ಮಳೆ ಬಂದಾಗ ಈ ಆಸ್ಪತ್ರೆಯಲ್ಲಿ ಉಂಟು..ಕ್ಯಾಂಡಲ್‌ ಲೈಟ್‌ ಟ್ರೀಟ್‌ಮೆಂಟ್‌…!

ಮೊಳಕಾಲ್ಮುರಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಮೇಣದ ಬತ್ತಿ ಬೆಳಕಿನಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವುದು

CHITRADURGA NEWS | 21 MAY 2024
ಚಿತ್ರದುರ್ಗ: ಸಾಮಾನ್ಯವಾಗಿ ಕ್ಯಾಂಡಲ್‌ ಲೈಟ್‌ ಡಿನ್ನರ್‌ ಬಗ್ಗೆ ಎಲ್ಲರೂ ಹೇಳಿರುತ್ತಾರೆ..ಜತೆಗೆ ಮಂದ ಬೆಳಕಿನಲ್ಲಿ ಊಟದ ಸವಿಯನ್ನು ಸವಿದಿರುತ್ತಾರೆ. ಆದರೆ ಕ್ಯಾಂಡಲ್‌ ಲೈಟ್‌ ಟ್ರೀಟ್‌ಮೆಂಟ್‌ ಬಗ್ಗೆ ಎಲ್ಲಿಯಾದರೂ ಕೇಳಿದ್ದಿರಾ..ಇಲ್ಲವೇ ನೋಡಿದ್ದೀರಾ…ಆಗಿದ್ದರೆ ಈ ಸ್ಟೋರಿ ಓದಿ.

ಜಿಲ್ಲೆಯ ಮೊಳಕಾಲ್ಮುರು ಸಾರ್ವಜನಿಕ ತಾಲ್ಲೂಕು ಆಸ್ಪತ್ರೆಯಲ್ಲಿ ಮಳೆ ಬಂದರೆ ಸಾಕು ಕ್ಯಾಂಡಲ್‌ ಲೈಟ್‌ ಟ್ರೀಟ್‌ಮೆಂಟ್‌ ಶುರುವಾಗುತ್ತದೆ. ಆಸ್ಪತ್ರೆ ತುಂಬಾ ಮೇಣದ ಬತ್ತಿಗಳನ್ನು ಹಚ್ಚಿ ರೋಗಿಗಳಿಗೆ ಚಿಕಿತ್ಸೆ ನೀಡುವುದು ಇಲ್ಲಿನ ಸಿಬ್ಬಂದಿಗೆ ಮಾಮೂಲಿಯಾಗಿದೆ. ಇದರಿಂದಾಗಿ ಔಷಧ, ಮಾತ್ರೆ, ಸಿರೆಂಜ್‌ ನಷ್ಟೇ ಇಲ್ಲಿ ಕ್ಯಾಂಡಲ್‌ ಪ್ರಾಮುಖ್ಯತೆ ಪಡೆದಿದೆ.

ಮೊಳಕಾಲ್ಮುರಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಮೇಣದ ಬತ್ತಿ ಬೆಳಕಿನಲ್ಲಿ ರೋಗಿಗಳು

ಕಳೆದ ನಾಲ್ಕೈದು ದಿನದಿಂದ ಮಳೆ ಬರುತ್ತಿರುವುದರಿಂದ ವಿದ್ಯುತ್‌ ಕಡಿತವಾಗುತ್ತಿದೆ. ಆಸ್ಪತ್ರೆ ಜನರೇಟರ್‌ ಹಾಳಾಗಿರುವುದು ಸಮಸ್ಯೆಗೆ ಮೂಲ ಕಾರಣವಾಗಿದೆ. ಆಸ್ಪತ್ರೆಯಲ್ಲಿ ವಾರದಿಂದ ಮೇಣದ ಬತ್ತಿ ಬೆಳಕಿನಲ್ಲೇ ರೋಗಿಗಳಿಗೆ ಚಿಕಿತ್ಸೆ ನೀಡುವ ಪರಿಸ್ಥಿತಿ ಎದುರಾಗಿದೆ.

ಕ್ಲಿಕ್ ಮಾಡಿ ಓದಿ: ವಾಹನ ಸವಾರರೇ ಎಚ್ಚರ…ಕೊರಕಲು ಬಿದ್ದಿವೆ ರಸ್ತೆಗಳು | ಕ್ರಮಕ್ಕೆ ಸ್ಥಳೀಯರ ಒತ್ತಾಯ

ಮೇಣದ ಬತ್ತಿ ಬೆಳಕಿನಡಿ ವೈದ್ಯರು ಚಿಕಿತ್ಸೆ ನೀಡುತ್ತಿರುವುದು, ರೋಗಿಗಳು ಮೊಬೈಲ್‌ ಟಾರ್ಚ್‌ ಆನ್‌ ಮಾಡಿಕೊಂಡು ಚಿಕಿತ್ಸೆ ಪಡೆಯುತ್ತಿರುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ವಾರ್ಡ್‌ಗಳಲ್ಲಿ ದಾಖಲಾಗಿರುವ ರೋಗಿಗಳು ಹಾಗೂ ತುರ್ತು ಚಿಕಿತ್ಸಾ ವಿಭಾಗಕ್ಕೆ ದಾಖಲಾಗಿರುವವರ ಆರೈಕೆಗೆ ತೊಂದರೆಯಾಗುತ್ತಿದೆ. ಎಕ್ಸ್‌ರೇ ವಿಭಾಗದಲ್ಲೂ ಸಮಸ್ಯೆ ಎದುರಾಗಿದೆ ಎನ್ನುತ್ತಾರೆ ರೋಗಿಗಳು.

ಕ್ಲಿಕ್ ಮಾಡಿ ಓದಿ: ಕೋಟೆನಾಡಲ್ಲಿ ತಡರಾತ್ರಿ ಅಬ್ಬರಿಸಿದ ಮಳೆ | ಕೊಚ್ಚಿ ಹೋದ ರಸ್ತೆ ಕುಸಿದು ಬಿದ್ದ ಮನೆ

ಆಸ್ಪತ್ರೆಯಲ್ಲಿ ಅಳವಡಿಸಲಾಗಿರುವ ವೈರ್‌ಗಳು ಕೆಲವೆಡೆ ಹಾಳಾಗಿವೆ. ಹೀಗಾಗಿ ಒಂದೊಂದು ಕಡೆ ಸರಿಯಾಗಿ ವಿದ್ಯುತ್‌ ಸರಬರಾಜಾಗುತ್ತಿಲ್ಲ. ಜನರೇಟರ್‌ ಕೆಟ್ಟ ಹೋದ ಬಳಿಕ ಸಮಸ್ಯೆ ಮತ್ತಷ್ಟು ಬಿಗಡಾಯಿಸಿದೆ. ವಿದ್ಯುತ್‌ ಕಡಿತದ ಕಾರಣ ಫ್ಯಾನ್‌ಗಳು ತನ್ನ ಕಾರ್ಯ ನಿಲ್ಲಿಸಿವೆ.

ಮಳೆ ಪ್ರಾರಂಭವಾಗುತ್ತಿದ್ದಂತೆ ವಿದ್ಯುತ್‌ ಕಡಿತಗೊಳ್ಳುತ್ತಿದ್ದಂತೆ ಮೇಣದ ಬತ್ತಿ ಬೆಳಕಿನಲ್ಲಿ ಚಿಕಿತ್ಸೆ ನೀಡಲು ವೈದ್ಯರು ಪ್ರಾರಂಭಿಸುತ್ತಿದ್ದಾರೆ. ಆಸ್ಪತ್ರೆಯ ಜನರೇಟರ್‌ ದುರಸ್ತಿಯಲ್ಲಿದ್ದು, ರಿಪೇರಿ ಕಾರ್ಯಕ್ಕೆ ಕ್ರಮವಹಿಸದೆ ನಿರ್ಲಕ್ಷ್ಯವಹಿಸಿರುವುದರಿಂದ ರೋಗಿಗಳು ಸಮಸ್ಯೆಗೆ ಸಿಲುಕಿದ್ದಾರೆ.

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು

ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್‌ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.

» Chitradurga News gmail

chitradurganews23@gmail.com

» Whatsapp Number

Share This Article
Leave a Comment

Leave a Reply

Your email address will not be published. Required fields are marked *

Exit mobile version