Bichchugatti Bharamanna Nayaka; ಜಯದೇವ ಶ್ರೀಗಳಿಗೆ ಬಿಚ್ಚುಗತ್ತಿ ಭರಮಣ್ಣನಾಯಕ ವಂಶಸ್ಥರಿಂದ ಭಕ್ತಿ ಸಮರ್ಪಣೆ

ಜಯದೇವ ಶ್ರೀಗಳಿಗೆ ಬಿಚ್ಚುಗತ್ತಿ ಭರಮಣ್ಣನಾಯಕ ವಂಶಸ್ಥರಿಂದ ಭಕ್ತಿ ಸಮರ್ಪಣೆ

CHITRADURGA NEWS | 13 OCTOBER 2024

ಚಿತ್ರದುರ್ಗ: ಜಯದೇವ ಜಗದ್ಗುರುಗಳ 150ನೇ ಜಯಂತ್ಯುತ್ಸವ ಹಾಗೂ ಶರಣಸಂಸ್ಕೃತಿ ಉತ್ಸವ ಅಂಗವಾಗಿ ಚಿನ್ಮೂಲಾದ್ರಿ ಮೇಲುದುರ್ಗದ ಶ್ರೀಮುರುಘಾಮಠದ ಆವರಣದಲ್ಲಿ ಬಿಚ್ಚುಗತ್ತಿ ಭರಮಣ್ಣನಾಯಕ(Bichchugatti Bharamanna Nayaka) ವೇದಿಕೆಯಲ್ಲಿ ಚಿತ್ರದುರ್ಗ ರಾಜವಂಶಸ್ಥರಾದ ಬಿ.ಎಸ್.ಮದಕರಿ ನಾಯಕ, ಪರಶುರಾಮನಾಯಕ, ಪ್ರಸನ್ನ ಕುಮಾರ್, ಶ್ರೀದೇವಿ ಪ್ರಸಾದ್ ಮತ್ತು ಪಿ.ಕಿರಣ್ ಕುಮಾರ್ ಇವರುಗಳಿಂದ ಶ್ರೀಗಳಿಗೆ ಭಕ್ತಿ ಸಮರ್ಪಣೆ ಮಾಡಲಾಯಿತು.

ಕ್ಲಿಕ್ ಮಾಡಿ ಓದಿ: Astrology; ದಿನ ಭವಿಷ್ಯ | 13 ಅಕ್ಟೋಬರ್ | ವೃತ್ತಿಪರ ಉದ್ಯೋಗದಲ್ಲಿ ಹೊಸ ಸ್ಥಾನಮಾನ, ಸ್ನೇಹಿತರಿಂದ ಉಡುಗೊರೆ, ಪ್ರಯಾಣದಲ್ಲಿ ಎಚ್ಚರ

ಕಾರ್ಯಕ್ರಮದಲ್ಲಿ ಕೊಲ್ಲಾಪುರ ಚಿತ್ರದುರ್ಗಮಠದ ಶ್ರೀ ಶಿವಾನಂದ ಸ್ವಾಮಿಗಳು ಮಾತನಾಡಿ, ಸಾಮಾನ್ಯ ಹುಡುಗನನ್ನು ರಾಜನಾಗಿ ಮಾಡುವ ಶಕ್ತಿ ಗುರುವಿಗೆ ಇತ್ತು ಎಂದು ತೋರಿಸಿದವರು ಮುರಿಗಿ ಶಾಂತವೀರಸ್ವಾಮಿಗಳು ಎಂದು ನುಡಿದರು.

ಗುರುಮಠಕಲ್ ಶ್ರೀ ಶಾಂತವೀರಸ್ವಾಮಿಗಳು ಮಾತನಾಡಿ, ಅಲ್ಲಮಪ್ರಭು ಸ್ಥಾಪಿಸಿದ ಶೂನ್ಯಪೀಠ ಶ್ರೀ ಮುರುಘಾ ಮಠಕ್ಕೆ ತನ್ನದೇ ಆದ ಚಾರಿತ್ರಿಕ ಪರಂಪರೆಯಿದೆ. ಗುರುಗಳಿಗೆ ಭರಮಣ್ಣನಾಯಕ ವಂಶಸ್ಥರು ಭಕ್ತ ಸಮರ್ಪಣೆ ಮಾಡುವುದು ವಿಶೇಷವಾಗಿದೆ. ಬಿಚ್ಚು ಭರಮಣ್ಣನಾಯಕರು ನಿತ್ಯವು ಗುರುಗಳ ಪೂಜೆ ವ್ಯವಸ್ಥೆಯನ್ನು ಮಾಡಲು 365 ಅಂಕಣಗಳ ಮಠವನ್ನು ಕಟ್ಟಿಸಿಕೊಡುತ್ತಾರೆ. ಅದೇ ಮೇಲು ದುರ್ಗದ ಮೂಲ ಮಠವಾಗಿದೆ ಎಂದು ತಿಳಿಸಿದರು.

ಎಸ್.ಜೆ.ಎಂ.ವಿದ್ಯಾಪೀಠದ ಆಡಳಿತಮಂಡಳಿ ಸದಸ್ಯರಾದ ಎಸ್.ಎನ್. ಚಂದ್ರಶೇಖರ್ ಮಾತನಾಡಿ, ಇಂತಹ ಆಧುನಿಕ ನಾಗರಿಕ ಜಗತ್ತಿನಲ್ಲಿ ಇಂದಿಗೂ ಗುರು ಪರಂಪರೆ ಮುಂದುವೆರೆದುಕೊಂಡು ಬಂದಿರುವುದು ಸ್ವಾಗತಾರ್ಹ. ಈ ಪರಂಪರೆಯು ಹೀಗೆ ಮುಂದುವರೆಯಲಿ ಎಂದು ತಿಳಿಸಿದರು.

ಕ್ಲಿಕ್ ಮಾಡಿ ಓದಿ: Folk art fair; ಮುರುಘಾ ಮಠದಿಂದ ಅದ್ದೂರಿ ಜಾನಪದ ಕಲಾಮೇಳ | ರಾಜಬೀದಿಯಲ್ಲಿ ಸಾಗಿದ ಶರಣರು

ಬಿಚ್ಚು ಭರಮಣ್ಣನಾಯಕರ ವಂಶಸ್ಥರು ಶ್ರೀ ಜಯದೇವ ಮುರುಘರಾಜೇಂದ್ರ ಸ್ವಾಮಿಗಳ ಬೆಳ್ಳಿ ವಿಗ್ರಹಕ್ಕೆ ಭಕ್ತಿ ಸಮರ್ಪಣೆ ಮಾಡಿದರು.

ಭಕ್ತಿ ಸಮರ್ಪಣೆ ಮಾಡಿ ಮಾತನಾಡಿದ ರಾಜವಂಶಸ್ಥ ಪ್ರಸನ್ನಕುಮಾರ್, ಗುರುಮನೆ ಹಾಗೂ ಅರಮನೆ ಇರವಂತ ಪಾರಂಪರಿಕ ನಡೆಯನ್ನು ಈ ಭಕ್ತಿ ಸಮರ್ಪಣೆ ತಿಳಿಸಿಕೊಡುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್.ಜೆ.ಎಂ.ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯರಾದ ಡಾ. ಶ್ರೀ. ಬಸವಕುಮಾರ ಸ್ವಾಮಿಗಳು, ಶ್ರೀ ಮಾದಾರ ಚೆನ್ನಯ್ಯ ಸ್ವಾಮಿಗಳು, ಡಾ.ಬಸವಪ್ರಭು ಸ್ವಾಮಿಗಳು, ಡಾ,ಬಸವ ರಮಾನಂದಸ್ವಾಮಿಗಳು, ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು, ರಾವಂದೂರಿನ ಶ್ರೀ ಮೋಕ್ಷಪತಿ ಸ್ವಾಮಿಗಳು, ಶ್ರೀ ಸಿದ್ದಬಸವ ಸ್ವಾಮಿಗಳು, ರಾಜವಂಶಸ್ಥರಾದ ಬಿ.ಎಸ್.ಮದಕರಿ ನಾಯಕ, ಪರಶುರಾಮನಾಯಕ, ಪಿ.ಕಿರಣ್ ಕುಮಾರ್, ಹರಚರ ಗುರುಮೂರ್ತಿಗಳು ಉಪಸ್ಥಿತರಿದ್ದರು.

ಕ್ಲಿಕ್ ಮಾಡಿ ಓದಿ: Murugha math; ಸಮಾಜಮುಖಿಯಾಗಿ ಆಲೋಚಿಸಿದವರು ಜಯದೇವ ಶ್ರೀಗಳು | ಡಾ.ವೀರಭದ್ರ ಚನ್ನಮಲ್ಲ ಸ್ವಾಮೀಜಿ

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು

ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್‌ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.

» Chitradurga News gmail

chitradurganews23@gmail.com

» Whatsapp Number

Share This Article
Leave a Comment

Leave a Reply

Your email address will not be published. Required fields are marked *

Exit mobile version