CHITRADURGA NEWS | 13 MARCH 2024
ಚಿತ್ರದುರ್ಗ: ಜನಪರವಾಗಿರುವ ಯಾವುದೇ ಸಂಘಟನೆಗಳಿಗೆ ನನ್ನ ಬೆಂಬಲವಿದೆ, ಸಾಮಾಜಿಕ ಬದ್ಧತೆ ಇಟ್ಟುಕೊಂಡು ನಡೆಸುವ ಚಳುವಳಿಗಳನ್ನು ಬೆಂಬಲಿಸಿಕೊಂಡು ಬಂದಿದ್ದು, ಮುಂದೆಯೂ ಅದೇ ರೀತಿ ಸಹಕಾರ ಸಿಗಲಿದೆ ಎಂದು ಶ್ರೀ ಶಿವಶರಣ ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಶ್ರೀಗಳು ಹೇಳಿದರು.
ಇದನ್ನೂ ಓದಿ: ಕೋಟೆನಾಡಿನ ಸಾಧಕಿಗೆ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ

ನಗರದ ಹಳೆ ಮಾಧ್ಯಮಿಕ ಶಾಲಾವಣದಲ್ಲಿ ಕರುನಾಡ ವಿಜಯ ಸೇನೆ ಸಂಘಟನೆ ವತಿಯಿಂದ ಹಮ್ಮಿಕೊಂಡಿದ್ದ ಕನ್ನಡ ಹಬ್ಬದ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು,
ಸಮಾಜದಲ್ಲಿ ಇಂದಿಗೂ ಹಲವಾರು ಸಂಘಟನೆಗಳು ಉತ್ತಮ ಕಾರ್ಯ ಮಾಡುತ್ತಿವೆ, ಸಮಾಜದ ಕೆಲಸ ಮಾಡುವ ವೇಳೆ ಎದುರಾಗುವ ಯಾವುದೇ ಟೀಕೆ, ಟಿಪ್ಪಣಿ ಗಳಿಗೆ ತಲೆಕೆಡಿಸಿಕೊಳ್ಳದೆ ಮುನ್ನುಗಿ ಕೆಲಸ ಮಾಡಬೇಕು, ಜನಪರ ಮತ್ತು ಸಂವಿಧಾನದ ಅಡಿಯಲ್ಲಿ ನಡೆಯುವ ಚಟುವಟಿಕೆಗಳಿಗೆ ನಮ್ಮ ಬೆಂಬಲವಿದೆ, ಕೆಲವೊಮ್ಮೆ ಕಾನೂನು ವ್ಯಾಪ್ತಿ ಮೀರಿಯೂ ಸದುದ್ದೇಶ ಹೊಂದಿ ನಡೆಯುವ ಚಳುವಳಿಗೂ ಬೆಂಬಲ ಸಿಗಬೇಕು ಎಂಬುದಕ್ಕೆ ನಮ್ಮ ಅಭಿಮತವಿದೆ ಎಂದು ಹೇಳಿದರು.
ಇದನ್ನೂ ಓದಿ: ಕುಡಿಯುವ ನೀರಿಗೆ ತೊಂದರೆಯಾಗದಂತೆ ಕ್ರಮ
ಕರುನಾಡ ವಿಜಯ ಸೇನೆ ನಿಜಕ್ಕೂ ಒಂದು ಉತ್ತಮ ಗುರಿ ಇಟ್ಟುಕೊಂಡು ಕೆಲಸ ಮಾಡುತ್ತಿದೆ, ಕಾನೂನಿನ ವಿರುದ್ಧವಾಗಿ ಯಾವುದೇ ಕೆಲಸ ಮಾಡಬಾರದು ಎಂದು ತಿಳಿಸಿದರು.
ಸಮಾಜದಲ್ಲಿ ಮಠಮಾನ್ಯಗಳು ಮಾಡಬೇಕಾದ ಕೆಲಸ ಕಾರ್ಯಗಳನ್ನು ಕೆಲವು ಸಂದರ್ಭಗಳಲ್ಲಿ ಇಂತಹ ಸಂಘಟನೆಗಳು ಮಾಡುತ್ತವೆ, ಇಂಥ ಕೆಲಸಗಳಿಗೆ ಜನರು, ಮಠಾಧೀಶರು ಮಾತ್ರವಲ್ಲ ಇಡೀ ಜನ ಸಮೂಹವೇ ಬೆಂಬಲಕ್ಕೆ ನಿಲ್ಲಬೇಕಾಗುತ್ತದೆ, ಇಲ್ಲಿ ಕಾಯಕವನ್ನೇ ನಂಬಿದವರಿಗೆ ಗೌರವ ಸಿಕ್ಕಿದೆ, ಸಾಧಕರಿಗೂ ಗುರುತಿಸಿ ಮನ್ನಣೆ ನೀಡಲಾಗಿದೆ, ನಿಜಕ್ಕೂ ಇದೊಂದು ಉತ್ತಮ ಕಾರ್ಯವೆಂದು ಶ್ರೀಗಳು ಶ್ಲಾಘಸಿದರು.
ಇದನ್ನೂ ಓದಿ: ಮುರುಘಾ ಶರಣರ ವಿರುದ್ಧದ ಆರೋಪಗಳ ಮರು ನಿಗಧಿ
ಕೆಪಿಸಿಸಿ ಕಾರ್ಯಾಧ್ಯಕ್ಷ ಬಿ.ಎಂ.ಚಂದ್ರಪ್ಪ ಮಾತನಾಡಿ, ಸಮಾಜದಲ್ಲಿ ಅನೇಕ ಸಾಧಕರುಗಳನ್ನು ಗುರುತಿಸಿ ಅವರನ್ನು ಇಂತಹ ಸಾರ್ವಜನಿಕರ ಸಮ್ಮುಖದಲ್ಲಿ ಗೌರವಿಸುವುದು ನಿಜಕ್ಕೂ ಶ್ಲಾಘನಿಯ ವಿಚಾರ, ಈ ನೆಲದ ಜನರ ಆಶೀರ್ವಾದದೊಂದಿದೆ ರಾಜಕೀಯದಲ್ಲಿ ಕೆಲಸ ಮಾಡಲು ಅವಕಾಶ ಸಿಕ್ಕಿದೆ ಎಂದರು.
ಈ ಲೋಕಸಭಾ ಕ್ಷೇತ್ರದಲ್ಲಿ ಜನರು ತೋರಿರುವ ಪ್ರೀತಿ, ಅಭಿಮಾನಗಳಿಗೆ ನಾನು ಯಾವತ್ತೂ ಚಿರಋಣಿಯಾಗಿದ್ದೇನೆ, ಒಮ್ಮೆ ಗೆದ್ದಾಗ ಜನರ ಆಶಯಗಳಿಗೆ ಅನುಗುಣವಾಗಿ ಕೆಲಸ ಮಾಡಿದ್ದೇನೆ, ಎರಡನೇ ಅವಧಿಯಲ್ಲಿ ಇನ್ನು ಅಧಿಕ ಮತಗಳು ಸಿಕ್ಕಿವೆ, ಜನರ ಪ್ರೀತಿಗೆ ನಾನು ತಲೆಬಾಗಿದ್ದೇನೆ, ಅವರ ಋಣ ತೀರಿಸುವ ಕೆಲಸ ಖಂಡಿತ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಇದನ್ನೂ ಓದಿ: ಅಪ್ಪಾಜಿ ನಡೆದಾಡಿದ ಚಿತ್ರದುರ್ಗ ನನ್ನೂರು | ಕೋಟೆನಾಡಲ್ಲಿ ಸೆಂಚುರಿ ಸ್ಟಾರ್ ಸಂಚಲನ
ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೆ.ರವಿಶಂಕರ್ ರೆಡ್ಡಿ ಮಾತನಾಡಿ, ಬರದ ನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ಶಿಕ್ಷಣ ಕುಂಠಿತವಾಗಿದೆ, ಇದು ಶೋಷಿತರು, ದಲಿತರು, ಬಡವರು ವಾಸಿಸುವ ನಾಡು ಇಲ್ಲಿ ಶಿಕ್ಷಣಕ್ಕೆ ಹೆಚ್ಚು ಪ್ರಾಮುಖ್ಯತೆ ಸಿಗಬೇಕು ಎಂದು ಹೇಳಿದರು.
ಕಳೆದ ಬಾರಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಸಾಕಷ್ಟು ಸುಧಾಣೆಯಾಗಿದೆ, ಅದೇ ರೀತಿ ಈ ಬಾರಿಯೂ ಚಿತ್ರದುರ್ಗ ಜಿಲ್ಲೆ ದಾಖಲೆ ಫಲಿತಾಂಶ ತನ್ನದಾಗಿಸಿಕೊಳ್ಳಲಿದೆ, ಅದಕ್ಕಾಗಿ ಇಲಾಖೆ ಅನೇಕ ಕ್ರಮಗಳನ್ನು ಕೈಗೊಂಡಿದೆ ಎಂದು ತಿಳಿಸಿದರು.
ಇದನ್ನೂ ಓದಿ: ಹಟ್ಟಿ ತಿಪ್ಪೇಶನ ಸನ್ನಿಧಿಯಲ್ಲಿ ಗುಗ್ಗರಿ ಹಬ್ಬ ಸಂಭ್ರಮ | ಜಾತ್ರಾ ಮಹೋತ್ಸವದ ಸಿದ್ಧತೆ ಶುರು
ಈ ಸಂದರ್ಭದಲ್ಲಿ ಜನಪದ ಹಾಡುಗಾರ ಮಳವಳ್ಳಿಯ ಡಾ. ಮಹಾದೇವಸ್ವಾಮಿ ಅವರಿಗೆ ರಾಜ ವೀರ ಮದಕರಿ ನಾಯಕ ಪ್ರಶಸ್ತಿ, ತುಮಕೂರಿನ ಖ್ಯಾತ ಲೇಖಕಿ ಬಾ.ಹ. ರಮಾ ಕುಮಾರಿ ಅವರಿಗೆ ವೀರ ವನಿತೆ ಒನಕೆ ಓಬವ್ವ ಪ್ರಶಸ್ತಿ, ಕೆಪಿಸಿಸಿ ಕಾರ್ಯಧ್ಯಕ್ಷ ಬಿ. ಎನ್. ಚಂದ್ರಪ್ಪ ಅವರಿಗೆ ರಾಜಕೀಯ ಸುಪುತ್ರ ಪ್ರಶಸ್ತಿ, ಉಪನಿರ್ದೇಶಕ ಕೆ.ರವಿಶಂಕರ್ ರೆಡ್ಡಿ ಅವರಿಗೆ ಶಿಕ್ಷಣ ಕ್ರಾಂತಿಕಾರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ವೇಳೆ ಕರುನಾಡ ವಿಜಯ ಸೇನೆ ಜಿಲ್ಲಾಧ್ಯಕ್ಷ ಕೆ.ಟಿ ಶಿವಕುಮಾರ್, ಮಹಿಳಾ ಘಟಕದ ಅಧ್ಯಕ್ಷೆ ವೀಣಾ, ಸಂಸ್ಥಾಪಕ ರಾಜ್ಯಾಧ್ಯಕ್ಷ ಹೆಚ್.ಎನ್ ದೀಪಕ್, ಪ್ರಜಾ ಪ್ರಗತಿ ಹಿರಿಯ ವರದಿಗಾರ ಮೇಘ ಗಂಗಾಧರ ನಾಯ್ಕ್, ಕರುನಾಡ ವಿಜಯ ಸೇನೆ ಸಂಘಟನೆಯ ಮುಖಂಡರಾದ ಕೆ. ಆರ್. ಸಚ್ಚಿದಾನಂದ್, ಶಿವಪುತ್ರ ಗಾಣದಳ್, ಮಹೇಶ್, ಸೋಮಣ್ಣ, ನಗರಸಭೆ ಸದಸ್ಯ ಚಂದ್ರಶೇಖರ್ ಸೇರಿದಂತೆ ಪದಾಧಿಕಾರಿಗಳು ಇದ್ದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail
chitradurganews23@gmail.com
» Whatsapp Number
