By using this site, you agree to the Privacy Policy and Terms of Use.
Accept
Chitradurga News-Kannada NewsChitradurga News-Kannada NewsChitradurga News-Kannada News
Notification
Font ResizerAa
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Reading: ಕನ್ನಡ ಸಾಹಿತ್ಯ ಪರಿಷತ್ | ಬೈಲಾ ತಿದ್ದುಪಡಿಗೆ ವಿರೋಧ ಸಲ್ಲದು | ಜಿಲ್ಲಾಧ್ಯಕ್ಷ ಶಿವಸ್ವಾಮಿ
Share
Font ResizerAa
Chitradurga News-Kannada NewsChitradurga News-Kannada News
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Search
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Follow US
© 2022 Foxiz News Network. Ruby Design Company. All Rights Reserved.

Home » ಕನ್ನಡ ಸಾಹಿತ್ಯ ಪರಿಷತ್ | ಬೈಲಾ ತಿದ್ದುಪಡಿಗೆ ವಿರೋಧ ಸಲ್ಲದು | ಜಿಲ್ಲಾಧ್ಯಕ್ಷ ಶಿವಸ್ವಾಮಿ

ಮುಖ್ಯ ಸುದ್ದಿ

ಕನ್ನಡ ಸಾಹಿತ್ಯ ಪರಿಷತ್ | ಬೈಲಾ ತಿದ್ದುಪಡಿಗೆ ವಿರೋಧ ಸಲ್ಲದು | ಜಿಲ್ಲಾಧ್ಯಕ್ಷ ಶಿವಸ್ವಾಮಿ

News Desk Chitradurga News
Last updated: 10 May 2025 07:21
News Desk Chitradurga News
1 month ago
Share
ಕೆ.ಎಂ.ಶಿವಸ್ವಾಮಿ
ಕೆ.ಎಂ.ಶಿವಸ್ವಾಮಿ
SHARE
https://chat.whatsapp.com/Jhg5KALiCFpDwME3sTUl7x

CHITRADURGA NEWS | 10 may 2025

ಚಿತ್ರದುರ್ಗ: ಕನ್ನಡ ಸಾಹಿತ್ಯ ಪರಿಷತ್ತಿನ ಹಿತದೃಷ್ಟಿಯಿಂದ ಕೆಲ ತಿದ್ದುಪಡಿಗಳಿಗೆ ಕೈ ಹಾಕಲಾಗಿದೆ. ಇದರಿಂದ ಪರಿಷತ್ತಿಗೆ ಒಳ್ಳೆಯದಾಗಲಿದೆ. ಈ ಹಿನ್ನೆಲೆಯಲಿ ವಿರೋಧ ಸಲ್ಲದು ಎಂದು ಕಸಾಪ ಜಿಲ್ಲಾಧ್ಯಕ್ಷ ಕೆ.ಎಂ.ಶಿವಸ್ವಾಮಿ ತಿಳಿಸಿದ್ದಾರೆ.

Also Read: ಅಡಿಕೆ ಧಾರಣೆ | ಇಂದಿನ ಮಾರುಕಟ್ಟೆಯಲ್ಲಿ ಯಾವ ಅಡಿಕೆಗೆ ಎಷ್ಟು ರೇಟ್‌

ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಚುನಾಯಿತ ಜಿಲ್ಲಾಧ್ಯಕ್ಷ ನಿಧನರಾದರೆ ಉಳಿದ ಪೂರ್ಣಾವಧಿಗೆ ಯಾರು ಕಾರ್ಯನಿರ್ವಹಿಸಬೇಕು ಎನ್ನುವುದರ ಸ್ಪಷ್ಟತೆ ಬೈಲಾದಲ್ಲಿಲ್ಲ. ಮಂಡ್ಯದಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಘೋಷಣೆಯಾಗಿತ್ತು.

ಇದೇ ಸಂದರ್ಭದಲ್ಲಿ ಮಂಡ್ಯ ಕಸಾಪ ಜಿಲ್ಲಾಧ್ಯಕ್ಷ ರವಿ ಚಾಮಲಾಪುರ ಮೃತರಾದರು. ಇಂಥಹ ಸಂದರ್ಭದಲ್ಲಿ ಆ ಸ್ಥಾನವನ್ನು ತುಂಬುವ ಬಗ್ಗೆ ಬೈಲಾದ ಪ್ರಸ್ತಾಪವಿಲ್ಲ. ಮತ್ತೊಂದು ಉದಾಹರಣೆಯೆಂದರೆ ಒಂದು ಜಿಲ್ಲೆಯಲ್ಲಿ ಕನ್ನಡ ಭವನವನ್ನು ಜಿಲ್ಲಾಧ್ಯಕ್ಷರೇ ಸ್ವಂತ ಅಸ್ತಿಯನ್ನಾಗಿಸಿಕೊಂಡಿದ್ದಾರೆ. ಇವರ ವಿರುದ್ಧ ಕ್ರಮಕ್ಕೆ ಬೈಲಾದಲ್ಲಿ ಉಲ್ಲೇಖವಿಲ್ಲ.

ಈಗಿರುವ ಕಸಾಪ ಜಿಲ್ಲಾ ಮತ್ತು ತಾಲ್ಲೂಕು ರಚನೆಗಳಲ್ಲಿ ಯುವಕರು ಮತ್ತು ಮಹಿಳೆಯರಿಗೆ ಅವಕಾಶಗಳು ಕಡಿಮೆಯಿದೆ. ಅಖಿಲ ಭಾರತ ಸಮ್ಮೆಳನಗಳು ಜರುಗುವಾಗ ಆಯಾ ಜಿಲ್ಲೆಯಲ್ಲಿ ವಿಶೇಷವಾಗಿ ಕಸಾಪ ಸಂಘಟನೆಯ ಅವಶ್ಯಕತೆಯಿದೆ. ಹೀಗಾಗಿ ಸ್ಥಳೀಯವಾಗಿ ಯುವಕರು, ಮಹಿಳೆಯರು, ಸಾಹಿತಿಗಳೆಗೆ ಸಂಘಟನೆಯಲ್ಲಿ ಅವಕಾಶ ನೀಡಬೇಕು. ಇದಕ್ಕಾಗಿ ಬೈಲಾ ತಿದ್ದುಪಡಿ ಅಗತ್ಯವಿದೆ ಎಂದು ತಿಳಿಸಿದ್ದಾರೆ.

Also Read: ಆರೋಪಿ ಕಾಲಿಗೆ ಗುಂಡು | ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ ಆರೋಪಿ | ಸೀಬಾರ ಬಳಿ ಘಟನೆ

ಪತಿ ವರ್ಷ ಅಖಿಲ ಭಾರತ ಸಮ್ಮೇಳನಗಳ ಲೆಕ್ಕ ಪತ್ರಗಳನ್ನು ನೀಡುವುದರ ಬಗ್ಗೆ ನಿರ್ದಿಷ್ಟತೆ ಇಲ್ಲ. ಜೊತೆಗೆ ಉಳಿಕೆ ಹಣವನ್ನು ಏನು ಮಾಡಬೇಕು ಎನ್ನುವ ಮಾರ್ಗಸೂಚಿಗಳು ಬೈಲಾದಲ್ಲಿಲ್ಲ. ಹಲವಾರು ಸಮ್ಮೆಳನಗಳಲ್ಲಿ ಉಳಿಕೆಯಾದ ಹಣ ಖರ್ಚಾಗದೇ ಯಾವ್ಯಾವುದೇ ಖಾತೆಗಳಲ್ಲಿ ಹಾಗೆಯೇ ಉಳಿದಿದೆ. ಇಂಥಹ ಸಮಸ್ಯೆಗಳಿಗೆ ಬೈಲಾದಲ್ಲಿ ತಿದ್ದುಪಡಿ ಅಗತ್ಯವಿದೆ. ಹೀಗಾಗಿ ಸಾರಾಸಗಟಾಗಿ ಬೈಲಾ ತಿದ್ದುಪಡಿಯೇ ಬೇಡ ಎನ್ನುವ ಧೋರಣೆ ಸರಿಯಲ್ಲ.

ಅನ್ಯಾಯ,ಅಕ್ರಮಗಳಾಗಿದ್ದರೆ ಸಾಕ್ಷಿ ಸಹಿತ ಆರೋಪಗಳನ್ನು ಮಾಡಲಿ. ಆದರೆ 111 ವರ್ಷಗಳ ಇತಿಹಾಸ ಹೊಂದಿರುವ ಪರಿಷತ್ತಿಗೆ ಕಾರ್ಯಗಳು ಸುಲಭವಾಗುವ ಉದ್ದೇಶಕ್ಕಾಗಿ ತಂದಿರುವ ತಿದ್ದುಪಡಿಗೆ ನಿರ್ದಿಷ್ಟವಾದ ಕಾರಣವಿಲ್ಲದೆ ವಿರೋಧಿಸುವುದು ಸರಿಯಲ್ಲ.

ತಿದ್ದುಪಡಿಗಳಿಗೆ ಸಹಮತವಿಲ್ಲವಾದರೆ ಮಾಧ್ಯಮಗಳು ಅಥವ ವೇದಿಕೆಗಳಲ್ಲಿ ಮುಕ್ತ ಚರ್ಚೆಯಾಗಲಿ. ಇದಕ್ಕೆ ಬದಲಾಗಿ ಸಾರಾಸಗಟಾಗಿ ತಿದ್ದುಪಡಿಯೇ ಬೇಡ ಎನ್ನುವುದು ಸರಿಯಲ್ಲ ಎಂದು ಕಸಾಪ ಅಧ್ಯಕ್ಷ ಕೆ.ಎಂ.ಶಿವಸ್ವಾಮಿ ಹೇಳಿಕೆ ನೀಡಿದ್ದಾರೆ.

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು

ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್‌ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.

» Chitradurga News gmail

chitradurganews23@gmail.com

» Whatsapp Number

TAGGED:Bylaw AmendmentChitradurgaChitradurga newsChitradurga UpdatesDistrict President ShivaswamyKannada Latest NewsKannada NewsKannada Sahitya Parishadoppositionಕನ್ನಡ ನ್ಯೂಸ್ಕನ್ನಡ ಲೇಟೆಸ್ಟ್ ನ್ಯೂಸ್ಕನ್ನಡ ಸಾಹಿತ್ಯ ಪರಿಷತ್ಕನ್ನಡ ಸುದ್ದಿಚಿತ್ರದುರ್ಗಚಿತ್ರದುರ್ಗ ನ್ಯೂಸ್ಜಿಲ್ಲಾಧ್ಯಕ್ಷ ಶಿವಸ್ವಾಮಿಬೈಲಾ ತಿದ್ದುಪಡಿವಿರೋಧ
Share This Article
Facebook Email Print
Previous Article ಆಪರೇಷನ್‌ ಸಿಂದೂರ್ ಯಶಸ್ವಿಯಾಗಲೆಂದು ಬಿಜೆಪಿ ವಿಶೇಷ ಪೂಜೆ
Next Article ಗ್ಯಾರಂಟಿ ಯೋಜನೆಗಳು ಅರ್ಹರಿಗೆ ತಲುಪಿಸಲು ಅಧಿಕಾರಿಗಳು ಅಗತ್ಯ ಕ್ರಮವಹಿಸಿ | ಆರ್‌.ಶಿವಣ್ಣ
Leave a Comment

Leave a Reply Cancel reply

Your email address will not be published. Required fields are marked *

ದೇಹದಲ್ಲಿ ಫೈಬರ್ ಅಂಶ ಹೆಚ್ಚಿಸಲು ಊಟ-ಉಪಾಹಾರದಲ್ಲಿ ಈ ಆಹಾರಗಳನ್ನು ಸೇರಿಸಿ
Life Style
today bhavishya
Astrology: ದಿನ ಭವಿಷ್ಯ | 13 ಜೂನ್ 2025 | ಉದ್ಯೋಗಗಳಲ್ಲಿ ಅನುಕೂಲಕರ ವಾತಾವರಣ, ಆರೋಗ್ಯದ ವಿಚಾರದಲ್ಲಿ ಎಚ್ಚರಿಕೆ ಅಗತ್ಯ
Dina Bhavishya
Shivananda patil meating
ಹೊಸದುರ್ಗದಲ್ಲಿ ಗಾರ್ಮೆಂಟ್ಸ್‌ | ಬೆಂಗಳೂರಿನಲ್ಲಿ ಸಭೆ ನಡೆಸಿದ ಸಚಿವ ಶಿವಾನಂದ ಪಾಟೀಲ್‌ | ಜವಳಿ ಪಾರ್ಕ್‌ ಸ್ಥಳ ನಿಗಧಿ
ಹೊಸದುರ್ಗ
ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ | ವಿವಿಧ ಯೋಜನೆಗಳಿಗೆ ಅರ್ಜಿ 
ಮುಖ್ಯ ಸುದ್ದಿ
© Chitradurga News. Ruby Design Company. All Rights Reserved.
Welcome Back!

Sign in to your account

Username or Email Address
Password

Lost your password?

Not a member? Sign Up