CHITRADURGA NEWS | 25 JUNE 2025
ಹೊಸದುರ್ಗ: ಹೊಸದುರ್ಗ ತಾಲೂಕಿನ ಹುಣವಿನಡು ಆರೋಗ್ಯ ಇಲಾಖೆ ಕ್ವಾಟ್ರಸ್ನಲ್ಲಿ ಭೀಕರವಾಗಿ ಕೊಲೆಯಾಗಿದ್ದ ರಾಜೇಂದ್ರನ ಕೊಲೆ ಆರೋಪಿಗಳನ್ನು ಬಂಧಿಸುವಲ್ಲಿ ಹೊಸದುರ್ಗ ಪೊಲೀಸರು ಯಶಸ್ವಿಯಾಗಿದ್ದಾರೆ.
ಕೊಲೆ ನಡೆದ ಒಂದೇ ದಿನದಲ್ಲಿ ಘಟನೆಗೆ ಸಂಬಂಧಿಸಿದಂತೆ ಏಳು ಜನ ಆರೋಪಿಗಳನ್ನು ಪೊಲೀಸರು ಬಂಧಿಸಿ ವಿಚಾರಣೆ ಪ್ರಾರಂಭಿಸಿದ್ದಾರೆ.
ಇದನ್ನೂ ಓದಿ: ಗೈರು ಹಾಜರಿ | ಇಬ್ಬರು ಸರ್ಕಾರಿ ನೌಕರರ ಅಮಾನತು
ಕೊಲೆ ಆರೋಪದಲ್ಲಿ ಹೊಳಲ್ಕೆರೆ ತಾಲೂಕು ದಾಸಿಕಟ್ಟೆ ಮೂಲದ, ಬೆಂಗಳೂರಿನಲ್ಲಿ ವಾಸವಿದ್ದ 22 ವರ್ಷದ 1.ಸಾಗರ್ ಅಲಿಯಾಸ್ ಸಾಗು, ಹೊಸದುರ್ಗ ತಾಲೂಕು ಕಬ್ಬಳ ಗ್ರಾಮದ, ಬೆಂಗಳೂರಿನಲ್ಲಿ ಆಟೋ ಡ್ರೈವರ್ ಆಗಿದ್ದ 22 ವರ್ಷದ 2.ಕಿರಣ್ಕುಮಾರ್, ದಾಸಿಕಟ್ಟೆ ಮೂಲದ ಮತ್ತೋರ್ವ ಆಟೋ ಚಾಲಕ 28 ವರ್ಷದ 3.ಅಭಿಷೇಕ್, ಹುಣವಿನಡು ಗ್ರಾಮದ ಆಟೋ ಚಾಲಕರಾಗಿದ್ದ 39 ವರ್ಷದ 4.ಕೃಷ್ಣಪ್ಪ ಅಲಿಯಾಸ್ ಜಾಕಿ, ಹುಣವಿನಡು ಗ್ರಾಮದ 20 ವರ್ಷದ 5.ಕರಿಯಪ್ಪ, ಹೊಸದುರ್ಗದ ಕಲ್ಲೇಶ್ವರ ಬಡಾವಣೆಯ 20 ವರ್ಷದ 6.ಸಂಜಯ್, ಹೊಸದುರ್ಗದ ಎಂಬಿಎ ವಿದ್ಯಾರ್ಥಿ 25 ವರ್ಷದ 6.ಯಶವಂತ್ ಇವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ಕುಮಾರ್ ಬಂಡಾರು ತಿಳಿಸಿದ್ದಾರೆ.
ಇದನ್ನೂ ಓದಿ: ಹೊಸದುರ್ಗ ತಾಲೂಕಿನಲ್ಲಿ ಜೂನ್ 26 ರಂದು ವಿದ್ಯುತ್ ವ್ಯತ್ಯಯ
ಬಂಧಿತರಿಂದ ಕೃತ್ಯಕ್ಕೆ ಉಪಯೋಗಿಸಿದ ಮಾರುತಿ ಎರಿಟಿಗಾ, ಹೋಂಡಾ ಆಕ್ಟಿವಾ ಸೇರಿದಂತೆ ಇತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಸದರಿ ಪತ್ತೆ ಕಾರ್ಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಶ್ಲಾಘಿಸಿದ್ದಾರೆ.
ಇದನ್ನೂ ಓದಿ: ಹೊಸದುರ್ಗ ತಾಲೂಕಿನಲ್ಲಿ ಭೀಕರ ಕೊಲೆ | ಹಾಡಹಗಲೆ ಮನೆಗೆ ನುಗ್ಗಿ ಹತ್ಯೆ
ಕೊಲೆಯಾದ ರಾಜೇಂದ್ರನ ತಾಯಿ ಸುಜಾತಾ ಈ ಸಂಬಂಧ ದೂರು ದಾಖಲಿಸಿದ್ದು, ಜೂ.24 ರಂದು ಬೆಳಗ್ಗೆ 10.50ರ ಸಮಯದಲ್ಲಿ ಮಗ ಮನೆಯಲ್ಲಿ ಸ್ನಾನ ಮಾಡುತ್ತಿದ್ದಾಗ, ರಾಜೇಂದ್ರ ಮದುವೆಯಾಗಿದ್ದ ಕಿರಣಾಳ ಸಹೋಧರ ಸಾಗರ್ ಸೇರಿದಂತೆ ಇನ್ನಿತರರು ಮನೆಗೆ ನುಗ್ಗಿ ಕಿರಣಾ ತಂಟೆಗೆ ಬರುತ್ತೀಯಾ ಎಂದು ಅವಾಚ್ಯ ಶಬ್ದಗಳಿಂದ ನಿಂಧಿಸಿ ಮಚ್ಚುಗಳಿಂದ ಬರ್ಭರವಾಗಿ ಕೊಲೆ ಮಾಡಿದ ಬಗ್ಗೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail
chitradurganews23@gmail.com
» Whatsapp Number