Connect with us

ದುರ್ಗದ ಪ್ರೀತಿಗೆ ಶರಣಾದ ಕಿಚ್ಚ ಸುದೀಪ್ | ಕುಟುಂಬ ಸಮೇತ ಕೋಟೆನಾಡಿಗೆ ಆಗಮನ

max cinema event

ಮುಖ್ಯ ಸುದ್ದಿ

ದುರ್ಗದ ಪ್ರೀತಿಗೆ ಶರಣಾದ ಕಿಚ್ಚ ಸುದೀಪ್ | ಕುಟುಂಬ ಸಮೇತ ಕೋಟೆನಾಡಿಗೆ ಆಗಮನ

CHITRADURGA NEWS | 22DECEMBER 2024

ಚಿತ್ರದುರ್ಗ: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ ಮ್ಯಾಕ್ಸ್ ಸಿನಿಮಾ ಪ್ರೀ ರಿಲೀಸ್ ಇವೆಂಟ್ ಕೋಟೆನಾಡು ಚಿತ್ರದುರ್ಗದಲ್ಲಿ ಅದ್ದೂರಿಯಾಗಿ ಜರುಗಿತು.

ನಗರದ ಜಗದ್ಗುರು ಜಯದೇವ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಈ ಕಾರ್ಯಕ್ರಮಕ್ಕೆ ಕಿಚ್ಚ ಸುದೀಪ್ ಅವರ ದುರ್ಗದ ಸಹಸ್ರ ಸಹಸ್ರ ಅಭಿಮಾನಿಗಳು ಕಿಕ್ಕಿರಿದು ತುಂಬಿದ್ದರು.

ಇದನ್ನೂ ಓದಿ: ವಾಣಿವಿಲಾಸ ಸಾಗರದಲ್ಲಿ 29.74 ಟಿಎಂಸಿ ನೀರು ಜಮಾವಣೆ

ಕಾರ್ಯಕ್ರಮದಲ್ಲಿ ಹುಚ್ಚ ಸಿನಿಮಾದಿಂದ ಪ್ರಾರಂಭವಾದ ನಟ ಸುದೀಪ್ ಅವರ ಚಿತ್ರದುರ್ಗದೊಂದಿಗಿನ ನಂಟಿನ ವಿಶೇಷ ವೀಡಿಯೋವನ್ನು ಕಾರ್ಯಕ್ರಮದಲ್ಲಿ ಪ್ರದರ್ಶಿಸಲಾಯಿತು.

ಚಿತ್ರದುರ್ಗದಲ್ಲಿ ಸುದೀಪ್ ಅವರ ಮ್ಯಾಕ್ಸ್ ಸಿನಿಮಾ ಟ್ರೈಲರ್ ಬಿಡುಗಡೆ ಮಾಡಲಾಯಿತು.

ಇದನ್ನೂ ಓದಿ: ಭೋವಿ ಗುರುಪೀಠಕ್ಕೆ ನಟ ಡಾಲಿ‌ ಧನಂಜಯ ಭೇಟಿ | ಶ್ರೀಗಳಿಗೆ ಮದುವೆಗೆ ಆಹ್ವಾನ 

ಈ ಕಾರ್ಯಕ್ರಮದಲ್ಲಿ ನಟ ಸುದೀಪ್ ಅವರ ಪತ್ನಿ ಪ್ರಿಯಾ ಸುದೀಪ್, ಮಗಳು ಸಾನ್ವಿ, ಅಕ್ಕನ ಮಗ ಸಂಚಿತ್ ಕೂಡಾ ಭಾಗವಹಿಸಿದ್ದರು. ಇವರೊಟ್ಟಿಗೆ ನಾಯಕ ನಟರಾದ ಯುವ ರಾಜ್‍ಕುಮಾರ್, ವಿನಯ್ ರಾಜ್‍ಕುಮಾರ್, ನಿರ್ದೇಶಕರಾದ ಎ.ಪಿ.ಅರ್ಜುನ್, ರೋಹಿತ್ ಪದಕಿ, ಅನೂಪ್ ಭಂಡಾರಿ, ಶ್ರೇಯಸ್ ಮಂಜು, ನಿರೂಪ್ ಭಂಡಾರಿ ಮತ್ತಿತರರು ಭಾಗವಹಿಸಿದ್ದರು.

ನಗರದ ಐಶ್ವರ್ಯಾ ನವೀನ್ ಹೋಟೆಲ್‍ನಲ್ಲಿ ಸುದೀಪ್ ಉಳಿದಿದ್ದರು. ಹೋಟೆಲ್ ಮುಂದೆ ಸಾವಿರಾರು ಅಭಿಮಾನಿಗಳು ಜಮಾಯಿಸಿದ್ದರು.

ಕುಟುಂಬ ಸಮೇತ ದುರ್ಗಕ್ಕೆ ಬಂದ ಕಿಚ್ಚ:

ದುರ್ಗಕ್ಕೆ ಬರುತ್ತೇನೆ ಎಂದು ಮಾತು ಕೊಟ್ಟಿದ್ದೆ. ಒಬ್ಬನೇ ಬಂದಿಲ್ಲ. ಕುಟುಂಬ ಸಮೇತ ಬಂದಿದ್ದೇನೆ ಎಂದು ನಟ ಸುದೀಪ್ ಮಾತು ಆರಂಭಿಸಿದರು.

ಇದನ್ನೂ ಓದಿ: ಕುಂಚಿಟಿಗ ಮಠಕ್ಕೆ ಶಾಸಕ ಬಿ.ಜಿ.ಗೋವಿಂದಪ್ಪ ಭೇಟಿ | ಶ್ರೀ ಶಾಂತವೀರ ಸ್ವಾಮೀಜಿ ಅವರಿಂದ ಸನ್ಮಾನ

ಚಿತ್ರದುರ್ಗಕ್ಕೆ ಪ್ರತಿ ಸಲ ಬರುವಾಗಲೂ ಬಹಳ ಸಂತೋಷವಾಗುತ್ತದೆ. ಹುಚ್ಚ ಸಿನಿಮಾ ಯಾರೂ ಮರೆಯಲೂ ಸಾಧ್ಯವಿಲ್ಲ. ಅಂಥದ್ದೊಂದು ಪ್ರೀತಿಯನ್ನು ಚಿತ್ರದುರ್ಗ ಕೊಟ್ಟಿದೆ ಎಂದು ಸ್ಮರಿಸಿದರು.

Click to comment

Leave a Reply

Your email address will not be published. Required fields are marked *

More in ಮುಖ್ಯ ಸುದ್ದಿ

To Top
Exit mobile version