By using this site, you agree to the Privacy Policy and Terms of Use.
Accept
Chitradurga News-Kannada NewsChitradurga News-Kannada NewsChitradurga News-Kannada News
Notification
Font ResizerAa
  • ಮುಖಪುಟ
  • ಮುಖ್ಯ ಸುದ್ದಿ
    ಮುಖ್ಯ ಸುದ್ದಿShow More
    ರಂಗೋಲಿ ಸ್ಪರ್ಧೆ ಕಾರ್ಯಕ್ರಮ
    ಮುರುಘಾಮಠವು ಬಸವಾದಿ ಶರಣರ ತತ್ವ, ಚಿಂತನೆಗಳ ಪ್ರಯೋಗಶಾಲೆ | ಡಾ.ಬಸವಕುಮಾರ ಶ್ರೀ 
    11 hours ago
    ಕೃಷಿ ಹೊಂಡ
    ಕೃಷಿ ಹೊಂಡದಲ್ಲಿ ಮುಳುಗಿ ಬಾಲಕ ಸಾವು
    1 day ago
    ಮುರುಘಾ ಮಠ
    ಮುರುಘಾ ಮಠ | ಬಸವ ಜಯಂತಿ ಪ್ರಬಂಧ ಸ್ಪರ್ಧೆ ವಿಜೇತರ ಪಟ್ಟಿ ಪ್ರಕಟ
    1 day ago
    ನಗರದ ಕೆಳಕೋಟೆಗೆ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಭೇಟಿ
    ಚಿತ್ರದುರ್ಗದಲ್ಲಿ ಫುಡ್ ಕೋರ್ಟ್ ನಿರ್ಮಾಣಕ್ಕೆ ಯೋಜನೆ | ಶಾಸಕ‌ ಕೆ.ಸಿ.ವೀರೇಂದ್ರ (ಪಪ್ಪಿ)
    1 day ago
    ಖಾಸಗಿ ಕೃಷಿ ಕಾಲೇಜು ಆರಂಭಿಸಲು ಅರ್ಜಿ ಆಹ್ವಾನ
    1 day ago
  • ಕ್ರೈಂ ಸುದ್ದಿ
    ಕ್ರೈಂ ಸುದ್ದಿShow More
    ಬೈಕ್ – ಕಾರ್ ನಡುವೆ ಭೀಕರ ಅಪಘಾತ | ಬೈಕ್ ಸವಾರರು ಇಬ್ಬರು ಸಾವು
    2 days ago
    ಎರಡು ಲಾರಿಗಳ ನಡುವೆ ಮುಖಾಮುಖಿ ಡಿಕ್ಕಿ | ಚಾಲಕರು ಸಾವು
    6 days ago
    car accident near molakalmuru rajapura
    ಭೀಕರ ರಸ್ತೆ ಅಪಘಾತ | ಇಬ್ಬರು ಸ್ಥಳದಲ್ಲೇ ಮೃತ
    2 weeks ago
    ಎತ್ತಿನ ಗಾಡಿಗೆ ಬುಲೆರೋ ಡಿಕ್ಕಿ | ಸ್ಥಳದಲ್ಲೇ ಎತ್ತುಗಳು ಸಾವು
    2 weeks ago
    ಶಿವಲಿಂಗಪ್ಪ
    ರೈತ ಮುಖಂಡ, ರೇಣುಕಾ ಆಗ್ರೋ ಫರ್ಟಿಲೈಜರ್ಸ್‌ನ ಶಿವಲಿಂಗಪ್ಪ ಶವವಾಗಿ ಪತ್ತೆ
    3 weeks ago
  • ತಾಲೂಕು
    ತಾಲೂಕುShow More
    ಕೆರೆಗಳ ಪುನಶ್ಚೇತನಕ್ಕೆ ಸಾಣೇಹಳ್ಳಿ ಶ್ರೀ ಚಾಲನೆ
    ಕೆರೆಗಳ ಪುನಶ್ಚೇತನಕ್ಕೆ ಸಾಣೇಹಳ್ಳಿ ಶ್ರೀ ಚಾಲನೆ 
    5 days ago
    ಕುಂಚಿಟಿಗ ಮಠದಲ್ಲಿ ಸುಜ್ಞಾನ ಸಂಗಮ, ಕಾನೂನು ಅರಿವು ಜಾಗೃತಿ
    ಕುಂಚಿಟಿಗ ಮಠದಲ್ಲಿ ಸುಜ್ಞಾನ ಸಂಗಮ, ಕಾನೂನು ಅರಿವು ಜಾಗೃತಿ | ಶಾಂತವೀರ ಶ್ರೀ ಸಾನಿಧ್ಯ
    1 week ago
    ಮತ್ತೆ ಪಾರಮ್ಯ ಮೆರೆದ ಆರ್‌ಪಿ ಕಾಲೇಜು (RP COLLEGE) | ಹೊಸದುರ್ಗ ತಾಲೂಕಿಗೆ ಅಗ್ರ ಸ್ಥಾನದ ದಾಖಲೆ
    1 week ago
    ದ್ವಿಭಾಷಾ ತರಗತಿ ಬೋಧನೆ ಕುರಿತು ಶಿಕ್ಷಕರಿಗೆ ತರಬೇತಿ ಕಾರ್ಯಾಗಾರ
    ದ್ವಿಭಾಷಾ ತರಗತಿ ಬೋಧನೆ ಕುರಿತು ಶಿಕ್ಷಕರಿಗೆ ತರಬೇತಿ ಕಾರ್ಯಾಗಾರ 
    2 weeks ago
    ಹೊಸದುರ್ಗ ಕುಂಚಿಟಿಗ ಮಠದಲ್ಲಿ ಅಂತರ್ಜಾತಿ ವಿವಾಹ | ಶ್ರೀ ಶಾಂತವೀರ ಸ್ವಾಮೀಜಿ‌ ಸಾನ್ನಿಧ್ಯ
    ಹೊಸದುರ್ಗ ಕುಂಚಿಟಿಗ ಮಠದಲ್ಲಿ ಅಂತರ್ಜಾತಿ ವಿವಾಹ | ಶ್ರೀ ಶಾಂತವೀರ ಸ್ವಾಮೀಜಿ‌ ಸಾನ್ನಿಧ್ಯ
    3 weeks ago
  • ಅಡಕೆ ಧಾರಣೆ
    ಅಡಕೆ ಧಾರಣೆShow More
    arecanut price list
    ಅಡಿಕೆ ಧಾರಣೆ |17 ಏಪ್ರಿಲ್‌ |ಇಂದಿನ ಮಾರುಕಟ್ಟೆಯಲ್ಲಿ ಯಾವ ಅಡಿಕೆಗೆ ಎಷ್ಟು ರೇಟ್‌
    3 days ago
    arecanut price list
    ಅಡಿಕೆ ಧಾರಣೆ | ರಾಶಿ ಅಡಿಕೆ ಬೆಲೆಯಲ್ಲಿ ಮತ್ತಷ್ಟು ಏರಿಕೆ
    4 days ago
    arecanut price list
    ಅಡಿಕೆ ಧಾರಣೆ | ರಾಶಿ ಅಡಿಕೆ ಬೆಲೆಯಲ್ಲಿ ಏರಿಕೆ
    1 week ago
    arecanut price list
    ಅಡಿಕೆ ಧಾರಣೆ | 10 ಏಪ್ರಿಲ್‌ | ಯಾವ ಅಡಿಕೆಗೆ ಎಷ್ಟು ರೇಟ್‌ ?
    1 week ago
    arecanut price list
    ಅಡಿಕೆ ಧಾರಣೆ | 9 ಏಪ್ರಿಲ್‌ | ಸಾಗರ ಮಾರುಕಟ್ಟೆಯಲ್ಲಿ ರಾಶಿ ಬೆಲೆ ಏರಿಕೆ
    2 weeks ago
  • Dina Bhavishya
    Dina BhavishyaShow More
    ದಿನ ಭವಿಷ್ಯ
    ದಿನ ಭವಿಷ್ಯ | ಏಪ್ರಿಲ್ 20 | ವೃತ್ತಿ ಮತ್ತು ವ್ಯವಹಾರಗಳಲ್ಲಿ ಆತುರದ ನಿರ್ಧಾರ ಬೇಡ, ಆರೋಗ್ಯದಲ್ಲಿ ಎಚ್ಚರ
    15 hours ago
    ದಿನ ಭವಿಷ್ಯ
    ದಿನ ಭವಿಷ್ಯ | ಏಪ್ರಿಲ್ 19 | ಆಕಸ್ಮಿಕ ಧನಲಾಭ, ಕೈಗೊಂಡ ಕೆಲಸಗಳು ಸಮಯಕ್ಕೆ ಸರಿಯಾಗಿ ಪೂರ್ಣ
    2 days ago
    ದಿನ ಭವಿಷ್ಯ
    ದಿನ ಭವಿಷ್ಯ | ಏಪ್ರಿಲ್ 18 | ಆಸ್ತಿ ವಿಚಾರಗಳಲ್ಲಿ ಸಹೋದರರೊಂದಿಗೆ ವಿವಾದಗಳು, ಆರ್ಥಿಕ ಅನುಕೂಲತೆ
    3 days ago
    ದಿನ ಭವಿಷ್ಯ
    ದಿನ ಭವಿಷ್ಯ | ಏಪ್ರಿಲ್ 17 | ಕೈಗೊಂಡ ಕೆಲಸಗಳಲ್ಲಿ ವಿಳಂಬ, ದೂರದ ಪ್ರಯಾಣದಲ್ಲಿ ಎಚ್ಚರ
    4 days ago
    ದಿನ ಭವಿಷ್ಯ
    ದಿನ ಭವಿಷ್ಯ | ಏಪ್ರಿಲ್ 16 | ನಿರುದ್ಯೋಗಿಗಳಿಗೆ ಉತ್ತಮ ಅವಕಾಶಗಳು, ಹಠಾತ್ ಪ್ರಯಾಣದ ಸೂಚನೆ
    5 days ago
  • ಮಾರುಕಟ್ಟೆ ಧಾರಣೆ
    ಮಾರುಕಟ್ಟೆ ಧಾರಣೆShow More
    ಮಾರುಕಟ್ಟೆ ಧಾರಣೆ
    ಮಾರುಕಟ್ಟೆ ಧಾರಣೆ | ಏಪ್ರಿಲ್ 18 | ಹತ್ತಿ ರೇಟ್ ಎಷ್ಟಿದೆ?
    2 days ago
    ಮಾರುಕಟ್ಟೆ ಧಾರಣೆ
    ಮಾರುಕಟ್ಟೆ ಧಾರಣೆ | ಏಪ್ರಿಲ್ 17 | ಮೆಕ್ಕೆಜೋಳ, ರಾಗಿ ರೇಟ್…
    3 days ago
    ಮಾರುಕಟ್ಟೆ ಧಾರಣೆ
    ಮಾರುಕಟ್ಟೆ ಧಾರಣೆ | ಏಪ್ರಿಲ್ 16 | ಹತ್ತಿ ರೇಟ್ ಎಷ್ಟಿದೆ?
    4 days ago
    ಮಾರುಕಟ್ಟೆ ಧಾರಣೆ
    ಮಾರುಕಟ್ಟೆ ಧಾರಣೆ | ಏಪ್ರಿಲ್ 15 | ಮೆಕ್ಕೆಜೋಳ, ಶೇಂಗಾ, ರಾಗಿ ರೇಟ್…
    5 days ago
    ಮಾರುಕಟ್ಟೆ ಧಾರಣೆ
    ಮಾರುಕಟ್ಟೆ ಧಾರಣೆ | ಏಪ್ರಿಲ್ 13 | ಮೆಕ್ಕೆಜೋಳ ರೇಟ್…
    1 week ago
  • ಹೊಳಲ್ಕೆರೆ
    ಹೊಳಲ್ಕೆರೆShow More
    ಹೊಳಲ್ಕೆರೆಯಲ್ಲಿ ಭಾನುಮೂರ್ತಿ ನುಡಿನಮನ
    ಹೊಳಲ್ಕೆರೆಯಲ್ಲಿ ಭಾನುಮೂರ್ತಿ ನುಡಿನಮನ | ಸಿದ್ಧಯ್ಯನಕೋಟೆ ಶ್ರೀ, ಎಚ್.ಆಂಜನೇಯ ಭಾಗೀ 
    1 week ago
    ಶಾಸಕ ಎಂ.ಚಂದ್ರಪ್ಪ, ರೈತ ಮುಖಂಡರಿಂದ ಭದ್ರಾ ಮೇಲ್ದಂಡೆ ಕಾಮಗಾರಿ ವೀಕ್ಷಣೆ
    ಶಾಸಕ ಎಂ.ಚಂದ್ರಪ್ಪ, ರೈತ ಮುಖಂಡರಿಂದ ಭದ್ರಾ ಮೇಲ್ದಂಡೆ ಕಾಮಗಾರಿ ವೀಕ್ಷಣೆ 
    3 weeks ago
    ಅಗ್ನಿಶಾಮಕ ಠಾಣೆ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ
    2.18 ಕೋಟಿ ವೆಚ್ಚದ ಅಗ್ನಿಶಾಮಕ ಠಾಣೆಗೆ ಶಾಸಕ ಡಾ.ಎಂ.ಚಂದ್ರಪ್ಪ ಭೂಮಿಪೂಜೆ 
    4 weeks ago
    ಆರೋಗ್ಯ ಉಪ ಕೇಂದ್ರ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ
    ಆರೋಗ್ಯ ಉಪ ಕೇಂದ್ರ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ 
    1 month ago
    NG ಹಳ್ಳಿ ಗ್ರಾಮದಲ್ಲಿ ನೂತನ ಕರ್ನಾಟಕ ಪಬ್ಲಿಕ್ ಶಾಲೆಗೆ ಭೂಮಿಪೂಜೆ
    NG ಹಳ್ಳಿ ಗ್ರಾಮದಲ್ಲಿ ನೂತನ ಕರ್ನಾಟಕ ಪಬ್ಲಿಕ್ ಶಾಲೆಗೆ ಭೂಮಿಪೂಜೆ | ಶಾಸಕ ಚಂದ್ರಪ್ಪ, MLC ಕೆ.ಎಸ್.ನವೀನ್ ಭಾಗೀ 
    1 month ago
  • ಹಿರಿಯೂರು
    ಹಿರಿಯೂರುShow More
    ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ ಕಲ್ಪಿಸುವಂತೆ ಎಬಿವಿಪಿ ಪ್ರತಿಭಟನೆ
    ಹಿರಿಯೂರು | ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ ಕಲ್ಪಿಸುವಂತೆ ಎಬಿವಿಪಿ ಒತ್ತಾಯ 
    1 week ago
    VaniVilasa sagara dam
    ವಿವಿ ಸಾಗರದಿಂದ ಅಚ್ಚುಕಟ್ಟು ಪ್ರದೇಶದ ರೈತರಿಗೆ ನೀರು | ಒಂದು ತಿಂಗಳು ನಾಲೆಗೆ ನೀರಿನ ಹರಿವು
    2 months ago
    Power Cut chitradurga News (3)
    ಹಿರಿಯೂರು | ಇಂದು ವಿದ್ಯುತ್ ವ್ಯತ್ಯಯ
    2 months ago
    Shree SHADAKSHARAMUNI SWAMIJI
    ಆದಿಜಾಂಬವ ಶಾಖಾ ಮಠದ ಹೆಸರಿನ ಸಭೆಗೆ ನಮ್ಮ ಸಮ್ಮತಿ ಇಲ್ಲ | ದಾವಣಗೆರೆಯಲ್ಲಿ ಫೆ.14 ರಂದು ಕರೆದಿರುವ ಸಭೆಗೆ ಸ್ಪಷ್ಟೀಕರಣ | ಶ್ರೀ ಷಡಾಕ್ಷರಮುನಿ ಸ್ವಾಮೀಜಿ
    2 months ago
    M.G. Rangaswamy
    ಹಿರಿಯೂರು ಕಸಾಪ ಸಮ್ಮೇಳನಾಧ್ಯಕ್ಷರಾಗಿ ‘ಎಂಜಿಆರ್‌ʼ
    3 months ago
  • ಹೊಸದುರ್ಗ
    ಹೊಸದುರ್ಗShow More
    ಕೆರೆಗಳ ಪುನಶ್ಚೇತನಕ್ಕೆ ಸಾಣೇಹಳ್ಳಿ ಶ್ರೀ ಚಾಲನೆ
    ಕೆರೆಗಳ ಪುನಶ್ಚೇತನಕ್ಕೆ ಸಾಣೇಹಳ್ಳಿ ಶ್ರೀ ಚಾಲನೆ 
    5 days ago
    ಕುಂಚಿಟಿಗ ಮಠದಲ್ಲಿ ಸುಜ್ಞಾನ ಸಂಗಮ, ಕಾನೂನು ಅರಿವು ಜಾಗೃತಿ
    ಕುಂಚಿಟಿಗ ಮಠದಲ್ಲಿ ಸುಜ್ಞಾನ ಸಂಗಮ, ಕಾನೂನು ಅರಿವು ಜಾಗೃತಿ | ಶಾಂತವೀರ ಶ್ರೀ ಸಾನಿಧ್ಯ
    1 week ago
    ಮತ್ತೆ ಪಾರಮ್ಯ ಮೆರೆದ ಆರ್‌ಪಿ ಕಾಲೇಜು (RP COLLEGE) | ಹೊಸದುರ್ಗ ತಾಲೂಕಿಗೆ ಅಗ್ರ ಸ್ಥಾನದ ದಾಖಲೆ
    1 week ago
    ದ್ವಿಭಾಷಾ ತರಗತಿ ಬೋಧನೆ ಕುರಿತು ಶಿಕ್ಷಕರಿಗೆ ತರಬೇತಿ ಕಾರ್ಯಾಗಾರ
    ದ್ವಿಭಾಷಾ ತರಗತಿ ಬೋಧನೆ ಕುರಿತು ಶಿಕ್ಷಕರಿಗೆ ತರಬೇತಿ ಕಾರ್ಯಾಗಾರ 
    2 weeks ago
    ಹೊಸದುರ್ಗ ಕುಂಚಿಟಿಗ ಮಠದಲ್ಲಿ ಅಂತರ್ಜಾತಿ ವಿವಾಹ | ಶ್ರೀ ಶಾಂತವೀರ ಸ್ವಾಮೀಜಿ‌ ಸಾನ್ನಿಧ್ಯ
    ಹೊಸದುರ್ಗ ಕುಂಚಿಟಿಗ ಮಠದಲ್ಲಿ ಅಂತರ್ಜಾತಿ ವಿವಾಹ | ಶ್ರೀ ಶಾಂತವೀರ ಸ್ವಾಮೀಜಿ‌ ಸಾನ್ನಿಧ್ಯ
    3 weeks ago
  • Life Style
    Life StyleShow More
    gaining weight
    ನೀವು ಕಡಿಮೆ ತಿಂದರೂ ತೂಕ ಹೆಚ್ಚಾಗುತ್ತಿದೆಯೇ? ಇದಕ್ಕೆ ಕಾರಣವೇನು ಗೊತ್ತಾ?
    13 hours ago
    kidney problems
    ಕಿಡ್ನಿ ಸಮಸ್ಯೆ ಇರುವವರು ಈ 4 ಅಂಶಗಳನ್ನು ಸಮತೋಲನದಲ್ಲಿಡಬೇಕು
    14 hours ago
    Metabolism
    ಚಯಾಪಚಯ ಕ್ರಿಯೆ ನಿಧಾನವಾಗುತ್ತಿದ್ದರೆ ನಿಮ್ಮ ಚರ್ಮದ ಮೇಲೆ ಈ ಲಕ್ಷಣಗಳು ಕಾಣಿಸಿಕೊಳ್ಳುತ್ತವೆಯಂತೆ
    2 days ago
    eat fruits to stay healthy
    ಆರೋಗ್ಯವಾಗಿರಲು ಹಣ್ಣುಗಳನ್ನು ತಿನ್ನುವ ಸರಿಯಾದ ವಿಧಾನ ತಿಳಿದುಕೊಳ್ಳಿ
    2 days ago
    sweets
    ನಿಮ್ಮಲ್ಲಿ ಸಿಹಿ ತಿಂಡಿಗಳ ಹಂಬಲ ಹೆಚ್ಚಾಗಲು ಕಾರಣವೇನು ಗೊತ್ತಾ?
    3 days ago
Reading: ಕೆನ್ನೆಡಲು ಜನರಿಗೆ KSRTC ಬಸ್ ಮೇಲೆ ಕಡಲಿನಷ್ಟು ಪ್ರೀತಿ | ಬಸ್ ತೊಳೆದು, ಹೂ ಪೋಣಿಸಿ, ಅಲಂಕಾರ ಮಾಡುವ ವಿಶಿಷ್ಟ ಗ್ರಾಮ
Share
Font ResizerAa
Chitradurga News-Kannada NewsChitradurga News-Kannada News
  • ಮುಖಪುಟ
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Search
  • ಮುಖಪುಟ
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Follow US
© 2025 | Chitradurganews.com | Powered by Karnatakabest
ಮುಖ್ಯ ಸುದ್ದಿ

ಕೆನ್ನೆಡಲು ಜನರಿಗೆ KSRTC ಬಸ್ ಮೇಲೆ ಕಡಲಿನಷ್ಟು ಪ್ರೀತಿ | ಬಸ್ ತೊಳೆದು, ಹೂ ಪೋಣಿಸಿ, ಅಲಂಕಾರ ಮಾಡುವ ವಿಶಿಷ್ಟ ಗ್ರಾಮ

chitradurganews.com
Last updated: 23 October 2023 16:38
chitradurganews.com
2 years ago
Share
KSRTC ಬಸ್ಸನ್ನು ಅಲಂಕಾರ ಮಾಡಿರುವ ದೃಶ್ಯ
KSRTC ಬಸ್ಸನ್ನು ಅಲಂಕಾರ ಮಾಡಿರುವ ದೃಶ್ಯ
SHARE

ಚಿತ್ರದುರ್ಗ ನ್ಯೂಸ್.ಕಾಂ: ಇದೊಂದು ಅಭಿಮಾನದ ಸುದ್ದಿ. ಸಾರ್ವಜನಿಕ ಸಾರಿಗೆ ವ್ಯವಸ್ಥೆ ಮೂಗು ಮುರಿಯುವವರ ನಡುವೆ. ತಮ್ಮೂರಿಗೆ ದಿನವೂ ಬರುವ ಬಸ್ಸಿನ ಬಗ್ಗೆ ಈ ಊರಿನ ಜನ ಅದೆಷ್ಟು ಪ್ರೀತಿ ಹೊಂದಿದ್ದಾರೆ ಎನ್ನುವುದನ್ನು ಈ ಸುದ್ದಿಯಲ್ಲಿ ಕಾಣಬಹುದು.

ಚಿತ್ರದುರ್ಗ ತಾಲೂಕಿನ ಕೆನ್ನೆಡಲು ಗ್ರಾಮ ಕುಗ್ರಾಮ. ಇಲ್ಲಿಗೆ ದಿನವೂ ಒಂದು ಬಸ್ಸು ಮಾತ್ರ ಬಂದು ಹೋಗುತ್ತದೆ. ದಿನವೂ ತಮ್ಮ ವ್ಯಾಪಾರ ವಹಿವಾಟು, ಆಸ್ಪತ್ರೆ, ಅಂಗಡಿ, ಶಾಲೆ, ಕಾಲೇಜುಗಳಿಗೆ ಕರೆದುಕೊಂಡು ಹೋಗಿ ಮತ್ತೆ ಸುರಕ್ಷಿತವಾಗಿ ಊರು ತಲುಪಿಸುವ ಕಾರಣಕ್ಕೆ ಬಸ್ಸಿನ ಬಗ್ಗೆ ಅಪಾರ ಪ್ರೀತಿ ಹೊಂದಿದ್ದಾರೆ.

ಇದನ್ನೂ ಓದಿ: ಝಗಮಗಿಸುವ ಮುರುಘಾ ಮಠದ ಪೋಟೋ ಗ್ಯಾಲರಿ | ಬೆಳಕಿನ ಅಲಂಕಾರದಲ್ಲಿ ಕಂಗೊಳಿಸುತ್ತಿದೆ ಮಠ

ಇದು ಶಕ್ತಿ ಯೋಜನೆ ಬಂದ ಮೇಲಿನ ಪ್ರೀತಿಯಲ್ಲ. ಸುಮಾರು ಕಳೆದ 25 ವರ್ಷಗಳಿಂದ ಈ ಊರಿನ ಯುವಕರು, ಮಕ್ಕಳು ಸೇರಿದಂತೆ ಗ್ರಾಮದ ಬಹುತೇಕರು ಆಯುಧ ಪೂಜೆ ಸಂದರ್ಭದಲ್ಲಿ ಕೆಎಸ್ಸಾರ್ಟಿಸಿ ಬಸ್ಸನ್ನು ಪೂರ್ತಿ ತೊಳೆದು, ತಮ್ಮ ಜಮೀನುಗಳಲ್ಲಿ ಬೆಳೆದಿದ್ದ ಚೆಂಡು ಹೂವು, ಸೇವಂತಿಗೆ ಹೂವು, ಸುಗಂಧ ರಾಜ ಹೂವುಗಳನ್ನು ಪೋಣಿಸಿ ದೊಡ್ಡ ಮಾಲೆಗಳನ್ನು ಮಾಡಿ ಬಸ್ಸಿಗೆ ಸುಂದರವಾಗಿ ಅಲಂಕಾರ ಮಾಡಿ, ಗ್ರಾಮ ದೇವತೆ ಕೆಂಚಮ್ಮಾರಮ್ಮನ ಗುಡಿ ಬಳಿ ಕರೆದೊಯ್ದು ಪೂಜೆ ಮಾಡಿಸಿ ಅಲ್ಲಿಂದ ಚಿತ್ರದುರ್ಗಕ್ಕೆ ಕಳಿಸುವುದು ಈ ಊರಿನ ಸಂಪ್ರದಾಯವಾಗಿ ಬಿಟ್ಟಿದೆ.

KSRTC ಬಸ್ಸನ್ನು ಅಲಂಕಾರ ಮಾಡಿರುವ ದೃಶ್ಯ
KSRTC ಬಸ್ಸನ್ನು ಅಲಂಕಾರ ಮಾಡಿರುವ ದೃಶ್ಯ

ಕಳೆದ 25 ವರ್ಷಗಳಿಂದ ಕೆನ್ನೆಡಲು ಗ್ರಾಮಕ್ಕೆ ದಿನಕ್ಕೆ ಮೂರು ಬಾರಿ ಬಂದು ಹೋಗುವ ಏಕೈಕ ಬಸ್ಸು ಇದಾಗಿರುವುದರಿಂದ ಜನರಿಗೆ ವಿಶೇಷ ಅಭಿಮಾನವಿದೆ.

ಈ ಕುರಿತು 2021ರಲ್ಲಿ ಸಾಮಾಜಿಕ ಕಾರ್ಯಕರ್ತ ಅಭಿಲಾಷ್ ಪಂಡ್ರಹಳ್ಳಿ ಫೇಸ್‍ಬುಕ್‍ನಲ್ಲಿ ಬರೆದುಕೊಂಡಿದ್ದರು. ಈ ಬರಹದ ಬೆನ್ನುಬಿದ್ದ ಚಿತ್ರದುರ್ಗ ನ್ಯೂಸ್, ಈ ವರ್ಷ ಕೂಡಾ ಕೆನ್ನೆಡಲು ಗ್ರಾಮಸ್ಥರು ಕೆಎಸ್‍ಆರ್‍ಟಿಸಿ ಬಸ್ಸನ್ನು ಪ್ರೀತಿಯಿಂದ ಅಲಂಕಾರ ಮಾಡಿ ಪೂಜಿಸಿ ಕಳುಹಿಸಿರುವ ಚಿತ್ರಗಳ ಸಹಿತ ಈ ವರದಿ ಪ್ರಕಟಿಸಿದೆ.

ಬಂದ್, ಹೋರಾಟಗಳ ಸಂದರ್ಭದಲ್ಲಿ ಕೆಎಸ್‍ಆರ್‍ಟಿಸಿ ಬಸ್ಸುಗಳಿಗೆ ಕಲ್ಲು ಹೊಡೆಯುವವರ ನಡುವೆ ಅದು ನಮ್ಮ, ನಮ್ಮೂರಿನ ಬಸ್ಸು ಎಂಬ ಅಭಿಮಾನ ಹೊಂದಿರುವ ಈ ಊರಿನ ಎಲ್ಲ ಮನಸ್ಸುಗಳಿಗೆ ಚಿತ್ರದುರ್ಗ ನ್ಯೂಸ್ ಅಭಿನಂದಿಸುತ್ತದೆ

2021 ರಲ್ಲಿ ಸಾಮಾಜಿಕ ಕಾರ್ಯಕರ್ತ ಅಭಿಲಾಷ್ ಪಂಡ್ರಹಳ್ಳಿ ಕೆನ್ನೆಡಲು ಗ್ರಾಮದ ಬಗ್ಗೆ ಬರೆದಿದ್ದ ಬರಹವೂ ಇಲ್ಲಿದೆ.

ಈ ಪುಟ್ಟ ಗ್ರಾಮದಲ್ಲೊಂದು ಪ್ರೇರಣಾದಾಯಕ ದಸರಾ ಆಯುಧಪೂಜಾ ಉತ್ಸವ. ಸುಮಾರು ಮೂವತ್ತು ವರ್ಷಕ್ಕೂ ಹಿಂದಿನಿಂದ ನಡೆದುಕೊಂಡು ಬರುತ್ತಿದೆ.

ಈ ಗ್ರಾಮ ಚಿತ್ರದುರ್ಗದಿಂದ ಹಟ್ಟಿಚಿನ್ನದಗಣಿ ಮಾರ್ಗವಾಗಿ ಸುಮಾರು 25 ಕಿ.ಮೀ ದೂರದಲ್ಲಿದೆ, ಸುತ್ತಲೂ ಚಿನ್ಮೂಲಾದ್ರಿ ಪರ್ವತ ಸಾಲುಗಳಿಂದ ಜೋಗಿಮಟ್ಟಿ ಅರಣ್ಯಧಾಮಕ್ಕೆ ಹೊಂದಿಕೊಂಡಿರುವ ಈ ಪುಟ್ಟ ಗ್ರಾಮವೆ ಕೆನ್ನೆಡಲು.

ಈ ಗ್ರಾಮದ ಜನರ ಮುಖ್ಯಕಸುಬು ವ್ಯವಸಾಯ ಇಲ್ಲಿ ಹೂವು ಮತ್ತು ತರಕಾರಿಗಳನ್ನ ಹೆಚ್ಚಾಗಿ ಬೆಳೆದು ಚಿತ್ರದುರ್ಗದ ಮಾರುಕಟ್ಟೆಗೆ ಸಾಗಿಸುತ್ತಾರೆ. ಗ್ರಾಮದ ಸಂಪರ್ಕಕ್ಕಾಗಿ ಹಲವಾರು ವರ್ಷಗಳ ಹಿಂದೆಯೇ ಒಂದು ಸರ್ಕಾರಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ಬಿಟ್ಟಿದೆ.

ಅಂದಿನಿಂದ ಆ ಸರ್ಕಾರಿ ಬಸ್ ಅವರ ಜೀವನದ ಒಂದು ಅವಿಭಾಜ್ಯ ಅಂಗವಾಗಿ ಬೆರೆತು ಹೋಗಿದೆ ಎನ್ನುವುದಕ್ಕೆ ಈ ದಸರಾ ಹಬ್ಬದ ಆಯುಧ ಪೂಜೆಯೇ ಸಾಕ್ಷಿ.

KSRTC ಬಸ್ಸನ್ನು ಅಲಂಕಾರ ಮಾಡಿರುವ ದೃಶ್ಯ
KSRTC ಬಸ್ಸನ್ನು ಅಲಂಕಾರ ಮಾಡಿರುವ ದೃಶ್ಯ

ನವರಾತ್ರಿಯ ಕಡೆಯ ದಿನ ಆಯುಧ ಪೂಜೆಯಂದು ನಾವೆಲ್ಲಾ ನಮ್ಮ ಸ್ವಂತ ವಾಹನಗಳನ್ನ ತೊಳೆದು ಹೂವು ಹಣ್ಣುಗಳಿಂದ ಸಿಂಗರಿಸಿ ಪೂಜೆ ಮಾಡಿ ದೇವಸ್ಥಾನಕ್ಕೆ ಹೋಗಿ ಬರುವುದು ವಾಡಿಕೆ.

ಆದರೆ ಬಹುತೇಕ ಸರಕಾರಿ ವಾಹನಗಳಿಗೆ ಈ ಭಾಗ್ಯವಿರುವುದಿಲ್ಲ ಸರಕಾರ ಕೊಡುವ ನೂರು ಇನ್ನೂರು ರೂಪಾಯಿಗೆ ಹೂವು ಹಣ್ಣು ಹಾರ ಎಲವನ್ನು ತರುವುದು ಅಸಾಧ್ಯ. ನಿರ್ವಾಹಕರು ಇದ್ದಷ್ಟರಲ್ಲೇ ಪೂಜೆ ಮಾಡಿ ಮುಗಿಸಿಕೊಂಡು ಗಾಡಿ ಓಡಿಸುವುದನ್ನ ನಾವು ನೋಡ್ತಾ ಇರ್ತೀವಿ ಅಲ್ವಾ..?

ಆದ್ರೆ ಈ ಊರಿನ ಜನ ತಮ್ಮ ಊರಿಗೆ ಬರುವ ಸರಕಾರಿ ಬಸ್ಸನ್ನ ಹಬ್ಬದ ಹಿಂದಿನ ರಾತ್ರಿಯೆ ತಮ್ಮ ಊರಿಗೆ ಕರೆಸಿಕೊಂಡು ಆ ಊರಿನ ಯುವಕರೆಲ್ಲ ಒಟ್ಟಾಗಿ ವಾಹನವನ್ನ ಸ್ವಚ್ಛವಾಗಿ ತೊಳೆದು ಕುಂಕುಮ ವಿಭೂತಿ ಹಚ್ಚಿ ಇಡೀ ಊರಿನ ಜನ ತಾವೇ ಬೆಳೆದ ಹೂವುಗಳನ್ನ ಒಟ್ಟಾಗಿ ಸೇರಿಸಿ ತಂದು ಮಾಲೆಗಳನ್ನ ಕಟ್ಟಿ ಬಸ್ಸನ್ನ ಅಲಂಕರಿಸಿ ಹಣ್ಣು-ಕಾಯಿ, ಧೂಪ-ದೀಪಗಳಿಂದ ಪೂಜಿಸಿ ಎಲ್ಲರಿಗೂ ಪ್ರಸಾದ ಕೊಟ್ಟು ಆ ಸರ್ಕಾರಿ ಬಸ್ಸನ್ನ ಸಮಯಕ್ಕೆ ಸರಿಯಾಗಿ ಸಾರ್ವಜನಿಕ ಸೇವೆಗೆ ಕಳಿಸಿಕೊಡುವ ಪದ್ಧತಿಯನ್ನ ಸರಿಸುಮಾರು ಮೂವತ್ತು ವರ್ಷಗಳಿಂದಲೂ ಉಳಿಸಿಕೊಂಡು ಬಂದಿದ್ದಾರೆ.

ಇದನ್ನೂ ಓದಿ: ಮುರುಗಿ ಶಾಂತವೀರ ಸ್ವಾಮಿಗಳ ಹೊಸ ಕಂಚಿನ ಪ್ರತಿಮೆ ಅನಾವರಣ

ಅರ್ಥವಿಲ್ಲದ ಯಾವನದ್ದೋ ಸ್ವಾರ್ಥಪ್ರೇರಿತ ಪ್ರತಿಭಟನೆ ನೆಪದಲ್ಲಿ ಸರ್ಕಾರಿ ವಾಹನಗಳಿಗೆ ಕಲ್ಲುತೂರಿ ಬೆಂಕಿ ಹಚ್ಚಿ ವಿಕೃತಿ ಮೆರೆಯುವ ನಾಗರೀಕರೆನಿಸಿಕೊಂಡ ನಗರ ಪ್ರದೇಶದ ಸೊ ಕಾಲ್ಡ್ ಸಂಘಟನೆಯ ಪುಂಡಪೋಕರಿಗಳು ಮತ್ತು ಅರೆಬೆಂದ ರಾಜಕೀಯ ಮಂದಿಯ ಚೇಲಾಗಳು ಈ ಗ್ರಾಮದ ಯುವಕರನ್ನ ನೋಡಿ ಕಲಿಯುವುದು ಬಹಳಷ್ಟಿದೆ.

ಅದೇ ಗ್ರಾಮದ ನನ್ನ ಸ್ನೇಹಿತ ಮಧು ಹೀಗೆ ಸರ್ವಾಲಂಕೃತವಾದ ಕೆಂಪುಬಸ್ ಫೋಟೋ ಸ್ಟೇಟಸ್‍ಗೆ ಹಾಕಿದ್ದ, ಸರ್ಕಾರಿ ಸೆಟಲ್ ಗಾಡಿಗೆ ಈ ಪಾಟಿ ಅಲಂಕಾರವಾಗಿದ್ದು ನೋಡಿ ಏನು ಸಮಾಚಾರ ಅಂತಾ ಕೇಳಿದಾಗ ಇಷ್ಟು ಮಾಹಿತಿ ತಿಳಿಸಿದ.

ಹಿಂದೂ ಜೀವನಪದ್ಧತಿ ಅಂದ್ರೆ ಇದೇ ಅಲ್ವಾ..? ನಮ್ಮ ನಿತ್ಯಜೀವನಕ್ಕೆ ಸಹಕಾರ ಕೊಡುವ, ಒಳಿತು ಮಾಡುವ ಒಂದು ನಿರ್ಜಿವ ವಸ್ತುವನ್ನೂ ಸಹ ದೈವತ್ವಕ್ಕೇರಿಸಿ ಪೂಜ್ಯ ಭಾವನೆಯಿಂದ ಕಾಣೋದು ಈ ನೆಲದಗುಣ. ಅದನ್ನ ಯಾರಿಂದಲೂ ಎಂದು ಕಸಿದುಕೊಳ್ಳಲು ಸಾಧ್ಯವಾಗದು.

ನಮ್ಮೆಲ್ಲರಿಗೂ ಈ ಕೆನ್ನೆಡಲು ಗ್ರಾಮದ ಹುಡುಗರು ಪ್ರೇರಣೆಯಾಗಲಿ ಸಾರ್ವಜನಿಕ ಸಂಪತ್ತನ್ನ ನಮ್ಮದೆಂದು ನೋಡುವಭಾವ ನಮ್ಮೆಲ್ಲರದಾಗಲಿ ಸರ್ವರಿಗೂ ಆಯುಧ ಪೂಜಾಹಬ್ಬದ ಶುಭಾಶಯಗಳು.

ಬರಹ: ಅಭಿಲಾಷ್ ಪಿ.ಆರ್

 

 

________________________________________________

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು

ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್‌ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.

________________________________________________

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ. 

» Chitradurga News gmail: chitradurganews23@gmail.com

» Whatsapp Number:  9008943015

________________________________________________

TAGGED:Ayudha PujaBus PreetiChitradurgaChitradurga newsChitradurga UpdatesDasaraKannada Latest NewsKennedaluKennedalu People's PreetiKSRTCVijayadashamiಆಯುಧ ಪೂಜೆಕನ್ನಡ ಲೇಟೆಸ್ಟ್ ನ್ಯೂಸ್ಕೆಎಸ್‍ಆರ್‍ಟಿಸಿಕೆನ್ನೆಡಲುಕೆನ್ನೆಡಲು ಜನರ ಪ್ರೀತಿಚಿತ್ರದುರ್ಗಚಿತ್ರದುರ್ಗ ಅಪ್ಡೇಟ್ಸ್ಚಿತ್ರದುರ್ಗ ನ್ಯೂಸ್ದಸರಾಬಸ್ ಪ್ರೀತಿವಿಜಯದಶಮಿ
Share This Article
Facebook Email Print
Previous Article ಮುರುಘಾ ಮಠದ ಪೋಟೋ ಗ್ಯಾಲರಿ ಝಗಮಗಿಸುವ ಮುರುಘಾ ಮಠದ ಪೋಟೋ ಗ್ಯಾಲರಿ | ಬೆಳಕಿನ ಅಲಂಕಾರದಲ್ಲಿ ಕಂಗೊಳಿಸುತ್ತಿದೆ ಮಠ
Next Article FIR ನಾಯಿ ತಪ್ಪಿಸಲು ಹೋಗಿ ಡಿವೈಡರ್‍ಗೆ ಡಿಕ್ಕಿಯಾದ ಕಾರು | ಮೂರು ಜನರಿಗೆ ಗಾಯ | ಆಯುಧ ಪೂಜೆ ದಿನವೇ ಅವಘಡ
Leave a Comment

Leave a Reply Cancel reply

Your email address will not be published. Required fields are marked *

ರಂಗೋಲಿ ಸ್ಪರ್ಧೆ ಕಾರ್ಯಕ್ರಮ
ಮುರುಘಾಮಠವು ಬಸವಾದಿ ಶರಣರ ತತ್ವ, ಚಿಂತನೆಗಳ ಪ್ರಯೋಗಶಾಲೆ | ಡಾ.ಬಸವಕುಮಾರ ಶ್ರೀ 
ಮುಖ್ಯ ಸುದ್ದಿ
gaining weight
ನೀವು ಕಡಿಮೆ ತಿಂದರೂ ತೂಕ ಹೆಚ್ಚಾಗುತ್ತಿದೆಯೇ? ಇದಕ್ಕೆ ಕಾರಣವೇನು ಗೊತ್ತಾ?
Life Style
kidney problems
ಕಿಡ್ನಿ ಸಮಸ್ಯೆ ಇರುವವರು ಈ 4 ಅಂಶಗಳನ್ನು ಸಮತೋಲನದಲ್ಲಿಡಬೇಕು
Life Style
ದಿನ ಭವಿಷ್ಯ
ದಿನ ಭವಿಷ್ಯ | ಏಪ್ರಿಲ್ 20 | ವೃತ್ತಿ ಮತ್ತು ವ್ಯವಹಾರಗಳಲ್ಲಿ ಆತುರದ ನಿರ್ಧಾರ ಬೇಡ, ಆರೋಗ್ಯದಲ್ಲಿ ಎಚ್ಚರ
Dina Bhavishya
© Chitradurga News 2025 | Powered By Karnatakabest.com
 

Loading Comments...
 

    Welcome Back!

    Sign in to your account

    Username or Email Address
    Password

    Lost your password?

    Not a member? Sign Up