ಮುಖ್ಯ ಸುದ್ದಿ
Shivakumar Swamiji: ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಶ್ರದ್ಧಾಂಜಲಿ | 5 ದಿನ ಸಮಾರಂಭ

CHITRADURGA NEWS | 09 SEPTEMBER 2024
ಚಿತ್ರದುರ್ಗ: ಸಿರಿಗೆರೆಯ ತರಳಬಾಳು ಮಠದ ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿಯ 32ನೇ ಶ್ರದ್ಧಾಂಜಲಿ ಸಮಾರಂಭ ಸೆ. 20 ರಿಂದ 24ರವರೆಗೆ ಮಠದಲ್ಲಿ ನಡೆಯಲಿದೆ. ಸಿರಿಗೆರೆಯ ಸದ್ಧರ್ಮ ನ್ಯಾಯಪೀಠದ ಸಭಾಂಗಣದಲ್ಲಿ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ನಡೆದ ಭಕ್ತರ ಸಭೆಯಲ್ಲಿ ಶ್ರದ್ಧಾಂಜಲಿ ಸಮಾರಂಭದ ದಿನಾಂಕವನ್ನು ಅಂತಿಮಗೊಳಿಸಲಾಯಿತು.
5 ದಿನ ಹಲವು ಸಾಹಿತ್ಯಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಧರಿಸಲಾಯಿತು. ಭಕ್ತರಿಗೆ ದಾಸೋಹ ಏರ್ಪಡಿಸಲು ಕಮಿಟಿಯನ್ನು ಇದೇ ವೇಳೆ ರಚಿಸಲಾಯಿತು. ಈ ಬಾರಿಯೂ ಸಹ ಚನ್ನಗಿರಿಯ ತುಮ್ಕೋಸ್ ಸಂಸ್ಥೆಯು ಶ್ರದ್ಧಾಂಜಲಿ ದಾಸೋಹಕ್ಕೆ 1 ಲಕ್ಷ ಲಾಡು ಉಂಡೆಗಳನ್ನು ನೀಡಲಿದೆ ಎಂದು ಸ್ವಾಮೀಜಿ ತಿಳಿಸಿದರು.
ಕ್ಲಿಕ್ ಮಾಡಿ ಓದಿ: ಹೊಸಪೇಟೆಯಲ್ಲಿ ಚಿತ್ರದುರ್ಗದ ಸ್ವಾಮೀಜಿ ಬಂಧನ | ಬರೋಬ್ಬರಿ ₹35 ಲಕ್ಷ ವಶ

ಶ್ರದ್ಧಾಂಜಲಿ ನಿಧಿಗೆ ಭಕ್ತರ ಕಾಣಿಕೆ ಸಂಗ್ರಹಿಸಲು ಸಮಿತಿಗಳನ್ನು ನೇಮಿಸಲಾಯಿತು. ಅಲ್ಲದೆ ಭಕ್ತಾದಿಗಳು ದಾಸೋಹಕ್ಕೆ ಅಗತ್ಯವಾದ ತರಕಾರಿ, ದಿನಸಿ ಸಾಮಗ್ರಿಗಳನ್ನು ನೀಡಬೇಕೆಂದು ಮನವಿ ಮಾಡಲಾಯಿತು.
ಆಡಳಿತಾಧಿಕಾರಿ ಎಚ್.ವಿ.ವಾಮದೇವಪ್ಪ, ಅಣ್ಣನ ಬಳಗದ ಅಧ್ಯಕ್ಷ ಬಿ.ಎಸ್.ಮರುಳಸಿದ್ದಯ್ಯ, ಕಾರ್ಯದರ್ಶಿ ವಿಜಯಾಚಾರ್, ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷ ಕೆ.ಎಂ.ಮಂಜುನಾಥ್, ಕೃಷಿ ಸಮಿತಿಯ ಎಂ. ಬಸವರಾಜಯ್ಯ, ಸಿ.ಆರ್.ನಾಗರಾಜ್, ವಿಶ್ವಬಂಧು ಬ್ಯಾಂಕಿನ ಅಧ್ಯಕ್ಷ ಜಿ.ಬಿ.ತೀರ್ಥಪ್ಪ, ಇಫ್ಕೋ ನಿರ್ದೇಶಕ ಕೋಗುಂಡೆ ಮಂಜುನಾಥ್, ಎಚ್.ಎಂ.ದ್ಯಾಮಪ್ಪ, ಸಿ.ಬಸವಕುಮಾರ್ ಭಾಗವಹಿಸಿದ್ದರು.
