CHITRADURGA NEWS | 11 APRIL 2025
ಚಿತ್ರದರ್ಗ: ಜಿಲ್ಲೆಗೆ ಮತ್ತೆ ಭರ್ಜರಿ ಮಳೆಯಾಗಿದ್ದು, ಹಿರಿಯೂರು ತಾಲೂಕಿನಲ್ಲಿ ಅಪಾರ ಪ್ರಮಾಣದ ಹಾನಿಯಾಗಿದೆ.
ಶುಕ್ರವಾರ ಮಧ್ಯಾಹ್ನವೇ ಹಿರಿಯೂರು ತಾಲೂಕಿನ ಹಲವೆಡೆ ಭಾರೀ ಗಾಳಿ, ಮಳೆಯಾಗಿದ್ದು ಜವನಗೊಂಡನಹಳ್ಳಿ ಹೋಬಳಿಯಲ್ಲಿ ಹಾನಿಯಾಗಿದೆ.
ಇದನ್ನೂ ಓದಿ: ದ್ವಿತೀಯ ಪಿಯುಸಿ ರಿಸಲ್ಟ್ | ಇವರೇ ನೋಡಿ ಜಿಲ್ಲೆಯ ಟಾಪರ್ಸ್ | ಜಿಲ್ಲೆಗೆ ಶೇ.59.87 ಫಲಿತಾಂಶ
ಹೊಸದುರ್ಗ ತಾಲೂಕಿನ ಹಲವು ಗ್ರಾಮಗಳಲ್ಲಿಯೂ ಸಂಜೆ ಮಳೆ ಪ್ರಾರಂಭವಾಗಿದೆ. ಚಿತ್ರದುರ್ಗ ನಗರದಲ್ಲೂ ಇನ್ನೇನು ಮಳೆ ಪ್ರಾರಂಭವಾಗುವ ವಾತಾವರಣ ಇದೆ. ಗುಡುಗು, ಮಿಂಚು ಜೋರಾಗಿದೆ.
750 ಅಡಿಕೆ ಮರಗಳು ಧರೆಗೆ:
ಹಿರಿಯೂರು ತಾಲೂಕಿನ ಮೂಡಲಹಟ್ಟಿ ಗ್ರಾಮದಲ್ಲಿ ಐದು ಮನೆಗಳಿಗೆ ಗಾಳಿ ಮಳೆಯಿಂದ ಹಾನಿಯಾಗಿದೆ, ಶಾಲಾ ಕಟ್ಟಡದ ಮೇಲೆ ಮರ ಬಿದ್ದು ತೊಂದರೆಯಾಗಿದೆ.
ಇದನ್ನೂ ಓದಿ: ಚಲಿಸುತ್ತಿದ್ದ ಕಾರಿಗೆ ಬೆಂಕಿ | ಪ್ರಾಣಾಪಾದಿಂದ ಪಾರಾದ ಕುಟುಂಬ
ಇಲ್ಲಿನ ಮರಡಿಹಟ್ಟಿ ಗ್ರಾಮದಲ್ಲೂ ಒಂದು ಮನೆ ಹಾಗೂ ನಾಲ್ಕು ವಿದ್ಯುತ್ ಕಂಬಗಳು ನೆಲಕ್ಕೆ ಬಿದ್ದಿವೆ.
ಗ್ರಾಮದ ಓದೋ ಮಾರಪ್ಪ ಎಂಬುವವರ ತೋಟದಲ್ಲಿ ನಾಲ್ಕು ತೆಂಗಿನ ಮರಗಳು ಉರುಳಿ ಬಿದ್ದಿವೆ.
ಮೂಡಲಹಟ್ಟಿ ಗ್ರಾಮದ ರೈತರ ತೋಟಗಳಲ್ಲಿ ಅಂದಾಜು ೭೫೦ ಅಡಿಕೆ ಮರಗಳು ಮುರಿದು ಹಾನಿಯಾಗಿದೆ.
ಇದನ್ನೂ ಓದಿ: ಅಪಘಾತವೆಂದು ಆಸ್ಪತ್ರೆಗೆ ದಾಖಲಿಸಿದ್ದವನೇ ಅಂದರ್ | ತಿರುವು ಪಡೆದುಕೊಂಡ ಆಕ್ಸಿಡೆಂಟ್ ಕೇಸ್
ಬಿ.ಕೆ.ಹಟ್ಟಿ ಗ್ರಾಮದಲ್ಲಿ ಮರ ಬಿದ್ದು ಹಸು ಮೃತಪಟ್ಟಿದೆ. ಈ ಎಲ್ಲಾ ಗ್ರಾಮಗಳಿಗೆ ಹಿರಿಯೂರು ತಹಶೀಲ್ದಾರ್ ಸಿ.ರಾಜೇಶ್ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail
chitradurganews23@gmail.com
» Whatsapp Number