CHITRADURGA NEWS | 24 JUNE 2024
ಈಗಾಗಲೇ ಇರುವ ಶ್ರೀ ಲಕ್ಷ್ಮೀನರಸಿಂಹಸ್ವಾಮಿಯ ರಥವು ಸುಮಾರು 200 ವರ್ಷಗಳಷ್ಟು ಹಳೆಯದಾಗಿದ್ದು, ಕೆಲ ಭಾಗ ಶಿಥಿಲವಾಗಿತ್ತು. ಈ ಹಿನ್ನೆಲೆಯಲ್ಲಿ ಭಕ್ತರು ಹಾಗೂ ದೇವಸ್ಥಾನದ ಸಮಿತಿಯವರು ತಜ್ಞರನ್ನು ಕರೆಯಿಸಿ ದುರಸ್ಥಿ ಮಾಡಲು ಪರಿಶೀಲಿಸಲು ಸೂಚಿಸಿದ್ದರು.
ಹೊಳಲ್ಕೆರೆ: ಸಾಕ್ಷಾತ್ ತಿರುಪತಿ ತಿಮ್ಮಪ್ಪನೇ ಶ್ರೀ ಲಕ್ಷ್ಮೀನರಸಿಂಹಸ್ವಾಮಿಯಾಗಿ ನೆಲೆ ನಿಂತಿದ್ದಾರೆ ಎಂಬ ನಂಬಿಕೆ ಹೊಂದಿರುವ ಹೊಳಲ್ಕೆರೆ ತಾಲೂಕು ಹೊರಕೆರೆದೇವರಪುರ(ಎಚ್.ಡಿ.ಪುರ) ದೇವಸ್ಥಾನಕ್ಕೆ ಹೊಸ ರಥ ನಿರ್ಮಾಣ ಮಾಡಲು ದೇವಸ್ಥಾನ ಸಮಿತಿ ಹಾಗೂ ಭಕ್ತರು ತೀರ್ಮಾನಿಸಿದ್ದಾರೆ.
ಇದನ್ನೂ ಓದಿ: ಲೋಕಾಯುಕ್ತರು ಬರುತ್ತಿದ್ದಾರೆ | ಅಹವಾಲುಗಳಿದ್ದರೆ ಸಲ್ಲಿಸಿ
ಶ್ರೀ ಲಕ್ಷ್ಮೀನರಸಿಂಹಸ್ವಾಮಿಯ ಬ್ರಹ್ಮ ರಥೋತ್ಸವ ನಾಡಿಗೆಲ್ಲಾ ಪ್ರಸಿದ್ದಿ. ಸ್ವಾಮಿಯ ಈ ಬ್ರಹ್ಮ ರಥೋತ್ಸವಕ್ಕೆ ಹೊಸ ರಥ ನಿರ್ಮಾಣಕ್ಕೆ ಸೋಮವಾರ ನಡೆದ ಭಕ್ತರು, ವಿವಿಧ ಗ್ರಾಮಗಳ ಮುಖಂಡರ ಸಭೆಯಲ್ಲಿ ನಿರ್ಧರಿಸಲಾಗಿದೆ.
ಹೊಸ ರಥ ನಿರ್ಮಾಣಕ್ಕೆ ತಜ್ಞರ ಸಲಹೆ:
ಈಗಾಗಲೇ ಇರುವ ಶ್ರೀ ಲಕ್ಷ್ಮೀನರಸಿಂಹಸ್ವಾಮಿಯ ರಥವು ಸುಮಾರು 200 ವರ್ಷಗಳಷ್ಟು ಹಳೆಯದಾಗಿದ್ದು, ಕೆಲ ಭಾಗ ಶಿಥಿಲವಾಗಿತ್ತು. ಈ ಹಿನ್ನೆಲೆಯಲ್ಲಿ ಭಕ್ತರು ಹಾಗೂ ದೇವಸ್ಥಾನದ ಸಮಿತಿಯವರು ತಜ್ಞರನ್ನು ಕರೆಯಿಸಿ ದುರಸ್ಥಿ ಮಾಡಲು ಪರಿಶೀಲಿಸಲು ಸೂಚಿಸಿದ್ದರು.
ಇದನ್ನೂ ಓದಿ: ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಯತ್ನ ಬಿಜೆಪಿ ಕಾರ್ಯಕರ್ತರ ಬಂಧನ | ತುರ್ತು ಪರಿಸ್ಥಿತಿ ಕರಾಳ ದಿನಾಚರಣೆ ವೇಳೆ ಘಟನೆ
ಪರಿಶೀಲಿಸಿದ ನಂತರ, ತಜ್ಞರು ರಥ ಬಹಳ ಹಳೆಯದಾಗಿದ್ದು ದುರಸ್ಥಿಗಿಂತ ಹೊಸದಾಗಿ ಮಾಡಿಸುವುದು ಒಳ್ಳೆಯದು ಎಂದು ಸಲಹೆ ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನ ಸಮಿತಿ, ಎಸ್ಎಲ್ಎನ್ ಟ್ರಸ್ಟ್, ಹೆಚ್.ಡಿ.ಪುರ ಗ್ರಾಮಸ್ಥರು, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು, ಮತ್ತಿಘಟ್ಟ, ನೆಲ್ಲಿಕಟ್ಟೆ, ಕಸವನಹಳ್ಳಿ, ರಾಮೇನಹಳ್ಳಿ, ಪಂಪಾಪುರ ಗ್ರಾಮದ ಮುಖಂಡರು ಸೋಮವಾರ ದೇವಸ್ಥಾನದಲ್ಲಿ ಸಭೆ ಸೇರಿ ನೂತನ ರಥ ನಿರ್ಮಾಣ ಮಾಡಲು ಸಂಕಲ್ಪ ಮಾಡಿದ್ದಾರೆ.
ಇದನ್ನೂ ಓದಿ: ಅಡಿಕೆ ಹರಳು ಉದುರುವ, ಹೊಂಬಾಳೆ ಒಣಗುವ ಸಮಸ್ಯೆ ತೀವ್ರ | ರೈತರು ಕೈಗೊಳ್ಳಬಹುದಾದ ಪರಿಹಾರವೇನು ?
ಇದಕ್ಕೆ ಸಂಬಂಧಿಸಿದಂತೆ ಮುಜರಾಯಿ ಇಲಾಖೆಯಿಂದ ಧನಸಹಾಯ ಪಡೆಯಲು ಹೊಳಲ್ಕೆರೆ ತಹಶೀಲ್ದಾರ್ ಮೂಲಕ ಮನವಿ ಸಲ್ಲಿಸಲು ಅಭಿಪ್ರಾಯ ಪಡೆಯಲಾಗಿದೆ. ಹೆಚ್ಚು ಹಣ ಬೇಕಾದಲ್ಲಿ ಭಕ್ತರಿಂದ ದೇಣಿಗೆ ಪಡೆಯಲು ಸಮಿತಿ ನಿರ್ಧರಿಸಿದೆ. ಸಮಿತಿಯ ಜವಾಬ್ದಾರಿಯನ್ನು ಮತ್ತಿಘಟ್ಟ ಗ್ರಾಮಸ್ಥರಿಗೆ ವಹಿಸಲಾಗಿದೆ.
ಸಭೆಯಲ್ಲಿ ಎಸ್ಎಲ್ಎನ್ ಟ್ರಸ್ಟ್ ಅಧ್ಯಕ್ಷ ಎಚ್.ಡಿ.ರಂಗಯ್ಯ, ಗ್ರಾಪಂ ಅಧ್ಯಕ್ಷ ದಿವಾಕರ್, ಟ್ರಸ್ಟ್ ಕಾರ್ಯದರ್ಶಿ ಜಿ.ಎನ್.ಶೇಷಾದ್ರಿ, ದೇವಸ್ಥಾನ ಉಸ್ತುವಾರಿ ಸಮಿತಿಯ ದೇವರಾಜ್, ಮತ್ತಿಘಟ್ಟದ ಸಿ.ಜಯಣ್ಣ, ಎಪಿಎಂಸಿ ಮಾಜಿ ಅಧ್ಯಕ್ಷ ನಾಗಲಿಂಗಪ್ಪ, ಮುಖಂಡರಾದ ಎಂ.ಮಹೇಶ್ವರಪ್ಪ, ಸತೀಶ್, ವಿವೇಕ್, ನೆಲ್ಲಿಕಟ್ಟೆ ಚಂದ್ರಪ್ಪ, ರಾಮೇನಹಳ್ಳಿ ಯುಧಿಷ್ಠಿರ, ಪ್ರಕಾಶ್, ಕಸವನಹಳ್ಳಿ ಹಾಲೇಶಪ್ಪ, ಎಚ್.ಡಿ.ಪುರದ ಮಲ್ಲಿಕಾರ್ಜುನ್, ಪ್ರಕಾಶ್, ಪಿ.ಎಲ್.ಸತ್ಯನಾರಾಯಣ, ಬಡಗಿ ನಟರಾಜು, ಎಚ್.ವಿ.ರಂಗನಾಥ್, ರಮೇಶ್, ಎಂ.ಆರ್.ಹೊರಕೆರಂಗಯ್ಯ, ಬಿ.ಎನ್.ರವೀಂದ್ರ, ಗೌಡರಕೃಷ್ಣಪ್ಪ, ಎಲೆ ರಾಜಪ್ಪ, ಆನಂದ ಹೊನ್ನೆನಹಳ್ಳಿ, ನಾಗರಾಜ, ಮುರುಗೇಂದ್ರಪ್ಪ, ಗೊಲ್ಲರಹಟ್ಟಿ ಜಯಣ್ಣ, ರಂಗಸ್ವಾಮಿ ಸಭೆಯಲ್ಲಿದ್ದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail
chitradurganews23@gmail.com
» Whatsapp Number