Connect with us

ನಾಕೀಕೆರೆ ಗ್ರಾಮದಲ್ಲಿ ವಿಜೃಂಭಣೆಯ ಕೆಂಚಾಂಬಿಕಾ ದೇವಿಯ ಕಾರ್ತಿಕ ಮಹೋತ್ಸವ | ಮೂರು ಕ್ವಿಂಟಾಲ್ ಬೇಳೆಯ ಹೋಳಿಗೆ ತಯಾರಿ

Kenchambika devi

ಹೊಸದುರ್ಗ

ನಾಕೀಕೆರೆ ಗ್ರಾಮದಲ್ಲಿ ವಿಜೃಂಭಣೆಯ ಕೆಂಚಾಂಬಿಕಾ ದೇವಿಯ ಕಾರ್ತಿಕ ಮಹೋತ್ಸವ | ಮೂರು ಕ್ವಿಂಟಾಲ್ ಬೇಳೆಯ ಹೋಳಿಗೆ ತಯಾರಿ

CHITRADURGA NEWS | 24 DECEMBER 2024

ಹೊಸದುರ್ಗ: ತಾಲೂಕಿನ ನಾಕೀಕೆರೆ ಗ್ರಾಮದ ಶ್ರೀ ಕೋಡಿ ಆಲದ ಕೆಂಚಾಂಬಿಕಾ ದೇವಿಯ ಕಾರ್ತಿಕ ಮಹೋತ್ಸವ ವಿಜೃಂಭಣೆಯಿಂದ ಜರುಗಿತು.

ಕ್ಲಿಕ್ ಮಾಡಿ ಓದಿ: ಹಾಸ್ಟೇಲ್ ವಾರ್ಡನ್ ಅಮಾನತು | ಜಿ.ಪಂ. ಸಿಇಓ ಸೋಮಶೇಖರ್ ಆದೇಶ

ಸೋಮವಾರ ರಾತ್ರಿ ಶ್ರೀ ದೇವಿ ಪಾರಾಯಣ, ಬೆಳಗ್ಗೆ ಶ್ರೀ ಕೆಂಚಾಂಬಿಕಾ ದೇವಿಗೆ ಅಭಿಷೇಕ ನೆರವೇರಿಸಲಾಯಿತು. ಮಂಗಳವಾರ ಬೆಳಗ್ಗೆ ಮಹಾ ಮಂಗಳಾರತಿ ನಂತರ ಬೆಳಗ್ಗೆ 11 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ನಿರಂತರವಾಗಿ ಹೋಳಿಗೆ, ಅನ್ನ ದಾಸೋಹ ಕಾರ್ಯಕ್ರಮ ನೆರವೇರಿತು.

ನಾಕೀಕೆರೆ, ಹೊಳಲ್ಕೆರೆ ತಾಲೂಕಿನ ಬೂದಿಪುರ, ಹಾಲೇನಹಳ್ಳಿ, ಗೂಳಿಹೊಸಹಳ್ಳಿ, ಡಿ.ಕೆ.ಹಳ್ಳಿ ಸೇರಿದಂತೆ ಸುತ್ತಮುತ್ತಲ ಹತ್ತಾರು ಹಳ್ಳಿಗಳ ಸಹಸ್ರಾರು ಭಜ್ತಾದಿಗಳು ಕಾರ್ತಿಕ ಮಹೋತ್ಸವದಲ್ಲಿ ಭಾಗವಹಿಸಿದ್ದರು.

ಕ್ಲಿಕ್ ಮಾಡಿ ಓದಿ: ಕನಕ ವೃತ್ತದಿಂದ ಚಳ್ಳಕೆರೆ ಗೇಟ್ ವರೆಗೆ ರಸ್ತೆ ಅಗಲೀಕರಣ | ಡಿಸಿ ವೆಂಕಟೇಶ್

ಕಾರ್ಯಕ್ರಮದಲ್ಲಿ ಶಾಸಕ ಬಿ.ಜಿ.ಗೋವಿಂದಪ್ಪ, ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್, ಖನಿಜ ನಿಗಮದ ಮಾಜಿ ಅಧ್ಯಕ್ಷ ಎಸ್.ಲಿಂಗಮೂರ್ತಿ, ಮುಖಂಡರಾದ ಡಿ.ಗುರುಸ್ವಾಮಿ, ದೊಡ್ಡಘಟ್ಟ ದ್ಯಾಮಣ್ಣ, ಲಕ್ಕಿಹಳ್ಳಿ ಮುದ್ದಣ್ಣ, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಭಾಗವಹಿಸಿದ್ದರು.

ರಾತ್ರಿಯಿಡೀ ಹೋಳಿಗೆ ತಯಾರಿ:

ನಾಕೀಕೆರೆ, ಹಾಲೇನಹಳ್ಳಿ ಹಾಗೂ ಬೂದಿಪುರ ಗ್ರಾಮದ ನೂರಾರು ಮಹಿಳೆಯರು ಸೋಮವಾರ ಇಡೀ ರಾತ್ರಿ ಮೂರು ಕ್ವಿಂಟಾಲ್ ಬೇಳೆಯ ಹೋಳಿಗೆ ತಯಾರಿಸಿದರು.

ಸಾವಿರಾರು ಹೋಳಿಗೆ ಹಾಗೂ‌ ಅನ್ನ ಸಂತರ್ಪಣೆ ಇಡೀ ದಿನ ನಡೆಯಿತು.

Click to comment

Leave a Reply

Your email address will not be published. Required fields are marked *

More in ಹೊಸದುರ್ಗ

To Top
Exit mobile version