ಅನ್ನದಾತರ ಶ್ರಮದಾನ | ಸ್ವಚ್ಛವಾಯಿತು ಕಾಲುವೆ ನಳನಳಿಸಿದ ಜಲಧಾರೆ

CHITRADURGA NEWS | 19 MARCH 2024
ಚಿತ್ರದುರ್ಗ: ಅನ್ನದಾತರು ಮನಸ್ಸು ಮಾಡಿದರೆ ಅಸಾಧ್ಯವನ್ನು ಸಾಧ್ಯವಾಗಿಸುತ್ತಾರೆ ಎಂಬುದಕ್ಕೆ ಬಯಲು ಸೀಮೆ ರೈತರ ಕಾರ್ಯ ಸ್ಪಷ್ಟ ನಿದರ್ಶನವಾಗಿದೆ. ತ್ಯಾಜ್ಯ ತುಂಬಿದ್ದ ಕಾಲುವೆಯನ್ನು ಸ್ವಚ್ಛಗೊಳಿಸಿ ಸರಾಗವಾಗಿ ನೀರು ಹರಿಯುವಂತೆ ಮಾಡಿದ್ದಾರೆ ಚಳ್ಳಕೆರೆ ತಾಲ್ಲೂಕಿನ ಪರಶುರಾಂಪುರ ರೈತರು.

ಸತತ 11 ದಿನಗಳ ಶ್ರಮದಾನದಿಂದ ನಾರಾಯಣಪುರ ಬಲದಂಡೆ ಕಾಲುವೆಗೆ ವಾಣಿ ವಿಲಾಸ ಸಾಗರದ ನೀರು ಹರಿದಿದೆ. ಬರದ ಸಂಕಷ್ಟದಲ್ಲಿ ಕೃಷಿಕ ಸಮುದಾಯದಲ್ಲಿ ಮಂದಹಾಸ ಮೂಡಿದೆ. ಕಾಲುವೆಯಲ್ಲಿ ತುಂಬಿಕೊಂಡಿದ್ದ ಹೂಳನ್ನು ಸುತ್ತಲಿನ ಗ್ರಾಮಗಳ ರೈತರು, ಕೂಲಿ ಕಾರ್ಮಿಕರು ಸೇರಿ ಸ್ವಚ್ಛಗೊಳಿಸಿದ್ದಾರೆ.

ಹಿರಿಯೂರು ತಾಲ್ಲೂಕು ಅಚ್ಚುಕಟ್ಟು ಪ್ರದೇಶಕ್ಕೆ ವಾಣಿವಿಲಾಸ ಸಾಗರದ ನೀರನ್ನು ಹರಿಸಿರುವುದರಿಂದ ಹಿರಿಯೂರು ತಾಲ್ಲೂಕಿನ ಶಿಡ್ಲಯ್ಯನಕೋಟೆ ಬಳಿಯ ಬ್ಯಾರೇಜ್ ತುಂಬಿದೆ. ಅಲ್ಲಿಂದ ನಾರಾಯಣಪುರ ಬಲದಂಡೆ ಕಾಲುವೆ ಆರಂಭವಾಗುತ್ತದೆ. ಆದರೆ ಕಾಲುವೆಯಲ್ಲಿ ಹೂಳು, ತ್ಯಾಜ್ಯ ತುಂಬಿದ್ದ ಕಾರಣ ನೀರು ಮುಂದಕ್ಕೆ ಹರಿಯುವುದು ಕಷ್ಟವಾಗಿತ್ತು.

ಕ್ಲಿಕ್ ಮಾಡಿ ಓದಿ: https://chitradurganews.com/he-move-of-the-bjp-congress-leaders-raised-curiosity/

ಈ ವೇಳೆ ರೈತರು ಹೂಳೆತ್ತುವಂತೆ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದ್ದರು. ಆದರೆ, ಅನುದಾನ ಇಲ್ಲ ಎಂದು ತಿಳಿಸುವ ಮೂಲಕ ಅಧಿಕಾರಿಗಳು ಕೈಚೆಲ್ಲಿದ್ದರು. ನೀರು ಹರಿದರೆ ಹೋಬಳಿ ವ್ಯಾಪ್ತಿಯ ತಿಮ್ಮಣ್ಣನಾಯಕನ ಕೋಟೆ, ಗೋಸಿಕೆರೆ, ಚೌಳೂರು ಮತ್ತು ಪರಶುರಾಂಪುರದ ಹಳೆಕೆರೆ ಹಾಗೂ ಹೊಸಕೆರೆಗೆ ನೀರು ಬರಲಿದೆ. ಇಲ್ಲವಾದರೆ ಸುಮ್ಮನೆ ಸಮಸ್ಯೆ ಆಗುತ್ತದೆ ಎಂಬುದು ರೈತರಿಗೆ ಸ್ಪಷ್ಟವಾಗಿತ್ತು.

ಕ್ಲಿಕ್ ಮಾಡಿ ಓದಿ: https://chitradurganews.com/chitradurga-bjp-ticket-for-narayanaswamy

ಕೂಡಲೇ ತಿಮ್ಮಣ್ಣನಾಯಕನ ಕೋಟೆ, ದೊಡ್ಡಬೀರನಹಳ್ಳಿ, ಓಬಳಾಪುರ, ಗೋಸಿಕೆರೆ, ಹೊನ್ನಯ್ಯನರೊಪ್ಪ ಸೇರಿದಂತೆ ಸುತ್ತಲಿನ ರೈತರು ಸ್ವಯಂ ಪ್ರೇರಿತವಾಗಿ ಕಾಲುವೆಗೆ ಇಳಿದು ಸ್ವಚ್ಛತಾ ಕಾರ್ಯಕ್ಕೆ ಮುನ್ನಡಿ ಬರೆದರು.

ದೊಡ್ಡಬೀರನಹಳ್ಳಿಯ ರೈತರು ಜೆಸಿಬಿ ಯಂತ್ರ, ತಿಮ್ಮಣ್ಣನಾಯಕನ ಕೋಟೆಯ ರೈತರು ಹುಲ್ಲು ಕಟಾವು ಮಾಡುವ ಯಂತ್ರ, ಓಬಳಾಪುರ ಮತ್ತು ಹೊನ್ನಯ್ಯನರೊಪ್ಪದ ರೈತರು ಇತರ ಸಾಧನಗಳನ್ನು ನೀಡಿ ನಾಲೆ ಸ್ವಚ್ಛತೆಗೆ ಸಹಕರಿಸಿದ್ದರು. ಸಂಘಟಿತ ಕಾರ್ಯದ ಪ್ರತಿಫಲವಾಗಿ ಕಾಲುವೆಗೆ ನೀರು ಹರಿದು ತಿಮ್ಮಣ್ಣನಾಯಕನ ಕೋಟೆ ಕೆರೆಗೆ ನೀರು ಬಂದಿದೆ.

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು

ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್‌ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.

» Chitradurga News gmail

chitradurganews23@gmail.com

» Whatsapp Number

Share This Article
Leave a Comment

Leave a Reply

Your email address will not be published. Required fields are marked *

Exit mobile version