CHITRADURGA NEWS | 08 AUGUST 2024
ಹೊಳಲ್ಕೆರೆ: ಶ್ರಾವಣ ಮಾಸ ಅಂದರೆ ಅದು ಚಿನ್ನದಂತಹ ಸಮಯ, ಕಾರಣ ಆ ತಿಂಗಳಲ್ಲಿ ಜನರಲ್ಲಿ ಚಿಂತನೆಗಳ ಮೂಲಕ ಅರಿವು ಜ್ಞಾನ ಆ ಮೂಲಕ ಅನುಭಾವ ಬಿತ್ತಿ ಜನರಲ್ಲಿ ಜಾಗೃತಿ ಮೂಡಿಸುವಂತಹ ಸಂದರ್ಭವಿದು, ಅಂತಹ ಸನ್ನಿವೇಶವನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ರಾವಂದೂರು ಮುರುಘಾಮಠದ ಶ್ರೀ ಮೋಕ್ಷಪತಿ ಸ್ವಾಮೀಜಿಯವರು ಹೇಳಿದರು.
ಕ್ಲಿಕ್ ಮಾಡಿ ಓದಿ: Mysore; ರಘುಚಂದನ್ ನೇತೃತ್ವ | ಮೈಸೂರು ಪಾದಯಾತ್ರೆಗೆ ತೆರಳಿದ ನೂರಾರು ಬಿಜೆಪಿ ಕಾರ್ಯಕರ್ತರು
ಚಿತ್ರದುರ್ಗದ ಮುರುಘಾ ಮಠದ ವತಿಯಿಂದ ಹೊಳಲ್ಕೆರೆ ತಾಲೂಕಿನ ಈಚಘಟ್ಟ ಗ್ರಾಮದಲ್ಲಿ ಆಯೋಜಿಸಿದ್ದ ಅನುಭಾವ ಶ್ರಾವಣ ಸರಣಿ ಚಿಂತನ ಕಾರ್ಯಕ್ರವನ್ನು ಉದ್ಘಾಟಿಸಿ ಮಾತನಾಡಿದ ಶ್ರೀಗಳು,
ನಮ್ಮ ಪೂರ್ವಿಕರು ಪ್ರತಿಯೊಂದು ಮಾಸದಲ್ಲಿ ಏನೇನು ಮಾಡಬೇಕೆಂಬುದನ್ನು, ಅವರು ವೈಜ್ಞಾನಿಕ ಹಿನ್ನೆಲೆಯಲ್ಲಿ ನಿರೂಪಿಸಿ ಕೊಟ್ಟಿದ್ದಾರೆ. ಅವುಗಳನ್ನು ಅನುಸರಣೆ ಮಾಡುವ ಮೂಲಕ ನಮ್ಮ ಬದುಕನ್ನು ಹಸನು ಮಾಡಿಕೊಳ್ಳುವ ಹಿನ್ನೆಲೆಯಲ್ಲಿ ಮುಂದಾಗಬೇಕಿದೆ, ಹೇಗೆ ನಾವು ಸೇವಿಸುವ ಆಹಾರದಲ್ಲಿ ಸವಿಯನ್ನು ಬಯಸುತ್ತೇತೇವೆಯೋ ಹಾಗೆ ನಾವು ಅರಿವು ಜ್ಞಾನ ಪಡೆಯಲು ಅನುಭಾವದ ಸವಿಯ ಸಾರವನ್ನು ಪಡೆದರೆ ಜೀವನ ಸಾರವಾಗುತ್ತದೆ ಎಂದು ನೀಡಿದರು.
ಹಳ್ಳಿಗಳು ನಮ್ಮ ದೇಶದ ಜೀವನಾಡಿಗಳು. ಇಲ್ಲಿ ಸುಸಂಸ್ಕೃತಿಯ ಅನಾವರಣವಾಗಿದೆ ಎಂಬುದಕ್ಕೆ ಇಲ್ಲಿನ ಗ್ರಾಮಸ್ಥರು ತೋರಿದ, ನಡೆದುಕೊಂಡ ಪರಿ ನನ್ನನ್ನು ಮುಖ ವಿಸ್ಮಿತನನ್ನಾಗಿಸಿದೆ, ಎಲ್ಲೋ ಒಂದು ಕಡೆ ನವನಾಗರೀಕತೆಯ ಕಡೆಗೆ ಒಳಗಾಗಿ ನಮ್ಮ ನಡೆ-ನುಡಿ ಆಚಾರ ವಿಚಾರಗಳಿಗೆ ವ್ಯಾತೀರಿಕ್ತವಾಗಿ ನಡೆದುಕೊಂಡಿರುವುದು ನಿಜಕ್ಕೂ ಅಭಿನಂಧನಿಯಾ ಎಂದು ಗುರುಮಠಕಲ್ ಖಾಸಾ ಮಠದ ಶಾಂತವೀರ ಗುರು ಮುರುಘಾ ರಾಜೇಂದ್ರ ಸ್ವಾಮೀಜಿ ಹೇಳಿದರು.
ಕ್ಲಿಕ್ ಮಾಡಿ ಓದಿ: Railway: ಕೇಂದ್ರ ಬಜೆಟ್ನಲ್ಲಿ ಚಿತ್ರದುರ್ಗ ರೈಲ್ವೇ ಯೋಜನೆಗೆ 150 ಕೋಟಿ
ಪ್ರತಿ ಹಳ್ಳಿ ನಗರ ಪಟ್ಟಣಗಳ ಹಿಂದೆ ಒಂದು ಚರಿತ್ರೆಯಿದೆ. ಹಾಗೆ ಈಚಘಟ್ಟ ಗ್ರಾಮಕ್ಕೂ ಇದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಈ ಸಮಾರಂಭವು ಮುಂದಿನ ಪೀಳಿಗೆಗೆ ಇತಿಹಾಸವಾಗುತ್ತದೆ. ನಾವು ಯಾವುದನ್ನು ಅಲಕ್ಷ್ಯ ಮಾಡುವಂತಿಲ್ಲ. ಗ್ರಾಮದಲ್ಲಿ ಎಂತಹ ಸಂಸ್ಕಾರದ ಸೊಬಗು ಇದೆ ಎಂಬುದಕ್ಕೆ ಈ ಕಾರ್ಯಕ್ರಮವೇ ಸಾಕ್ಷಿ. ಇದು ಇನ್ನೂ ಮತ್ತಷ್ಟು ಬೆಳೆದು ಬೆಳಗಬೇಕು ಎಂದು ಸಾನಿಧ್ಯ ವಹಿಸಿದ್ದ ಚಿತ್ರದುರ್ಗ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಹಾಗೂ ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯರಾದ ಡಾ. ಬಸವಕುಮಾರ ಸ್ವಾಮೀಜಿ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಈ ವೇಳೆ ದಾವಣಗೆರೆ ವಿರಕ್ತಮಠದ ಬಸವ ಪ್ರಭು ಸ್ವಾಮೀಜಿ, ಹೊಳಲ್ಕೆರೆಯ ಮಾಜಿ ಶಾಸಕರಾದ ಪಿ .ರಮೇಶ್, ವಕೀಲರಾದ ಜಿ.ಎಚ್. ಶಿವಕುಮಾರ್, ರೈತ ಮುಖಂಡ ಈಚಘಟ್ಟದ ಸಿದ್ಧವಿರಪ್ಪ, ನಿವೃತ್ತ ಪ್ರಾಚಾರ ಎಸ್.ಎಂ.ಕೊಟ್ರೇಶಪ್ಪ ಇವರುಗಳು ಮಾತನಾಡಿದರು.
ಕ್ಲಿಕ್ ಮಾಡಿ ಓದಿ: Power cut: ಏಳು ದಿನ ವಿದ್ಯುತ್ ವ್ಯತ್ಯಯ | ಬೆಸ್ಕಾಂ ಮಾಹಿತಿ
ಕಾರ್ಯಕ್ರಮಕ್ಕೂ ಮುನ್ನ ಚಿತ್ರದುರ್ಗದ ಬಸವೇಶ್ವರ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ತಜ್ಞ ವೈದ್ಯರುಗಳಿಂದ ಗ್ರಾಮದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರಯನ್ನು ಗ್ರಾಮದ ಸರ್ಕಾರಿ ಪ್ರಾಥಮಿಕ ಪಾಠಶಾಲೆಯಲ್ಲಿ ನಡೆಸಲಾಯಿತು.
ಕಾರ್ಯಕ್ರಮಕ್ಕು ಮುನ್ನ ಗ್ರಾಮದಲ್ಲಿ ಸಸಿ ನೆಡಲಾಯಿತು. ಈ ಸಂದರ್ಭದಲ್ಲಿ ಮುರುಘೇಶ ಶ್ರೀಗಳು, ತಿಪ್ಪೇರುದ್ರ ಸ್ವಾಮಿಗಳು, ಗ್ರಾಮದ ಧರ್ಮದರ್ಶಿ ಎಂ.ಪ್ರಸನ್ನ ಕುಮಾರ್, ವೀರಭದ್ರ ಸ್ವಾಮಿ ದೇವಾಲಯದ ಹಿರಿಯ ಅರ್ಚಕರಾದ ವೀರಭದ್ರಪ್ಪ, ಕಾರ್ಯದರ್ಶಿ ಕೆ.ಎಸ್. ಮಾದೇವಪ್ಪ ಇದ್ದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail
chitradurganews23@gmail.com
» Whatsapp Number