CHITRADURGA NEWS | 28 SEPTEMBER 2024
ಚಿತ್ರದುರ್ಗ: ದುರ್ಗಾಧಿಪ ಹಿಂದೂ ಮಹಾಗಣಪತಿಯ ಅದ್ದೂರಿ ಮೆರವಣಿಗೆ ನಗರದ ಮುಖ್ಯ ರಸ್ತೆಯಲ್ಲಿ ಸಾಗುತ್ತಿದೆ.
ಬೆಳಗ್ಗೆ 11 ಗಂಟೆಗೆ ಗಣಪತಿ ಮಂಟಪದಿಂದ ಹೊರಬಂದ ಗಣೇಶ, 12 ಗಂಟೆಗೆ ಶೋಭಾಯಾತ್ರೆಗೆ ಚಾಲನೆ ಪಡೆದುಕೊಂಡು ಡಿಜೆಗಳ ಅಬ್ಬರದ ನಡುವೆ ಗಾಂಭೀರ್ಯದಿಂದ ಸಾಗುತ್ತಿದೆ.

ಹಿಂದೂ ಮಹಾ ಗಣಪತಿ ವಿಸರ್ಜನಾ ಮೆರವಣಿಗೆ ಪ್ರಾರಂಭವಾಗಿ ಬರೋಬ್ಬರಿ 8 ತಾಸು ಕಳೆದಿದ್ದು, ಸದ್ಯ ಗಣಪ ಗಾಂಧಿ ವೃತ್ತ ದಾಟಿ, ಹೊಳಲ್ಕೆರೆ ರಸ್ತೆಯ ಸಂಗೊಳ್ಳಿ ರಾಯಣ್ಣ ವೃತ್ತ ದಾಟಿ ಚಂದ್ರವಳ್ಳಿ ಕಡೆ ಸಾಗುತ್ತಿದ್ದಾನೆ.
ಇದನ್ನೂ ಓದಿ: ಶೋಭಾಯಾತ್ರೆಯಲ್ಲಿ ನಟರ, ಫ್ಯಾನ್ಸ್ಗಳ ಅಬ್ಬರ | ರಾರಾಜಿಸುತ್ತಿವೆ ಕೇಸರಿ ಭಾವುಟ
ಕನಕ ವೃತ್ತದ ಬಳಿ ಸಣ್ಣ ಕಾರ್ಯಕ್ರಮದ ನಂತರ ಪೊಲೀಸರಿಗೆ ಧನ್ಯವಾದ ತಿಳಿಸಿ, ಅಲ್ಲಿಂದ ಚಂದ್ರವಳ್ಳಿಗೆ ಸಾಗಿ 10 ಗಂಟೆ ವೇಳೆಗೆ ವಿಸರ್ಜನೆಯಾಗುವ ಲೆಕ್ಕಾಚಾರವಿದೆ.
ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದವಿಲ್ಲದಂತೆ ದುರ್ಗದ ಜನತೆ ಭಕ್ತಿ ಮೆರೆದಿದ್ದಾರೆ. ಪೊಲೀಸರು ಅವಿರತ ಶ್ರಮಿಸುವ ಮೂಲಕ ಗಣಪನ ಮೆರವಣಿಗೆಯ ಸಂತೋಷ ಹೆಚ್ಚಿಸುತ್ತಿದ್ದಾರೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail
chitradurganews23@gmail.com
» Whatsapp Number
