CHITRADURGA NEWS | 29 MARCH 2024
ಚಿತ್ರದುರ್ಗ: ನಾಯಕನಹಟ್ಟಿ ಶ್ರೀ ಗುರು ತಿಪ್ಪೇರುದ್ರ ಸ್ವಾಮಿ ಜಾತ್ರಾ ಮಹೋತ್ಸವಕ್ಕೆ ವಸಂತೋತ್ಸವದ ಮೂಲಕ ವಿಧ್ಯುಕ್ತ ತೆರೆ ಎಳೆಯಲಾಯಿತು.
ಸಂಪ್ರದಾಯದಂತೆ ದೇವಾಲಯದ ಅರ್ಚಕ ಮನೆತನದ ಮಹಿಳೆಯರು ಗುರುವಾರ ದೇವರಿಗೆ ವಿಶೇಷ ಆರತಿ ದೀಪಗಳನ್ನು ಬೆಳಗಿ ಗುರುತಿಪ್ಪೇರುದ್ರಸ್ವಾಮಿಯ ಉತ್ಸವ ಮೂರ್ತಿಯನ್ನು ಗುಡಿದುಂಬಿಸಿದರು. ಇದೇ ವೇಳೆ ಪಟ್ಟದ ಬಸವಣ್ಣನ (ಗೂಳಿ) ಪೂಜೆ ನೆರವೇರಿಸಿ ಮಂಗಳಾರತಿ ಮಾಡಿ ಪಲ್ಲಕ್ಕಿ ಸೇವೆಯಲ್ಲಿ ಭಾಗವಹಿಸಿದ ನೂರಾರು ಊಳಿಗದ ಯುವಕರಿಗೆ ಬಾಳೆಹಣ್ಣು ಪ್ರಸಾದ ವಿನಿಯೋಗಿಸಲಾಯಿತು.
ಕ್ಲಿಕ್ ಮಾಡಿ ಓದಿ: ನೀರಿಗಾಗಿ ಜಲಾಶಯದ ನಾಲೆ ಒಡೆದ ರೈತರು | ಇಂದು ಹುಳಿಯಾರು – ಹಿರಿಯೂರು ರೈತರ ಸಭೆ

ಪಟ್ಟಣದ ಹೊರಮಠದಿಂದ ಒಳಮಠದವರೆಗೂ ವಸಂತೋತ್ಸವ ಕಾರ್ಯಕ್ರಮ ನಿಮಿತ್ತ ಅದ್ದೂರಿ ಪಲ್ಲಕ್ಕಿ ಉತ್ಸವ ನಡೆಯಿತು. 1 ಕಿ.ಮೀ ದೂರದವರೆಗೂ ಪಟ್ಟಣದ ರಾಜಬೀದಿಯಲ್ಲಿ ಮೆರವಣಿಗೆ ವಿಜೃಂಭಣೆಯಿಂದ ಸಾಗಿತು.
ಬುಧವಾರ ರಾತ್ರಿ ಆಲಂಕೃತ ಪಲ್ಲಕ್ಕಿಯಲ್ಲಿ ದೇವರ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿ ದೇವಾಲಯದ ಸಾಂಪ್ರದಾಯಿಕ ವಾದ್ಯಗಳು ಹಾಗೂ ದೇವರ ಪಟ್ಟದ ಗೂಳಿಯೊಂದಿಗೆ ರಾತ್ರಿ 12.30ಕ್ಕೆ ಪಾದಗಟ್ಟೆಯವರೆಗೂ ಹೊತ್ತು ತರಲಾಯಿತು. ನಂತರ ಬೆಳಗಿನಜಾವ ವಿವಿಧ ಪೂಜೆಗಳನ್ನು ನೆರವೇರಿಸಿ ನಂತರ ಹೊರಮಠಕ್ಕೆ ಕರೆತರಲಾಯಿತು. ಗುರುವಾರ ಬೆಳಿಗ್ಗೆ 8.30ಕ್ಕೆ ಊಳಿಗ ಸೇವೆಯನ್ನು ಮುಗಿಸಿಕೊಂಡು ಹೊರಟಾಗ ದಾರಿಯುದ್ದಕ್ಕೂ ಹರಕೆ ಹೊತ್ತ ಮಹಿಳೆಯರು, ಮಕ್ಕಳು, ಪುರುಷರು ಸಾಲಾಗಿ ಅಡ್ಡಮಲಗಿ ಹರಕೆ ಸಲ್ಲಿಸಿದರು. ಪಲ್ಲಕ್ಕಿ ಹೊತ್ತ ಊಳಿಗದ ಯುವಕರು ಭಕ್ತರನ್ನು ದಾಟಿಕೊಂಡು ಬರುತ್ತಿದ್ದ ದೃಶ್ಯವನ್ನು ಭಕ್ತರು ಕಣ್ತುಂಬಿಕೊಂಡರು.
ಏಪ್ರಿಲ್ 1ರ ಸೋಮವಾರ ಮರಿಪರಿಷೆ ಮಾಡಲಾಗುತ್ತದೆ. ವಾರ್ಷಿಕ ಜಾತ್ರೆಗೆ ಬರದೇ ಇರುವ ಭಕ್ತರು ಮರಿಪರಿಷೆಗೆ ಬಂದು ದೇವರಿಗೆ ಹರಕೆ ಸಲ್ಲಿಸುವುದು ವಾಡಿಕೆ. ಮುಂದಿನ ವರ್ಷದ ವಾರ್ಷಿಕ ಜಾತ್ರೆಗೆ ಮುನ್ನುಡಿಯಾಗಿ ಇದನ್ನು ಆಚರಿಸುತ್ತಾರೆ ಎಂಬ ಪ್ರತೀತಿ ಇದೆ. ಮಹಿಳೆಯರು ಮಕ್ಕಳು, ವೃದ್ದರು ಜನಸಂದಣಿಯ ಹಿನ್ನೆಲೆಯಲ್ಲಿ ಮಹಾರಥೋತ್ಸವಕ್ಕೆ ಬಾರದೇ ಇರುವವರು ಮರಿಪರಿಷೆಗೆ ಬರುವುದು ವಿಶೇಷ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail
chitradurganews23@gmail.com
» Whatsapp Number
