Connect with us

ಅಮ್ಮ…ಅಪ್ಪನ ಜತೆ ಮಾತನಾಡಿದ್ದೇ ತಪ್ಪಾಯಿತೇ..? | ದಿಂಬು ಬಳಸಿ ಉಸಿರು ನಿಲ್ಲಿಸಿರುವ ಶಂಕೆ

ಮುಖ್ಯ ಸುದ್ದಿ

ಅಮ್ಮ…ಅಪ್ಪನ ಜತೆ ಮಾತನಾಡಿದ್ದೇ ತಪ್ಪಾಯಿತೇ..? | ದಿಂಬು ಬಳಸಿ ಉಸಿರು ನಿಲ್ಲಿಸಿರುವ ಶಂಕೆ

CHITRADURGA NEWS | 10 JANUARY 2024

ಚಿತ್ರದುರ್ಗ (CHITRADURGA): ತೊದಲು ನುಡಿಯಲ್ಲಿ ಅಪ್ಪನ ಜತೆ ಮಾತನಾಡಿದ್ದೇ ಮಗುವಿನ ತಪ್ಪಾಯಿತೇ..? ಸ್ವಚ್ಛಂದವಾಗಿ ತಂದೆಯ ಜತೆ ಆಡಿ ಬೆಳೆಯುವ ಅದೃಷ್ಟವಿಲ್ಲದ ಮಗುವಿಗೆ ತಾಯಿಯೇ ಸಕಲವೂ ಆಗಿದ್ದಳು. ಕೊನೆಗೆ ಉಸಿರು ಕೊಟ್ಟವಳೇ ತಣ್ಣಗೆ ಉಸಿರು ನಿಲ್ಲಿಸಿದಳು.

ಇದನ್ನೂ ಓದಿ: ಹತ್ಯೆ ಮಾಡಿದ ತಾಯಿ ಪೊಲೀಸ್ ಕಸ್ಟಡಿಗೆ | ಮೃತ ಮಗು ಅಪ್ಪನ ಮಡಿಲಿಗೆ

ಪುತ್ರನನ್ನು ಕೊಲೆ ಮಾಡಿದ ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ಸ್ಟಾರ್ಟ್‌ ಅಪ್ ಮೈಂಡ್‌ಫುಲ್‌ ಎಐ ಲ್ಯಾಬ್ಸ್‌ನ ಸಹ ಸಂಸ್ಥಾಪಕಿ, ಸಿಇಒ ಸುಚನಾ ಸೇಠ್‌ (39) ಇದೀಗ ಗೋವಾ ಪೊಲೀಸರ ವಶದಲ್ಲಿದ್ದಾಳೆ. ಉತ್ತರ ಗೋವಾದ ಕ್ಯಾಂಡೋಲಿಮ್‌ನಲ್ಲಿರುವ ಸೋಲ್ ಬನಿಯನ್ ಗ್ರಾಂಡೆ ಅರ್ಪಾಟ್‌ಮೆಂಟ್‌ನಿಂದ ಸೋಮವಾರ ಬೆಳಿಗ್ಗೆ ಟ್ಯಾಕ್ಸಿಯಲ್ಲಿ ಶವದ ಸೂಟ್‌ಕೇಸ್‌ ಜತೆ ಪಯಣ ಬೆಂಗಳೂರಿಗೆ ಪಯಣ ಬೆಳಸುವಾಗ ಐಮಂಗಲ ಪೊಲೀಸರು ವಶಕ್ಕೆ ಸೋಮವಾರ ರಾತ್ರಿ ಪಡೆದಿದ್ದರು.

ಇದನ್ನೂ ಓದಿ: ಹೆತ್ತ ಕಂದನ‌ ಕೊಂದು ನಿರ್ಭಾವುಕಳಾಗಿ ಕಾರು ಹತ್ತಿದ ತಾಯಿ | ಮಗನ ಶವದೊಂದಿಗೆ 395 ಕಿ.ಮೀ ಸಾಗಿದ‌ ನಂತರ ಅರೆಸ್ಟ್

ಮಂಗಳವಾರ ರಾತ್ರಿ ಹಿರಿಯೂರು ಸಾರ್ವಜನಿಕ ಆಸ್ಪತ್ರೆಯ ಶವಾಗಾರದಲ್ಲಿ ಮಗುವಿನ ಮರಣೋತ್ತರ ಪರೀಕ್ಷೆ ಮುಗಿಸಿದ ವೈದ್ಯ ಡಾ.ಕುಮಾರ್‌ ನಾಯ್ಕ, ಬಾಲಕ ಮೃತಪಟ್ಟು 36 ಗಂಟೆಗೂ ಹೆಚ್ಚು ಸಮಯ ಕಳೆದಿದೆ ಎಂಬ ಅಂಶವನ್ನು ಬಹಿರಂಗಗೊಳಿಸಿದ್ದರು.

ಇದನ್ನೂ ಓದಿ: ಗೋವಾದಲ್ಲಿ ಮಗನನ್ನು ಕೊಂದ ತಾಯಿ ಚಿತ್ರದುರ್ಗದಲ್ಲಿ ಬಂಧನ | ಬ್ಯಾಗ್‌ನಲ್ಲಿ ಶವದೊಂದಿಗೆ ಕಾರಿನಲ್ಲಿ ಪ್ರಯಾಣ

‘ಮೃತ ಬಾಲಕನ ಮುಖ ಹಾಗೂ ಎದೆಯಲ್ಲಿ ಊತ ಕಾಣಿಸಿಕೊಂಡಿದ್ದು, ಕುತ್ತಿಗೆ ಭಾಗದಲ್ಲಿ ಉಸಿರುಕಟ್ಟಿಸಿ ಕೊಲೆ ಮಾಡಿದ ಸಾಧ್ಯತೆ ಇದೆ. ಕುತ್ತಿಗೆ ಭಾಗವನ್ನು ಬಿಗಿಹಿಡಿದು ಉಸಿರು ಕಟ್ಟಿಸಲಾಗಿದೆ. ದಿಂಬು ಬಳಸಿ ಕೃತ್ಯ ಎಸಗಿರಬಹುದು. ಕೊಲೆಯಾದ ಬಳಿಕ ಮೂಗು ಹಾಗೂ ಬಾಯಿಯಿಂದ ರಕ್ತ ಹೊರಬಂದಿದೆ. ದೇಹದ ಯಾವುದೇ ಭಾಗದಲ್ಲಿ ಗಾಯದ ಗುರುತುಗಳಿಲ್ಲ.’ ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಇದನ್ನೂ ಓದಿ: ಮಗುವನ್ನು ಕೊಂದ ತಾಯಿ ಪ್ರಕರಣ | ಬಂಧನಕ್ಕೆ ನೆರವಾದ ಐಮಂಗಲ ಪೊಲೀಸ್‌

ಮೃತ ಬಾಲಕನ ತಂದೆ ವೆಂಕಟರಮಣ್‌ ಇಂಡೊನೇಷ್ಯಾದಿಂದ ಮಂಗಳವಾರ ಸಂಜೆ ಹಿರಿಯೂರಿಗೆ ಬಂದರು. ಶವಾಗಾರಕ್ಕೆ ತೆರಳಿ ಪುತ್ರನ ಮೃತದೇಹ ಕಂಡು ಭಾವುಕರಾದರು. ಐಮಂಗಲ ಠಾಣೆ ಹಾಗೂ ಗೋವಾ ಪೊಲೀಸರ ಸಮ್ಮುಖದಲ್ಲಿ ವೈದ್ಯರು ಮರಣೋತ್ತರ ಪರೀಕ್ಷೆಯನ್ನು ಪೂರ್ಣಗೊಳಿಸಿದರು. ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಬಾಲಕನ ಮೃತದೇಹವನ್ನು ವೆಂಕಟರಮಣ್‌ಗೆ ಹಸ್ತಾಂತರಿಸಲಾಯಿತು.
ಬುಧವಾರ ಬೆಳಿಗ್ಗೆ ಬೆಂಗಳೂರಿನ ಹರಿಶ್ಚಂದ್ರ ಘಾಟ್‌ನಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗಿದೆ.

Click to comment

Leave a Reply

Your email address will not be published. Required fields are marked *

More in ಮುಖ್ಯ ಸುದ್ದಿ

To Top
Exit mobile version