By using this site, you agree to the Privacy Policy and Terms of Use.
Accept
Chitradurga News-Kannada NewsChitradurga News-Kannada NewsChitradurga News-Kannada News
Notification
Font ResizerAa
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Reading: ಮಸ್ಕತ್‍ನಲ್ಲಿ ಬಸವಮೂರ್ತಿ ಸ್ಥಾಪನೆಗೆ ಸಿರಿಗೆರೆ ಶ್ರೀಗಳ ಸಲಹೆ | ಮಠದಿಂದ ಬಸವಮೂರ್ತಿ ನೀಡುವ ಭರವಸೆ 
Share
Font ResizerAa
Chitradurga News-Kannada NewsChitradurga News-Kannada News
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Search
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Follow US
© 2022 Foxiz News Network. Ruby Design Company. All Rights Reserved.

Home » ಮಸ್ಕತ್‍ನಲ್ಲಿ ಬಸವಮೂರ್ತಿ ಸ್ಥಾಪನೆಗೆ ಸಿರಿಗೆರೆ ಶ್ರೀಗಳ ಸಲಹೆ | ಮಠದಿಂದ ಬಸವಮೂರ್ತಿ ನೀಡುವ ಭರವಸೆ 

ಮುಖ್ಯ ಸುದ್ದಿ

ಮಸ್ಕತ್‍ನಲ್ಲಿ ಬಸವಮೂರ್ತಿ ಸ್ಥಾಪನೆಗೆ ಸಿರಿಗೆರೆ ಶ್ರೀಗಳ ಸಲಹೆ | ಮಠದಿಂದ ಬಸವಮೂರ್ತಿ ನೀಡುವ ಭರವಸೆ 

chitradurganews.com
Last updated: 18 May 2024 11:10
chitradurganews.com
1 year ago
Share
ಒಮಾನ್ ದೇಶದ ಮಸ್ಕತ್‍ನಲ್ಲಿ ಬಸವ ಜಯಂತಿ
ಒಮಾನ್ ದೇಶದ ಮಸ್ಕತ್‍ನಲ್ಲಿ ಬಸವ ಜಯಂತಿ
SHARE
https://chat.whatsapp.com/Jhg5KALiCFpDwME3sTUl7x

CHITRADURGA NEWS | 18 MAY 2024

ಚಿತ್ರದುರ್ಗ: ಒಮಾನ್ ದೇಶದ ಮಸ್ಕತ್‍ನಲ್ಲಿ ಶುಕ್ರವಾರ ಅಲ್ಲಿನ ಬಸವ ಬಳಗ ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಸಿರಿಗೆರೆ ತರಳಬಾಳು ಬೃಹನ್ಮಠದ ಡಾ.ಶ್ರೀ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಈ ವೇಳೆ ಮಾತನಾಡಿದ ಸಿರಿಗೆರೆ ಶ್ರೀಗಳು, ಬಹಿರಂಗ ಶುದ್ಧಿಯಷ್ಟೇ ಅಂತರಂಗ ಶುದ್ಧಿಗೂ ಒತ್ತು ನೀಡಿ, ಕಾಯಕವೇ ಕೈಲಾಸ ಎಂಬ ಮಹೋನ್ನತ ಆದೇಶ ನೀಡಿ, 12ನೇ ಶತಮಾನದಲ್ಲೇ ಸಾಮಾಜಿಕ ಕ್ರಾಂತಿ ಮಾಡಿದವರು ವಿಶ್ವಗುರು ಬಸವೇಶ್ವರರು ಎಂದು ಬಣ್ಣಿಸಿದರು.

ಇದನ್ನೂ ಓದಿ: ಚಿತ್ರದುರ್ಗದಲ್ಲಿ ಧಾರಾಕಾರ ಮಳೆ | ಅರ್ಧ ಗಂಟೆಗೂ ಹೆಚ್ಚು ಹೊತ್ತು ಸುರಿದ ಮಳೆ

900 ವರ್ಷಗಳ ಹಿಂದೆ ಬಸವಾದಿ ಶರಣರು ವಚನಗಳ ಮೂಲಕ ಬಿತ್ತಿದ ಆದರ್ಶ ಸಮಾಜ ಪರಿಕಲ್ಪನೆ ಇಂದಿಗೂ ಪ್ರಸ್ತುತ. ಜಗತ್ತು ಇಂದು ಎದುರಿಸುತ್ತಿರುವ ಹೆಚ್ಚಿನ ಸಮಸ್ಯೆಗಳಿಗೆ ಶರಣರ ವಚನಗಳಲ್ಲಿ ಪರಿಹಾರವಿದೆ ಎಂದು ಅಭಿಪ್ರಾಯಪಟ್ಟರು

Women Empowerement ಬಗ್ಗೆ ಮಾತನಾಡುವಾಗ ಸಭಾಂಗಣಕ್ಕೆ ತಮ್ಮನ್ನು ಬಸವ ಬಳಗದ ಮಹಿಳೆಯರನೇಕರು ಕೈಯಲ್ಲಿ ಆರತಿ ಹಿಡಿದು ಭಕ್ತಿಯಿಂದ ಬರಮಾಡಿಕೊಂಡದ್ದನ್ನು ಪ್ರಸ್ತಾಪಿಸಿದ ಶ್ರೀ ಜಗದ್ಗುರುಗಳವರು “ನಮ್ಮ ಮಹಿಳೆಯರು ಮಂಗಳ ಕಾರ್ಯಗಳ ಸಂದರ್ಭದಲ್ಲಿ ಕೈಯಲ್ಲಿ ಆರತಿ ಹಿಡಿಯುವುವಂತೆ, ವಿಷಮ ಸನ್ನಿವೇಶಗಳಲ್ಲಿ ವೀರ ವನಿತೆ ಓಬವ್ವನಂತೆ ಕೈಯಲ್ಲಿ ಒನಕೆಯನ್ನೂ ಹಿಡಿಯಬಲ್ಲರು, ವೀರರಾಣಿ ಕಿತ್ತೂರು ಚೆನ್ನಮ್ಮನಂತೆ ಕೈಯಲ್ಲಿ ಖಡ್ಗವನ್ನೂ ಹಿಡಿಯಬಲ್ಲರು ಎಂದು ಹೇಳುತ್ತಿದ್ದಂತೆ ಇಡೀ ಸಭಾಂಗಣದಲ್ಲಿ ಚಪ್ಪಾಳೆ ಸದ್ದು ಮೊಳಗಿತು.

ಇದನ್ನೂ ಓದಿ: ಭರವಸೆ ಮೂಡಿಸಿದ ಮಳೆರಾಯ | ಚಿಕ್ಕಜಾಜೂರು ಭಾಗದಲ್ಲಿ ಹದ ಮಳೆ

ಇಂಗ್ಲೆಂಡ್ ದೇಶದ ಲ್ಯಾಂಬೆತ್ ಬಳಿ ಬಸವ ಪುತ್ಥಳಿ ಸ್ಥಾಪಿತವಾಗಿರುವಂತೆ ಮಸ್ಕತ್ ನಗರದಲ್ಲಿ ಬಸವ ಶಿಲಾಮೂರ್ತಿಯನ್ನು ಸ್ಥಾಪಿಸುವಂತೆ ಬಸವ ಬಳಗಕ್ಕೆ ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಲಹೆ ನೀಡಿದರು. ಬಸವ ಶಿಲಾಮೂರ್ತಿಯನ್ನು ಸಿರಿಗೆರೆ ಮಠದ ವತಿಯಿಂದ ನೀಡುವುದಾಗಿ ಘೋಷಿಸಿದ ಪೂಜ್ಯರು ಪ್ರತಿಮೆ ಸ್ಥಾಪನೆಗೆ ನಿಯಮಾನುಸಾರ ಮುಂದುವರೆಯುವಂತೆ ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಶ್ರೀ ಜಗದ್ಗುರುಗಳವರು ಬಸವಾದಿ ಶರಣರ 22 ಸಾವಿರಕ್ಕೂ ಹೆಚ್ಚು ವಚನಗಳ ಮೊಬೈಲ್ ಆಪ್ ಪ್ರಾತ್ಯಕ್ಷಿಕೆ ನೀಡಿದರು.

ಇದನ್ನೂ ಓದಿ: ವಿಧಾನ ಪರಿಷತ್ತಿನಲ್ಲಿ ಬಹುಮತ ಬೇಕು | ಡಿ.ಟಿ.ಶ್ರೀನಿವಾಸ್ ಗೆಲ್ಲಿಸಲು ಪಣ ತೊಡಿ | ಮಯೂರ್ ಜಯಕುಮಾರ್

ಕಾರ್ಯಕ್ರಮವು ಮಸ್ಕತ್ ನಲ್ಲಿರುವ ಕೃಷ್ಣ ದೇವಾಲಯದ ಸಭಾಂಗಣದಲ್ಲಿ ಆಯೋಜನೆಯಾಗಿತ್ತ. ಬಸವ ಬಳಗದ ಪದಾಧಿಕಾರಿಗಳು, ಬಸವಾಭಿಮಾನಿಗಳು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

ಒಮಾನ್ ದೇಶದ ಮಸ್ಕತ್‍ನಲ್ಲಿ ಬಸವ ಜಯಂತಿ
ಒಮಾನ್ ದೇಶದ ಮಸ್ಕತ್‍ನಲ್ಲಿ ಬಸವ ಜಯಂತಿ

ವಚನಗಳ ಆಪ್ ಇನ್‍ಸ್ಟಾಲ್ ಮಾಡಿಕೊಂಡ ಮಸ್ಕತ್ ರಾಯಭಾರಿ:

ಮಸ್ಕತ್ ನಗರದಲ್ಲಿ ಆಯೋಜಿಸಿದ್ದ ಬಸವಜಯಂತಿ ಕಾರ್ಯಕ್ರಮವನ್ನು ಒಮಾನಾ ದೇಶದ ಭಾರತದ ರಾಯಭಾರಿ ಅಮಿತ್ ನಾರಂಗ್ ಉದ್ಘಾಟಿಸಿದರು.

ಇದನ್ನೂ ಓದಿ: ಚಿತ್ರದುರ್ಗ ಸೇರಿ ಹಲವು ಜಿಲ್ಲೆಗಳಿಗೆ ಭಾರೀ ಮಳೆ ಮುನ್ಸೂಚನೆ | ಮೇ.18 ರಿಂದ 22 ರವರೆಗೆ ಧಾರಾಕಾರ ಮಳೆ

ಈ ವೇಳೆ ಮಾತನಾಡಿದ ಅವರು, ಬಸವಣ್ಣನ ತತ್ವಾದರ್ಶ ಹಾಗೂ ಮಾನವೀಯ ಮೌಲ್ಯಗಳು ಜೀವನಕ್ಕೆ ಸದಾ ಮಾರ್ಗದರ್ಶಿ ಎಂದು ಅಭಿಪ್ರಾಯಪಟ್ಟರು.

ಇದೇ ವೇಳೆ ಸಿರಿಗೆರೆ ತರಳಬಾಳು ಬೃಹನ್ಮಠದಿಂದ ರೂಪಿಸಿರುವ ಬಸವಾದಿ ಶರಣರ ವಚನಗಳ ಮೊಬೈಲ್ ಆಪ್ ವೀಕ್ಷಣೆ ಮಾಡಿದರು.

ಇದನ್ನೂ ಓದಿ: ಕರ್ನಾಟಕ ಆಗ್ನೇಯ ಶಿಕ್ಷಕರ ಕ್ಷೇತ್ರ ಚುನಾವಣೆ | ಇಲ್ಲಿದೆ ನೋಡಿ ಮತದಾನ ಕೇಂದ್ರಗಳ ಪಟ್ಟಿ

ಶ್ರೀಗಳು ಆಸ್ಥೆವಹಿಸಿ ಮೊಬೈಲ್ ಆಪ್ ರೂಪಿಸಿರುವುದನ್ನು ಪ್ರಶಂಸಿದಿ ನಾರಂಗ್, ತಮ್ಮ ಮೊಬೈಲ್‍ಗೆ ಆಪ್ ಇನ್‍ಸ್ಟಾಲ್ ಮಾಡಿಕೊಂಡರು.

ಕನ್ನಡ ವಚನಗಳಿಗೆ ಹಿಂದಿ, ಇಂಗ್ಲೀಷ್ ಸೇರಿದಂತೆ ವಿವಿಧ ಭಾಷೆಗಳಿಗೆ ಅನುವಾದ ಇರುವುದನ್ನು ನೋಡಿ ಸಂತಸ ವ್ಯಕ್ತಪಡಿಸಿದರು.

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು

ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್‌ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.

» Chitradurga News gmail

chitradurganews23@gmail.com

» Whatsapp Number

TAGGED:Basava JayantiChitradurgaDr. Shivamurthy Shivacharya SwamijiKannada Latest NewsMobile AppMuscatOmanaSirigereTaralbaluVachanasಒಮಾನಾಕನ್ನಡ ಲೇಟೆಸ್ಟ್ ನ್ಯೂಸ್ಚಿತ್ರದುರ್ಗಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿತರಳಬಾಳುಬಸವ ಜಯಂತಿಮಸ್ಕತ್ಮೊಬೈಲ್ ಆಪ್ವಚನಗಳುಸಿರಿಗೆರೆ
Share This Article
Facebook Email Print
Previous Article arecanut price list ಅಡಿಕೆ ಧಾರಣೆ | ರಾಜ್ಯದ ಯಾವ ಮಾರುಕಟ್ಟೆಯಲ್ಲಿ ಎಷ್ಟು ಬೆಲೆ
Next Article ಜಿಲ್ಲಾ ಆಸ್ಪತ್ರೆಯ ರಕ್ತನಿಧಿ ಕೇಂದ್ರದ ಪರವಾನಗಿ ನವೀಕರಣ | ಜನರ ಸೇವೆಗೆ ಮುಕ್ತ
Leave a Comment

Leave a Reply Cancel reply

Your email address will not be published. Required fields are marked *

ಮುರುಘಾಮಠದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾದ ಮೊದಲನೇ ಕಾರ್ಯಕಾರಿ ಸಭೆ | ಮಠಾಧೀಶರು ಸೇರಿದಂತೆ ಗಣ್ಯರು ಭಾಗೀ
ಮುಖ್ಯ ಸುದ್ದಿ
ಉಸಿರಾಟದ ಕಾಯಿಲೆಗಳಿಗೆ ಈ ಎಲೆಯನ್ನು ಬಳಸಿ
Life Style
ಹೃದಯಾಘಾತದ ನಂತರ ಈ ತಪ್ಪುಗಳನ್ನು ಮಾಡಬೇಡಿ
Life Style
ಸ್ವಸ್ತಿಕ್ ಚಿಹ್ನೆ ಬಿಡಿಸುವಾಗ ನೀವು ಈ ತಪ್ಪನ್ನು ಮಾಡಬೇಡಿ
Life Style
© Chitradurga News. Ruby Design Company. All Rights Reserved.

Chitradurga News App

Install
Welcome Back!

Sign in to your account

Username or Email Address
Password

Lost your password?

Not a member? Sign Up