CHITRADURGA NEWS | 08 MAY 2026
ಚಿತ್ರದುರ್ಗ: ಸರ್ಕಾರ ಕಂದಾಯ ಇಲಾಖೆಯಿಂದ ಕಾಗದರಹಿತ, ಮುಖರಹಿತ ನೋಂದಣಿಯನ್ನು ಅನುಷ್ಠಾನ ಗೊಳಿಸುತ್ತಿರುವುದನ್ನು ಜಿಲ್ಲಾ ದಸ್ತಾವೇಜು ಬರಹಗಾರರ ಸಂಘ ವಿರೋಧ ವ್ಯಕ್ತಪಡಿಸಿದೆ.
ಇದನ್ನೂ ಓದಿ: ಅಭಿಮಾನೋತ್ಸವಕ್ಕೆ ಕೋಟೆನಾಡು ಸಜ್ಜು | ಬಿಎಸ್ವೈ ಅಂಬಾಸಿಡರ್ ಕಾರು ಪ್ರದರ್ಶನ
ಈ ಹಿಂದೆ ಇದ್ದ ರೀತಿಯಲ್ಲಿ ನೊಂದಾಣಿ ಮುಂದುವರೆಸುವಂತೆ ಸರ್ಕಾರವನ್ನು ಆಗ್ರಹಿಸಿದೆ.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ದಸ್ತಾವೇಜು ಬರಹಗಾರರ ಸಂಘದ ಪ್ರಧಾನ ಕಾರ್ಯದರ್ಶಿ ಆಶ್ವಕ್ ಆಹ್ಮದ್ ಮಾತನಾಡಿ, ಕರ್ನಾಟಕ ಸರ್ಕಾರದ ಕಂದಾಯ ಇಲಾಖೆಯಿಂದ ಎಲ್ಲಾ ದಸ್ತಾವೇಜುಗಳನ್ನು ಕಾಗದರಹಿತ, ಮುಖರಹಿತ ನೋಂದಣಿಯನ್ನು ಮಾಡುವ ಉದ್ದೇಶದಿಂದ ದಿನಾಂಕ: 02-05-2026ರಂದು ಚಾಮರಾಜನಗರ ಜಿಲ್ಲೆಯ ಕೆಲವೊಂದು ಉಪನೋಂದಣಾಧಿಕಾರಿಗಳವರ ಕಛೇರಿಗಳಲ್ಲಿ ಪ್ರಾಯೋಗಿಕವಾಗಿ ಕಾಗದರಹಿತ ನೋಂದಣಿ ಮಾಡಿರುವುದು ಸರಿಯಷ್ಟೆ.
ಈ ಕಾಗದ ರಹಿತ ನೋಂದಣಿಯನ್ನು ಅನುಷ್ಠಾನ ಗೊಳಿಸುವುದಕ್ಕಿಂತ ಮುಂಚಿತವಾಗಿ ಸರ್ಕಾರದಿಂದ ಯಾವುದೇ ರೀತಿಯ ಪಬ್ಲಿಕೇಷನ್ ಅಗಲೀ, ಸಾರ್ವಜನಿಕರ ಆಭಿಪ್ರಾಯವನ್ನು ಸಹ ಸಂಗ್ರಹಿಸಿರುವುದಾಗಲೀ ಏನೂ ಮಾಡಿರುವುದಿಲ್ಲ.
ಇದನ್ನೂ ಓದಿ: ಕೆ.ಆರ್. ಶಿವಪ್ರಕಾಶ್ ನಿಧನಕ್ಕೆ ಮುರುಘಾ ಮಠದಿಂದ ಸಂತಾಪ
ಈ ಕಾಗದರಹಿತ ಮತ್ತು ಮುಖರಹಿತ ದಸ್ತಾವೇಜುಗಳನ್ನು ನೋಂದಣಿ ಮಾಡುವುದರಿಂದ ಸಾರ್ವಜನಿಕರಿಗೆ ಅಗುವ ಆನಾನುಕೂಲತೆ ಬಗ್ಗೆಯೂ ಸಹ ಯಾವುದೇ ಚರ್ಚೆ ನಡೆದಿರುವುದಿಲ್ಲ. ಈ ಕಾಗದ ರಹಿತ ಮತ್ತು ಮುಖ ರಹಿತ ನೋಂದಣಿ ಮಾಡುವುದರಿಂದ ಸಾರ್ವಜನಿಕರಿಗೆ ಆನಾನುಕೂಲಗಳು ಹೆಚ್ಚಿನ ರೀತಿಯಲ್ಲಿ ಇದೆ ಎಂದಿದ್ದಾರೆ.
ಕಾವೇರಿ 2.0 ತತ್ರಾಂಶದಲ್ಲಿ ಕಾಗದರಹಿತ/ಮುಖರಹಿತ ನೋಂದಣಿ ಮಾಡುವುದರಿಂದ ಎಲ್ಲಾ ದಸ್ತಾವೇಜುಗಳು ಡಿಜಿ ಲಾಕರ್ನಲ್ಲಿ ಸೇವ್ ಅಗುವುದರಿಂದ, ಪಕ್ಷಗಾರರಿಗೆ/ಖರೀದಿದಾರಿಗೆ ಯಾವುದೇ ರೀತಿಯ ಭೌತಿಕ ದಾಖಲೆ ದೂರೆಯುವುದಿಲ್ಲ.
ಒಂದು ವೇಳೆ ಖರೀದಿದಾರರು ನೋಂದಣಿ ಅದ ತಕ್ಷಣ ಆಕಸ್ಮಿಕವಾಗಿ 2-3 ದಿನಗಳಲ್ಲಿ ಮೃತಪಟ್ಟ ಅಂದರೆ ಅಸ್ತಿ ಖರೀದಿದಾರನ ವಾರಸುದಾರರಿಗೆ ಇದರ ಮಾಹಿತಿ ಹೇಗೆ ತಿಳಿಯುತ್ತದೆ ಎಂದು ಪ್ರಶ್ನಿಸಿದರು?
ಕಾಗದರಹಿತ/ಮುಖರಹಿತ ನೋಂದಣಿ ಪ್ರಕ್ರಿಯೆಯಲ್ಲಿ ಭೌತಿಕವಾಗಿ ಮಾರಟಗಾರರ ಖರೀದಿದಾರರ ಸಹಿಯೇ ಇರುವುದಿಲ್ಲ. ಈ ರೀತಿಯಲ್ಲಿ ನೋಂದಣಿಗಳನ್ನು ಮಾಡಿದರೆ ಭೂ ಮಾಫೀಯಾ ಮತ್ತು ಹ್ಯಾಕರ್ಗಳಿಗೆ ಬಹಳ ಅನುಕೂಲ ಮಾಡಿಕೊಟ್ಟಂತೆ ಅಗುತ್ತದೆ ಎಂದು ತಿಳಿಸಿದರು.
ಇದನ್ನೂ ಓದಿ: ಗ್ರಾಮ ಪಂಚಾಯಿತಿ ಬಿಲ್ ಕಲೆಕ್ಟರ್ ಹುದ್ದೆಗೆ ಮೇ.22 ಕಂಪ್ಯೂಟರ್ ಪರೀಕ್ಷೆ
ಜಿಲ್ಲಾಧ್ಯಕ್ಷ ರುದ್ರಸ್ವಾಮಿ ಮಾತನಾಡಿ, ಕಾಗದರಹಿತ/ಮುಖರಹಿತ ನೊಂದಣಿ ಮಾಡುವುದರಿಂದ ಬ್ಯಾಂಕ್ಗಳಲ್ಲಿ ಹಣಕಾಸು ಸಂಸ್ಥೆಗಳಲ್ಲಿ ಸಾಲ ವಗೈರೆ ಪಡೆಯಲು ತುಂಬಾ ಆನಾನುಕೂಲವಾಗುತ್ತದೆ. ಕಾಗದ ರಹಿತ/ಮುಖರಹಿತ ದಸ್ತಾವೇಜುಗಳಿಗೆ ಭೌತಿಕ ಸಹಿ ಇರುವುದಿಲ್ಲ ಡಿಜಿಟಲ್ ಸಹಿ ಮಾಡಬೇಕಾಗಿರುತ್ತದೆ.
ಡಿಜಿಟಲ್ ಸೈನ್ (ಡೈಸ್) ಮಾಡಿಕೊಡಲು ಕನಿಷ್ಠ 2,000 ರೂ.ಗಳು ಖರ್ಚಾಗುತ್ತದೆ.ಕಾಗದ ರಹಿತ/ ಮುಖರಹಿತ ದಸ್ತಾವೇಜು ನೋಂದಣಿಗೆ ಸ್ಕ್ಯಾನಿಂಗ್ ಫೀ ರೂ. 800 ರಿಂದ 900 ಗಳು ಬರುತ್ತದೆ. ಹಾಲಿ ಇರುವ ಸಿಸ್ಟಮ್ನಲ್ಲಿ ಒಂದು ದಸ್ತಾವೇಜು ನೋಂದಣಿಗೆ ಸ್ಕ್ಯಾನಿಂಗ್ ಫೀ ಕೇವಲ 350 ರೂ.ಗಳು ಮಾತ್ರ ಇರುತ್ತದೆ. ಇದರಿಂದ ಸಾರ್ವಜನಿಕರ ಮೇಲೆ ಹೊರೆ ಅಗಲಿದೆ.
ಇಷ್ಟೆಲ್ಲಾ ಲೋಪದೋಷಗಳಿದ್ದರೂ ಸಹ ಕಂದಾಯ ಸಚಿವರು ಪೇಪರ್ಲೆಸ್, ಫೇಸ್ಲೆಸ್ ಮಾಡುತ್ತೇನೆಂದು ಕರ್ನಾಟಕ ರಾಜ್ಯದ ಆಮಾಯಕ ಜನರ ಮೇಲೆ ರೈತಾಪಿ ಜನಗಳ ಮತ್ತು ಕೂಲಿ ಕಾರ್ಮಿಕರ ಭಾವನೆಗಳ ಜೊತೆ ಚೆಲ್ಲಾಟ ಅಡುತ್ತಿದ್ದಾರೆ, ಈ ಕಾಗದರಹಿತ/ ಮುಖರಹಿತ ನೋಂದಣಿಗೆ ನಮ್ಮಗಳೆಲ್ಲರ ವಿರೋಧ ಇದೆ ಎಂದು ತಿಳಿಸಿದರು.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಮೇ 08 | ಮೆಕ್ಕೆಜೋಳ, ರಾಗಿ ರೇಟ್…
ಸುದ್ದಿಗೋಷ್ಠಿಯಲ್ಲಿ ಸಂಘದ ಸಲಹೆಗಾರರಾದ ಗೋವಿಂದ ಮೂರ್ತಿ, ಕಾರ್ಯದರ್ಶಿ ಕೆಂಚಪ್ಪ, ದಲಿತ ಛಲವಾದಿ ಮಹಾ ಸಭಾದ ಕಾರ್ಯದರ್ಶಿ ದಯಾನಂದ, ಚಂದ್ರಪ್ಪ, ಮಂಜುನಾಥ್ ಉಪಸ್ಥಿತರಿದ್ದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

