ಮುಖ್ಯ ಸುದ್ದಿ
ವಿವಿ ಸಾಗರಕ್ಕೆ ಬಾಗೀನ ಅರ್ಪಿಸಿದ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ
CHITRADURGA NEWS | 23 JANUARY 2025
ಚಿತ್ರದುರ್ಗ: ಮಧ್ಯ ಕರ್ನಾಟಕದ ಜಲಪಾತ್ರೆ ಎಂದೇ ಹೆಸರಾಗಿರುವ ಮೈಸೂರು ಮಹಾರಾಜರ ಕೊಡುಗೆಯಾಗಿರುವ ವಾಣಿವಿಲಾಸ ಸಾಗರ ಜಲಾಶಯ ಮೂರನೇ ಬಾರಿಗೆ ಭರ್ತಿಯಾಗಿ ಕೋಡಿ ಬಿದ್ದಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಂದು ಬಾಗೀನ ಅರ್ಪಿಸಿದರು.
ಇದನ್ನೂ ಓದಿ:ಮೈಸೂರು ಮಹಾರಾಜರಿಂದ ವಾಣಿವಿಲಾಸ ಸಾಗರಕ್ಕೆ ಬಾಗೀನ ಅರ್ಪಣೆ
ಹಿರಿಯೂರು ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಡಿ.ಸುಧಾಕರ್, ಶಾಸಕರಾದ ಟಿ.ರಘುಮೂರ್ತಿ, ಕೆ.ಸಿ.ವೀರೇಂದ್ರ(ಪಪ್ಪಿ), ಎನ್.ವೈ.ಗೋಪಾಲಕೃಷ್ಣ, ಮಾಜಿ ಸಚಿವ ಎಚ್.ಆಂಜನೇಯ ಸೇರಿದಂತೆ ಅನೇಕ ಕಾಂಗ್ರೆಸ್ ಮುಖಂಡರು ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಬಾಗೀನ ಅರ್ಪಣೆ ಹಿನ್ನೆಲೆಯಲ್ಲಿ ಜಲಾಶಯಕ್ಕೆ ಬೆಳಕಿನಿಂದ ವಿಶೇಷ ಅಲಂಕಾರ ಮಾಡಲಾಗಿತ್ತು.
ಜನವರಿಯಲ್ಲಿ ಕೋಡಿ ಬಿದ್ದು ಹೊಸ ದಾಖಲೆ:
ವಾಣಿವಿಲಾಸ ಸಾಗರ ಜಲಾಶಯ ನಿರ್ಮಾಣವಾದ 118 ವರ್ಷಗಳ ಇತಿಹಾಸದಲ್ಲಿ ಮೂರನೇ ಬಾರಿಗೆ ಕೋಡಿ ಬೀದ್ದಿದೆ. ವಿಶೇಷವೆಂದರೆ ಮಳೆಯೇ ಇಲ್ಲದ ಜನವರಿ ತಿಂಗಳಲ್ಲಿ ಜಲಾಶಯ ಕೋಡಿ ಬಿದ್ದಿರುವುದು. ಭದ್ರಾ ಜಲಾಶಯದಿಂದ ಪ್ರತಿ ದಿನ ನೀರು ಹರಿಸಿದ ಪರಿಣಾಮ ಈ ಸಂದರ್ಭದಲ್ಲಿ ಜಲಾಶಯ ಭರ್ತಿಯಾಗಿದೆ.
ಇದನ್ನೂ ಓದಿ: ಮಲ್ಲಾಪುರ ಕೆರೆ ನಿರ್ಲಕ್ಷ್ಯ | ಸುಮೋಟೊ ಕೇಸ್ | ಉಪಲೋಕಾಯುಕ್ತ ಕೆ.ಎನ್.ಫಣೀಂದ್ರ
1907 ರಲ್ಲಿ ನಿರ್ಮಾಣವಾದ ಜಲಾಶಯ 1933 ರಲ್ಲಿ 133.25 ಅಡಿವೆರೆಗೆ ನೀರು ಬಂದು ಕೋಡಿ ಬಿದ್ದಿತ್ತು. ಆನಂತರ ಜಲಾಶಯ ಕೋಡಿ ಬಿದ್ದಿದ್ದನ್ನು ಈ ತಲೆಮಾರು ನೋಡಿಯೇ ಇರಲಿಲ್ಲ. 1933 ರಲ್ಲಿ ಕೋಟಿ ಬಿದ್ದಿತ್ತು ಎನ್ನುವ ದಾಖಲೆ ಇತ್ತೇ ಹೊರತು, ಕೋಡಿ ಬಿದ್ದಾಗ ಜಲಾಶಯದ ವೈಭವ ಹೇಗಿರುತ್ತೆ, ಎಲ್ಲಿ ನೀರು ಹರಿಯುತ್ತದೆ ಎನ್ನುವ ಕಲ್ಪನೆಯೇ ಇರಲಿಲ್ಲ.
ಆದರೆ, ಭಾರೀ ಮಳೆ ಹಾಗೂ ಭದ್ರಾ ಜಲಾಶಯದಿಂದ ಅಪಾರ ಪ್ರಮಾಣದಲ್ಲಿ ನೀರು ಹರಿಸಿದ್ದ ಕಾರಣಕ್ಕೆ 2022 ಸೆಪ್ಟಂಬರ್ ತಿಂಗಳಲ್ಲಿ ವಿವಿ ಸಾಗರ ಜಲಾಶಯ ಕೋಡಿ ಬಿದ್ದಿತ್ತು.
ಇದನ್ನೂ ಓದಿ: ಮಲ್ಲಾಪುರ ಕೆರೆ ನಿರ್ಲಕ್ಷ್ಯ | ಸುಮೋಟೊ ಕೇಸ್ | ಉಪಲೋಕಾಯುಕ್ತ ಕೆ.ಎನ್.ಫಣೀಂದ್ರ
ಈ ವೇಳೆ ಮಳೆ ಹೆಚ್ಚಾದ ಪರಿಣಾಮ ಸತತ ಮೂರು ತಿಂಗಳ ಕಾಲ ಕೋಡಿ ಮೂಲಕ ಭಾರೀ ಪ್ರಮಾಣದಲ್ಲಿ ನೀರು ಹರಿದು, ಜಲಾಶಯದಿಂದ ಮುಂಭಾಗದ ವೇದಾವತಿ ನದಿಗೆ ಜೀವಕಳೆ ಬಂದಿತ್ತು. ಸಾಕಷ್ಟು ನೀರು ಆಂಧ್ರಪ್ರದೇಶದ ಪಾಲಾಗಿತ್ತು.
ಬಾಗೀನ ಅರ್ಪಿಸಿದ 2ನೇ ಸಿಎಂ ಸಿದ್ದರಾಮಯ್ಯ:
ಜಲಾಶಯ ನಿರ್ಮಾಣವಾದ ಇತಿಹಾಸದಲ್ಲಿ ಮೂರನೇ ಬಾರಿಗೆ ಕೋಡಿ ಬೀಳುತ್ತಿದ್ದು, ಮೊದಲನೆ ಸಲ ತುಂಬಿದಾಗ ಯಾರು ಬಾಗೀನ ಅರ್ಪಿಸಿದ್ದರು ಗೊತ್ತಿಲ್ಲ. ಆದರೆ, 2022 ರಲ್ಲಿ ಜಲಾಶಯ ಭರ್ತಿಯಾದಾಗ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿ ಜಲಾಶಯಕ್ಕೆ ಬಾಗೀನ ಅರ್ಪಣೆ ಮಾಡಿದ್ದರು. ಮುಖ್ಯಮಂತ್ರಿಯೊಬ್ಬರು ಜಲಾಶಯಕ್ಕೆ ಬಾಗೀನ ಅರ್ಪಣೆ ಮಾಡಿದ್ದು, ಇದೇ ಮೊದಲಾಗಿತ್ತು.
ಇದನ್ನೂ ಓದಿ: ಬಿಜೆಪಿಗೆ ನೂತನ ಮಂಡಲ ಅಧ್ಯಕ್ಷರ ಆಯ್ಕೆ
ಈಗ ಮೂರನೇ ಸಲ ಕೋಡಿ ಬಿದ್ದಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಂದ ಜಲಾಶಯಕ್ಕೆ ಬಾಗೀನ ಅರ್ಪಿಸಿರುವುದು ಇತಿಹಾಸವಾಗಲಿದೆ.
MLC ಶ್ರೀನಿವಾಸ್, ನಿಗಮ ಮಂಡಳಿ ಅಧ್ಯಕ್ಷ ಮಂಜುನಾಥ್ , ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತಾಜ್ ಪೀರ್, ಜಿಪಂ ಮಾಜಿ ಅಧ್ಯಕ್ಷೆ ಶಶಿಕಲಾ, ಮಾಜಿ ಸದಸ್ಯ ನಾಗೇಂದ್ರ ನಾಯ್ಕ್ ಇತರರಿದ್ದರು.