CHITRADURGA NEWS | 9 APRIL 2024
ಚಿತ್ರದುರ್ಗ: ಕೋಟೆನಾಡಿನ ಶಕ್ತಿ ದೇವತೆ ರಾಜ ಉತ್ಸವಾಂಬ ಉಚ್ಚಂಗಿ ಯಲ್ಲಮ್ಮ ದೇವಿ ಜಾತ್ರೆ ಮೇ 14 ರಿಂದ28 ರವರೆಗೆ ನಡೆಯಲಿದೆ.
ಸಂಪ್ರದಾಯದಂತೆ ಮೇ.14 ರಂದು ಸಾರು ಹಾಕುವುದು, ಮೇ.18ರ ಬೆಳಗ್ಗೆ ಶಾಸ್ತ್ರೋಕ್ತವಾಗಿ ಕಂಕಣಧಾರಣೆ, ರಾತ್ರಿ ಹೂವಿನ ಅಲಂಕಾರದೊಂದಿಗೆ ಸಿಂಹೋತ್ಸವ, ಮೇ.19 ರಂದು ಸರ್ಪೋತ್ಸವ, ಮೇ.20 ರಂದು ನವಿಲೋತ್ಸವ ಜರುಗಲಿವೆ. ಮೇ.22ರಂದು ಕೆಳಗಿಳಿಯುವ ಕಾರ್ಯಕ್ರಮ, ಮೇ.24ರಂದು ನಾನಾ ಜನಪದ ಕಲಾಮೇಳಗಳೊಂದಿಗೆ ನಗರದ ರಾಜ ಬೀದಿಗಳಲ್ಲಿ ಅದ್ಧೂರಿ ಮೆರವಣಿಗೆ ನಡೆಯಲಿದೆ.
ಮೇ.25ರಂದು ಸಿಡಿ ಉತ್ಸವ ಜರುಗಲಿದೆ. ಮೇ.26ರಂದು ಮಹಾ ಭಕ್ತರಿಂದ ಓಕುಳಿ ಕಾರ್ಯಕ್ರಮ, ಮೇ.28ರಂದು ಕಂಕಣ ವಿಸರ್ಜನೆಯೊಂದಿಗೆ ಜಾತ್ರೆ ಮುಕ್ತಾಯವಾಗಲಿದೆ.
ಕ್ಲಿಕ್ ಮಾಡಿ ಓದಿ: ಲೋಕಸಭಾ ಚುನಾವಣೆಗೆ ಚಿಹ್ನೆ ಹಂಚಿಕೆ | ಯಾರಿಗೆ ಯಾವುದು ಸಿಕ್ತು | ಇಲ್ಲಿದೆ ನೋಡಿ ಪೂರ್ಣ ವಿವರ
ಜಾತ್ರಾ ಮಹೋತ್ಸವದ ಅಂಗವಾಗಿ ದೇವಿಗೆ ಬೆಳ್ಳಿಯ ಹೊಸ ಮುಖಪದ್ಮ, ಕಿರೀಟ, ಬೆಳ್ಳಿ ಕತ್ತಿ, ಛತ್ರಿ, ಸೊಂಟದ ಪಟ್ಟಿ ಹಾಗೂ ತಲೆಯ ಮೇಲಿನ ಸರ್ಪವನ್ನು ಹೊಸದಾಗಿ ಮಾಡಿಸಲು ತೀರ್ಮಾನ ತೆಗೆದುಕೊಳ್ಳಲಾಯಿತು.
ಕ್ಲಿಕ್ ಮಾಡಿ ಓದಿ: ಬಿಜೆಪಿ-ಜೆಡಿಎಸ್ ಸಮನ್ವಯ ಸಭೆ | ದೇಶದ ಅಭಿವೃದ್ಧಿ ದೃಷ್ಟಿಯಿಂದ ಎರಡು ಪಕ್ಷಗಳ ಸಮಾಗಮ
ಮುಖಂಡರಾದ ಚಂದ್ರಶೇಖರ್, ಸುರೇಶ್ ಉಗ್ರಾಣ, ರಮೇಶ್, ವೀರೇಶ್, ಆರ್.ಮಂಜುನಾಥ್, ಪರಮೇಶ್, ಜಯಣ್ಣ, ರಾಘವೇಂದ್ರ, ಕುಮಾರ, ರಾಜೇಶ್, ಬಾಗೋಡಿಸ್ವಾಮಿ ಉಪಸ್ಥಿತರಿದ್ದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail
chitradurganews23@gmail.com
» Whatsapp Number