CHITRADURGA NEWS | 03 JUNE 2026
ಚಿತ್ರದುರ್ಗ: ಪ್ರಕೃತಿಯನ್ನು ಬಳಸಿಕೊಳ್ಳುತ್ತೇವೆ ವಿನಃ ಬೆಳೆಸುವುದಿಲ್ಲ. ಪ್ರಕೃತಿಗೆ ನಾವು ಎಷ್ಟು ಕೊಡುತ್ತಿಯೋ ಅದರ ಎರಡಷ್ಟನ್ನು ಪರಿಸರ ನಮಗೆ ಮರಳಿ ಕೊಡುತ್ತದೆ. ಪರಿಸರ ಬೆಳೆಸುವ ಮನಸ್ಸುಳ್ಳ ವ್ಯಕ್ತಿಗಳನ್ನು ನಾವು ಗೌರವಿಸಬೇಕು ಎಂದು ಶ್ರೀ ಬೃಹನ್ಮಠ ಹಾಗೂ ಎಸ್.ಜೆ.ಎಂ.ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯರಾದ ಡಾ.ಬಸವಕುಮಾರ ಸ್ವಾಮೀಜಿ ಹೇಳಿದರು.
ಇದನ್ನೂ ಓದಿ: ಶೇ.10 ರಷ್ಟು ಕೊಳವೆ ಬಾವಿಗಳ ರೀ ಬೋರಿಂಗ್ ಮಾಡಲು ಆದ್ಯತೆ ನೀಡಿ | ಜಿ.ಪಂ.ಸಿಇಓ ಡಾ.ಆಕಾಶ್ ಸೂಚನೆ
ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ವತಿಯಿಂದ ವಿಶ್ವ ಪರಿಸರ ದಿನದ ಅಂಗವಾಗಿ ನಡೆಯುತ್ತಿರುವ ಸಸಿ ನೆಡುವ ಸಪ್ತಾಹದ 4ನೇ ದಿನದ ಕಾರ್ಯಕ್ರಮವು ದಾವಣಗೆರೆ ರಸ್ತೆಯ ಸೀಬಾರದ ಶ್ರೀ ಕೇತೆಶ್ವರ ಮಹಾಮಠದ ಪಕ್ಕದ ಪಿಎನ್ಸಿ ಆವರಣದಲ್ಲಿ ನಡೆಯಿತು. ಈ ವೇಳೆ ಮಾತನಾಡಿದ ಶ್ರೀಗಳು.
ಶ್ರೀಮಠದ ವತಿಯಿಂದ ಏಳು ಸಾವಿರ ಸಸಿಗಳನ್ನು ನೆಟ್ಟು ರಕ್ಷಿಸುವ ಕಾರ್ಯ ಮಾಡುತ್ತೇವೆ. ಪೂಜ್ಯ ಶರಣರು ತಿಂದ ಹಣ್ಣುಗಳ ಬೀಜಗಳನ್ನು ಸಂಗ್ರಹಿಸಿಟ್ಟು ಮಳೆಗಾಲದಲ್ಲಿ ಬೀಜದ ಉಂಡೆಗಳನ್ನಾಗಿ ಮಾಡಿ ಪರಿಸರದಲ್ಲಿ ಹಾಕಿ ಹಣ್ಣಿನ ಗಿಡಗಳನ್ನು ಬೆಳೆಸಿದರು.
ಪರಿಸರ ರಕ್ಷಣೆಯ ಜೊತೆಗೆ ನಿರಾಶ್ರಿತರಿಗೆ ಆಶ್ರಯ ಒದಗಿಸುವ ಚಿಂತನೆಯನ್ನು ಶ್ರೀಮಠವು ಮಾಡುತ್ತಿದೆ. ಸೂರು ಕಲ್ಪಿಸುವ ಯೋಜನೆಯನ್ನು ಜಿಲ್ಲಾಡಳಿತಕ್ಕೆ ತಿಳಿಸಿ ಅವರಿಗೆ ಮನೆ ನಿರ್ಮಿಸಿಕೊಡಲು ಮನವಿ ಮಾಡಲಾಗಿದೆ. ಶ್ರೀಮಠದ ಜಾಗದಲ್ಲಿ ಸದ್ಯಕ್ಕೆ ಅವರಿಗೆ ಆಶ್ರಯ ನೀಡಲಾಗಿದೆ. ಹಿಂದಿನ ವರ್ಷ ಹಾಕಿದ್ದ 1000 ಸಸಿಗಳು ಬೆಳೆದು ವನವಾಗಿರುವುದನ್ನು ಕಾಣಬಹುದು.
ಇದನ್ನೂ ಓದಿ: ಅಡಿಕೆ ಧಾರಣೆ | 2 ಜೂನ್ | ಯಾವ ಅಡಿಕೆಗೆ ಎಷ್ಟು ರೇಟ್ ?
ಮಠದ ಜಮೀನಿನಲ್ಲಿ ವಿಷಯುಕ್ತ ಅನಿಲವು ಸೇರಿ ಸುಮಾರು 5 ಅಡಿಗಳಷ್ಟು ಆಳದವರೆಗೆ ಭೂಮಿಯಲ್ಲಿ ಫಲವತ್ತತೆ ಇಲ್ಲದಂತಾಗಿತ್ತು. ಪ್ಲಾಸ್ಟಿಕ್ ಹಾಗೂ ವಿಷ ಅನಿಲವನ್ನು ತಡೆಗಟ್ಟಲು ಸಸಿಗಳನ್ನು ನೆಟ್ಟು ಪರಿಸರ ಬೆಳೆಸಿ ಉಳಿಸಿ ಎಂದು ನುಡಿದರು.
ನಿವೃತ್ತ ಶಿಕ್ಷಕರು ಹಾಗೂ ವಿಜ್ಞಾನ ಕಾರ್ಯಕರ್ತರಾದ ದಾಸೇಗೌಡ ಪ್ಲಾಸ್ಟಿಕ್ನ ದುಷ್ಪರಿಣಾಮಗಳು ವಿಷಯಾವಲೋಕನ ಮಾಡಿ ಮಾತನಾಡಿ, ಪರಿಸರದಿಂದ ಪ್ರಭಾವಿತರಾಗಬೇಕು ಜಾಗತಿಕ ತಾಪಮಾನವನ್ನು ಇಳಿಸಲು ಗಿಡಮರಗಳನ್ನು ನೆಡಬೇಕು. ತಾಯಿ ಗರ್ಭದಲ್ಲಿದ್ದಾಗ ಆಹಾರ ಮತ್ತು ಆಮ್ಲಜನಕವನ್ನು ಹೊಕ್ಕಳ ಬಳ್ಳಿಯಿಂದ ಪಡೆದುಕೊಳ್ಳುತ್ತಿದ್ದೇವು.
ತಾಯಿ ಗರ್ಭದಿಂದ ಹೊರಬಂದ ತಕ್ಷಣ ಮನುಷ್ಯ ಹೊಕ್ಕಳ ಬಳ್ಳಿಯ ಸಂಪರ್ಕ ಕಳೆದುಕೊಂಡು ಇನ್ನೊಂದು ಹೊಕ್ಕಳು ಬಳ್ಳಿಗೆ ಕನೆಕ್ಟ್ ಆಗುತ್ತಾನೆ, ಅದೇ ಪ್ರಕೃತಿ. ಸಸಿಗಳು ಆಮ್ಲಜನಕವನ್ನು ಕೊಡುತ್ತದೆ. ಸಸ್ಯಗಳು ಇಲ್ಲದೆ ಮನುಷ್ಯ ಬದುಕುಳಿಯಲು ಸಾಧ್ಯವಿಲ್ಲ. ಪ್ಲಾಸ್ಟಿಕ್ಗೆ ಪ್ಲಾಸ್ಟಿಕಾಸುರ ಎಂಬ ಹೆಸರನ್ನು ಕೊಡಲಾಗಿದೆ. ಇದು ನಮ್ಮನ್ನು ರಾಕ್ಷಸರ ರೀತಿ ಕಾಡುತ್ತಿದೆ.
ಇದನ್ನೂ ಓದಿ: ಮುಂಗಾರು ಚುರುಕು | ಬಿತ್ತನೆ ಬೀಜ, ರಸಗೊಬ್ಬರ ವಿತರಣೆಗೆ ಸಕಲ ಸಿದ್ಧತೆ ಮಾಡಿಕೊಳ್ಳಿ | ಡಿಸಿ
ದುಬೈನಲ್ಲಿ ಒಂಬತ್ತನೇ ತರಗತಿ ವಿದ್ಯಾರ್ಥಿಗೆ ಜ್ವರ ಬಂದಾಗ ಆತನನ್ನ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ವೈದ್ಯರು ಮಾತ್ರೆಯನ್ನು ಕೊಟ್ಟು ವಾರದ ನಂತರ ಬನ್ನಿ ಎಂದು ಹೇಳಿ ಕಳಿಸಿದರು. ಜ್ವರ ಕಡಿಮೆಯಾಗದೆ ಜಾಸ್ತಿಯಾಗಿ ಮತ್ತೆ ಆಸ್ಪತ್ರೆಗೆ ಹೋದಾಗ ರಕ್ತ ಪರೀಕ್ಷೆ ಮಾಡಿದಾಗ ರಕ್ತದಲ್ಲಿ ಪ್ಲಾಸ್ಟಿಕ್ ಅಂಶ ಕಂಡುಬಂದಿದೆ. ಆ ಮಗು ಆರು ತಿಂಗಳಿನಿಂದ ಒಂದೇ ವಾಟರ್ ಬಾಟಲ್ ಬಳಸಿದ್ದರಿಂದ ಪ್ಲಾಸ್ಟಿಕ್ ಅಂಶ ದೇಹವನ್ನು ಸೇರಿ ಬ್ಲಡ್ ಕ್ಯಾನ್ಸರ್ಗೆ ಕಾರಣವಾಗಿದೆ.
ಇದೇ ರೀತಿಯ ವರದಿಗಳು ನೆದರ್ಲ್ಯಾಂಡ್ನಲ್ಲಿಯೂ ನಡೆದಿವೆ. ಇತ್ತೀಚಿಗೆ ಪ್ಲಾಸ್ಟಿಕ್ ಬಳಕೆ ಒಂದು ಪ್ರತಿಷ್ಠೆಯ ವಿಷಯವಾಗಿದೆ. ಕುಂಬಾರ, ಚಮ್ಮಾರ, ಬಡಿಗಿ, ನೇಕಾರರನ್ನು ಪ್ಲಾಸ್ಟಿಕ್ ಕೊಂದಿದೆ. ಪ್ಲಾಸ್ಟಿಕ್ ಮುಕ್ತ ಪ್ರದೇಶವನ್ನಾಗಿ ಮಾಡಬೇಕು. ಇಡೀ ಭೂಮಿಯಿಂದಲೇ ಪ್ಲಾಸ್ಟಿಕ್ ಅನ್ನು ಮುಕ್ತ ಗೊಳಿಸಬೇಕು.
ಬಳಸಿದ ಪ್ಲಾಸ್ಟಿಕ್ ಸಂಗ್ರಹಿಸಿ ಸುಟ್ಟಾಗ ಅದರಿಂದ ಡಯಾಕ್ಸಿನ್ ಬಿಡುಗಡೆಯಾಗಿ ನೀರು ಮತ್ತು ಗಾಳಿಯಲ್ಲಿ ಸೇರಿಕೊಂಡು ಪರಿಸರ ಮಾಲಿನ್ಯ ಉಂಟಾಗುತ್ತದೆ. ಮಗುವಿಗೆ ಪ್ಲಾಸ್ಟಿಕ್ ಬಾಟಲಿಯಿಂದ ಹಾಲು ಕುಡಿಸುತ್ತೇವೆ ಅದರಿಂದ ಮಗುವಿನ ರಕ್ತದಲ್ಲಿಯೂ ಪ್ಲಾಸ್ಟಿಕ್ ಅಂಶವನ್ನು ಕಾಣಬಹುದಾಗಿದೆ. ನಾವುಗಳು ಪ್ಲಾಸ್ಟಿಕ್ ಬಳಸದಂತೆ ಪರ್ಯಾಯವಾಗಿ ಬೇರೆ ವಸ್ತುಗಳನ್ನು ಬಳಸಬೇಕು.
ಪ್ಲಾಸ್ಟಿಕ್ ಮುಕ್ತ ಪರಿಸರ ರಕ್ಷಣೆಗೆ ಜಾಗತಿಕ ಮಟ್ಟದಲ್ಲಿ ನೀತಿಗಳನ್ನು ರೂಪಿಸಿದ್ದಾರೆ ಆದರೆ ಅವು ಕಾರ್ಯರೂಪಕ್ಕೆ ಬರಬೇಕು. ಪ್ಲಾಸ್ಟಿಕ್ ಶತ್ರುವು ಮತ್ತು ಮಿತ್ರನು ಕೂಡ. ಏಕಬಳಕೆ ಪ್ಲಾಸ್ಟಿಕ್ ಬಳಸಬಾರದು ಮರುಬಳಕೆಯ ಪ್ಲಾಸ್ಟಿಕ್ ಬಳಸೋಣ. ಪರಿಸರ ರಕ್ಷಣೆಯ ಕೆಲಸವನ್ನು ಶ್ರೀ ಮಠವು ನಿರಂತರವಾಗಿ ಮಾಡುತ್ತಾ ಬಂದಿದೆ ಎಂದು ತಿಳಿಸಿದರು.
ಇದನ್ನೂ ಓದಿ: ಪಿತ್ತಗಲ್ಲುಗಳಿಗೆ ಚಿಕಿತ್ಸೆ ನೀಡದಿದ್ದರೆ ಈ ಗಂಭೀರ ಸಮಸ್ಯೆಗಳಿಗೆ ಕಾರಣವಾಗಬಹುದು ಎಚ್ಚರ
ದಾವಣಗೆರೆಯ ವಿರಕ್ತಮಠದ ಡಾ.ಬಸವಪ್ರಭು ಸ್ವಾಮೀಜಿ ಮಾತನಾಡಿದರು. ಗುರುಮಿಠಕಲ್ನ ಶ್ರೀ ಶಾಂತವೀರ ಮಹಾಸ್ವಾಮಿಗಳು, ವಿಶ್ವಕರ್ಮ ಸಮಾಜದ ಅಧ್ಯಕ್ಷರಾದ ಶಂಕರಾಚಾರ್ಯರು, ವೀರಶೈವ ಕ್ರೆ.ಕೋ.ಆಪ್ ಸೋಸೈಟಿ ಅಧ್ಯಕ್ಷರಾದ ಪಟೇಲ್ ಶಿವಕುಮಾರ್, ವಿಶ್ವಕರ್ಮ ಸಮಾಜದ ಶಂಕರಮೂರ್ತಿ, ಯೋಗಗುರು ಚಿನ್ಮಯಾನಂದರು, ಉಪವಲಯ ಅರಣ್ಯಾಧಿಕಾರಿ ನವೀನ್ ಪಿ.ಹಿರೇಗೌಡರ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕರಾದ ಎಂ.ಆರ್ ಮಂಜುನಾಥ್, ಸಮಾಜಸೇವಕರಾದ ಶ್ರೀಮತಿ ಗಾಯತ್ರಿ ಶಿವರಾಂ, ಚಿತ್ರದುರ್ಗ ತಾಲ್ಲೂಕು ಪಂಚಾಯತ್ ಕಾರ್ಯ ನಿರ್ವಾಹಣಾಧಿಕಾರಿ ವೈ.ರವಿಕುಮಾರ್, ಬಾಪೂಜಿ ವಿದ್ಯಾಸಂಸ್ಥೆಯ ಕರ್ಯದರ್ಶಿಗಳಾದ ಕೆ.ಎಂ ವೀರೇಶ್ ಹಾಗೂ ಅನೇಕ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

