CHITRADURGA NEWS | 28 JANUARY 2025
ಮೊಳಕಾಲ್ಮೂರು: ಜಿಲ್ಲೆಯ ಮೊಳಕಾಲ್ಮೂರು ಠಾಣೆ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಅಂತಾರಾಜ್ಯ ಬೈಕ್ ಕಳ್ಳನನ್ನು ಬಂಧನವಾಗಿದೆ.
ಬೈಕ್ ಕಳ್ಳತನ ಪ್ರಕರಣವೊಂದರ ಬೆನ್ನತ್ತಿದ್ದ ಪೊಲೀಸರಿಗೆ, ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ವ್ಯಕ್ತಿಯನ್ನು ಹಿಡಿದು ವಿಚಾರಣೆ ನಡೆಸಿದಾಗ 10 ಬೈಕುಗಳ ಮೂಲ ಪತ್ತೆಯಾಗಿದೆ.

ಇದನ್ನೂ ಓದಿ: ಅಡಿಕೆ ಧಾರಣೆ | ಶಿವಮೊಗ್ಗ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಬೆಲೆ ಹೆಚ್ಚಳ
ಆಂಧ್ರಪ್ರದೇಶದ ಅನಂತಪುರ ಜಿಲ್ಲೆ, ಅಡವಿಗೊಲ್ಲಪಲ್ಲಿ ಗ್ರಾಮದ ಬಿ.ವನ್ನಪ್ಪ ಬಂಧಿತ ಆರೋಪಿ.
ಆಸಾಮಿ ಬಲೆಗೆ ಬಿದ್ದಿದ್ದೇಗೆ ?
2025 ಜನವರಿ 25 ರಂದು ದಾಸರಿ ನರಸಿಂಹಲು ಎಂಬ ವ್ಯಕ್ತಿ ರಾಯದುರ್ಗದಿಂದ ಬಳ್ಳಾರಿಗೆ ತೆರಳುವ ಹಿನ್ನೆಲೆಯಲ್ಲಿ, ಮೊಳಕಾಲ್ಮೂರು ಬಸ್ ನಿಲ್ದಾಣದಲ್ಲಿ ಬೈಕ್ ನಿಲ್ಲಿಸಿ ಬಸ್ಸಿನಲ್ಲಿ ತೆರಳಿದ್ದಾರೆ.
ಇದನ್ನೂ ಓದಿ: ಗಾಂಧಿ ವೃತ್ತದಿಂದ ಮೆದೇಹಳ್ಳಿ, ದಾವಣಗೆರೆ ರಸ್ತೆಗಳನ್ನು ವಿಸ್ತರಿಸಿ
ಬಳ್ಳಾರಿಯಿಂದ ಮೊಳಕಾಲ್ಮೂರಿಗೆ ಬಂದು ನೋಡಿದಾಗ ತಾನು ನಿಲ್ಲಿಸಿದ್ದ ಬೈಕ್ ಅಲ್ಲಿರಲಿಲ್ಲ. ಈ ಬಗ್ಗೆ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.
ಸದರಿ ಪ್ರಕರಣದಲ್ಲಿ ಆರೋಪಿಗಳ ಪತ್ತೆಗಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ಕುಮಾರ್ ಬಂಡಾರು, ಹೆಚ್ಚುವರಿ ಅಧೀಕ್ಷಕ ಎಸ್.ಜೆ.ಕುಮಾರಸ್ವಾಮಿ ಮಾರ್ಗದರ್ಶನದಲ್ಲಿ ಚಳ್ಳಕೆರೆ ಡಿವೈಎಸ್ಪಿ ರಾಜಣ್ಣ ಉಸ್ತುವಾರಿಯಲ್ಲಿ ಮೊಳಕಾಲ್ಮೂರು ಸಿಪಿಐ ವಸಂತ ವಿ ಆಸೋದೆ ನೇತೃತ್ವದಲ್ಲಿ, ಮೊಳಕಾಲ್ಮೂರು ಸಬ್ ಇನ್ಸ್ಪೆಕ್ಟರ್ಗಳಾದ ಈರೇಶ, ಪಾಂಡುರಂಗ ಹಾಗೂ ಸಿಬ್ಬಂದಿಗಳಾದ ಓಬಣ್ಣ, ಹರೀಶ, ವೀರಣ್ಣ, ಖಾದರ್ಬಾಷಾ, ತಿಮ್ಮೇಶ, ಈಶ್ವರ, ನಂದಪ್ಪ ಪೂಜಾರಿ, ಮುರುಗೇಂದ್ರಪ್ಪ ಅವರ ತಂಡ ರಚನೆಯಾಗಿದೆ.
ಇದನ್ನೂ ಓದಿ: APMC: ಮಾರುಕಟ್ಟೆ ಧಾರಣೆ | ಇಂದಿನ ಹತ್ತಿ ಎಷ್ಟಿದೆ?
ಕಾರ್ಯಚರಣೆ ನಡೆಸಿದ ಈ ತಂಡ ಜ.27 ರಂದು ಆರೋಪಿ ವನ್ನಪ್ಪ ಬೈಕಿನಲ್ಲಿ ಅನುಮಾನಾಸ್ಪದವಾಗಿ ಓಡಾಡುವುದನ್ನು ಗಮನಿಸಿ ವಶಕ್ಕೆ ಪಡೆದು ವಿಚಾರಣೆ ನಡೆಸಿದೆ.
ಆತ ಓಡಿಸುತ್ತಿದ್ದ ಬೈಕ್ ಮೊಳಕಾಲ್ಮರು ಪೆÇಲೀಸ್ ಠಾಣೆ ವ್ಯಾಪ್ತಿಯಲಿ ಕಳ್ಳತನವಾಗಿದ್ದು ಎನ್ನುವುದು ಗೊತ್ತಾಗಿದೆ.
ಇದನ್ನೂ ಓದಿ: ಚಿತ್ರದುರ್ಗದಲ್ಲಿ ರಸ್ತೆ ಅಗಲೀಕರಣ ಬೇಡ | ನಗರದ ವಿಸ್ತರಣೆಗೆ ಒತ್ತು ಕೊಡಿ | AAP ಜಗದೀಶ್
ಬಂಧಿತ ಆರೋಪಿ, ಕರ್ನಾಟಕದ ಚಿತ್ರದುರ್ಗ ಜಿಲ್ಲೆ, ಬಳ್ಳಾರಿ ಜಿಲೆ, ಆಂಧ್ರಪ್ರದೇಶ ದ ಅನಂತಪುರ ಜಿಲ್ಲೆಗಳಲಿ ಬೈಕ್ ಕಳ್ಳತನ ಮಾಡಿದ ಪ್ರಕರಣಗಳಿದ್ದು, ಈತನಿಂದ 2.60 ಲಕ್ಷ ರೂ. ಮೌಲ್ಯದ 10 ಬೈಕುಗಳನ್ನು ಜಪ್ತಿ ಮಾಡಲಾಗಿದೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail
chitradurganews23@gmail.com
» Whatsapp Number
