Yoga; ಪತಂಜಲಿ ಸಂಸ್ಥೆಯಿಂದ ಯೋಗ ಶಿಕ್ಷಕರಿಗೆ ತರಬೇತಿ | 35 ವಾರ್ಡ್‍ಗಳಲ್ಲೂ ಯೋಗ ಕೇಂದ್ರ ತೆರೆಯುವ ಉದ್ದೇಶ

ಪತಂಜಲಿ ಸಂಸ್ಥೆಯಿಂದ ಯೋಗ ಶಿಕ್ಷಕರಿಗೆ ತರಬೇತಿ

ಚಿತ್ರದುರ್ಗ: ಪತಂಜಲಿ ಯೋಗ(yoga) ಸಂಸ್ಥೆಯಿಂದ ಚಿತ್ರದುರ್ಗ ನಗರದ 35 ವಾರ್ಡ್‍ಗಳಲ್ಲೂ ಉಚಿತ ಯೋಗ ಕೇಂದ್ರಗಳನ್ನು ತೆರೆಯುವ ಸಲುವಾಗಿ ಯೋಗ ಶಿಕ್ಷಕರ ಶಿಬಿರ ಉದ್ಘಾಟಿಸಲಾಯಿತು.

ಪತಂಜಲಿ ಸಂಸ್ಥೆಯ ವಿಜಯನಗರ ಮತ್ತು ಗದಗ ಜಿಲ್ಲೆ ಉಸ್ತುವಾರಿ ಡಾ.ಎಸ್.ಬಿ.ಹಂದ್ರಾಳ ಚಿತ್ರದುರ್ಗದ ವಾಸವಿ ವಿದ್ಯಾಸಂಸ್ಥೆ ಆವರಣದಲ್ಲಿ ಯೋಗ ಶಿಬಿರವನ್ನು ಉದ್ಘಾಟಿಸಿದರು.

ಇದನ್ನೂ ಓದಿ: ಅಗ್ನಿವೀರ ವಾಯು ಸೇವೆಗೆ ಅರ್ಜಿ ಆಹ್ವಾನ

ಮುಂದಿನ ವರ್ಷ ಜರುಗಲಿರುವ 11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ವೇಳೆಗೆ ಚಿತ್ರದುರ್ಗದ 35 ವಾರ್ಡ್‍ಗಳಲ್ಲೂ ಯೋಗ ತರಬೇತಿ ಕೇಂದ್ರಗಳನ್ನು ತೆರೆಯುವುದು ಈ ತರಬೇತಿ ಶಿಬಿರದ ಉದ್ದೇಶವಾಗಿದೆ ಎಂದು ಎಸ್.ಬಿ.ಹಂದ್ರಾಳ ವಿವರಿಸಿದರು.

ಈ ವೇಳೆ ವಾಸವಿ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಸತ್ಯನಾರಾಯಣಶೆಟ್ಟಿ, ವಿಜಯನಗರ ಜಿಲ್ಲಾ ಪಂಚಾಯಿತಿ ಸಿಎಜಿ ಸಿ.ಜಿ.ಶ್ರೀನಿವಾಸ್ ಭಾಗವಹಿಸಿದ್ದರು.

ಇದನ್ನೂ ಓದಿ: ಇದು ಪತ್ರಕರ್ತರು ಆತ್ಮಾವಲೋಕನ ಮಾಡಿಕೊಳ್ಳುವ ಸಮಯ | ಕನ್ನಡಪ್ರಭ ಪ್ರಧಾನ ಸಂಪಾದಕ ರವಿ ಹೆಗಡೆ

ತರಬೇತಿ ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಭಾರಿ ದೇವಾನಂದ ನಾಯ್ಕ್, ಕಾರ್ಯದರ್ಶಿ ಗುರುಮೂರ್ತಿ, ಜಿಲ್ಲಾ ಉಸ್ತುವಾರಿ ಜಿ.ಶ್ರೀನಿವಾಸ್, ಯುವ ಪ್ರಭಾರಿ ಮತ್ತು ಖಜಾಂಚಿ ಜಿ.ನವೀನ್, ಕಿಸಾನ್ ಪ್ರಭಾರಿ ಕೆಂಚವೀರಪ್ಪ, ಉಪಾಧ್ಯಕ್ಷರಾದ ಕೃಷ್ಣಮೂರ್ತಿ, ಲಲಿತಾ ಬೇದ್ರೆ, ಕಾರ್ಯಾಲಯ ಪ್ರಭಾರಿ ರಾಮ್‍ನರೇಶ್,
ಗೌರವಾಧ್ಯಕ್ಷೆ ಸರ್ವದಾ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಪತ್‍ಕುಮಾರ್ ಮತ್ತಿತರರು ಭಾಗವಹಿಸಿದ್ದರು.

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು

ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್‌ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.

» Chitradurga News gmail

chitradurganews23@gmail.com

» Whatsapp Number

Share This Article
Leave a Comment

Leave a Reply

Your email address will not be published. Required fields are marked *

Exit mobile version