ಮುಖ್ಯ ಸುದ್ದಿ
ಕಿರಣ್ ಯಾದವ್ NSUI ನೂತನ ಜಿಲ್ಲಾ ಅಧ್ಯಕ್ಷ

Published on
CHITRADURGA NEWS | 30 JANUARY 2024
ಚಿತ್ರದುರ್ಗ: ರಾಷ್ಟ್ರೀಯ ವಿದ್ಯಾರ್ಥಿ ಕಾಂಗ್ರೆಸ್(NSUI) ಚಿತ್ರದುರ್ಗ ಜಿಲ್ಲಾ ಘಟಕದ ನೂತನ ಅಧ್ಯಕ್ಷರಾಗಿ ಕಿರಣ್ ಯಾದವ್ ಅವರನ್ನು ನೇಮಕ ಮಾಡಿ ರಾಜ್ಯಾಧ್ಯಕ್ಷ ಕೀರ್ತಿ ಗಣೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೊಳಲ್ಕೆರೆ ತಾಲೂಕು ಆವಿನಹಟ್ಟಿ ಗ್ರಾಮದ ಕಿರಣ್ ಯಾದವ್ ಈ ಹಿಂದೆ ಎರಡು ಅವಧಿಗೆ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು.

ಇದನ್ನೂ ಓದಿ: ಪ್ರೇಯಸಿಯ ಕತ್ತು ಕೊಯ್ದು ಹತ್ಯೆಗೆ ಯತ್ನ
ಬಿ.ಕಾಂ ಪದವೀಧರರಾಗಿರುವ ಕಿರಣ್, ಯುವ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಜವಾಬ್ದಾರಿಯನ್ನೂ ಹೊತ್ತಿದ್ದಾರೆ.
ಈ ಹಿಂದೆ ವಿನಯ್ ಗೋಡೆಮನೆ ಚಿತ್ರದುರ್ಗ ಜಿಲ್ಲಾ ಎನ್ಎಸ್ಯುಐ ಅಧ್ಯಕ್ಷರಾಗಿದ್ದರು.

ಈಗ ವಿನಯ್ ಗೋಡೆಮನೆ ಎನ್ಎಸ್ಯುಐ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕವಾಗಿದ್ದಾರೆ. ತೆರವಾಗಿದ್ದ ಚಿತ್ರದುರ್ಗ ಜಿಲ್ಲಾ ವಿದ್ಯಾರ್ಥಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಕಿರಣ್ ಯಾದವ್ ನೇಮಕವಾಗಿದ್ದಾರೆ.
Continue Reading
Related Topics:Chitradurga, congress, Kiran Yadav, NSUI, ಎನ್ಎಸ್ಯುಐ, ಕಾಂಗ್ರೆಸ್, ಕಿರಣ್ ಯಾದವ್, ಚಿತ್ರದುರ್ಗ

Click to comment