ಮುಖ್ಯ ಸುದ್ದಿ
ಪಿಎಲ್ ಡಿ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ಚುನಾವಣೆ | ಇಂದು ಎರೆಡು ನಾಮಪತ್ರ ಸಲ್ಲಿಕೆ
CHITRADURGA NEWS | 02 JANUARY 2025
ಚಿತ್ರದುರ್ಗ: ತಾಲ್ಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ದಿ ಬ್ಯಾಂಕ್ಗೆ ಜ.12 ರಂದು ನಿರ್ದೇಶಕರುಗಳ ಆಯ್ಕೆಗೆ ಚುನಾವಣೆ ನಡೆಯಲಿದೆ.
ಕ್ಲಿಕ್ ಮಾಡಿ ಓದಿ: ಮಕ್ಕಳ ಕಳ್ಳತನಕ್ಕೆ ಯತ್ನ | ಓಮಿನಿಯಲ್ಲಿ ಬಂದ ನಾಲ್ವರಿಂದ ಕೃತ್ಯ | ನಡು ದಾರಿಯಲ್ಲೇ ಮಕ್ಕಳನ್ನು ಬಿಟ್ಟು ಎಸ್ಕೇಪ್
ಇಂದು ಸಾಲಗಾರರಲ್ಲದೆ ಕ್ಷೇತ್ರದಿಂದ ಜಾಲಿಕಟ್ಟೆಯ ಸಿ.ರುದ್ರಪ್ಪ, ಸಾಲಗಾರರ ಕ್ಷೇತ್ರದಿಂದ ಎಂ.ಶಶಿಧರ್ ನಾಮಪತ್ರವನ್ನು ಸಲ್ಲಿಸಿದರು.
ಈ ಬ್ಯಾಂಕ್ನಲ್ಲಿ ಸಾಲಗಾರರ ಕ್ಷೇತ್ರದಿಂದ 14 ಜನರ ನಿರ್ದೆಶಕ ಸ್ಥಾನಕ್ಕೆ ಚುನಾವಣೆ ಘೋಷಣೆಯಾಗಿದ್ದು, ಇದರಲ್ಲಿ ಸಾಮಾನ್ಯ ಕ್ಷೇತ್ರದಲ್ಲಿ 07, ಪರಿಶಿಷ್ಟ ಜಾತಿ ಮೀಸಲು ಸ್ಥಾನಕ್ಕೆ 01, ಪರಿಶಿಷ್ಠ ಪಂಗಡದ ಮಿಸಲು ಸ್ಥಾನ 01ಕ್ಕೆ, ಮಹಿಳಾ ಮೀಸಲು ಸ್ಥಾನ 02, ಹಿಂದುಳಿದ ವರ್ಗ ಪ್ರವರ್ಗ ಎ ಮೀಸಲು ಸ್ಥಾನ 01ಕ್ಕೆ, ಹಿಂದುಳಿದ ವರ್ಗ ಪ್ರವರ್ಗ ಬಿ ಮೀಸಲು ಸ್ಥಾನ 01 ಕ್ಕೆ ಹಾಗೂ ಸಾಲಗಾರರಲ್ಲದ ಕ್ಷೇತ್ರಕ್ಕೆ 01 ಸ್ಥಾನಕ್ಕೆ ಚುನಾವಣೆ ನಡೆಯಲಿದೆ.
ಸಾಲಗಾರ ಕ್ಷೇತ್ರದಲ್ಲಿ ಕಸಬಾ ಹೋಬಳಿಯಲ್ಲಿ 05, ಭರಮಸಾಗರ ಹೋಬಳಿಯಲ್ಲಿ 03, ತುರುವನೂರು ಹೋಬಳಿ 03, ಹಿರೇಗುಂಟನೂರು ಹೋಬಳಿಯಲ್ಲಿ 02 ಹಾಗೂ ಸಾಲಗಾರರಲ್ಲದೆ ಕ್ಷೇತ್ರಕ್ಕೆ ಚಿತ್ರದುರ್ಗ ತಾಲ್ಲೂಕು ಪೂರ್ಣವಾಗಿದ್ದು ಇದಕ್ಕೆ 01 ಸ್ಥಾನವನ್ನು ನೀಡಲಾಗಿದೆ, ಇದಕ್ಕೆಲ್ಲಾ ಪೂರ್ಣವಾಗಿ 369 ಮತದಾರರಿದ್ದಾರೆ.
ಕ್ಲಿಕ್ ಮಾಡಿ ಓದಿ: ಪ್ಯಾಸೆಂಜರ್ ಆಟೋ ಪಲ್ಟಿ | 9 ಮಂದಿಗೆ ಗಾಯ
ಈ ಚುನಾವಣೆಗೆ ನಾಮಪತ್ರ ಸಲ್ಲಿಸುವ ಪ್ರಕ್ರಿಯೇ ಈಗಾಗಲೇ ಪ್ರಾರಂಭವಾಗಿದ್ದು, ಜ.4ರವರೆಗೆ ನಾಮಪತ್ರ ಸಲ್ಲಿಸಬಹುದಾಗಿದೆ.
ಜ.05 ರಂದು ನಾಮಪತ್ರಗಳ ಪರಿಶೀಲನೆ ಕಾರ್ಯ ನಡೆಯಲಿದ್ದು, ಜ.06 ನಾಮಪತ್ರ ಹಿಂಪಡೆಯಲು ಕೂನೆಯ ದಿನವಾಗಿದೆ. ಜ.8 ರಂದು ಮಾದರಿ ಮತ ಪತ್ರ ಪ್ರಕಟಣೆ, ಜ.12 ರಂದು ಬೆಳಿಗ್ಗ 9 ರಿಂದ ಸಂಜೆ 4ರವರೆಗೆ ಮತದಾನ ನಡೆಯಲಿದ್ದು ಚುನಾವಣೆ ಮುಗಿದ ನಂತರ ಮತಗಳ ಎಣಿಕೆ ಕಾರ್ಯ ನಡೆದು ಫಲಿತಾಂಶವನ್ನು ಘೋಷಿಸಲಾಗುವುದು.
ಈ ಸಂದರ್ಭದಲ್ಲಿ ಶಶಿಧರ್, ಶಿವಾನಂದ, ನಾಗರಾಜ್, ಲಿಂಗಬಸಪ್ಪ ಇದ್ದರು.