Connect with us

ಮಕ್ಕಳ ಕಳ್ಳತನ ಪ್ರಕರಣದ್ದು ಬೇರೆ ಕಥೆ | ಪೊಲೀಸರ ಬಳಿ ಮಕ್ಕಳು ಹೇಳಿದ್ದೇ ಬೇರೆ

Abbinahole police station

ಕ್ರೈಂ ಸುದ್ದಿ

ಮಕ್ಕಳ ಕಳ್ಳತನ ಪ್ರಕರಣದ್ದು ಬೇರೆ ಕಥೆ | ಪೊಲೀಸರ ಬಳಿ ಮಕ್ಕಳು ಹೇಳಿದ್ದೇ ಬೇರೆ

CHITRADURGA NEWS | 03 JANUARY 2024

ಚಿತ್ರದುರ್ಗ: ಭಾರೀ ಆತಂಕ ಸೃಷ್ಟಿಸಿದ್ದ ಇಬ್ಬರು ಮಕ್ಕಳ ಪ್ರಕರಣ ಬೇರೆ ಟ್ವಿಸ್ಟ್ ಪಡೆದುಕೊಂಡಿದೆ.

ಹಿರಿಯೂರು ತಾಲೂಕಿನ ಧರ್ಮಪುರ ಬಳಿ ಹೊಸಹಳ್ಳಿಯ ಇಬ್ಬರು ಬಾಲಕರನ್ನು ಅಪರಿಚಿತ ನಾಲ್ವರು ಓಮಿನಿ ಕಾರಿನಲ್ಲಿ ಕಿಡ್ನ್ಯಾಪ್ ಮಾಡಿ ಪಿ.ಡಿ.ಕೋಟೆ ಬಳಿ ನಡು ರಸ್ತೆಯಲ್ಲಿ ಬಿಟ್ಟು ಹೋಗಿದ್ದಾರೆ ಎಂದು ಅಬ್ಬಿನಹೊಳೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು.

ಇದನ್ನೂ ಓದಿ: ಮಕ್ಕಳ ಕಳ್ಳತನಕ್ಕೆ ಯತ್ನ | ಓಮಿನಿಯಲ್ಲಿ ಬಂದ ನಾಲ್ವರಿಂದ ಕೃತ್ಯ | ನಡು ದಾರಿಯಲ್ಲೇ ಮಕ್ಕಳನ್ನು ಬಿಟ್ಟು ಎಸ್ಕೇಪ್

ಈ ಸಂಬಂಧ ಎಲ್ಲೆಲ್ಲೂ ಆತಂಕ ಮನೆ ಮಾಡಿತ್ತು. ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ ಕಳ್ಳರ ಪತ್ತೆಗೆ ಕಾರ್ಯಾಚರಣೆಗೆ ಇಳಿದಿದ್ದರು.

ಆದರೆ, ಮಕ್ಕಳ ಕಳ್ಳತನಕ್ಕೆ ಸಂಬಂಧಿಸಿದಂತೆ ಯಾವುದೇ ಸುಳಿವು ಸಿಗದಿದ್ದಾಗ, ಮತ್ತೊಮ್ಮೆ ಇಬ್ಬರು ಮಕ್ಕಳನ್ನು ಠಾಣೆಗೆ ಕರೆಯಿಸಿಕೊಂಡು ಪ್ರತ್ಯೇಕವಾಗಿ ಮಾತನಾಡಿದಾಗ ಕಿಡ್ನ್ಯಾಪ್ ಎನ್ನುವುದು ಒಂದು ಕಟ್ಟುಕಥೆ ಎಂದು ಗೊತ್ತಾಗಿದೆ.

ಇದನ್ನೂ ಓದಿ:  ಪ್ಯಾಸೆಂಜರ್ ಆಟೋ ಪಲ್ಟಿ | 9 ಮಂದಿಗೆ ಗಾಯ

ಓದಿನಲ್ಲಿ ಕೊಂಚ ಹಿಂದುಳಿದಿದ್ದ ಇಬ್ಬರು ಮಕ್ಕಳು, ಶಿಕ್ಷಕರು ಕೊಟ್ಟಿದ್ದ ಪ್ರಾಜೆಕ್ಟ್ ವರ್ಕ್ ಅನ್ನು ಮಂಗಳವಾರ ಮುಗಿಸಿ ಒಪ್ಪಿಸಬೇಕಾಗಿತ್ತು. ಜೊತೆಗೆ ಟ್ಯೂಷನ್‍ನಲ್ಲಿ ಕಿರು ಪರೀಕ್ಷೆ ಇತ್ತು.

ಈ ಎರಡರಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದ ಇಬ್ಬರೂ ಸೇರಿ ಅಪಹರಣದ ಕಥೆ ಎಣೆದಿದ್ದಾರೆ. ಇದನ್ನು ನಂಬಿದ ಪೋಷಕರು ಆತಂಕದಿಂದ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಇದನ್ನೂ ಓದಿ: ಆಡುಮಲ್ಲೇಶ್ವರ ಮೃಗಾಲಯದಲ್ಲಿ ಹೊಸ ದಾಖಲೆ | ಹೊಸ ವರ್ಷದ ದಿನ ಎಷ್ಟು ಕಲೆಕ್ಷನ್ ನೋಡಿ..

ಆದರೆ, ಮಕ್ಕಳನ್ನು ಪ್ರತ್ಯೇಕವಾಗಿ ವಿಚಾರಿಸಿದಾಗ, ಪೊಲೀಸರ ಬಳಿ ತಪ್ಪನ್ನು ಒಪ್ಪಿಕೊಂಡಿದ್ದಾರೆ.

Click to comment

Leave a Reply

Your email address will not be published. Required fields are marked *

More in ಕ್ರೈಂ ಸುದ್ದಿ

To Top
Exit mobile version