By using this site, you agree to the Privacy Policy and Terms of Use.
Accept
Chitradurga News-Kannada NewsChitradurga News-Kannada NewsChitradurga News-Kannada News
Notification
Font ResizerAa
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Reading: TEACHERS: ಊರ ತುಂಬಾ ಲೈಟಿಂಗ್ಸ್, ಬಂಟಿಂಗ್ಸ್ | ಶಾಲೆ ಶಿಕ್ಷಕರ ಕಟೌಟು | ಗಡಿಭಾಗದ ಶಾಲೆಯಲ್ಲಿ ಜಾತ್ರೆಯ ಸಂಭ್ರಮ
Share
Font ResizerAa
Chitradurga News-Kannada NewsChitradurga News-Kannada News
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Search
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Follow US
© 2022 Foxiz News Network. Ruby Design Company. All Rights Reserved.

Home » TEACHERS: ಊರ ತುಂಬಾ ಲೈಟಿಂಗ್ಸ್, ಬಂಟಿಂಗ್ಸ್ | ಶಾಲೆ ಶಿಕ್ಷಕರ ಕಟೌಟು | ಗಡಿಭಾಗದ ಶಾಲೆಯಲ್ಲಿ ಜಾತ್ರೆಯ ಸಂಭ್ರಮ

ಮೊಳಕಾಳ್ಮೂರು

TEACHERS: ಊರ ತುಂಬಾ ಲೈಟಿಂಗ್ಸ್, ಬಂಟಿಂಗ್ಸ್ | ಶಾಲೆ ಶಿಕ್ಷಕರ ಕಟೌಟು | ಗಡಿಭಾಗದ ಶಾಲೆಯಲ್ಲಿ ಜಾತ್ರೆಯ ಸಂಭ್ರಮ

chitradurganews.com
Last updated: 6 November 2024 13:24
chitradurganews.com
8 months ago
Share
Guruvandana program
ಗುರುವಂದನ.
SHARE
https://chat.whatsapp.com/Jhg5KALiCFpDwME3sTUl7x

CHITRADURGA NEWS | 06 NOVEMBER 2024

ಮೊಳಕಾಲ್ಮೂರು: ಜಾತ್ರೆಗಾದರೂ ಒಂಚೂರು ಕಡಿಮೆ ಅಲಂಕಾರ ಮಾಡಬಹುದೇನೊ ಎನ್ನುವಷ್ಟು ಲೈಟಿಂಗ್ಸ್, ಬಂಟಿಂಗ್ಸ್. ಚುನಾವಣೆಗಾದರೂ ಕಟೌಟ್ ಹಾಕಲು ನಿರ್ಬಂಧವಿದೆ. ಆದರೆ, ಇಲ್ಲಿ ಮಾತ್ರ ಆಳೆತ್ತರದ ಕಟೌಟ್‍ಗಳು ರಾರಾಜಿಸುತ್ತಿದ್ದವು.

ಇಷ್ಟೆಲ್ಲಾ ಅದ್ದೂರಿ, ವೈಭವಕ್ಕೆ ಕಾರಣವಾದ ಕಾರ್ಯಕ್ರಮ ಗುರುವಂದನ. ಅರೇ ಇದೇನಿದು, ಗುರುವಂದನೆಗೆ ಇಷ್ಟೆಲ್ಲಾ ಖರ್ಚು ಮಾಡುತ್ತಾರಾ ಎನ್ನಬಹುದು. ಆದರೆ, ಇಲ್ಲಿನ ಹಳೇ ವಿದ್ಯಾರ್ಥಿಗಳು ಜಾತ್ರೆಯನ್ನೇ ಮಾಡಿದ್ದಾರೆ.

ಇದನ್ನೂ ಓದಿ: ಚಳ್ಳಕೆರೆಯಲ್ಲಿ ಅಕ್ರಮ ಗಾಂಜಾ ಜಪ್ತಿ | ಅಂದಾಜು 3 ಲಕ್ಷ ಮೌಲ್ಯದ ಗಾಂಜಾ ಇದ್ದ ಮನೆ ಮೇಲೆ ಅಬಕಾರಿ ದಾಳಿ

ಕರ್ನಾಟಕದ ಗಡಿ ಗ್ರಾಮ, ಆಂಧ್ರಪ್ರದೇಶಕ್ಕೆ ಹೊಂದಿಕೊಂಡಿರುವ ಮೊಳಕಾಲ್ಮೂರು ತಾಲೂಕಿನ ಉಡೇವು ಗ್ರಾಮದ ಸರ್ಕಾರಿ ಶಾಲೆಯಲ್ಲಿ ನಡೆದ ಕಾರ್ಯಕ್ರಮ ಈ ಅದೂರಿತನಕ್ಕೆ ಸಾಕ್ಷಿಯಾಗಿತ್ತು.

ಒಂದು ಕಾಲಕ್ಕೆ ಈ ಗ್ರಾಮಕ್ಕೆ (TEACHERS)ಶಿಕ್ಷಕರು ಬರಲು ಹಿಂದೇಟು ಹಾಕುತ್ತಿದ್ದರು. ಆದರೆ, ಈಗ ಉಡೇವು ಸರ್ಕಾರಿ ಶಾಲೆ ಹಚ್ಚ ಹಸುರಿನಿಂದ ನಳನಳಿಸುತ್ತಿದೆ. ಈ ಶಾಲೆಯ ಉನ್ನತೀಕರಣಕ್ಕೆ ಗ್ರಾಮದ ರೈತರು ಶೇಂಗಾ ಬೆಳೆಯಿಂದ ಬಂದ ಹಣವನ್ನು 1990 ರಲ್ಲಿ ದೇಣಿಗೆಯಾಗಿ ನೀಡಿದ ಉದಾಹರಣೆಯಿದೆ.

ಇದನ್ನೂ ಓದಿ: ದಿನ ಭವಿಷ್ಯ | ನವೆಂಬರ್ 06 | ಈ ರಾಶಿಯವರಿಗೆ ಆದಾಯ ಸಾಕಾಗುವುದಿಲ್ಲ

ಇಂತಹ ವಿಶೇಷ ಹಿನ್ನೆಲೆಯಿರುವ ಉಡೇವು ಸರ್ಕಾರಿ ಶಾಲೆಯಲ್ಲಿ ಸದ್ಯ 140 ಮಕ್ಕಳು ಕಲಿಯುತ್ತಿದ್ದಾರೆ. ಈ ಶಾಲೆಯಲ್ಲಿ 1955 ರಿಂದ 2017ರವರೆಗೆ ಅಧ್ಯಯನ ನಡೆಸಿದ ಹಿರಿಯ ವಿದ್ಯಾರ್ಥಿಗಳೆಲ್ಲಾ ಸೇರಿ ಕಳೆದ ಭಾನುವಾರ ಗುರುವಂದನಾ ಕಾರ್ಯಕ್ರಮ ಆಯೋಜಿಸಿದ್ದರು.

ಗುರುವಂದನಾ ಕಾರ್ಯಕ್ರಮಕ್ಕಾಗಿ ಗ್ರಾಮದ ತುಂಬೆಲ್ಲಾ ಲೈಟಿಂಗ್ಸ್ ಮಾಡಲಾಗಿತ್ತು. ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಜೊತೆಗಿರುವ ಆಳೆತ್ತರದ ಕಟೌಟ್‍ಗಳು ರಾರಾಜಿಸಿದವು.

ಇದನ್ನೂ ಓದಿ: ಅಡಿಕೆ ಧಾರಣೆ | ರಾಜ್ಯದ ಯಾವ ಮಾರುಕಟ್ಟೆಯಲ್ಲಿ ಎಷ್ಟು ರೇಟ್

ಈ ಶಾಲೆಯಲ್ಲಿ ಅಧ್ಯಯನ ನಡೆಸಿ ಇಂದು ಬೇರೆ ಬೇರೆ ಸ್ಥರಗಳಲ್ಲಿ, ಬೇರೆ ಬೇರೆ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಾಧಕರು ಆಗಮಿಸಿದ್ದರು.

ಶಾಲೆಯ ಹಿರಿಯ ಹಾಗೂ ಹಾಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರನ್ನು ಟ್ರ್ಯಾಕ್ಟರ್‍ನಲ್ಲಿ ಕೂರಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದಾಗ ಶಿಕ್ಷಕರಿಗೆ ಸಾರ್ಥಕತೆಯ ಭಾವನೆ ಮೂಡಿತ್ತು.

ಇದನ್ನೂ ಓದಿ: ಚಿತ್ರದುರ್ಗ-ದಾವಣಗೆರೆ ಎರಡನೇ ರಾಜಧಾನಿಯಾಗಲಿ | ಬಸವಪ್ರಭು ಸ್ವಾಮೀಜಿ

ಈ ಶಾಲೆಯಲ್ಲಿ ಕಾರ್ಯನಿರ್ವಹಿಸುರುವ ಶಿಕ್ಷಕರನ್ನು ಸನ್ಮಾನಿಸಿ, ಗೌರವಿಸಲಾಯಿತು. ಒಂದು ಸಾವಿರಕ್ಕೂ ಹೆಚ್ಚು ಹಳೆಯ ವಿದ್ಯಾರ್ಥಿಗಳು ಈ ಅಭೂತಪೂರ್ವ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

ಈ ಕಾರ್ಯಕ್ರಮವನ್ನು ಶಿಕ್ಷಕರಾದ ಶಿವಣ್ಣ ನಿರ್ವಹಣೆ ಮಾಡಿದರೆ, ಎಚ್.ಗೌಡಪ್ಪ ಸ್ವಾಗತಿಸಿದರು.

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು

ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್‌ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.

» Chitradurga News gmail

chitradurganews23@gmail.com

» Whatsapp Number

TAGGED:AlumniChitradurgaChitradurga newsChitradurga UpdatesGovernment SchoolGuruvandaneKannada NewsMolakalmuruTeachersTribute to AchieversUdevuಉಡೇವುಕನ್ನಡ ಸುದ್ದಿಗುರುವಂದನೆಚಿತ್ರದುರ್ಗಚಿತ್ರದುರ್ಗ ಅಪ್ಡೇಟ್ಸ್ಚಿತ್ರದುರ್ಗ ನ್ಯೂಸ್ಮೊಳಕಾಲ್ಮೂರುಸರ್ಕಾರಿ ಶಾಲೆಸಾಧಕರಿಗೆ ಸನ್ಮಾನಹಳೆಯ ವಿದ್ಯಾರ್ಥಿಗಳು
Share This Article
Facebook Email Print
Previous Article Ganja seized: ಚಳ್ಳಕೆರೆಯಲ್ಲಿ ಅಕ್ರಮ ಗಾಂಜಾ ಜಪ್ತಿ | ಅಂದಾಜು 3 ಲಕ್ಷ ಮೌಲ್ಯದ ಗಾಂಜಾ ಇದ್ದ ಮನೆ ಮೇಲೆ ಅಬಕಾರಿ ದಾಳಿ
Next Article CHITRADURGA APMC: ಮಾರುಕಟ್ಟೆ ಧಾರಣೆ | ಇಂದಿನ ಮೆಕ್ಕೆಜೋಳ, ಶೇಂಗಾ, ಸೂರ್ಯಕಾಂತಿ ರೇಟ್ 
Leave a Comment

Leave a Reply Cancel reply

Your email address will not be published. Required fields are marked *

today bhavishya
Astrology: ದಿನ ಭವಿಷ್ಯ | ಜೂನ್ 29 | ಆಕಸ್ಮಿಕ ಧನ ವ್ಯಯದ ಸೂಚನೆ, ಆಸ್ತಿ ವಿಷಯಗಳಲ್ಲಿ ವಿವಾದಗಳು
Dina Bhavishya
ಸೋಲು ಗೆಲುವಿಗಿಂತ ಚುನಾವಣೆಯಲ್ಲಿ ಸ್ಪರ್ಧಿಸುವುದು ಮುಖ್ಯ | ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಮಂಜುನಾಥ್‍ ಗೌಡ
ಮುಖ್ಯ ಸುದ್ದಿ
Sadguru Pradeep participate hosadurga bandh
ಹೊಸದುರ್ಗ ಬಂದ್‌ | ಇಂದು ಅಂತ್ಯವಲ್ಲ, ಆರಂಭ | ಸದ್ಗುರು ಪ್ರದೀಪ್‌
ಹೊಸದುರ್ಗ
ಹೊಸದುರ್ಗ ಸ್ಥಿತಿ ಸಮುದ್ರದ ನೆಂಟಸ್ಥನ, ಉಪ್ಪಿಗೆ ಬರ | ಕೆ.ಎಸ್.ನವೀನ್
ಹೊಸದುರ್ಗ
© Chitradurga News. Ruby Design Company. All Rights Reserved.

Chitradurga News App

Install
Welcome Back!

Sign in to your account

Username or Email Address
Password

Lost your password?

Not a member? Sign Up