯರ ಬೆಳವಣಿಗೆಗೆ ಮತ್ತು ಸಂಘದ ಚಟುವಟಿಕೆಗಳಿಗೆ ಹೊಸ ಆಯಾಮಗಳನ್ನು ನೀಡಿದ ಹೆಗ್ಗಳಿಕೆ.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

