ಮುಖ್ಯ ಸುದ್ದಿ
ಚಂದ್ರವಳ್ಳಿ ಬಳಿ ನರ್ತಕಿಯ ಶಿಲೆ ಪತ್ತೆ | ಮುರುಘಾಶ್ರೀ ಮ್ಯೂಸಿಯಂಗೆ ಹಸ್ತಾಂತರ

CHITRADURGA NEWS | 15 MARCH 2025
ಚಿತ್ರದುರ್ಗ: ಕೋಟೆನಾಡಿನ ಇತಿಹಾಸ ಪ್ರಸಿದ್ಧವಾದ ಚಂದ್ರವಳ್ಳಿಯ ಕೆರೆಯ ಪರಿಸರದಲ್ಲಿ ನರ್ತಕಿಯ ಶಿಲೆ ಪತ್ತೆಯಾಗಿದೆ.
Also Read: ನಾಳೆ ವಿದ್ಯುತ್ ವ್ಯತ್ಯಯ | ಬೆಳಿಗ್ಗೆ 10 ರಿಂದ ಸಂಜೆ 5ರ ವರೆಗೆ ಕರೆಂಟ್ ಇರಲ್ಲ..
ನಿವೃತ್ತ ಎಂಜಿನಿಯರ್ ಚಂದ್ರಶೇಖರಪ್ಪ ಗುಂಡೇರಿ ಅವರು ವಾಯುವಿಹಾರಕ್ಕಾಗಿ ಚಂದ್ರವಳ್ಳಿ ಪ್ರದೇಶಕ್ಕೆ ಹೋದಾಗ ಒಡ್ಡಿನ ಬಳಿ ಮನುಷ್ಯ ಸಂಚಾರವಿಲ್ಲದ ಜಾಗದಲ್ಲಿ, ರೂಢಿಯಂತೆ ಇವರು ಅಲ್ಲಿ ಬಿದ್ದಿದ್ದ ಅನಪೇಕ್ಷಿತ ವಸ್ತುಗಳನ್ನು ತೆಗೆದು ಆ ಜಾಗವನ್ನು ಸ್ವಚ್ಛಗೊಳಿಸುತ್ತಿದ್ದಾಗ ಪ್ರತಿಮೆ ದೊರಕಿದೆ.
ಪ್ರತಿಮೆ ಬಗ್ಗೆ ಶಾಸನ ಸಂಶೋಧಕ ಡಾ.ಬಿ.ರಾಜಶೇಖರಪ್ಪ ಅವರ ಗಮನಕ್ಕೆ ತಂದಾಗ ಅದನ್ನು ಅವರು ಪರಿಶೀಲಿಸಿ ಅದು ವಿಜಯನಗರ ಕಾಲದ ಒಂದು ಅಪರೂಪದ ಪ್ರತಿಮೆ ಎಂದು ಗುರುತಿಸಿ ಮುರುಘಾ ಶ್ರೀ ವಸ್ತು ಸಂಗ್ರಹಾಲಯಕ್ಕೆ ಹಸ್ತಾಂತರ ಮಾಡಿದ್ದಾರೆ.
ಮೂಲತಃ ಈ ಪ್ರತಿಮೆ ಎಲ್ಲಿಯದು ಎಂದು ತಿಳಿಯದು. ನರ್ತಕಿಯ ಪ್ರತಿಮೆ ಎನ್ನಬಹುದಾದ ಇದು ಬಹಳ ಸುಂದರವಾಗಿದೆ. ಎಡಗೈ ಭಗ್ನವಾಗಿದ್ದು, ಆ ಭಗ್ನವಾದ ಕೈ ಅದರ ಜೊತೆಯಲ್ಲಿ ಲಭ್ಯವಾಗಿದ್ದು ಅದನ್ನು ಮುಂದೆ ಜೋಡಿಸಬಹುದು ಎಂದು ಮುರುಘಾ ಶ್ರೀ ವಸ್ತು ಸಂಗ್ರಹಾಲಯ ಅಧಿಕಾರಿ ಶಂಕರ ಅಥಣಿಯವರು ತಿಳಿಸಿದ್ದಾರೆ.
Also Read: ಮುಂದಿನ ಮುಖ್ಯಮಂತ್ರಿ ಸತೀಶ್ ಜಾರಕಿಹೊಳಿ..!!?
ಈ ಸ್ತುತ್ಯ ಕಾರ್ಯಕ್ಕಾಗಿ ಶ್ರೀ ಮಠ ಹಾಗೂ ವಿದ್ಯಾಪೀಠದ ಆಡಳಿತ ಮಂಡಳಿ ಅಧ್ಯಕ್ಷರಾದ ಶಿವಯೋಗಿ ಸಿ. ಕಳಸದ, ಸದಸ್ಯರಾದ ಡಾ.ಬಸವಕುಮಾರ ಸ್ವಾಮಿಗಳು, ಡಾ.ಪಿ.ಎಸ್. ಶಂಕರ್, ಎಸ್.ಎನ್. ಚಂದ್ರಶೇಖರ್ ಅವರುಗಳು ಈ ಕಾರ್ಯದಲ್ಲಿ ಭಾಗಿಯಾದ ಎಲ್ಲರನ್ನು ಮತ್ತು ವಿಶೇಷವಾಗಿ ಚಂದ್ರಶೇಖರಪ್ಪ ಗುಂಡೇರಿ ಅವರನ್ನು ಅಭಿನಂದಿಸಿದ್ದಾರೆ.
