ಕ್ರೈಂ ಸುದ್ದಿ
ಹೊಳಲ್ಕೆರೆ | ಕೃಷಿ ಹೊಂಡದಲ್ಲಿ ಮುಳುಗಿ ಇಬ್ಬರು ಸಾವು
CHITRADURGA NEWS | 14 MAY 2025
ಹೊಳಲ್ಕೆರೆ: ತಾಲ್ಲೂಕಿನ ಕಂಬದೇವರಹಟ್ಟಿಯಲ್ಲಿ ಕೃಷಿ ಹೊಂಡದಲ್ಲಿ ನೀರು ಕುಡಿಯಲು ಹೋಗಿದ್ದ ಇಬ್ಬರು ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆ.
ಲಕ್ಷ್ಮಣ್ ಎಂಬುವವರ ಜಮೀನಿನ ಕೃಷಿ ಹೊಂಡದಲ್ಲಿ ಘಟನೆ ನಡೆದಿದೆ.
Also Read: ಉತ್ತಮ ದೃಷ್ಟಿಗೆ ಪೋಷಕಾಂಶವುಳ್ಳ ತರಕಾರಿ, ಹಣ್ಣು ಸೇವಿಸಿ | ನೇತ್ರ ತಜ್ಞ ಡಾ.ಪ್ರದೀಪ್
ಪ್ರವೀಣ್ (14), ರಂಗಸ್ವಾಮಿ (26) ಮೃತ ದುರ್ದೈವಿಗಳು. ಘಟನೆಯಲ್ಲಿ ರಮೇಶ್ ಎಂಬ ಯುವಕ ಅಸ್ವಸ್ಥಗೊಂಡಿದ್ದು, ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ಕರೆತರಲಾಗಿದೆ.
ಸ್ಥಳಕ್ಕೆ ಹೊಳಲ್ಕೆರೆ ಪಿಎಸ್ಐ ಸಚ್ಚಿನ್ ಭೇಟಿ, ಪರಿಶೀಲನೆ ನಡೆಸಿದ್ದಾರೆ.