Connect with us

ಅಡ್ಡ ಬಂದ ನಾಯಿ ತಪ್ಪಿಸಲು ಹೋಗಿ ಬೈಕಿನಿಂದ ಬಿದ್ದು, ಸವಾರ ಮೃತ

FIR

ಕ್ರೈಂ ಸುದ್ದಿ

ಅಡ್ಡ ಬಂದ ನಾಯಿ ತಪ್ಪಿಸಲು ಹೋಗಿ ಬೈಕಿನಿಂದ ಬಿದ್ದು, ಸವಾರ ಮೃತ

ಚಿತ್ರದುರ್ಗ ನ್ಯೂಸ್.ಕಾಂ:

ಬೈಕ್ ಚಾಲನೆ ಮಾಡುವಾಗ ಅಡ್ಡ ಬರುವ ನಾಯಿ, ದನ, ಎಮ್ಮೆಗಳು ಸಾಕಷ್ಟು ಅಪಾಯಕಾರಿಯಾಗಿವೆ. ಸಾಕಷ್ಟು ಪ್ರಕರಣಗಳಲ್ಲಿ ಬೈಕ್ ಸವಾರರು ನಾಯಿ, ಎಮ್ಮೆಗಳನ್ನು ತಪ್ಪಿಸಲು ಹೋಗಿ ಗಂಭೀರ ಅಪಘಾತ ಮಾಡಿಕೊಂಡಿರುವ ಘಟನೆಗಳು ವರದಿಯಾಗಿವೆ.

ಹೊಸದುರ್ಗ ತಾಲೂಕಿನಲ್ಲಿ ಕೂಡಾ ಇಂಥದ್ದೇ ಒಂದು ಘಟನೆ ನಡೆದಿದ್ದು, ರಸ್ತೆಯಲ್ಲಿ ಅಡ್ಡ ಬಂದ ನಾಯಿ ತಪ್ಪಿಸಲು ಹೋದ ಬೈಕ್ ಸವಾರ ಬಿದ್ದು, ಗಾಯಗೊಂಡು ಮೃತಪಟ್ಟಿದ್ದಾರೆ.

ರಸ್ತೆಯಲ್ಲಿ ಅಡ್ಡ ಬಂದ ನಾಯಿ ತಪ್ಪಿಸಲು ಹೋದ ಬೈಕ್ ಅಪಘಾತಕ್ಕೀಡಾಗಿ ಮೃತಪಟ್ಟಿರುವ ಘಟನೆ ಹೊಸದುರ್ಗ ತಾಲೂಕಿನ ಬೆಲಗೂರಿನಲ್ಲಿ ನಡೆದಿದೆ.

ಇದನ್ನೂ ಓದಿ: ಎಮ್ಮೆಕರು ಮೇಲೆ ಚಿರತೆ ದಾಳಿ | ಆತಂಕದಲ್ಲಿ ಗ್ರಾಮಸ್ಥರು

ಬೆಲಗೂರು ಗ್ರಾಮದ ನಿವಾಸಿ 37 ವರ್ಷದ ಬಿ.ಆರ್.ಮಲ್ಲಿಕಾರ್ಜುನ್ ಭಾನುವಾರ ಬೆಳಗ್ಗೆ ತನ್ನ ಬೈಕಿನಲ್ಲಿ ಪಂಚನಹಳ್ಳಿ ಹೊಸದುರ್ಗ ಟಾರ್ ರಸ್ತೆಯಲ್ಲಿ ಬರುತ್ತಿದ್ದಾಗ ನಾಯಿ ಅಡ್ಡ ಬಂದಿದೆ.

ಈ ವೇಳೆ ನಾಯಿ ತಪ್ಪಿಸಲು ಯತ್ನಿಸಿ, ನಿಯಂತ್ರಣ ಕಳೆದುಕೊಂಡ ಬೈಕ್ ಸವಾರ ಮಲ್ಲಿಕಾರ್ಜುನ್ ರಸ್ತೆಯ ಮೇಲೆ ಬಿದ್ದು ತಲೆ ಮತ್ತಿತರೆಡೆಗೆ ಗಂಭಿರ ಗಾಯಗಳಾಗಿವೆ. ಬೈಕ್ ಕೂಡಾ ಜಖಂ ಆಗಿದೆ.

ತಕ್ಷಣ ಬೆಲಗೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಅಲ್ಲಿಂದ ಕಡೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಇಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ನಾರಾಯಣ ಹೃದಯಾಲಯಕ್ಕೆ ಕರೆದೊಯ್ಯಲಾಗಿದೆ. ಇಲ್ಲಿ ಪರೀಕ್ಷಿಸಿದ ವೈದ್ಯರು ಮಲ್ಲಿಕಾರ್ಜುನ್ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಶ್ರೀರಾಂಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Click to comment

Leave a Reply

Your email address will not be published. Required fields are marked *

More in ಕ್ರೈಂ ಸುದ್ದಿ

To Top
Exit mobile version