ಯಡಿಯೂರಪ್ಪ ಮೇಲಿನ ವಿಶ್ವಾಸ ಅಚಲ | ತಂದೆಯ ಸ್ಥಾನದಲ್ಲಿ ನಿಂತು ನ್ಯಾಯ ಕೊಡುವ ವಿಶ್ವಾಸವಿದೆ | ಎಂ.ಸಿ.ರಘುಚಂದನ್

ಎಂ.ಸಿ.ರಘುಚಂದನ್

CHITRADURGA NEWS | 31 MARCH 2024

ಚಿತ್ರದುರ್ಗ: ಬಿಜೆಪಿ ಮುಖಂಡರಾದ ಎನ್.ರವಿಕುಮಾರ್ ಅವರ ಬಳಿ ನಮ್ಮ ನೋವು, ನಮ್ಮ ಪರಿಸ್ಥಿತಿ, ಇಂತಹ ನಿರ್ಧಾರಕ್ಕೆ ಬರಲು ಕಾರಣವನ್ನು ಹೇಳಿದ್ದೇವೆ. ನಾವು ಹೇಳಿದ್ದರಲ್ಲಿ ನಿಜ ಇದೆ ಎಂದು ಅವರಿಗೂ ಅನ್ನಿಸಿದೆ ಎಂದು ಬಿಜೆಪಿ ಟಿಕೇಟ್ ಆಕಾಂಕ್ಷಿಯಾಗಿದ್ದ ಎಂ.ಸಿ.ರಘುಚಂದನ್ ಹೇಳಿದರು.

ಸಂಜೆ 7.30ಕ್ಕೆ ಎಂಎಲ್ಸಿ ಎನ್.ರವಿಕುಮಾರ್ ಪೋನ್ ಮಾಡಿದ್ದರು. ಮನೆಗೆ ಊಟಕ್ಕೆ ಆಗಮಿಸಿದರು, ನಾನು ಆಹ್ವಾನಿಸಿದೆ. ಊಟ ಮಾಡಿ ಎಲ್ಲ ವಿಚಾರಗಳನ್ನು ಮಾತನಾಡಿದೆವು. ದುರ್ಗಕ್ಕೆ ಯಾವಾಗ ಬಂದರೂ ನಮ್ಮ ಮನೆಗೆ ಬಂದು ಹೋಗುತ್ತಾರೆ.

ಇದನ್ನೂ ಓದಿ: ರಘುಚಂದನ್ ಮನವೊಲಿಕೆಗೆ ಬಿಜೆಪಿ ಯತ್ನ | ತಡರಾತ್ರಿವರೆಗೆ ಮಾತುಕತೆ | ಶಾಸಕ ಚಂದ್ರಪ್ಪ ಮನೆಗೆ ಎನ್.ರವಿಕುಮಾರ್ ಭೇಟಿ

ರವಿಕುಮಾರ್ ಬಂದ ಸಂದರ್ಭಧಲ್ಲಿ ನಮ್ಮ ತಂದೆ ಚಳ್ಳಕೆರೆ ಭಾಗಕ್ಕೆ ಪ್ರವಾಸ ಹೋಗಿದ್ದರು. ನಾಮಪತ್ರ ಸಲ್ಲಿಕೆಗೆ ಜನ ಸೇರಿಸಲು ನಾಯಕರ ಭೇಟಿಗೆ ತೆರಳಿದ್ದರು. ಅವರು ಬಂದ ಕಾರಣಕ್ಕೆ ಎಲ್ಲಿಯೂ ಹೋಗಿಲ್ಲ. ಇದು ಸತ್ಯ ಎಂದರು.

ಏಪ್ರಿಲ್ 3 ರಂದು ನಾಮಪತ್ರ ಸಲ್ಲಿಸುವುದಾಗಿ ತಿಳಿಸಿದ್ದೇವೆ. ಎಲ್ಲ ಭಾಗದ ಮುಖಂಡರ ಜೊತೆಗೆ ಚರ್ಚೆ ಮಾಡುತ್ತಿದ್ದೇವೆ.

ಇದನ್ನೂ ಓದಿ: ಬೀದಿಗೆ ಬಿದ್ದ ಹಾಲಿ-ಮಾಜಿ ಶಾಸಕರ ವಾಕ್ಸಮರ | ಶಾಸಕ ಎಂ.ಚಂದ್ರಪ್ಪ ವಿರುದ್ಧ ತಿಪ್ಪಾರೆಡ್ಡಿ ವಾಗ್ದಾಳಿ | ಚಂದ್ರಪ್ಪ ಆರೋಪಗಳಿಗೆ ಠಕ್ಕರ್

ಸ್ಥಳೀಯವಾಗಿ ಅಭ್ಯರ್ಥಿಗಳಿದ್ದರೂ 550 ಕಿ.ಮೀ ದುರದಿಂದ ಅಭ್ಯರ್ಥಿ ಕರೆತರುವ ಅಗತ್ಯ ಇತ್ತಾ ಎಂದು ಹೇಳಿದ್ದೇವೆ. ರವಿಕುಮಾರ್ ಪಕ್ಷದ ಚೌಕಟ್ಟಿನಲ್ಲಿ ಮಾತನಾಡಿದ್ದಾರೆ.

ಗೋವಿಂದ ಕಾರಜೋಳ ಸಾಹೇಬರನ್ನು ಕರೆತರುವ ಪರಿಸ್ಥಿತಿಯನ್ನು ಅವರು ಹೇಳಿದರು. ಆದರೆ, ಅವರ ಉತ್ತರ ಸಮಂಜಸ ಅನ್ನಿಸಲಿಲ್ಲ. ಹಾಗಾಗಿ ನಮ್ಮ ತೀರ್ಮಾನ ಹೇಳಿದ್ದೇವೆ.

ಇದನ್ನೂ ಓದಿ: ಬಿಜೆಪಿ ಅಭ್ಯರ್ಥಿ ವಿರುದ್ಧ ಪ್ರತಿಭಟಿಸಿದವರ ಮೇಲೆ ಎಫ್‍ಐಆರ್ | ಕಪ್ಪು ಭಾವುಟ ಪ್ರದರ್ಶನ, ಮೊಟ್ಟೆ ಎಸೆಯಲು ನಡೆದಿತ್ತಾ ಪ್ಲಾನ್ !

ಯಡಿಯೂರಪ್ಪ ನಮ್ಮ ತಂದೆ ಸಮಾನ ಅವರು ಮನೆಗೆ ಬರಲಿ ಬಿಡಿ ಸರ್ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ರಘುಚಂದನ್, ಅವರು ಕಾಲಲ್ಲಿ ತೋರಿಸಿದ್ದನ್ನು ನಾವು ತಲೆ ಮೇಲೆ ಹೊತ್ತು ಕೆಲಸ ಮಾಡಿದ್ದೇವೆ.

ಯಾರು ಏನೇ ಹೇಳಿದರೂ, ಎಂತಹ ಪರಿಸ್ಥಿತಿ ಬಂದರೂ, ಎಂಥದ್ದೇ ರಾಜಕೀಯ ಬದಲಾವಣೆ ಆದರೂ ಕೂಡಾ ಯಡಿಯೂರಪ್ಪ ಸಾಹೇಬರ ಮೇಲೆ ನಮಗಿರುವ ಗೌರವ ಅಚಲ.

ಇದನ್ನೂ ಓದಿ: ಬೈದವರನ್ನು ಬಂಧು ಎನ್ನಿ…ಯಾರನ್ನೂ ಏನೂ ಅನ್ನಬೇಡಿ | ಗೋವಿಂದ ಎಂ.ಕಾರಜೋಳ

ಯಡಿಯೂರಪ್ಪ ತಂದೆ ಸಮಾನ. ತಂದೆಯಿಂದ ಅನ್ಯಾಯ ಆಗಿದೆ ಎಂದು ಹೇಳಿದ್ದೇವೆ. ತಂದೆ ಎಂದು ಒತ್ತಿ ಒತ್ತಿ ಹೇಳಿದ್ದೇವೆ. ತಂದೆಯಾದವರು ಮಗನ ಕಷ್ಟ ಏನು ಎಂದು ಕೇಳಿದಾಗ ನಮ್ಮ ಪರಿಸ್ಥಿತಿ ಹೀಗಿದೆ ಎಂದು ಹೇಳುತ್ತೇವೆ. ತಂದೆಯಾದವರಿಗೆ ಎಲ್ಲ ಮಕ್ಕಳು ಒಂದೇ ಅಲ್ಲವೇ, ಹಾಗಾಗಿ ನ್ಯಾಯ ಕೊಡುತ್ತಾರೆ ಎನ್ನುವ ನಂಬಿಕೆ ಇದೆ ಎಂದು ರಘುಚಂದನ್ ಬಿ.ಎಸ್.ಯಡಿಯೂರಪ್ಪ ಕುರಿತು ಸುದ್ದಿಗಾರರ ಪ್ರಶ್ನೆಳಿಗೆ ಪ್ರತಿಕ್ರಿಯಿಸಿದರು.

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು

ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್‌ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.

» Chitradurga News gmail

chitradurganews23@gmail.com

» Whatsapp Number

Share This Article
Leave a Comment

Leave a Reply

Your email address will not be published. Required fields are marked *

Exit mobile version