Connect with us

ಭೀಕರ ಅಪಘಾತ | ಹಿರಿಯೂರಿನ ಸಿದ್ಧರಾಜು ಮೃತ

ಹಿರಿಯೂರು

ಭೀಕರ ಅಪಘಾತ | ಹಿರಿಯೂರಿನ ಸಿದ್ಧರಾಜು ಮೃತ

CHITRADURGA NEWS | 14 MARCH 2025

ಹಿರಿಯೂರು: ಇಕೋ ಕಾರು ಹಾಗೂ ಈಚರ್ ಲಾರಿ ನಡುವೆ ಸಂಭವಿಸಿದ ಭೀಕರ ಅಫಘಾತದಲ್ಲಿ ಹಿರಿಯೂರಿನ ಸಿದ್ಧರಾಜು(35) ಮೃತಪಟ್ಟಿದ್ದಾರೆ.

Also Read: ಭಕ್ತ ಸಾಗರದ ನಡುವೆ ಸಾಗಿದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ಬ್ರಹ್ಮ ರಥೋತ್ಸವ | ಆಗಸದಲ್ಲಿ ಗರುಢ ಪ್ರದಕ್ಷಿಣೆ

ಗುರುವಾರ ರಾತ್ರಿ 9.30 ರ ನಂತರ ಹಿರಿಯೂರು ಹೊರವಲಯದ ಬೀದರ್ ಶ್ರೀರಂಗಪಟ್ಟಣ ರಾಷ್ಟ್ರೀಯ ಹೆದ್ದಾರಿ 150A ರಲ್ಲಿ ಆರ್.ಕೆ.ಪವರ್ ಬಳಿ ಅಪಘಾತ ಸಂಭವಿಸಿದೆ.

ಇಕೋ ವಾಹನ ಓವರ್ ಟೇಕ್ ಮಾಡುವಾಗ ಮುಂದೆ ಬರುತ್ತಿದ್ದ ಈಚರ್ ವಾಹನಕ್ಕೆ ಕಾರು ಡಿಕ್ಕಿಯಾಗಿದೆ ಎನ್ನಲಾಗಿದೆ.

ದುರ್ಘಟನೆಯಲ್ಲಿ ಹಿರಿಯೂರಿನ ಶುದ್ಧ ಕುಡಿಯುವ ನೀರು ವ್ಯಾಪಾರ ಮಾಡುತ್ತಿದ್ದ ಸಿದ್ಧನಾಯಕ ಸರ್ಕಲ್ ನಿವಾಸಿ ಸಿದ್ಧರಾಜು ಅಸುನೀಗಿದ್ದಾರೆ.

Also Read: ಜಿಲ್ಲೆಯ ಜನರಿಗೆ ಎಚ್ಚರಿಕೆ ‌| ಮಿತಿಮೀರಿದ ತಾಪಮಾನ | ಈ‌ ಸಲಹೆ ಪಾಲಿಸಿ..

ಘಟನಾ ಸ್ಥಳಕ್ಕೆ ಹಿರಿಯೂರು ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ದೂರು‌ ದಾಖಲಿಸಿಕೊಂಡಿದ್ದಾರೆ.

Click to comment

Leave a Reply

Your email address will not be published. Required fields are marked *

More in ಹಿರಿಯೂರು

To Top
Exit mobile version