ಕ್ರೈಂ ಸುದ್ದಿ
Railway Accident: ರೈಲಿಗೆ ಸಿಲುಕಿ ಭೀಮಸಮುದ್ರದ ನಿತಿನ್ ತೋಟದ್ ಆತ್ಮಹತ್ಯೆ
CHITRADURGA NEWS |28 AUGUST 2024
ಚಿತ್ರದುರ್ಗ: ಭೀಮಸಮುದ್ರ ಗ್ರಾಮದ ನಿತಿನ್ ತೋಟದ್ ಬೆಟ್ಟದ ನಾಗೇನಹಳ್ಳಿ ಬಳಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಬೆಟ್ಟದನಾಗೇನಹಳ್ಳಿ ಬಳಿ ತೋಟಕ್ಕೆ ಹೋಗಿದ್ದ ವೇಳೆ ಅಲ್ಲಿಯೇ ರೈಲು ಹಳಿಗೆ ಸಿಲುಕಿ ಆತ್ಮಹತ್ಯೆ (Railway accident) ಮಾಡಿಕೊಂಡಿದ್ದಾರೆ.
31 ವರ್ಷದ ನಿತಿನ್ ತೋಟದ್ ಅವರಿಗೆ ಮೂರು ವರ್ಷದ ಮಗಳಿದ್ದಾಳೆ. ಭೀಮಸಮುದ್ರದ ಡಿ.ಜೆ.ಸಿದ್ದೇಶ್ ಮಂಜುಳಮ್ಮ ದಂಪತಿಯ ಪುತ್ರ.
ಚಿತ್ರದುರ್ಗ ರೈಲ್ವೇ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಸಂಜೆ ವೇಳೆಗೆ ಭೀಮಸಮುದ್ರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.