By using this site, you agree to the Privacy Policy and Terms of Use.
Accept
Chitradurga News-Kannada NewsChitradurga News-Kannada NewsChitradurga News-Kannada News
Notification
Font ResizerAa
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Reading: ಮುಂಗಾರು ಪೂರ್ವದಲ್ಲಿ ಕೃಷಿಕರಿಗೆ ಖುಷಿ ಕೊಟ್ಟ ಮಳೆರಾಯ ನಾಪತ್ತೆ 
Share
Font ResizerAa
Chitradurga News-Kannada NewsChitradurga News-Kannada News
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Search
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Follow US
© 2022 Foxiz News Network. Ruby Design Company. All Rights Reserved.

Home » ಮುಂಗಾರು ಪೂರ್ವದಲ್ಲಿ ಕೃಷಿಕರಿಗೆ ಖುಷಿ ಕೊಟ್ಟ ಮಳೆರಾಯ ನಾಪತ್ತೆ 

ಮುಖ್ಯ ಸುದ್ದಿ

ಮುಂಗಾರು ಪೂರ್ವದಲ್ಲಿ ಕೃಷಿಕರಿಗೆ ಖುಷಿ ಕೊಟ್ಟ ಮಳೆರಾಯ ನಾಪತ್ತೆ 

News Desk Chitradurga News
Last updated: 9 June 2025 19:40
News Desk Chitradurga News
4 days ago
Share
ಮೆಕ್ಕಜೋಳ ಬಿತ್ತನೆ ಕಾರ್ಯ
SHARE
https://chat.whatsapp.com/Jhg5KALiCFpDwME3sTUl7x

CHITRADURGA NEWS | 09 JUNE 2025

ಚಿತ್ರದುರ್ಗ: ಮುಂಗಾರು ಪೂರ್ವದಲ್ಲೇ ತಂಪಾಗುವಂತೆ ಸುರಿದು ರೈತರಲ್ಲಿ ಸಂತಸ ಮೂಡಿಸಿದ್ದ ಮಳೆರಾಯ ಈಗ ಮರೆಯಾಗಿದ್ದಾನೆ.

ALSO READ: ಮಕ್ಕಳಿಗೆ ಅಲೋವೆರಾ ಜ್ಯೂಸ್ ಕುಡಿಸುವುದು ಸುರಕ್ಷಿತವೇ?

ಈ ವರ್ಷ ಮುಂಗಾರು ಪೂರ್ವ ಅಂದರೆ ಮೇ ತಿಂಗಳ ಮೊದಲ ವಾರದಿಂದಲೇ ಪ್ರಾರಂಭವಾಗಿದ್ದು, ಹೊಳಲ್ಕೆರೆ ಸೇರಿದಂತೆ ಜಿಲ್ಲೆಯ ಹಲವು ತಾಲೂಕಿನಲ್ಲಿ ಬಿತ್ತನೆ ಕಾರ್ಯ ಆರಂಭವಾಗಿದೆ.

ಈಗಾಗಲೇ ಹಲವು ರೈತರು ಹತ್ತಿ,‌ಮೆಕ್ಕಜೋಳ ಬಿತ್ತನೆ ಮಾಡಿದ್ದು, ಮಳೆಗೆ ಎದುರು‌ ನೋಡುತ್ತಿದ್ದಾರೆ.

ತಾಲೂಕಿನಲ್ಲಿ ಜನವರಿಯಿಂದ ಜೂನ್ 5 ರವರೆಗೆ 143 ಮಿ,ಮೀ ಮಳೆಯಾಗಿದ್ದು, 2025-26ನೇ ಸಾಲಿನಲ್ಲಿ ಹೊಳಲ್ಕೆರೆ ತಾಲೂಕಿನಲ್ಲಿ ಮುಂಗಾರು ಹಂಗಾಮಿನ ಬಿತ್ತನೆ ಕ್ಷೇತ್ರದ 52845 ಹೆಕ್ಟರ್ ಗುರಿ ಹೊಂದಿದ್ದು, ಇದರಲ್ಲಿ ಈಗಾಗಲೇ 2478 ಹೆಕ್ಟರ್ ಬಿತ್ತನೆಯಾಗಿದೆ. ರೈತರು ಹೊಲಗಳನ್ನು ಹದ ಮಾಡಿಕೊಂಡಿದ್ದು, ಈಗ ಮಳೆಯಾದರೆ ಬಿತ್ತನೆ ಶುರುವಾಗುತ್ತದೆ. ಕೃಷಿ ಇಲಾಖೆಯಲ್ಲಿ ಅಗತ್ಯ ಬಿತ್ತನೆ ಬೀಜಗಳನ್ನು ದಾಸ್ತಾನು ಮಾಡಿಕೊಳ್ಳಲಾಗಿದೆ. ಶೇ.50 ಸಬ್ಸಿಡಿಯಲ್ಲಿ ದೊರೆಯಲಿದೆ.
–ಡಾ.ಎಸ್.ಚಂದ್ರಕುಮಾರ್, ಸಹಾಯಕ ಕೃಷಿ ನಿರ್ದೇಶಕರು, ಹೊಳಲ್ಕೆರೆ.

ಕೃತಿಕಾ, ರೋಹಿಣಿ ಮಳೆ ಉತ್ತಮವಾಗಿ ಸುರಿದಿದ್ದು, ಮುಂಗಾರು ಹಂಗಾಮಿನ ಬಿತ್ತನೆ ಚಟುವಟಿಕೆಯೂ ಬೇಗನೇ ಆರಂಭಗೊಂಡಿವೆ.

ಡಾ.ಎಸ್.ಚಂದ್ರಕುಮಾರ್, ಸಹಾಯಕ ಕೃಷಿ ನಿರ್ದೇಶಕರು, ಹೊಳಲ್ಕೆರೆ

ಮುಂಗಾರು ಮಳೆ ಉತ್ತಮ ಆರಂಭದಿಂದ ರೈತರ ಮೊಗದಲ್ಲಿ ಸಂತಸ ಮೂಡಿಸಿದ್ದ ವರುಣ, ಕೃಷಿ ಚಟುವಟಿಕೆ ಭರದಿಂದ ಸಾಗಿದ್ದು, ಜಮೀನು ಹದ ಮಾಡಿಕೊಂಡಿದ್ದ ರೈತರು ಮುಂಗಾರು ಹಂಗಾಮಿನ ಬಿತ್ತನೆ ಕಾರ್ಯ ಆರಂಭಿಸಿದ್ದಾರೆ. ಆದರೆ, ಬಿತ್ತನೆ ಮಾಡಿ ವಾರ ಕಳೆದರೂ ಮಳೆರಾಯನ ಪತ್ತೆಯೇ ಇಲ್ಲವಾಗಿದೆ.

ALSO READ: ಎಮ್ಮೆ ಹಾಲು ಕುಡಿದರೆ ತೂಕ ಹೆಚ್ಚಾಗುತ್ತದೆಯೇ?

ಹೊಳಲ್ಕೆರೆ ತಾಲೂಕಿನ ಸುತ್ತಮುತ್ತ ಮುಂಗಾರು ಆರಂಭದಲ್ಲಿ ಅರ್ಭಟಿಸಿದ ಮಳೆಯಿಂದ ರೈತರು ಸಂತಸಗೊಂಡು ಹೊಲವನ್ನು ಹದಗೊಳಿಸಿ, ಬಿತ್ತನೆ ಮಾಡಿದ್ದಾರೆ.

ಜಮೀನು ಹದ ಮಾಡಿಕೊಂಡ ರೈತರು, ಬಿತ್ತನೆ ಮಾಡಿದ ರೈತರು ಇಬ್ಬರೂ ಮಳೆಗಾಗಿ ಕಾಯುತ್ತಿದ್ದಾರೆ.‌ ಹವಾಮಾನ ಇಲಾಖೆ ಇಂದಿನಿಂದ ಮಳೆ ಆರಂಭವಾಗುವ ಸೂಚನೆ ನೀಡಿದ್ದು, ರೈತರಲ್ಲಿ ತುಸು ಭರವಸೆ ಮೂಡಿಸಿದೆ.

ಹೊಳಲ್ಕೆರೆ ತಾಲೂಕಿನ ಗುಂಡೇರಿ, ಮಳೇನಹಳ್ಳಿ, ಮಳೇನಹಳ್ಳಿ ಕಾವಲು, ಬೊಮ್ಮನಕಟ್ಟೆ, ಇಡೆಹಳ್ಳಿ, ಅವಳಿಹಟ್ಟಿ ಸೇರಿದಂತೆ ಸುತ್ತಮುತ್ತ ಗ್ರಾಮಗಳಲ್ಲಿ ಮೆಕ್ಕೆಜೋಳ, ಹತ್ತಿ ಬಿತ್ತನೆಯಾಗಿದೆ.

ಈ ಬಾರಿ ಮುಂಗಾರು ಮಳೆ ಅವಧಿಗಿಂತ ಮೊದಲೇ ಬಂದಿರುವುದರಿಂದ ಹೊಲವನ್ನು ಹದ ಮಾಡಿ, ಬಿತ್ತನೆ ಮಾಡಲಾಗಿದೆ. ಒಳ್ಳೆ ಮಳೆಯಾದರೆ, ಉತ್ತಮ ಬೆಳೆ ಸಿಗಲಿದೆ.
–ನಾಗರಾಜಪ್ಪ ರೈತ.

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು

ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್‌ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.

» Chitradurga News gmail

chitradurganews23@gmail.com

» Whatsapp Number

TAGGED:agriculture departmentChitradurgaChitradurga newsChitradurga UpdatesFarmersKannada Latest NewsKannada NewsMonsoonRainsowingಕನ್ನಡ ನ್ಯೂಸ್ಕನ್ನಡ ಲೇಟೆಸ್ಟ್ ನ್ಯೂಸ್ಕನ್ನಡ ಸುದ್ದಿಕೃಷಿ ಇಲಾಖೆಚಿತ್ರದುರ್ಗಚಿತ್ರದುರ್ಗ ನ್ಯೂಸ್ಬಿತ್ತನೆಮಳೆಮುಂಗಾರುರೈತರು
Share This Article
Facebook Email Print
Previous Article ವಿದ್ಯಾರ್ಥಿಗಳು ವಿವೇಕಾನಂದ, ಅಂಬೇಡ್ಕರ್ ವಿಚಾರಧಾರೆಗಳನ್ನು ಅಳವಡಿಸಿಕೊಳ್ಳಿ | ಉಮೇಶ್ ಜೀ
Next Article arecanut price list ತುಸು ಇಳಿಕೆ ಕಂಡ ರಾಶಿ ಅಡಿಕೆ ಧಾರಣೆ
Leave a Comment

Leave a Reply Cancel reply

Your email address will not be published. Required fields are marked *

today bhavishya
Astrology: ದಿನ ಭವಿಷ್ಯ | 13 ಜೂನ್ 2025 | ಉದ್ಯೋಗಗಳಲ್ಲಿ ಅನುಕೂಲಕರ ವಾತಾವರಣ, ಆರೋಗ್ಯದ ವಿಚಾರದಲ್ಲಿ ಎಚ್ಚರಿಕೆ ಅಗತ್ಯ
Dina Bhavishya
Shivananda patil meating
ಹೊಸದುರ್ಗದಲ್ಲಿ ಗಾರ್ಮೆಂಟ್ಸ್‌ | ಬೆಂಗಳೂರಿನಲ್ಲಿ ಸಭೆ ನಡೆಸಿದ ಸಚಿವ ಶಿವಾನಂದ ಪಾಟೀಲ್‌ | ಜವಳಿ ಪಾರ್ಕ್‌ ಸ್ಥಳ ನಿಗಧಿ
ಹೊಸದುರ್ಗ
ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ | ವಿವಿಧ ಯೋಜನೆಗಳಿಗೆ ಅರ್ಜಿ 
ಮುಖ್ಯ ಸುದ್ದಿ
ಅರ್ಜಿ ಅಹ್ವಾನ
ಹಿರಿಯೂರು ನಗರಸಭೆಯಿಂದ ಆರ್ಥಿಕ ನೆರವು | ಅರ್ಜಿ ಆಹ್ವಾನ
ಮುಖ್ಯ ಸುದ್ದಿ
© Chitradurga News. Ruby Design Company. All Rights Reserved.
Welcome Back!

Sign in to your account

Username or Email Address
Password

Lost your password?

Not a member? Sign Up