By using this site, you agree to the Privacy Policy and Terms of Use.
Accept
Chitradurga News-Kannada NewsChitradurga News-Kannada NewsChitradurga News-Kannada News
Notification
Font ResizerAa
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Reading: BREAKING NEWS ಮೂರು ಕರಡಿಗಳಿಂದ ವೃದ್ಧೆಯ ಮೇಲೆ ದಾಳಿ | ಕರಡಿ ದಾಳಿಯಿಂದ ಬೆಚ್ಚಿಬಿದ್ದ ಜನತೆ
Share
Font ResizerAa
Chitradurga News-Kannada NewsChitradurga News-Kannada News
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Search
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Follow US
© 2022 Foxiz News Network. Ruby Design Company. All Rights Reserved.

Home » BREAKING NEWS ಮೂರು ಕರಡಿಗಳಿಂದ ವೃದ್ಧೆಯ ಮೇಲೆ ದಾಳಿ | ಕರಡಿ ದಾಳಿಯಿಂದ ಬೆಚ್ಚಿಬಿದ್ದ ಜನತೆ

ಮುಖ್ಯ ಸುದ್ದಿ

BREAKING NEWS ಮೂರು ಕರಡಿಗಳಿಂದ ವೃದ್ಧೆಯ ಮೇಲೆ ದಾಳಿ | ಕರಡಿ ದಾಳಿಯಿಂದ ಬೆಚ್ಚಿಬಿದ್ದ ಜನತೆ

chitradurganews.com
Last updated: 24 December 2023 12:36
chitradurganews.com
2 years ago
Share
ಕರಡಿಗಳಿಂದ ವೃದ್ಧೆಯ ಮೇಲೆ ದಾಳಿ
ಕರಡಿಗಳಿಂದ ವೃದ್ಧೆಯ ಮೇಲೆ ದಾಳಿ
SHARE
https://chat.whatsapp.com/Jhg5KALiCFpDwME3sTUl7x

ಚಿತ್ರದುರ್ಗ ನ್ಯೂಸ್.ಕಾಂ: ಮೂರು ಕರಡಿಗಳು ಸೇರಿ ವೃದ್ಧೆಯೊಬ್ಬರ ಮೇಲೆ ಮಾರಣಾಂತಿಕ ದಾಳಿ ನಡೆಸಿರುವ ಘಟನೆ ಚಳ್ಳಕೆರೆ ತಾಲೂಕಿನಲ್ಲಿ ನಡೆದಿದೆ.

ದೊಡ್ಡ ಉಳ್ಳಾತಿ ಗ್ರಾಮದ ಹೊರ ವಲಯದ ಜಮೀನಿನಲ್ಲಿ 60 ವರ್ಷದ ಮಂಜುಳಮ್ಮ ಎಂಬುವವರ ಮೇಲೆ ಇಂದು ನಸುಕಿನಲ್ಲಿ ಮೂರು ಕರಡಿಗಳು ದಾಳಿ ಮಾಡಿ ಗಂಭೀರ ಗಾಯಗೊಳಿಸಿವೆ.

ಮುಂಜಾನೆಯೇ ಎದ್ದು ಜಮೀನಿನಲ್ಲಿ ಸಾಕಿರುವ ಹಸುವಿನಿಂದ ಹಾಲು ಕರೆಯಲು ವೃದ್ಧೆ ಮಂಜುಳಮ್ಮ ತೆರಳಿದ್ದಾರೆ. ಈ ವೇಳೆ ಜಮೀನಿನಲ್ಲಿದ್ದ ಕರಡಿಗಳು ಏಕಾಏಕಿ ದಾಳಿ ಮಾಡಿವೆ.

ತಲೆ, ಕೈ, ಕಾಲು ಕಿತ್ತು ಗಾಯಗೊಳಿಸಿವೆ. ರಕ್ತದ ಮಡುವಿನಲ್ಲಿ ಬಿದ್ದು ಕಿರುಚಾಡುತ್ತಿದ್ದ ಮಂಜಮ್ಮನನ್ನು ಅವರ ಪತಿ ಯರ್ರಿಸ್ವಾಮಿ ರಕ್ಷಣೆ ಮಾಡಿದ್ದಾರೆ.

ಇದನ್ನೂ ಓದಿ: ಮಿಂಚೇರಿಗೆ ಹೊಂಟವು ಸಾಲು ಸಾಲು ಎತ್ತಿನ ಬಂಡಿ

ಕರಡಿಗಳಿಗೆ ಕಲ್ಲು, ದೊಣ್ಣೆಗಳಿಂದ ಹೊಡೆದು ಯರ್ರಿಸ್ವಾಮಿ ಕರಡಿಗಳನ್ನು ಓಡಿಸಿ, ಗಾಯಗೊಂಡಿದ್ದ ಪತ್ನಿ ಮಂಜಮ್ಮನನ್ನು ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಘಟನಾ ಸ್ಥಳಕ್ಕೆ ಚಳ್ಳಕೆರೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತಳುಕು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸುತ್ತಮುತ್ತಲಿನ ಗ್ರಾಮದ ಜನರಲ್ಲಿ ಆತಂಕ ಮೂಡಿದೆ.
ಕರಡಿ ದಾಳಿಗೆ ಒಳಗಾದ ಮಂಜಮ್ಮಮ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನಾ ಸ್ಥಳಕ್ಕೆ ಚಳ್ಳಕೆರೆ ಅರಣ್ಯ ಇಲಾಖೆ, ಪೊಲೀಸ್ಅ ಧಿಕಾರಿಗಳು ಭೇಟಿ ನೀಡಿ ಪರಿಶೀಲನೆ
ಘಟನಾ ಸ್ಥಳಕ್ಕೆ ಚಳ್ಳಕೆರೆ ಅರಣ್ಯ ಇಲಾಖೆ, ಪೊಲೀಸ್ಅ ಧಿಕಾರಿಗಳು ಭೇಟಿ ನೀಡಿ ಪರಿಶೀಲನೆ

ಬೆಳಗ್ಗೆ 5.45ರ ಸುಮಾರಿಗೆ ಪ್ರತಿ ದಿನ ಹಾಲು ಕರೆಯಲು ಹೋಗುವಂತೆ ಜಮೀನಿಗೆ ಹೋಗಿದ್ದಾಗ ಹೊಲದಲ್ಲಿ ಕರಡಿ ದಾಳಿ ಮಾಡಿವೆ. ಕೂಗಾಟ ಕೇಳಿಸಿದ ತಂದೆ ಹಾಗೂ ಅಲ್ಲಿದ್ದ ಸ್ಥಳೀಯರು ಕೂಗಡಿ, ಕಲ್ಲು ತೂರಾಟ ಮಾಡಿದ್ದಾರೆ. ಬೆಂಕಿ ಹಚ್ಚಿ ಹಿಡಿದುಕೊಂಡಿದ್ದಾರೆ. ಇದೇ ವೇಳೆಗೆ ನಾಯಿಗಳು ಬಂದಿದ್ದು, ಕರಡಿಗಳು ಬಿಟ್ಟು ಓಡಿ ಹೋಗಿವೆ.
| ಮಂಜುನಾಥ್, ಗಾಯಾಳು ಮಂಜುಳಮ್ಮ ಪುತ್ರ.

*************

ಬೆಳಗ್ಗೆ ಹಾಲು ಕರೆಯಲು ಬೆಡ್‍ಶೀಟ್ ಹೊದ್ದುಕೊಂಡು ಜಮೀನಿನ ಬಳಿಗೆ ಹೋಗುತ್ತಿದ್ದೆ ಅಷ್ಟರಲ್ಲಿ ಹೋಗುತ್ತಿದ್ದಂತೆಯೇ ಮೂರು ಕರಡಿಗಳು ಬಂದು ಮೈಮೇಲೆ ಮುಗಿಬಿದ್ದವು. ಓಡಿ ಹೋಗಲು ಸಾಧ್ಯವಾಗಲಿಲ್ಲ.
| ಮಂಜುಳಮ್ಮ, ಕರಡಿ ದಾಳಿಗೆ ಒಳಗಾದವರು.

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು

ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್‌ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.

» Chitradurga News gmail

chitradurganews23@gmail.com

» Whatsapp Number

TAGGED:Bear AttackChallakereChitradurgaDodda UllathiEDITOR PICforest departmentKannada UpdatesPoliceThree Bearsಅರಣ್ಯ ಇಲಾಖೆಕನ್ನಡ ಅಪ್ಡೇಟ್ಸ್ಕರಡಿ ದಾಳಿಚಳ್ಳಕೆರೆಚಿತ್ರದುರ್ಗದೊಡ್ಡ ಉಳ್ಳಾತಿಪೊಲೀಸ್ಮೂರು ಕರಡಿ
Share This Article
Facebook Email Print
Previous Article ಚಳ್ಳಕೆರೆಯಲ್ಲಿ ಕ್ರಿಕೇಟ್ ಟೂರ್ನಿಗೆ ಚಾಲನೆ ಚಳ್ಳಕೆರೆಯಲ್ಲಿ ಕ್ರಿಕೇಟ್ ಟೂರ್ನಿಗೆ ಚಾಲನೆ | 11 ತಂಡಗಳು ಭಾಗೀ
Next Article ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ ಸಚಿವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ತಾಂತ್ರಿಕ ದೋಷ | ಹಿರಿಯೂರು ಬಳಿ ತುರ್ತು ಭೂಸ್ಪರ್ಶ
Leave a Comment

Leave a Reply Cancel reply

Your email address will not be published. Required fields are marked *

ಲಿಫ್ಟ್ ಹತ್ತಿದ ತಕ್ಷಣ ತಲೆ ಸುತ್ತುವವರು ಒಮ್ಮೆ ಈ ವಿಚಾರ ತಿಳಿದಿರಿ
Life Style
ಮಳೆಗಾಲದಲ್ಲಿ ಶೀತ ಮತ್ತು ಕೆಮ್ಮು ಬಂದಾಗ ಏನು ತಿನ್ನಬೇಕು ಮತ್ತು ಏನು ತಿನ್ನಬಾರದು? ಎಂಬುದನ್ನು ತಿಳಿಯಿರಿ
Life Style
ಹೆರಿಗೆಯ ನಂತರ ಬೇಗ ಚೇತರಿಸಿಕೊಳ್ಳಲು ಈ ಲಡ್ಡುಗಳನ್ನು ತಿನ್ನಿರಿ
Life Style
today bhavishya
Astrology: ದಿನ ಭವಿಷ್ಯ | ಜೂನ್ 30 | ಉದ್ಯೋಗಗಳಲ್ಲಿ ಬಡ್ತಿ, ದೂರದ ಪ್ರಯಾಣ, ಆರೋಗ್ಯದಲ್ಲಿ ಎಚ್ಚರ
Dina Bhavishya
© Chitradurga News. Ruby Design Company. All Rights Reserved.

Chitradurga News App

Install
Welcome Back!

Sign in to your account

Username or Email Address
Password

Lost your password?

Not a member? Sign Up