Connect with us

ಪ್ರಯಾಣಿಕರಿಲ್ಲದ ಬಸ್‌ ತಡರಾತ್ರಿ ರೈಟ್‌..ರೈಟ್‌.. | ಬಸ್‌ ಅನ್ನೇ ಎಸ್ಕೇಪ್ ಮಾಡಿದ ಗ್ಯಾಂಗ್

sre bus

ಮುಖ್ಯ ಸುದ್ದಿ

ಪ್ರಯಾಣಿಕರಿಲ್ಲದ ಬಸ್‌ ತಡರಾತ್ರಿ ರೈಟ್‌..ರೈಟ್‌.. | ಬಸ್‌ ಅನ್ನೇ ಎಸ್ಕೇಪ್ ಮಾಡಿದ ಗ್ಯಾಂಗ್

CHITRADURGA NEWS | 19 JULY 2024
ಚಿತ್ರದುರ್ಗ: ಬಸ್‌ನಲ್ಲಿ ಟಿಕೆಟ್‌ ಕೊಡದೆ ಕಳ್ಳಾಟವಾಡಿ ಪ್ರಯಾಣಿಸುವವರನ್ನು ನೋಡಿದ್ದೇವೆ. ಆದರೆ ಬಸ್‌ ಅನ್ನೇ ಕಳುವು ಮಾಡಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.

ನಗರದ ಖಾಸಗಿ ಬಸ್‌ ನಿಲ್ದಾಣದಲ್ಲಿ ಜುಲೈ 19 ಬೆಳಗಿನ ಜಾವ 2 ಗಂಟೆ ಸುಮಾರಿಗೆ ಖಾಸಗಿ ಬಸ್‌ವೊಂದನ್ನ ಕದ್ದು ಕಳ್ಳರು ಎಸ್ಕೇಪ್ ಆಗಿದ್ದಾರೆ. ನಾಯಕನಹಟ್ಟಿ ಮೂಲದ ಎಸ್‌ಆರ್‌ಇ ಬಸ್‌ ಮಾಲೀಕ ಸಯ್ಯದ್‌ ಅನ್ವರ್ ಬಾಷ ಅವರಿಗೆ ಸೇರಿದ ಎಸ್‌ಆರ್‌ ಎಕ್ಸ್‌ಪ್ರೆಸ್‌ ಬಸ್ ಕಳುವು ಮಾಡಿದ್ದಾರೆ.

ಇದನ್ನೂ ಓದಿ: Talent Award: ಎಚ್‌.ಆಂಜನೇಯ ಚಾರಿಟೆಬಲ್‌ ಟ್ರಸ್ಟ್‌ ಪ್ರತಿಭಾ ಪುರಸ್ಕಾರ | ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮನ

ಚಿತ್ರದುರ್ಗ- ಚಳ್ಳಕೆರೆ- ಜಗಳೂರು ಮಾರ್ಗದಲ್ಲಿ ಬಸ್‌ ಓಡಾಟ ನಡೆಸುತ್ತಿತ್ತು. ರಾತ್ರಿ ವೇಳೆ ಚಿತ್ರದುರ್ಗ ಖಾಸಗಿ ಬಸ್ ನಿಲ್ದಾಣದಲ್ಲಿ ಇರುತ್ತಿತ್ತು. ಇದನ್ನೇ ಹೊಂಚು ಹಾಕಿದ್ದ ಖತರ್ನಾಕ್‌ ಕಳ್ಳರು, ಬಸ್ಸನ್ನೇ ಕದ್ದು ಎಸ್ಕೇಪ್ ಆಗಿದ್ದಾರೆ. ಈ ಬಸ್‌ ಅನ್ನು ದಾವಣಗೆರೆ ಮಾರ್ಗವಾಗಿ, ಹುಬ್ಬಳ್ಳಿ ಕಡೆ ತೆಗದುಕೊಂಡು ಹೋಗಿರುವ ಶಂಕೆ ವ್ಯಕ್ತವಾಗಿದೆ.

ಇದನ್ನೂ ಓದಿ: Gold coin case: ಚಿನ್ನದ ನಾಣ್ಯ ವಂಚನೆ ಪ್ರಕರಣ | ತೋಟದ ಮನೆಯಲ್ಲಿ ಬಚ್ಚಿಟ್ಟಿದ್ದ ಹಣ ವಶ

ಸ್ಥಳಕ್ಕೆ ಚಿತ್ರದುರ್ಗ ನಗರ ಠಾಣೆ ಸಿಪಿಐ ತಿಪ್ಪೇಸ್ವಾಮಿ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಕಳ್ಳರಿಗಾಗಿ ಹುಡುಕಾಟ ಆರಂಭಿಸಿದ್ದು, ಕಳ್ಳರ ಕಳ್ಳಾಟ ಸಿಸಿಟಿವಿಯಲ್ಲಿ ಸೆರೆಯಾಗಿದೆ.

Click to comment

Leave a Reply

Your email address will not be published. Required fields are marked *

More in ಮುಖ್ಯ ಸುದ್ದಿ

To Top
Exit mobile version