ಮನಸ್ಸಿಗೆ ಹಿತ ತಂದಿದೆ ಹಿರೇಗುಂಟನೂರು ಆಂಜನೇಯಸ್ವಾಮಿ ದೇವಸ್ಥಾನ | ಕಣ್ವಕುಪ್ಪೆ ಗವಿಮಠದ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ

CHITRADURGA NEWS | 19 FEBRUARY 2024
ಚಿತ್ರದುರ್ಗ: ಭಕ್ತರು ಶ್ರದ್ಧೆ, ನಿಷ್ಠೆ, ಪಾವಿತ್ರತೆಯಿಂದ ಮಾಡುವ ಕೆಲಸ ಭಗವಂತನಿಗೆ ನಿಜವಾದ ಆನಂದ ತಂದುಕೊಡುತ್ತದೆ ಎಂದು ದಾವಣಗೆರೆ ಜಿಲ್ಲೆಯ ಜಗಳೂರು ತಾಲ್ಲೂಕಿನ ಕಣ್ವಕುಪ್ಪೆ ಗವಿಮಠದ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಹಿರೇಗುಂಟನೂರು ಗ್ರಾಮದಲ್ಲಿ ಆಯೋಜಿಸಿದ್ದ ಆಂಜನೇಯಸ್ವಾಮಿ ದೇವಸ್ಥಾನದ ಉದ್ಘಾಟನೆ ಮತ್ತು ಕಳಸ ಪ್ರತಿಷ್ಠಾಪನೆಯ ಧರ್ಮಸಭಾ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿದ ಅವರು, ‘ಶಿಲ್ಪಿಗಳು ಆಂಜನೇಯ ಮಂದಿರವನ್ನು ಅತೀ ಸುಂದರವಾಗಿ ನಿರ್ಮಿಸಿದ್ದಾರೆ. ಎಲ್ಲರ ಮನಸ್ಸಿಗೆ ಹಿತ ತಂದುಕೊಡುವ ರೀತಿಯಲ್ಲಿದೆ’ ಎಂದರು.

ಪರಿವಾರವನ್ನು ರಕ್ಷಣೆ ಮಾಡುವ ಜವಾಬ್ದಾರಿ ಪ್ರತಿಯೊಬ್ಬ ಪುರುಷರದ್ದಾಗಿರುತ್ತೆ. ಕುಟುಂಬ ನಿರ್ವಹಣೆ ಸಮಯದಲ್ಲಿ ದುಶ್ಚಟ ಕಲಿತರೆ ನಿಮ್ಮನ್ನು ನಂಬಿದವರು ಸಂಕಷ್ಟಕ್ಕೆ ಸಿಲುಕುತ್ತಾರೆ. ಶ್ರಮವಹಿಸಿ ದುಡಿದ ಹಣವನ್ನು ಕೂಡಿಟ್ಟು ಸತ್ಕಾರ್ಯಕ್ಕೆ ಬಳಸಬೇಕು ಎಂದರು.

ಇದನ್ನೂ ಓದಿ: ತರಳಬಾಳು ಹುಣ್ಣಿಮೆ ಆಚರಣೆ | ಸಿರಿಗೆರೆ ಸದ್ಧರ್ಮ ನ್ಯಾಯಪೀಠಕ್ಕೆ ಬಿಡುವು

ಸಮಾಜದಲ್ಲಿನ ಹಿರಿಯರು, ಗುರುಗಳು, ಧರ್ಮ, ತತ್ವ, ಸತ್ಯ ಒಳ್ಳೆ ಮಾರ್ಗವನ್ನು ತೋರಿಸುತ್ತಾರೆ. ಅದರಂತೆ ನಮ್ಮ ನಡೆ ಇರಬೇಕು. ಆಗಿದ್ದಾಗ ನಮ್ಮ ಬದುಕು ಸಾರ್ಥಕಪಡಿಸಿಕೊಳ್ಳಬಹುದು. ಸರ್ವ ಸಮರ್ಥನಾದ ಭಗವಂತ ಮಾನವನಿಗೆ ಪಂಚ ತನ್ಮಾತ್ರಗಳನ್ನು ಉದಾರವಾಗಿ ಉಡುಗೊರೆಯಾಗಿ ಕೊಟ್ಟವಂತವರು ಎಂದರು.

ವಿದ್ಯೆ ಕಲಿಸಿದ ಶಿಕ್ಷಕ, ಆದ್ಯಾತ್ಮ ಹೇಳಿಕೊಟ್ಟ ಗುರು ಹಾಗೂ ಜೀವ ಕೊಟ್ಟ ಭಗವಂತನ ಋಣವನ್ನು ಈ ಜಗತ್ತಿನಲ್ಲಿ ಯಾರಿಂದಲೂ ತೀರಿಸಲು ಸಾಧ್ಯವಿಲ್ಲ. ಈ ಸರಳ ಸತ್ಯವನ್ನು ಅರ್ಥ ಮಾಡಿಕೊಂಡು ಸನ್ಮಾರ್ಗದಲ್ಲಿ ಸಾಗಬೇಕು. ಗುರು ತಾನು ಹತ್ತಾರು ವರ್ಷ ಕಲಿತ ವಿದ್ಯೆಯನ್ನು ಮಕ್ಕಳಿಗೆ ಅತ್ಯಂತ ಶ್ರದ್ಧೆಯಿಂದ ಕಲಿಸುತ್ತಾನೆ. ಕಲಿತ ವಿದ್ಯೆಯನ್ನು ಜೀವನದಲ್ಲಿ ಪಾಲಿಸಿ ನಾಲ್ಕರು ಜನರಿಗೆ ಮಾದರಿಯಾಗಬೇಕು ಎಂದು ಹೇಳಿದರು.

ಇದನ್ನೂ ಓದಿ: ಮಠಗಳಲ್ಲಿ ಹೋಮ – ಹವನ ನಾಚಿಕೆಗೇಡಿನ ಸಂಗತಿ| ಚಿಂತಕ ಎಸ್‌.ಜಿ.ಸಿದ್ದರಾಮಯ್ಯ

ಶಾಸಕ ಕೆ.ಸಿ.ವೀರೇಂದ್ರ, ಮಾಜಿ ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ, ಮುಖಂಡ ಜಿ.ಎಸ್‌.ಮಂಜುನಾಥ್‌, ದ್ಯಾಮಲಾಂಬ ದೇವಸ್ಥಾನ ಅಭಿವೃದ್ಧಿ ಟ್ರಸ್ಟ್‌ ಅಧ್ಯಕ್ಷ ಈ.ಚಂದ್ರಣ್ಣ, ಆಂಜನೇಯಸ್ವಾಮಿ ದೇವಸ್ಥಾನ ಅಧ್ಯಕ್ಷ ಎಸ್‌.ರಾಜ್‌ ಕುಮಾರ್‌, ವೇದಾಂತ ಮೈನಿಂಗ್‌ ನಿವೃತ್ತ ಅಧಿಕಾರಿ ಚಂದ್ರಕಾಂತ್‌ ಎಸ್‌.ಪಾಟೀಲ್‌, ಪ್ರಭಾಕರ್ ಇದ್ದರು.

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು

ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್‌ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.

» Chitradurga News gmail

chitradurganews23@gmail.com

» Whatsapp Number

Share This Article
Leave a Comment

Leave a Reply

Your email address will not be published. Required fields are marked *

Exit mobile version