
CHITRADURGA NEWS | 10 may 2025
ಚಿತ್ರದುರ್ಗ: ಕನ್ನಡ ಸಾಹಿತ್ಯ ಪರಿಷತ್ತಿನ ಹಿತದೃಷ್ಟಿಯಿಂದ ಕೆಲ ತಿದ್ದುಪಡಿಗಳಿಗೆ ಕೈ ಹಾಕಲಾಗಿದೆ. ಇದರಿಂದ ಪರಿಷತ್ತಿಗೆ ಒಳ್ಳೆಯದಾಗಲಿದೆ. ಈ ಹಿನ್ನೆಲೆಯಲಿ ವಿರೋಧ ಸಲ್ಲದು ಎಂದು ಕಸಾಪ ಜಿಲ್ಲಾಧ್ಯಕ್ಷ ಕೆ.ಎಂ.ಶಿವಸ್ವಾಮಿ ತಿಳಿಸಿದ್ದಾರೆ.
Also Read: ಅಡಿಕೆ ಧಾರಣೆ | ಇಂದಿನ ಮಾರುಕಟ್ಟೆಯಲ್ಲಿ ಯಾವ ಅಡಿಕೆಗೆ ಎಷ್ಟು ರೇಟ್


ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಚುನಾಯಿತ ಜಿಲ್ಲಾಧ್ಯಕ್ಷ ನಿಧನರಾದರೆ ಉಳಿದ ಪೂರ್ಣಾವಧಿಗೆ ಯಾರು ಕಾರ್ಯನಿರ್ವಹಿಸಬೇಕು ಎನ್ನುವುದರ ಸ್ಪಷ್ಟತೆ ಬೈಲಾದಲ್ಲಿಲ್ಲ. ಮಂಡ್ಯದಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಘೋಷಣೆಯಾಗಿತ್ತು.
ಇದೇ ಸಂದರ್ಭದಲ್ಲಿ ಮಂಡ್ಯ ಕಸಾಪ ಜಿಲ್ಲಾಧ್ಯಕ್ಷ ರವಿ ಚಾಮಲಾಪುರ ಮೃತರಾದರು. ಇಂಥಹ ಸಂದರ್ಭದಲ್ಲಿ ಆ ಸ್ಥಾನವನ್ನು ತುಂಬುವ ಬಗ್ಗೆ ಬೈಲಾದ ಪ್ರಸ್ತಾಪವಿಲ್ಲ. ಮತ್ತೊಂದು ಉದಾಹರಣೆಯೆಂದರೆ ಒಂದು ಜಿಲ್ಲೆಯಲ್ಲಿ ಕನ್ನಡ ಭವನವನ್ನು ಜಿಲ್ಲಾಧ್ಯಕ್ಷರೇ ಸ್ವಂತ ಅಸ್ತಿಯನ್ನಾಗಿಸಿಕೊಂಡಿದ್ದಾರೆ. ಇವರ ವಿರುದ್ಧ ಕ್ರಮಕ್ಕೆ ಬೈಲಾದಲ್ಲಿ ಉಲ್ಲೇಖವಿಲ್ಲ.
ಈಗಿರುವ ಕಸಾಪ ಜಿಲ್ಲಾ ಮತ್ತು ತಾಲ್ಲೂಕು ರಚನೆಗಳಲ್ಲಿ ಯುವಕರು ಮತ್ತು ಮಹಿಳೆಯರಿಗೆ ಅವಕಾಶಗಳು ಕಡಿಮೆಯಿದೆ. ಅಖಿಲ ಭಾರತ ಸಮ್ಮೆಳನಗಳು ಜರುಗುವಾಗ ಆಯಾ ಜಿಲ್ಲೆಯಲ್ಲಿ ವಿಶೇಷವಾಗಿ ಕಸಾಪ ಸಂಘಟನೆಯ ಅವಶ್ಯಕತೆಯಿದೆ. ಹೀಗಾಗಿ ಸ್ಥಳೀಯವಾಗಿ ಯುವಕರು, ಮಹಿಳೆಯರು, ಸಾಹಿತಿಗಳೆಗೆ ಸಂಘಟನೆಯಲ್ಲಿ ಅವಕಾಶ ನೀಡಬೇಕು. ಇದಕ್ಕಾಗಿ ಬೈಲಾ ತಿದ್ದುಪಡಿ ಅಗತ್ಯವಿದೆ ಎಂದು ತಿಳಿಸಿದ್ದಾರೆ.
Also Read: ಆರೋಪಿ ಕಾಲಿಗೆ ಗುಂಡು | ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ ಆರೋಪಿ | ಸೀಬಾರ ಬಳಿ ಘಟನೆ
ಪತಿ ವರ್ಷ ಅಖಿಲ ಭಾರತ ಸಮ್ಮೇಳನಗಳ ಲೆಕ್ಕ ಪತ್ರಗಳನ್ನು ನೀಡುವುದರ ಬಗ್ಗೆ ನಿರ್ದಿಷ್ಟತೆ ಇಲ್ಲ. ಜೊತೆಗೆ ಉಳಿಕೆ ಹಣವನ್ನು ಏನು ಮಾಡಬೇಕು ಎನ್ನುವ ಮಾರ್ಗಸೂಚಿಗಳು ಬೈಲಾದಲ್ಲಿಲ್ಲ. ಹಲವಾರು ಸಮ್ಮೆಳನಗಳಲ್ಲಿ ಉಳಿಕೆಯಾದ ಹಣ ಖರ್ಚಾಗದೇ ಯಾವ್ಯಾವುದೇ ಖಾತೆಗಳಲ್ಲಿ ಹಾಗೆಯೇ ಉಳಿದಿದೆ. ಇಂಥಹ ಸಮಸ್ಯೆಗಳಿಗೆ ಬೈಲಾದಲ್ಲಿ ತಿದ್ದುಪಡಿ ಅಗತ್ಯವಿದೆ. ಹೀಗಾಗಿ ಸಾರಾಸಗಟಾಗಿ ಬೈಲಾ ತಿದ್ದುಪಡಿಯೇ ಬೇಡ ಎನ್ನುವ ಧೋರಣೆ ಸರಿಯಲ್ಲ.
ಅನ್ಯಾಯ,ಅಕ್ರಮಗಳಾಗಿದ್ದರೆ ಸಾಕ್ಷಿ ಸಹಿತ ಆರೋಪಗಳನ್ನು ಮಾಡಲಿ. ಆದರೆ 111 ವರ್ಷಗಳ ಇತಿಹಾಸ ಹೊಂದಿರುವ ಪರಿಷತ್ತಿಗೆ ಕಾರ್ಯಗಳು ಸುಲಭವಾಗುವ ಉದ್ದೇಶಕ್ಕಾಗಿ ತಂದಿರುವ ತಿದ್ದುಪಡಿಗೆ ನಿರ್ದಿಷ್ಟವಾದ ಕಾರಣವಿಲ್ಲದೆ ವಿರೋಧಿಸುವುದು ಸರಿಯಲ್ಲ.
ತಿದ್ದುಪಡಿಗಳಿಗೆ ಸಹಮತವಿಲ್ಲವಾದರೆ ಮಾಧ್ಯಮಗಳು ಅಥವ ವೇದಿಕೆಗಳಲ್ಲಿ ಮುಕ್ತ ಚರ್ಚೆಯಾಗಲಿ. ಇದಕ್ಕೆ ಬದಲಾಗಿ ಸಾರಾಸಗಟಾಗಿ ತಿದ್ದುಪಡಿಯೇ ಬೇಡ ಎನ್ನುವುದು ಸರಿಯಲ್ಲ ಎಂದು ಕಸಾಪ ಅಧ್ಯಕ್ಷ ಕೆ.ಎಂ.ಶಿವಸ್ವಾಮಿ ಹೇಳಿಕೆ ನೀಡಿದ್ದಾರೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail
chitradurganews23@gmail.com
» Whatsapp Number
