By using this site, you agree to the Privacy Policy and Terms of Use.
Accept
Chitradurga News-Kannada NewsChitradurga News-Kannada NewsChitradurga News-Kannada News
Notification
Font ResizerAa
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Reading: Vanivilasa Sagara: ವಿವಿ ಸಾಗರ ಭರ್ತಿಗೆ 10 ಅಡಿ ಬಾಕಿ | ಇಂದಿನ ಜಲಾಶಯ ಮಟ್ಟ 120 ಅಡಿ
Share
Font ResizerAa
Chitradurga News-Kannada NewsChitradurga News-Kannada News
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Search
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Follow US
© 2022 Foxiz News Network. Ruby Design Company. All Rights Reserved.

Home » Vanivilasa Sagara: ವಿವಿ ಸಾಗರ ಭರ್ತಿಗೆ 10 ಅಡಿ ಬಾಕಿ | ಇಂದಿನ ಜಲಾಶಯ ಮಟ್ಟ 120 ಅಡಿ

ಮುಖ್ಯ ಸುದ್ದಿ

Vanivilasa Sagara: ವಿವಿ ಸಾಗರ ಭರ್ತಿಗೆ 10 ಅಡಿ ಬಾಕಿ | ಇಂದಿನ ಜಲಾಶಯ ಮಟ್ಟ 120 ಅಡಿ

chitradurganews.com
Last updated: 21 September 2024 10:37
chitradurganews.com
9 months ago
Share
Vanivilasa sagara
ವಾಣಿವಿಲಾಸ ಸಾಗರ
SHARE
https://chat.whatsapp.com/Jhg5KALiCFpDwME3sTUl7x

CHITRADURGA NEWS | 21 SEPTEMBER 2024

ಚಿತ್ರದುರ್ಗ: ಜಿಲ್ಲೆಯ ಜೀವನಾಡಿ ವಾಣಿವಿಲಾಸ ಸಾಗರದ (Vanivilasa Sagara) ನೀರಿನ ಮಟ್ಟ 120 ಅಡಿಗೆ ತಲುಪಿದ್ದು, ಜಲಾಶಯ ಭರ್ತಿಯಾಗಲು 10 ಅಡಿ ಬಾಕಿಯಿದೆ.

2022 ರಲ್ಲಿ 135 ಅಡಿವರೆಗೆ ನೀರು ಬಂದು ಕೋಡಿ ಬಿದ್ದಿದ್ದ ವಿವಿ ಸಾಗರ, ಆನಂತರದ ವರ್ಷದ ಬರಗಾಲದ ಹಿನ್ನೆಲೆಯಲ್ಲಿ ನೀರಿನ ಹರಿವು ಇರಲಿಲ್ಲ.

ಇದನ್ನೂ ಓದಿ: ದಿನ ಭವಿಷ್ಯ | ಆಸ್ತಿ ವಿವಾದದಲ್ಲಿ ಕಿರಿಕಿರಿ | ಉದ್ಯೋಗದಲ್ಲಿ ಅನಿರೀಕ್ಷಿತ ಬದಲಾವಣೆ

ಈ ವರ್ಷದ ಆರಂಭದಲ್ಲಿ ಸುರಿದ ಉತ್ತಮ ಮಳೆಯಿಂದಾಗಿ ಸುಮಾರು 5 ಟಿಎಂಸಿ ನೀರು ಜಲಾಶಯಕ್ಕೆ ಹರಿದು ಬಂದಿತ್ತು.

ಇದರೊಟ್ಟಿಗೆ ಈಗ ಭದ್ರಾ ಜಲಾಶಯದಿಂದ ಪ್ರತಿ ದಿನ 3 ತಿಂಗಳ ಕಾಲ 700 ಕ್ಯೂಸೆಕ್ ನೀರು ಹರಿಸುವ ನಿರ್ಧಾರ ಕೈಗೊಂಡಿದ್ದರಿಂದ ಈಗ ಜಲಾಶಯದ ಮಟ್ಟ 120 ಅಡಿಗೆ ತಲುಪಿದೆ.

ಇದನ್ನೂ ಓದಿ: ಜಿಲ್ಲಾ ಆಸ್ಪತ್ರೆಗೆ ಸಂಸದ ಗೋವಿಂದ ಕಾರಜೋಳ ಭೇಟಿ

ಈಗ ಪ್ರತಿ ದಿನ 693 ಕ್ಯೂಸೆಕ್ ನೀರು ಭದ್ರಾ ಜಲಾಶಯದಿಂದ ಹರಿದು ಬರುತ್ತಿದೆ. ಇದರೊಟ್ಟಿಗೆ ಎತ್ತಿನಹೊಳೆ ಯೋಜನೆಯಿಂದಲೂ ಹರಿಸುತ್ತಿರುವ ನೀರು ವಿವಿ ಸಾಗರ ಸೇರಲಿದೆ ಎಂದು ಸರ್ಕಾರ ಹೇಳಿದೆ.

ಎತ್ತಿನಹೊಳೆಯಿಂದ ನೀರು ಹರಿಯುತ್ತಿದ್ದು, ಬರುವ ಮಾರ್ಗದ ಕೆರೆ, ಹಳ್ಳಗಳು ತುಂಬಿದ ನಂತರ ವೇದಾವತಿಗೆ ಸೇರಿ ವಿವಿ ಸಾಗರ ತಲುಪಬೇಕಿದೆ.

130 ಅಡಿ ಎತ್ತರದ ವಿವಿ ಸಾಗರ ಜಲಾಶಯ ಈಗ 120 ಅಡಿವರೆಗೆ ನೀರು ತಲುಪಿದೆ. ಒಟ್ಟು 30 ಟಿಎಂಸಿ ಸಾಮಥ್ರ್ಯದ ಜಲಾಶಯದಲ್ಲಿ ಸದ್ಯ 22.04 ಟಿಎಂಸಿ ನೀರು ಸಂಗ್ರಹವಾಗಿದೆ.

ಇದನ್ನೂ ಓದಿ: ಭೀಮಸಮುದ್ರದಲ್ಲಿ ರಾಶಿ ಅಡಿಕೆ ಬೆಲೆಯಲ್ಲಿ ಅಲ್ಪ ಏರಿಕೆ

ಕಳೆದ ವರ್ಷ ಇದೇ ದಿನ ವಿವಿ ಸಾಗರದಲ್ಲಿ 122.70 ಅಡಿ ನೀರಿತ್ತು. ಒಟ್ಟು 24.28 ಟಿಎಂಸಿ ನೀರಿತ್ತು.

ಈ ವರ್ಷ ಕೂಡಾ ಜಲಾಶಯ ಭರ್ತಿಯಾಗುವ ನಿರೀಕ್ಷೆ ಹೊಂದಲಾಗಿತ್ತು. ನಡುವಿನ ಕೆಲ ಮಳೆಗಳು ಕೈ ಕೊಟ್ಟಿವೆ. ಎತ್ತಿನಹೊಳೆ ನೀರು ಎಷ್ಟರ ಪ್ರಮಾಣದಲ್ಲಿ ಜಲಾಶಯ ಸೇರಲಿದೆ ಎನ್ನುವ ಅಂದಾಜು ಸಿಗುತ್ತಿಲ್ಲ.

ಮುಂದಿನ ಮಳೆಗಳು ಚೆನ್ನಾಗಿ ಸುರಿದರೆ ಜಲಾಶಯ ಭರ್ತಿಯಾಗುವುದರಲ್ಲಿ ಅನುಮಾನವಿಲ್ಲ. ಜೊತೆಗೆ ಇನ್ನೂ ಎರಡು ತಿಂಗಳ ಕಾಲ ಭದ್ರಾ ನೀರು ಹರಿದು ಬರಲಿದೆ.

1917ರಲ್ಲಿ ಮೊದಲ ಬಾರಿಗೆ 120 ಅಡಿ ನೀರು ಬಂದಿತ್ತು:

ಜಲಾಶಯ ನಿರ್ಮಾಣವಾದ ನಂತರ ಮೊದಲ ಬಾರಿಗೆ ಅಂದರೆ 1917 ರಲ್ಲಿ ಜಲಾಶಯದ ನೀರಿನ ಮಟ್ಟ 120 ಅಡಿಗೆ ತಲುಪಿತ್ತು.

ಆನಂತರದ ವರ್ಷಗಳಲ್ಲಿ ಕ್ರಮೇಣ ಜಾಸ್ತಿಯಾಗುತ್ತಾ, 1920ರಲ್ಲಿ 125 ಅಡಿಗೆ ತಲುಪಿತ್ತು. ಆನಂತರ ಮಳೆ ಕಡಿಮೆಯಾಗಿ ನೀರಿನ ಪ್ರಮಾಣವೂ ಕಡಿಮೆಯಾಗಿತ್ತು.

ಮತ್ತೊಮ್ಮೆ 1932 ರಲ್ಲಿ 125 ಅಡಿಗೆ ಬಂದಿತ್ತು. 1933 ರಲ್ಲಿ ಜಲಾಶಯ ಮೊದಲ ಬಾರಿಗೆ ಭರ್ತಿಯಾಗಿ ನೀರಿನ ಮಟ್ಟ 135.25 ಅಡಿವರೆಗೆ ಬಂದಿತ್ತು.

ಇದನ್ನೂ ಓದಿ: ಚಿತ್ರದುರ್ಗದಲ್ಲಿ ಖಾಲಿ ನಿವೇಶನ ಇರೋರಿಗೆ ಮಹತ್ವದ ಸೂಚನೆ

ಆನಂತರ 1956ರಲ್ಲಿ ವಿವಿ ಸಾಗರಕ್ಕೆ 125 ಅಡಿ ನೀರು ಬಂದಿದ್ದು ಬಿಟ್ಟರೆ ನಂತರ ವರ್ಷಗಳಲ್ಲಿ ನಿರಂತರ ಬರಗಾಲಕ್ಕೆ ಸಿಲುಕಿ ಡೆಡ್ ಸ್ಟೋರೇಜ್ ಕೂಡಾ ತಲುಪಿತ್ತು.

ನಂತರ 2000ನೇ ಸಾಲಿನಲ್ಲಿ 122 ಅಡಿ ನೀರು ಬಂದಿತ್ತು. 2022 ರಲ್ಲಿ ಜಲಾಶಯ ಭರ್ತಿಯಾಗಿ ಕೋಡಿ ಬಿದ್ದಿದ್ದು ಇತಿಹಾಸವಾಗಿದೆ.

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು

ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್‌ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.

» Chitradurga News gmail

chitradurganews23@gmail.com

» Whatsapp Number

TAGGED:Bhadra ReservoirChitradurgaChitradurga newsChitradurga UpdatesEttinaholeHiriyurKannada Latest NewsReservoir LevelVaniVilasa SagaraVedavariVV Sagarಎತ್ತಿನಹೊಳೆಕನ್ನಡ ಲೇಟೆಸ್ಟ್ ನ್ಯೂಸ್ಚಿತ್ರದುರ್ಗಚಿತ್ರದುರ್ಗ ಅಪ್ಡೇಟ್ಸ್ಚಿತ್ರದುರ್ಗ ನ್ಯೂಸ್ಜಲಾಶಯ ಮಟ್ಟಭದ್ರಾ ಜಲಾಶಯವಾಣಿವಿಲಾಸವಿವಿ ಸಾಗರವೇದಾವರಿಹಿರಿಯೂರು
Share This Article
Facebook Email Print
Previous Article today bhavishya DINA RASHI BHAVISHYA: ದಿನ ಭವಿಷ್ಯ | ಸೆಪ್ಟೆಂಬರ್ 21 | ವ್ಯವಹಾರ ಸುಗಮ, ಆಸ್ತಿ ವಿವಾದದಲ್ಲಿ ಕಿರಿಕಿರಿ, ಉದ್ಯೋಗದಲ್ಲಿ ಅನಿರೀಕ್ಷಿತ ಬದಲಾವಣೆ
Next Article Chess; ತಾಲೂಕು ಮಟ್ಟದ ಚೆಸ್ ಸ್ಫರ್ಧೆಯಲ್ಲಿ ಪ್ರಥಮ ಸ್ಥಾನ | ಕ್ಷಿತಿಜ ಜಿ ನೊಬೆಲ್ ಜಿಲ್ಲಾಮಟ್ಟಕ್ಕೆ ಆಯ್ಕೆ
Leave a Comment

Leave a Reply Cancel reply

Your email address will not be published. Required fields are marked *

APMC: ಮಾರುಕಟ್ಟೆ ಧಾರಣೆ | ಇಂದಿನ ಮೆಕ್ಕೆಜೋಳ, ಕಡಲೆಕಾಳು, ಶೇಂಗಾ ರೇಟ್ ಎಷ್ಟಿದೆ?
ಮಾರುಕಟ್ಟೆ ಧಾರಣೆ
ಲಿಫ್ಟ್ ಹತ್ತಿದ ತಕ್ಷಣ ತಲೆ ಸುತ್ತುವವರು ಒಮ್ಮೆ ಈ ವಿಚಾರ ತಿಳಿದಿರಿ
Life Style
ಮಳೆಗಾಲದಲ್ಲಿ ಶೀತ ಮತ್ತು ಕೆಮ್ಮು ಬಂದಾಗ ಏನು ತಿನ್ನಬೇಕು ಮತ್ತು ಏನು ತಿನ್ನಬಾರದು? ಎಂಬುದನ್ನು ತಿಳಿಯಿರಿ
Life Style
ಹೆರಿಗೆಯ ನಂತರ ಬೇಗ ಚೇತರಿಸಿಕೊಳ್ಳಲು ಈ ಲಡ್ಡುಗಳನ್ನು ತಿನ್ನಿರಿ
Life Style
© Chitradurga News. Ruby Design Company. All Rights Reserved.

Chitradurga News App

Install
Welcome Back!

Sign in to your account

Username or Email Address
Password

Lost your password?

Not a member? Sign Up