ಮುಖ್ಯ ಸುದ್ದಿ
ಚಿತ್ರದುರ್ಗ ನ್ಯೂಸ್ ಓದುಗರಿಗೆ ಧನ್ಯವಾದಗಳು

ಚಿತ್ರದುರ್ಗ ನ್ಯೂಸ್.ಕಾಂ: ಓದುಗರ ಅದ್ಬುತವಾದ ಪ್ರತಿಕ್ರಿಯೆಗಳಿಗೆ ಧನ್ಯವಾದಗಳು.
ಇದನ್ನೂ ಓದಿ: ಆಸ್ಟ್ರೇಲಿಯಾ ತಂಡವನ್ನು ಬಗ್ಗು ಬಡಿಯಲಿದೆ ಭಾರತ
ಇಡೀ ವಿಶ್ವವೇ ಕಾತುರದಿಂದ ಕಾಯುತ್ತಿರುವ ಭಾರತ – ಆಸ್ಟ್ರೇಲಿಯಾ ನಡುವಿನ ವಿಶ್ವಕಪ್ ಫೈನಲ್ ಪಂದ್ಯವನ್ನು ಸ್ಮರಣೀಯವಾಗಿಸಬೇಕು. ಭಾರತದ ಪಾಲಿಗೆ ಹಬ್ಬವೇ ಆಗಿರುವ ಕ್ರಿಕೇಟ್ ಹಬ್ಬವನ್ನು ಚಿತ್ರದುರ್ಗ ನ್ಯೂಸ್ ಜೊತೆಗೆ ಓದುಗರು ಸಂಭ್ರಮಿಸಲು ವೇದಿಕೆ ಕಲ್ಪಿಸಲಾಗಿತ್ತು.
ಇದನ್ನೂ ಓದಿ: ಈ ಸಲ ಕಪ್ ನಮ್ದೇ
ಸುವರ್ಣಾಕ್ಷರಗಳಲ್ಲಿ ಬರೆದಿಡಬಹುದಾದ ಈ ದಿನವನ್ನು ನಮ್ಮ ಓದುಗರು ಅಕ್ಷರಶಃ ಸ್ಮರಣೀಯವಾಗಿಸಿದ್ದಾರೆ. ಬೆಳಗ್ಗೆ 10 ಗಂಟೆಗಷ್ಟೇ ನಾವು ಚಿತ್ರದುರ್ಗ ನ್ಯೂಸ್ ಜೊತೆಗೆ ಕ್ರಿಕೇಟ್ ಹಬ್ಬ ಆಚರಿಸೋಣ ಎಂದು ಕರೆ ಕೊಟ್ಟಿದ್ದೆವು.
ಇದನ್ನೂ ಓದಿ: ವಿಶ್ವಕಪ್ಗೆ ಮುತ್ತಿಕ್ಕಲಿದೆ ಭಾರತ
ಭರ್ಜರಿ ಮಳೆಯಂತೆ ಪೋಟೊ, ಅಭಿಪ್ರಾಯಗಳ ಸುರಿಮಳೆಯೇ ನಮ್ಮ ವಾಟ್ಸಪ್ಗೆ ಹರಿದು ಬಂದಿದೆ. ಮಧ್ಯಾಹ್ನ 2 ಗಂಟೆವರೆಗೆ ನಾವು ನಿಮ್ಮ ಅಭಿಪ್ರಾಯಗಳನ್ನು ಪ್ರಕಟಿಸುತ್ತೇವೆ ಎಂದು ಹೇಳಿದ್ದೆವು. ಆದರೆ, ಹರಿದು ಬಂದ ಪೋಟೋಗಳ ಸಂಖ್ಯೆಯ ಕಾರಣಕ್ಕೆ ಈ ಸಮಯ ಹೆಚ್ಚಾಯಿತು.
ಇದನ್ನೂ ಓದಿ: ಕ್ರಿಕೇಟ್ ಹಬ್ಬ ಚಿತ್ರದುರ್ಗ ನ್ಯೂಸ್ ಜೊತೆ
ಸಾಕಷ್ಟು ಜನ ಕೇವಲ ಪೋಟೋ ಕಳಿಸಿ ಸುಮ್ಮನಾಗಿದ್ದೀರಿ. ನಾವು ನಿಮ್ಮ ಅಭಿಪ್ರಾಯ ಬರೆಯುವುದು ಸರಿಯಲ್ಲ. ಹಾಗಾಗಿ ನಿಮ್ಮ ಪೋಟೋ ಹಾಗೇಯೇ ಉಳಿದಿವೆ. ಕೆಲವರು ಸರಿಯಾಗಿಲ್ಲದ ಪೋಟೋಗಳನ್ನು ಕಳಿಸಿದ್ದೀರಿ ಅವುಗಳನ್ನು ನಾವು ಪ್ರಕಟಿಸಲು ಸಾಧ್ಯವಾಗಲಿಲ್ಲ.
ಉಳಿದಂತೆ ಸಾಧ್ಯವಾದಷ್ಟು ಪ್ರಕಟಿಸಿದ್ದೇವೆ. ಇನ್ನೂ ಪ್ರಕಟವಾಗುವುದು ಸಾಕಷ್ಟು ಬಾಕಿ ಉಳಿದಿವೆ. ಎಲ್ಲ ಪೋಟೋಗಳನು ಪ್ರಕಟಿಸಲು ಆಗಿಲ್ಲ. ಮುಂದೆ ಬೇರೆ ಬೇರೆ ಸಂದರ್ಭಗಳನ್ನು ಸೃಷ್ಟಿಸಿಕೊಂಡು ಹೀಗೆಯೇ ಮುಖಾಮುಖಿ ಆಗೋಣ.
ಇದನ್ನೂ ಓದಿ: ಭಾರತ ವಿಶ್ವಕಪ್ ಚಾಂಪಿಯನ್ ಪಟ್ಟಕ್ಕೆ
ಸದ್ಯಕ್ಕೆ ಭಾರತ-ಆಸ್ಟ್ರೇಲಿಯಾ ನಡುವಿನ ಕ್ರಿಕೇಟ್ ಮ್ಯಾಚ್ ಸಂಭ್ರಮದಲ್ಲಿ ಮುಳುಗಿ ಹೋಗೋಣ.
ನೀವು, ನಿಮ್ಮ ಕುಟುಂಬದವರು, ಸ್ನೇಹಿತರು, ಊರು ಕೇರಿಯವರೆಲ್ಲಾ ಸೇರಿ ಮ್ಯಾಚ್ ನೋಡುತ್ತಿರುವ, ಸಂಭ್ರಮಿಸುವ ಕಡೆಗೆ ವಿಜಯೋತ್ಸವ ಆಚರಿಸುವ ಪೋಟೊಗಳನ್ನು ಕಳುಹಿಸಿ ಸಂಜೆಯ ನಂತರ ಅವುಗಳನ್ನು ಚಿತ್ರದುರ್ಗ ನ್ಯೂಸ್ ಪ್ರಕಟಿಸಲಿದೆ.
ಇದನ್ನೂ ಓದಿ: ವಿಶ್ವದ ಗಮನ ಭಾರತದತ್ತ
ನೀವು ಪೋಟೋಗಳನ್ನು ಕಳುಹಿಸಬೇಕಾದ ನಮ್ಮ ವಾಟ್ಸಪ್ ಸಂಖ್ಯೆ 9008943015
ಇದನ್ನೂ ಓದಿ: ಭಾರತ ಸೋಲಿಲ್ಲದ ಸರದಾರ
ಬೆಳಗ್ಗೆಯಿಂದ ಚಿತ್ರದುರ್ಗ ನ್ಯೂಸ್ ವೆಬ್ಸೈಟ್ಗೆ ಅಪ್ಲೋಡ್ ಮಾಡಿರುವ ನಿಮ್ಮ ಪೋಟೋಗಳು ಬೇಕಿದ್ದರೆ ನಮ್ಮ ಫೇಸ್ಬುಕ್ ಪೇಜ್ನಿಂದ ಡೌನ್ಲೋಡ್ ಮಾಡಿಕೊಳ್ಳಬಹುದು.
ನಮ್ಮ ಫೇಸ್ಬುಕ್ (FACEBOOK) ಪೇಜ್ ಲಿಂಕ್ ಇಲ್ಲಿದೆ. https://www.facebook.com/
ಇದನ್ನೂ ಓದಿ: ಭಾರತದ ಗೆಲುವು ಶತಃಸಿದ್ಧ
