By using this site, you agree to the Privacy Policy and Terms of Use.
Accept
Chitradurga News-Kannada NewsChitradurga News-Kannada NewsChitradurga News-Kannada News
Notification
Font ResizerAa
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Reading: ಬೆಲಗೂರಿನಲ್ಲಿ ಬಿಂಧು ಮಾಧವ ಅವಧೂತರ ಜಯಂತೋತ್ಸವ | ಮಳೆಗಾಗಿ ವಿಶೇಷ ಪೂಜೆ
Share
Font ResizerAa
Chitradurga News-Kannada NewsChitradurga News-Kannada News
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Search
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Follow US
© 2022 Foxiz News Network. Ruby Design Company. All Rights Reserved.

Home » ಬೆಲಗೂರಿನಲ್ಲಿ ಬಿಂಧು ಮಾಧವ ಅವಧೂತರ ಜಯಂತೋತ್ಸವ | ಮಳೆಗಾಗಿ ವಿಶೇಷ ಪೂಜೆ

ಹೊಸದುರ್ಗ

ಬೆಲಗೂರಿನಲ್ಲಿ ಬಿಂಧು ಮಾಧವ ಅವಧೂತರ ಜಯಂತೋತ್ಸವ | ಮಳೆಗಾಗಿ ವಿಶೇಷ ಪೂಜೆ

News Desk Chitradurga News
Last updated: 1 May 2024 16:02
News Desk Chitradurga News
1 year ago
Share
ಬೆಲಗೂರಿನಲ್ಲಿ ಬಿಂಧು ಮಾಧವ ಅವಧೂತರ ಜಯಮತ್ಯುತ್ಸವ
ಬೆಲಗೂರಿನಲ್ಲಿ ಬಿಂಧು ಮಾಧವ ಅವಧೂತರ ಜಯಮತ್ಯುತ್ಸವ
SHARE
https://chat.whatsapp.com/Jhg5KALiCFpDwME3sTUl7x

CHITRADURGA NEWS | 01 MAY 2024

ಹೊಸದುರ್ಗ: ತಾಲ್ಲೂಕಿನ ಬೆಲಗೂರು ಗ್ರಾಮದ ವಸಿಷ್ಠಾಶ್ರಮದಲ್ಲಿ ಮಂಗಳವಾರ ಅವಧೂತ ಸದ್ಗುರು ಶ್ರೀ ಬಿಂಧುಮಾಧವ ಶರ್ಮ ಸ್ವಾಮಿಜಿ ಅವರ 78ನೇ ವರ್ಷದ ಜಯಂತಿ ಮಹೋತ್ಸವ ವಿಜೃಂಭಣೆಯಿಂದ ನೆರವೇರಿತು.

ಇದನ್ನೂ ಓದಿ : ಫಸಲ್ ವಿಮಾ ಯೋಜನೆ | ಅಧಿಕಾರಿಗಳ ಯಡವಟ್ಟು, ರೊಚಿಗೆದ್ದ ರೈತರು

ಅವಧೂತ ಬಿಂಧುಮಾಧವ ಶ್ರೀಗಳ ಅಧಿಷ್ಠಾನ ಮಂದಿರದಲ್ಲಿರುವ ಗುರುಗಳ ಸ್ಥಿರ ಹಾಗೂ ಚರ ಪಾದುಕೆಗಳಿಗೆ ರುದ್ರಾಭಿಷೇಕ, ಅಲಂಕಾರ ಪೂಜೆ, ಮಹಾ ನೈವೆದ್ಯ, ಅಷ್ಠೋತ್ತರ, ಮಹಾ ಮಂಗಳಾರತಿ  ಕಾರ್ಯಕ್ರಮಗಳು ನೆರವೇರಿದವು.

ಆಶ್ರಮದ ಮುಖ್ಯ ದೇವತೆ ಅಭಯಾಂಜನೇಯ ಸ್ವಾಮಿ ದೇವಾಲಯ ಹಾಗೂ ಅಭಯ ಗಣಪತಿ ಮಂದಿರದಲ್ಲಿಯೂ ವಿಶೇಷ ಪೂಜಾ ಕಾರ್ಯಗಳು ನಡೆಯಿತು. ಭಕ್ತರು ಸರದಿಯ ಸಾಲಿನಲ್ಲಿ ನಿಂತು ಅಧಿಷ್ಠಾನ ಮಂದಿರದಲ್ಲಿ ಗುರುಗಳ ದರ್ಶನ ಪಡೆದರು.

ಇದನ್ನೂ ಓದಿ : ಚಿತ್ರದುರ್ಗ ಜಿಲ್ಲೆಯ ಗಡಿಭಾಗದಲ್ಲಿ ಮದ್ಯ ಮಾರಾಟ ನಿಷೇಧ

ಈ ವೇಳೆ ಮಳೆಗಾಗಿ ಪ್ರಾರ್ಥಿಸಿ ಮೇದಾ ದಕ್ಷಿಣಮೂರ್ತಿ ಹೋಮ ಹಾಗೂ ಅವಹಂತೀ ಹೋಮ, ಮಂತ್ರ ಪಠಣೆ, ಪುರ್ಣಾಹುತಿ ವಿಶೇಷ ಪೂಜೆ ನಡೆಯಿತು.

ಅಧಿಷ್ಠಾನ ಮಂದಿರವನ್ನು ವಿಶೇಷವಾಗಿ ಬಂಗಾರ ಬಣ್ಣದ ಅಲಂಕಾರಿಕ ಪರಿಕರಗಳು ಹಾಗೂ ಹೂವುಗಳಿಂದ ಅಲಂಕರಿಸಲಾಗಿತ್ತು. ಭಕ್ತರಿಗೆ ನಿರಂತರ ದಾಸೋಹ ವ್ಯವಸ್ಥೆ ಮಾಡಲಾಗಿತ್ತು.

ಬಿಂದುಮಾಧವ ಶ್ರೀಗಳ ಉತ್ಸವಮೂರ್ತಿಯ ಪಲ್ಲಕ್ಕಿ ಉತ್ಸವಕ್ಕೆ ಆಶ್ರಮದ ಧರ್ಮಾಧಿಕಾರಿ ಗುರುದತ್ತ ಶರ್ಮ ಚಾಲನೆ ನೀಡಿದರು.

ಇದನ್ನೂ ಓದಿ : ಕೋಣ ಗುದ್ದಿ ವ್ಯಕ್ತಿ ಸಾವು | ಜಾತ್ರೆಯಲ್ಲಿ ಕೋಣ ಬಲಿ ಕೊಡುವಾಗ ನಡೆದ ಘಟನೆ

ಈ ಸಂದರ್ಭದಲ್ಲಿ ಸದ್ಗುರು ಆಶ್ರಮದ ಶ್ರೀ ಕಾಂತಾನಂದ ಸರಸ್ವತಿ ಸ್ವಾಮಿಜಿ, ಸಿಂದಗಿ ಬೀಮಾಶಂಕರ ಮಠದ ಶ್ರೀ ದತ್ತಪ್ಪಯ್ಯ ಸ್ವಾಮಿಜಿ, ಶ್ರೀ ಬ್ರಹ್ಮಾನಂದ ಸ್ವಾಮೀಜಿ, ಶಾಸಕ ಬಿ.ಜಿ.ಗೋವಿಂದಪ್ಪ ಸೇರಿದಂತೆ ಭಕ್ತರು ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು.

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು

ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್‌ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.

» Chitradurga News gmail

chitradurganews23@gmail.com

» Whatsapp Number

TAGGED:BelaguracelebrationHosdurgajayantiShri Bindhumadhavಜಯಂತಿಬೆಲಗೂರುಮಹೋತ್ಸವಶ್ರೀ ಬಿಂಧುಮಾಧವಹೊಸದುರ್ಗ
Share This Article
Facebook Email Print
Previous Article ಗಡಿಭಾಗದಲ್ಲಿ ಮದ್ಯ ಮಾರಾಟ ನಿಷೇಧ ಚಿತ್ರದುರ್ಗ ಜಿಲ್ಲೆಯ ಗಡಿಭಾಗದಲ್ಲಿ ಮದ್ಯ ಮಾರಾಟ ನಿಷೇಧ
Next Article ಜಾನುವಾರು ಮಾಲೀಕರುಗಳಿಗೆ ಅಧಿಕಾರಿ ವಿ.ಎ.ಪ್ರಕಾಶ್‍ರೆಡ್ಡಿ ಸಲಹೆ ಹೆಚ್ಚಾಗಿದೆ ಬಿಸಿಲು | ಕುರಿ, ಮೇಕೆ, ದನ ಮೇಯಿಸಲು ಸರಿಯಾದ ಸಮಯ ಯಾವುದು ಗೊತ್ತಾ..
Leave a Comment

Leave a Reply Cancel reply

Your email address will not be published. Required fields are marked *

Sadguru Pradeep participate hosadurga bandh
ಹೊಸದುರ್ಗ ಬಂದ್‌ | ಇಂದು ಅಂತ್ಯವಲ್ಲ, ಆರಂಭ | ಸದ್ಗುರು ಪ್ರದೀಪ್‌
ಹೊಸದುರ್ಗ
ಹೊಸದುರ್ಗ ಸ್ಥಿತಿ ಸಮುದ್ರದ ನೆಂಟಸ್ಥನ, ಉಪ್ಪಿಗೆ ಬರ | ಕೆ.ಎಸ್.ನವೀನ್
ಹೊಸದುರ್ಗ
ಹೊಸದುರ್ಗ ಬಂದ್ | ನೀರಿಗೆ ಅಡ್ಡಿ ಕಿಡಿಗೇಡಿ ಕೃತ್ಯ | ಎಸ್.ಲಿಂಗಮೂರ್ತಿ
ಹೊಸದುರ್ಗ
ಹೊಸದುರ್ಗ ಬಂದ್ | ಶಾಸಕ ಬಿ.ಜಿ.ಗೋವಿಂದಪ್ಪ ನೇತೃತ್ವದಲ್ಲಿ ಹೋರಾಟ
ಹೊಸದುರ್ಗ
© Chitradurga News. Ruby Design Company. All Rights Reserved.

Chitradurga News App

Install
Welcome Back!

Sign in to your account

Username or Email Address
Password

Lost your password?

Not a member? Sign Up