ಗ್ರಾಮೀಣ ಮಕ್ಕಳ ಪಾಲಿನ ಇಂಗ್ಲೀಷ್ ಗುರು | ಜಿಲ್ಲಾ ಮಟ್ಟದ ವಿಶೇಷ ಶಿಕ್ಷಕ ಪ್ರಶಸ್ತಿ ಪಡೆದ ಎಸ್.ಗುರುಮೂರ್ತಿ

ಚಿತ್ರದುರ್ಗ ನ್ಯೂಸ್.ಕಾಂ: ಗ್ರಾಮೀಣ ಮಕ್ಕಳಿಗೆ ಆಂಗ್ಲ ಭಾಷೆಯನ್ನು ಕನ್ನಡದಂತೆ ಸುಲಲಿತಗೊಳಿಸುವಲ್ಲಿ ಕಳೆದ 23 ವರ್ಷದಿಂದ ಯಶಸ್ಸು ಕಂಡಿದ್ದಾರೆ ಲಕ್ಷ್ಮೀಸಾಗರ ಸರ್ಕಾರಿ ಪ್ರೌಢಶಾಲೆಯ ಆಂಗ್ಲ ಭಾಷಾ ಸಹಶಿಕ್ಷಕ ಎಸ್.ಗುರುಮೂರ್ತಿ.

ಕ್ರಿಯಾಶೀಲತೆ, ನಿರಂತರ ಕಲಿಕೆಯಿಂದ ಮಾತ್ರ ಸಾಧನೆ ಸಾಧ್ಯ ಎಂಬ ತತ್ವವನ್ನು ಜೀವನದಲ್ಲಿ ಅಳವಡಿಸಿಕೊಂಡಿರುವ ಇವರು 2023–24 ನೇ ಸಾಲಿನ ಜಿಲ್ಲಾ ಮಟ್ಟದ ವಿಶೇಷ ಶಿಕ್ಷಕ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ಚಿತ್ರದುರ್ಗ ತಾಲ್ಲೂಕಿನ ದಂಡಿನಕರುಬರಹಟ್ಟಿಯಲ್ಲಿ 1970 ರ ಮೇ 20 ರಂದು ಜನಿಸಿದ ಇವರು ಬಾಲ್ಯವನ್ನು ಗ್ರಾಮೀಣ ಭಾಗದಲ್ಲೇ ಕಳೆದರು. ತಂದೆ ಶಿಕ್ಷಕರಾದ ಕಾರಣ ಅವರ ಜತೆಯಲ್ಲೇ ಪ್ರಾಥಮಿಕ, ಪ್ರೌಢಶಾಲೆ ಶಿಕ್ಷಣ ಪೂರ್ಣಗೊಳಿಸಿದರು. ಏಂಜಿನಿಯರಿಂಗ್ ಕ್ಷೇತ್ರದಲ್ಲಿ ಆಸಕ್ತಿ ಕಾರಣಕ್ಕೆ ಭದ್ರಾವತಿಯಲ್ಲಿ ಡಿಪ್ಲೊಮಾ ಇನ್ ಸಿವಿಲ್ ಓದಿದ್ದಾರೆ. ಬಳಿಕ ತಂದೆ ಆಸೆಯಂತೆ ವಿಜ್ಞಾನ ವಿಭಾಗದಲ್ಲಿ ಕಲಿತು ಟಿಎಸ್‍ಎಚ್ ಪೂರ್ಣಗೊಳಿಸಿ 1994 ರ ಆಗಸ್ಟ್ 8 ರಂದು ಸಹ ಶಿಕ್ಷಕರಾಗಿ ವೃತ್ತಿ ಜೀವನ ಪ್ರಾರಂಭಿಸಿದರು.

1995 ರಿಂದ 2005 ರವರೆಗೆ ಚಿತ್ರದುರ್ಗದ ಸಿ.ಕೆ.ಪುರ ಬಡಾವಣೆಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 10 ವರ್ಷ ವೃತ್ತಿ ಮಾಡಿದ ಇವರು 5 ವರ್ಷ ಚಿತ್ರದುರ್ಗದ ಉತ್ತರ ಕ್ಲಸ್ಟರ್‍ನಲ್ಲಿ ಸಿಆರ್‍ಪಿ ಆಗಿ ಸೇವೆ ಸಲ್ಲಿಸಿದ್ದಾರೆ. ವೃತ್ತಿ ನಡುವೆಯೇ ಬಿಎಡ್, ಎಂ.ಇಡಿ, ಪದವಿ, ಸ್ನಾತಕೋತ್ತರ ಪದವಿ, ಬೆಂಗಳೂರಿನ ರೀಜಿನಲ್ ಇನ್‍ಸ್ಟಿಟ್ಯೂಟ್ ಆಫ್ ಇಂಗ್ಲೀಷ್ ನಲ್ಲಿ ಡಿಪ್ಲೊಮಾ ಕಲಿತ ಕಾರಣ 2011ರಲ್ಲಿ ಪ್ರೌಢಶಾಲೆ ಶಿಕ್ಷಕರಾಗುವ ಮೂಲಕ ವೃತ್ತಿ ಜೀವನದಲ್ಲಿ ಮಹತ್ವದ ಬದಲಾವಣೆ ಕಾಣುತ್ತಾರೆ.
ಮಕ್ಕಳಿಗೆ ಇಂಗ್ಲೀಷ್ ಕಲಿಕೆಯನ್ನು ಬೋಧನೋಪಕರಣಗಳ ತಯಾರಿಕೆ ಮಾಡಿ ಸುಲಲಿತಗೊಳಿಸಿದ್ದಾರೆ.

ಇದನ್ನೂ ಓದಿ: ಹಳ್ಳಿಯಲ್ಲಿ ಹೈಟೆಕ್ ಶಾಲೆ: ಕಲಿಕಾ ಪರಿಸರ ನಿರ್ಮಿಸಿದ ಹೆಡ್ ಮಾಸ್ಟರ್

ಆಟದ ಮೂಲಕ ಪಾಠ, ಮನೆ ಮನೆ ಭೇಟಿ, ವಿಶೇಷ ತರಗತಿ, ಗುಂಪು ಅಧ್ಯಯನದ ಮೂಲಕ ಭಾಷೆಯ ಭಯವನ್ನು ಎಂಟನೇ ತರಗತಿ ಪ್ರಾರಂಭದಲ್ಲೇ ವಿದ್ಯಾರ್ಥಿಗಳಿಂದ ದೂರ ಮಾಡುತ್ತಿದ್ದಾರೆ. ಇದರ ಫಲವಾಗಿ ಲಕ್ಷ್ಮೀಸಾಗರ ಸರ್ಕಾರಿ ಪ್ರೌಢಶಾಲೆ 2012–13 ರಿಂದ 2022–23 ರವರೆಗೆ ಎಸ್‍ಎಸ್‍ಎಲ್‍ಸಿ ಫಲಿತಾಂಶದಲ್ಲಿ ಅತ್ಯುತ್ತಮ ಸಾಧನೆ ಮಾಡಿದೆ. ಮೂರು ವರ್ಷ ಶೇ 100 ರಷ್ಟು ಫಲಿತಾಂಶ ದಾಖಲಿಸಿರುವುದು ಹೆಮ್ಮೆಯ ಸಂಗತಿ.

ಆಂಗ್ಲ ಭಾಷೆ ಪ್ರೌಢಶಾಲೆ ಶಿಕ್ಷಕರ ಕ್ಲಬ್‍ನ ತಾಲ್ಲೂಕು ಅಧ್ಯಕ್ಷರಾಗಿರುವ ಎಸ್.ಗುರುಮೂರ್ತಿ, ಇಂಗ್ಲೀಷ್ ನಾಟಕ ರಚನೆ, ಸಂಪನ್ಮೂಲ ಚಟುವಟಿಕೆ ರಚನೆ, ವೃತ್ತಿ ಚರಿತ್ರೆ ಅಧ್ಯಯನ, ಹನಿಗವನ, ಗೀತ ಗಾಯನ, ನಾಟಕಾಭಿನಯ ಇವರ ಹವ್ಯಾಸಗಳಾಗಿವೆ.

ಗಣಿತ ಶಿಕ್ಷಕರಾದ ತಂದೆಯ ಆಸೆಯಂತೆ ನಿರಂತರ ಅಧ್ಯಯನದಿಂದ ವೃತ್ತಿ ಜೀವನದಲ್ಲಿ ಯಶಸ್ಸು ಕಂಡಿದ್ದಾರೆ. ಇವರ ಶ್ರಮದ ಫಲವಾಗಿ ಗ್ರಾಮೀಣ ಭಾಗದ ಮಕ್ಕಳು ಇಂಗ್ಲೀಷ್ ಅನ್ನು ಕನ್ನಡದಂತೆ ಕರಗತ ಮಾಡಿಕೊಂಡಿದ್ದಾರೆ. ಸರ್ಕಾರಿ ಸೇವೆಗೆ ಸೇರಿದ ಬಳಿಕ ಅಧ್ಯಯನಕ್ಕೆ ಪೂರ್ಣ ವಿರಾಮ ಹಾಕುವ ಯುವ ಸಮುದಾಯಕ್ಕೆ ಗುರುಮೂರ್ತಿ ಮಾದರಿಯಾಗಿದ್ದಾರೆ.

ತಂದೆ ಮಾತನ್ನು ಪಾಲಿಸಿದ ಕಾರಣ ಸಾಧನೆ ಸಾಧ್ಯವಾಗಿದೆ. ನಿರಂತರ ಅಧ್ಯಯನ, ಕ್ರಿಯಾಶೀಲತೆ ವ್ಯಕ್ತಿಯನ್ನು ಸದಾ ಕೈ ಹಿಡಿದು ನಡೆಸುತ್ತದೆ. ಗ್ರಾಮೀಣ ಮಕ್ಕಳ ಯಶಸ್ಸಿನಲ್ಲಿ ನೆಮ್ಮದಿ ಕಾಣುತ್ತಿದ್ದೇನೆ.
ಎಸ್.ಗುರುಮೂರ್ತಿ, ಸಹಶಿಕ್ಷಕರು.

(ಚಿತ್ರದುರ್ಗದ ಕ್ಷಣ ಕ್ಷಣದ ಮಾಹಿತಿಗಾಗಿ Facebook page follow ಮಾಡಿ  https://www.facebook.com/chitradurganews?mibextid=ZbWKwL)

(ಚಿತ್ರದುರ್ಗದ ಸಮಗ್ರ ಸುದ್ದಿಗಳಿಗಾಗಿ WhatsApp Group ಸೇರಿ.

 https://chat.whatsapp.com/EQUQpKalYFT1fVcJDTDjCk)

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು

ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್‌ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.

» Chitradurga News gmail

chitradurganews23@gmail.com

» Whatsapp Number

Share This Article
Leave a Comment

Leave a Reply

Your email address will not be published. Required fields are marked *

Exit mobile version