ನಾಳೆ ಚಿತ್ರದುರ್ಗದಲ್ಲಿ RSS ಪಥಸಂಚಲನ

ಆರೆಸ್ಸೆಸ್ಸ್ ಪಥಸಂಚಲನ

CHITRADURGA NEWS | 19 OCTOBER 2024

ಚಿತ್ರದುರ್ಗ: ವಿಜಯದಶಮಿ ಹಿನ್ನೆಲೆಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಚಿತ್ರದುರ್ಗ ನಗರ ಘಟಕದಿಂದ ಅ.20 ಭಾನುವಾರ ಸಂಜೆ ನಗರದಲ್ಲಿ ಪಥ ಸಂಚಲನ ಕಾರ್ಯಕ್ರಮ ಆಯೋಜಿಸಲಾಗಿದೆ.

ಸಂಜೆ 4.15ಕ್ಕೆ ನಗರದ ಬಿ.ಡಿ.ರಸ್ತೆ ಜೈನಧಾಮದಿಂದ ಪ್ರಾರಂಭವಾಗುವ ಪಥಸಂಚಲನ ಸಿ.ಕೆ.ಪುರ ಮಾರ್ಗವಾಗಿ ಬಂದು ಚನ್ನಕೇಶವ ದೇವಸ್ಥಾನದಿಂದ ಆಕಾಶವಾಣಿ ಮುಂಭಾಗದಲ್ಲಿ ಸಂಚರಿಸಿ,KSRTC ಡಿಪೋ ರಸ್ತೆಯ ಮೂಲಕ ಮತ್ತೆ ಮುಖ್ಯರಸ್ತೆ ತಲುಪಿ ಜೈನಧಾಮದಲ್ಲಿ ಸಮಾರೋಪವಾಗಲಿದೆ.

ಇದನ್ನೂ ಓದಿ: ಕೆಂಗುಂಟೆ ಕೆರೆ ಭರ್ತಿ | ಬಾಗೀನ ಅರ್ಪಣೆ

ಜೈನಧಾಮದಲ್ಲಿ ನಡೆಯುವ ವೇದಿಕೆ ಕಾರ್ಯಕ್ರಮದಲ್ಲಿ ಆರೆಸ್ಸೆಸ್ಸ್ ಕರ್ನಾಟಕ ದಕ್ಷಿಣ ಪ್ರಾಂತದ ಸಹ ಸಂಪರ್ಕ ಪ್ರಮುಖ್ ಯಾದವ ಕೃಷ್ಣ ಸ್ವಯಂಸೇವಕರನ್ನು ಉದ್ದೇಶಿಸಿ ದಿಕ್ಸೂಚಿ ಭಾಷಣ ಮಾಡಲಿದ್ದಾರೆ.

ರಾಷ್ಟ್ರೀಯ ಸ್ವಯಂಸೇವಕ ಸಂಘ ಪ್ರಾರಂಭವಾಗಿ ನೂರನೇ ವರ್ಷಕ್ಕೆ ಪದಾರ್ಪಣೆ ಮಾಡುತ್ತಿರುವ ಹಿನ್ನೆಲೆಯಲ್ಲಿ ವಿಜಯದಶಮಿ ನಡಿಗೆ ವಿಜಯದ ಕಡೆಗೆ ಎನ್ನುವ ಘೋಷ ವಾಖ್ಯದೊಂದಿಗೆ ಪಥಸಂಚಲನ ಹಮ್ಮಿಕೊಳ್ಳಲಾಗಿದೆ.

ಇದನ್ನೂ ಓದಿ: ತಡರಾತ್ರಿ ಭಾರೀ ಮಳೆ | ತುಂಬಿ ಹರಿದ ಕೆರೆ, ಕಟ್ಟೆ | ತಳುಕು ಶಾಲೆ ಜಲಾವೃತ

ಸುಮಾರು 500 ಜನ ಆರೆಸ್ಸೆಸ್ಸ್ ಗಣವೇಶ (ಸಮವಸ್ತ್ರ) ಧರಿಸಿದ ಸ್ವಯಂಸೇವಕರು ಈ ಪಥ ಸಂಚಲನದಲ್ಲಿ ಭಾಗವಹಿಸಲಿದ್ದಾರೆ.

ಪಥಸಂಚಲನ ಆಗಮಿಸುವ ಮಾರ್ಗದಲ್ಲಿ ನೀರು ಹಾಕಿ, ರಂಗವಲ್ಲಿ ಹಾಕಿ, ಭಾರತಮಾತೆಯ ಭಾವಚಿತ್ರ ಹಾಗೂ ಭಗವಾಧ್ವಜವನ್ನು ಪುಷ್ಪಾರ್ಚನೆಯೊಂದಿಗೆ ಸ್ವಾಗತಿಸಲು ಸಂಘದ ಪ್ರಮುಖರು ಸ್ಥಳೀಯರಲ್ಲಿ ಮನವಿ ಮಾಡಿದ್ದಾರೆ.

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು

ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್‌ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.

» Chitradurga News gmail

chitradurganews23@gmail.com

» Whatsapp Number

Share This Article
Leave a Comment

Leave a Reply

Your email address will not be published. Required fields are marked *

Exit mobile version