Connect with us

ದೊಡ್ಡಹೊಟ್ಟೆ ರಂಗನಾಥಸ್ವಾಮಿ ದೇವಸ್ಥಾನಕ್ಕೆ ಸಿಸಿ ರಸ್ತೆ | ಶಾಸಕ ಎಂ.ಚಂದ್ರಪ್ಪ ಭೂಮಿ ಪೂಜೆ

ಹೊಳಲ್ಕೆರೆ

ದೊಡ್ಡಹೊಟ್ಟೆ ರಂಗನಾಥಸ್ವಾಮಿ ದೇವಸ್ಥಾನಕ್ಕೆ ಸಿಸಿ ರಸ್ತೆ | ಶಾಸಕ ಎಂ.ಚಂದ್ರಪ್ಪ ಭೂಮಿ ಪೂಜೆ

CHITRADURGA NEWS | 03 FEBRUARY 2025

ಹೊಳಲ್ಕೆರೆ: ತಾಲೂಕಿನ ಲೋಕದೊಳಲು ಗ್ರಾಮದ ಬೆಟ್ಟದ ಮೇಲಿರುವ ದೊಡ್ಡಹೊಟ್ಟೆ ರಂಗನಾಥಸ್ವಾಮಿ ದೇವಸ್ಥಾನಕ್ಕೆ ರೂ.1.50 ಕೋಟಿ ವೆಚ್ಚದಲ್ಲಿ ಸಿ.ಸಿ.ರಸ್ತೆ ಕಾಮಗಾರಿಗೆ ಶಾಸಕ ಎಂ.ಚಂದ್ರಪ್ಪ ಭೂಮಿಪೂಜೆ ಸಲ್ಲಿಸಿದರು.

Also Read: ಚಿತ್ರದುರ್ಗದಲ್ಲಿ ಫೆ.7, 8 ರಂದು ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆ | ಜಿಲ್ಲೆಯ ಐತಿಹಾಸಿಕ ಸ್ಥಳಗಳ ಮಹತ್ವ ತಿಳಿಸಿ | ಡಿಸಿ ಟಿ.ವೆಂಕಟೇಶ್ 

ಈ ವೇಳೆ ಮಾತನಾಡಿದ ಶಾಸಕರು, ದೊಡ್ಡಹೊಟ್ಟೆ ರಂಗನಾಥಸ್ವಾಮಿ ಹೆಸರಾಂತ ದೇವರಾಗಿರುವುದರಿಂದ ಭಕ್ತಿ ಭಾವದಿಂದ ಪೂಜಿಸಿದಾಗ ಎಲ್ಲರಿಗೂ ಆರ್ಶೀವಾದಸಿಗುತ್ತದೆ.

ಬರಿ ಇಂಜಿನಿಯರ್ ಕಂಟ್ರಾಕ್ಟರ್‍ಗಳ ಮೇಲೆ ಜವಾಬ್ದಾರಿ ಹಾಕದೆ ಊರಿನವರು ಕಾಲ ಕಾಲಕ್ಕೆ ಸರಿಯಾಗಿ ರಸ್ತೆಗೆ ನೀರಿನ ಕ್ಯೂರಿಂಗ್ ಮಾಡಿದಾಗ ಗಟ್ಟಿಮುಟ್ಟಾಗಿರುತ್ತದೆ. ನಿಗಧಿತ ಸಮಯದಲ್ಲಿ ರಸ್ತೆ ಕಾಮಗಾರಿ ಪೂರ್ಣಗೊಳಿಸುವಂತೆ ಶಾಸಕ ತಿಳಿಸಿದರು.

Also Read: ರೆಡ್ಡಿ ಜನಸಂಘದ ವ್ಯವಸ್ಥಾಪಕ ಜಿ.ಎನ್.ಹನುಮಂತರೆಡ್ಡಿ ಇನ್ನಿಲ್ಲ

ಮಳೆಗಾಲ ಆರಂಭವಾಗುವುದರೊಳಗೆ ರಸ್ತೆ ಕಾಮಗಾರಿಯನ್ನು ಮುಗಿಸುವಂತೆ ಸಂಬಂಧಪಟ್ಟ ಇಂಜಿನಿಯರ್ ಹಾಗೂ ಗುತ್ತಿಗೆದಾರನಿಗೆ ಸೂಚಿಸಿದರು.

ಈ ವೇಳೆ ಲೋಕದೊಳಲು ಗ್ರಾಮಸ್ಥರು ಉಪಸ್ಥಿತರಿದ್ದರು.

Click to comment

Leave a Reply

Your email address will not be published. Required fields are marked *

More in ಹೊಳಲ್ಕೆರೆ

To Top
Exit mobile version