CHITRADURGA NEWS | 09 APRIL 2024
ಚಿತ್ರದುರ್ಗ: ಲೋಕಸಭಾ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಗಳಾಗಿ ಸ್ಪರ್ಧೆ ಮಾಡಿರುವ ಅಭ್ಯರ್ಥಿಗಳಿಗೆ ಚುನಾವಣಾ ಆಯೋಗ ಯುಗಾದಿ ಹಬ್ಬದ ದಿನವೇ ಚಿಹ್ನೆಗಳನ್ನು ಹಂಚಿಕೆ ಮಾಡಿದೆ.
ನಾಮಪತ್ರ ಹಿಂಪಡೆಯಲು ಏಪ್ರಿಲ್ 8 ಸೋಮವಾರ ಕಡೆಯ ದಿನವಾಗಿತ್ತು. ಒಟ್ಟು 28 ಅಭ್ಯರ್ಥಿಗಳು ಸ್ಪರ್ಧೆ ಬಯಸಿ ನಾಮಪತ್ರ ಸಲ್ಲಿಸಿದ್ದು, ಸೋಮವಾರ ನಾಲ್ವರು ಪಕ್ಷೇತರ ಅಭ್ಯರ್ಥಿಗಳು ಉಮೇದುವಾರಿಕೆ ಹಿಂಪಡೆದರು.
ಇದನ್ನೂ ಓದಿ: ಬಿಜೆಪಿ-ಜೆಡಿಎಸ್ ಸಮನ್ವಯ ಸಭೆ | ದೇಶದ ಅಭಿವೃದ್ಧಿ ದೃಷ್ಟಿಯಿಂದ ಎರಡು ಪಕ್ಷಗಳ ಸಮಾಗಮ
ಈಗ 20 ಅಭ್ಯರ್ಥಿಗಳು ಕಣದಲ್ಲಿ ಉಳಿದಿದಿದ್ದಾರೆ. ಇದರಲ್ಲಿ 12 ಮಂದಿ ಪಕ್ಷೇತರ ಅಭ್ಯರ್ಥಿಗಳಿದ್ದರೆ, ಉಳಿದ 8 ಮಂದಿ ಮಾನ್ಯತೆ ಪಡೆದ ರಾಷ್ಟ್ರೀಯ, ಪ್ರಾದೇಶಿಕ ಪಕ್ಷದ ಅಭ್ಯರ್ಥಿಗಳಿದ್ದಾರೆ.
ಯಾವ ಅಭ್ಯರ್ಥಿಗೆ ಯಾವ ಚಿಹ್ನೆ
- ಗೋವಿಂದ ಕಾರಜೋಳ (ಬಿಜೆಪಿ – ಕಮಲ)
- ಬಿ.ಎನ್.ಚಂದ್ರಪ್ಪ (ಕಾಂಗ್ರೆಸ್ – ಕೈ)
- ಅಶೋಕ ಚಕ್ರವರ್ತಿ (ಬಿಎಸ್ಪಿ – ಆನೆ)
- ಸಿ.ಎನ್.ನರಸಿಂಹರಾಜು (ಕರ್ನಾಟಕ ರಾಷ್ಟ್ರಸಮಿತಿ ಪಕ್ಷ – ಬ್ಯಾಟರಿ ಟಾರ್ಚ್)
- ಟಿ.ರಮೇಶ್ ನಾಯ್ಕ್ (ಉತ್ತಮ ಪ್ರಜಾಕೀಯ ಪಾರ್ಟಿ – ಆಟೋರಿಕ್ಷಾ)
- ಬಿ.ಟಿ.ರಾಮಸುಬ್ಬಯ್ಯ(ಇಂಡಿಯನ್ ಮೂವ್ಮೆಂಟ್ ಪಾರ್ಟಿ – ಸೀಟಿ)
- ಆರ್.ಶಬರೀಶ (ಕರುನಾಡ ಸೇವಕರ ಪಕ್ಷ – ತೆಂಗಿನ ತೋಟ)
- ಡಿ.ಸುಜಾತಾ (ಎಸ್ಯುಸಿಐ – ಪ್ರೆಷರ್ ಕುಕ್ಕರ್)
ಪಕ್ಷೇತರ ಅಭ್ಯರ್ಥಿಗಳ ಚಿಹ್ನೆಗಳು
- ಅಮೃತ ರಾಜ (ಗಣಕಯಂತ್ರ)
- ಗಣೇಶ್ (ಮೈಕ್)
- ಎಚ್.ತುಳಸಿ (ಬಳೆಗಳು)
- ಎಂ.ಪಿ.ದಾರಕೇಶ್ವರಯ್ಯ (ಸ್ಟೊತೋಸ್ಕೋಪ್)
- ಕೆ.ನರಸಿಂಹಮೂರ್ತಿ (ಕಲ್ಲಂಗಡಿ)
- ನಾಗರಾಜಪ್ಪ (ಟ್ರಕ್)
- ಭೂತರಾಜ ವಿ.ಎಸ್ (ಸಿಸಿಟಿವಿ ಕ್ಯಾಮರಾ)
- ಟಿ.ಮಂಜುನಾಥ ಸ್ವಾಮಿ (ಹಡಗು)
- ಎಸ್.ರಘುಕುಮಾರ್ (ದೂರವಾಣಿ)
- ಬಿ.ವೆಂಕಟೇಶ್ ಶಿಲ್ಪಿ (ಹಲಸಿನ ಹಣ್ಣು)
- ಎಸ್.ಎಚ್.ಶ್ರೀನಿವಾಸ (ಐಸ್ಕ್ರೀಂ)
- ಆರ್.ಸುಧಾಕರ (ಹಣ್ಣುಗಳ ಬ್ಯಾಸ್ಕಟ್)
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail
chitradurganews23@gmail.com
» Whatsapp Number