ನಿಧನವಾರ್ತೆ
Death news: ಭೀಮಸಮುದ್ರದ ಸರೋಜಮ್ಮ ತೋಟದ ನಿಧನ
CHITRADURGA NEWS | 01 SEPTEMBER 2024
ಚಿತ್ರದುರ್ಗ: ತಾಲೂಕಿನ ಭೀಮಸಮುದ್ರ ಗ್ರಾಮದ ಸರೋಜಮ್ಮ(84) ತೋಟದ ಜಯ್ಯಪ್ಪ ಭಾನುವಾರ ಬೆಳಗ್ಗೆ 5 ಗಂಟೆ ವೇಳೆಗೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಮೃತರಿಗೆ ಇಬ್ಬರು ಪುತ್ರರು, ಮೂವರು ಪುತ್ರಿಯರು ಇದ್ದಾರೆ. ಇದರೊಟ್ಟಿಗೆ ಭೀಮಸಮುದ್ರದಲ್ಲಿ ಅಪಾರ ಬಂಧು, ಬಳಗವನ್ನು ಅಗಲಿದ್ದಾರೆ.
ಇದನ್ನೂ ಓದಿ: ಹಬ್ಬಿದಾ ಮಲೆ ಮಧ್ಯದೊಳಗೆ | ಬಯಲು ಸೀಮೆಯ ಮಹಾ ಕಾದಂಬರಿ | ಹೂತಿಟ್ಟ ಚಿನ್ನಕ್ಕಾಗಿ ಹುಡುಕಾಟ
ಮೂರು ದಿನದ ಹಿಂದಷ್ಟೇ ಸರೋಜಮ್ಮ ಅವರ ಮೊಮ್ಮಗ ನಿತಿನ್ ತೋಟದ್ ರೈಲಿಗೆ ಸಿಲುಕಿ ಮೃತಪಟ್ಟಿದ್ದರು. ಇದಾದ ಬೆನ್ನಲ್ಲೆ ಅಜ್ಜಿ ಹೃದಯಾಘಾತಕ್ಕೆ ಒಳಗಾಗಿದ್ದಾರೆ.
ಇಂದು ಸೆಪ್ಟಂಬರ್ 1 ಸಂಜೆ 4 ಗಂಟೆಗೆ ಭೀಮಸಮುದ್ರದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಸಂಸದ ಗೋವಿಂದ ಕಾರಜೋಳ ಅವರ ಹೊಸ ಕಚೇರಿ ಹೇಗಿದೆ ಗೊತ್ತಾ