Connect with us

ಹಸುವಿನ ಕೆಚ್ಚಲು ಕತ್ತರಿಸಿದವರ ವಿರುದ್ಧ ನಾಳೆ ಚಿತ್ರದುರ್ಗದಲ್ಲಿ ಪ್ರತಿಭಟನೆ

ಮುಖ್ಯ ಸುದ್ದಿ

ಹಸುವಿನ ಕೆಚ್ಚಲು ಕತ್ತರಿಸಿದವರ ವಿರುದ್ಧ ನಾಳೆ ಚಿತ್ರದುರ್ಗದಲ್ಲಿ ಪ್ರತಿಭಟನೆ

CHITRADURGA NEWS | 19 JANUARY 2025

ಚಿತ್ರದುರ್ಗ: ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಹಸುಗಳ ಕೆಚ್ಚಲನ್ನು ಕತ್ತರಿಸಿ ವಿಕೃತಿ ಮೆರೆದ ದುಷ್ಟರ ಅಮಾನವೀಯ ಕೃತ್ಯವನ್ನು ಖಂಡಿಸಿ ಗೋ ಸಂರಕ್ಷಣ ಸಂವರ್ಧನ ಸಮಿತಿ – ಚಿತ್ರದುರ್ಗ ವತಿಯಿಂದ ಜನವರಿ 20(ನಾಳೆ) ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

Also Read: 13ನೇ ಶರಣ ಸಾಹಿತ್ಯ ಸಮ್ಮೇಳನ | ಕೋಟೆ ನಾಡಲ್ಲಿ ವಿದ್ಯುಕ್ತ ಚಾಲನೆ | ಯಾರು ಏನು ಹೇಳಿದ್ರು ?

ಹಸುವಿನ ಕೆಚ್ಚಲು ಕತ್ತರಿಸಿದ ರಾಕ್ಷಸರಿಗೆ ಉಗ್ರ ಶಿಕ್ಷೆಯನ್ನು ನೀಡಿ ಗೋಸಂಕುಲವನ್ನು ಸಂರಕ್ಷಿಸಲು ಕಠಿಣ ಕಾನೂನನ್ನು ಜಾರಿಗೆ ಆಗ್ರಹಿಸಲು ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

ನಗರದ ಆನೆ ಬಾಗಿಲಿನಿಂದ ಒನಕೆ ಓಬವ್ವ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ಹಾಗೂ ಗೋ ಪೂಜೆ ಹಮ್ಮಿಕೊಳ್ಳಲಾಗಿದೆ‌.

ಈ ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹಿಂದೂ ಬಾಂಧವರು, ಗೋ ಪ್ರೇಮಿಗಳು ಭಾಗವಹಿಸಲು ಗೋ ಸಂವರ್ಧನಾ ಸಂರಕ್ಷಣಾ ಸಮಿತಿ ಮನವಿ ಮಾಡಿದೆ.

Also Read: ಮೋಟಾರ್ ಪಂಪ್, ಕೇಬಲ್ ಕಳ್ಳನ‌ ಬಂಧನ

Click to comment

Leave a Reply

Your email address will not be published. Required fields are marked *

More in ಮುಖ್ಯ ಸುದ್ದಿ

To Top
Exit mobile version