ಮನೆ ಕಳ್ಳತನ, ಬೈಕ್ ಕಳ್ಳರ ಬಂಧಿಸಿದ ಭರಮಸಾಗರ ಪೊಲೀಸರು

ಕಳ್ಳರ ಬಂಧಿಸಿದ ಭರಮಸಾಗರ ಪೊಲೀಸರು

CHITRADURGA NEWS | 14 JANUARY 2025

ಚಿತ್ರದುರ್ಗ: ಭರಮಸಾಗರ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ವಿವಿಧ ಪೊಲೀಸ್ ಠಾಣೆಗಳಿಗೆ ಬೇಕಾಗಿದ್ದ ಕಳ್ಳರನ್ನು ಬಂಧಿಸಲಾಗಿದೆ.

ಬಂಧಿತರಿಂದ ಒಟ್ಟು 115 ಗ್ರಾಂ ತೂಕದ ಬಂಗಾರದ ಆಭರಣ ಹಾಗೂ 420 ಗ್ರಾಂ ತೂಕದ ಬೆಳ್ಳಿಯ ಆಭರಣಗಳು ಹಾಗೂ 4 ಬೈಕುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಇದನ್ನೂ ಓದಿ: ಅಡಿಕೆ ಧಾರಣೆ | ಇಂದಿನ ಅಡಿಕೆ ಮಾರುಕಟ್ಟೆಗಳ ನೋಟ

ಭರಮಸಾಗರ ಪೆÇಲೀಸ್ ಠಾಣೆಯಲ್ಲಿ ದಾಖಲಾದ ಕಳವು ಪ್ರಕರಣಗಳ ಮಾಲು ಮತ್ತು ಆರೋಪಿಗಳ ಪತ್ತೆಗಾಗಿ ಎಸ್ಪಿ ರಂಜಿತ್ ಕುಮಾರ್ ಬಂಡಾರು. ಹೆಚ್ಚುವರಿ ಪೆÇಲೀಸ್ ಅಧೀಕ್ಷಕ ಕುಮಾರಸ್ವಾಮಿ ಹಾಗೂ ಡಿವೈಎಸ್‍ಪಿ ಪಿ.ಕೆ.ದಿನಕರ್ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆದಿದೆ.

ಭರಮಸಾಗರ ಠಾಣೆಯ ಪೆÇಲೀಸ್ ಇನ್‍ಸ್ಪೆಕ್ಟರ್ ಪಿ.ಪ್ರಸಾದ್, ಪಿ.ಎಸ್.ಐ.ಗಳಾದ ಸುರೇಶ ಮತ್ತು ಎಲ್.ಆರ್.ಬಸವರಾಜ, ಸಿಬ್ಬಂದಿಗಳಾದ ಯಹ್ವಾಖಾನ್, ಶಿವರಾಜ್, ತಿಪ್ಪೇಶ್, ಧರ್ಮಪ್ಪ, ಸಿಗ್ಲೆಂಡ್ ಎಸ್ ಶೀನಿವಾಸ್, ಮಂಜುಳ ತಂಡದ ಕೆಲಸಕ್ಕೆ ಬಹುಮಾನವನ್ನೂ ಕೊಟ್ಟಿದ್ದಾರೆ.

ಇದನ್ನೂ ಓದಿ: ಸಚಿವ ಡಿ.ಸುಧಾಕರ್ ವರ್ತನೆಗೆ ಶಾಸಕ ಬಿ.ಜಿ.ಗೋವಿಂದಪ್ಪ ಅಸಮಧಾನ | ಹಿನ್ನೀರಿನ ರೈತರ ಸಂಕಷ್ಟ ಸೌಜನ್ಯಕ್ಕೂ ಆಲಿಸಿಲ್ಲ

ರಾಣೆಬೆನ್ನೂರು ಮೂಲದ ಎಂ.ಸಲೀಂ ಹಾಗೂ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನನ್ನು ಬಂದಿಸಿದ್ದಾರೆ.

ಭರಮಸಾಗರ ಪೆÇಲೀಸ್ ಠಾಣೆಯ 02 ಮನೆಕಳ್ಳತನ ಮತ್ತು 09 ಬೋಬಾರ್ ಸೈಕಲ್ ಕಳ್ಳತನ ಪ್ರಕರಣ, ಶಿಕಾರಿಪುರ ನಗರ ಪೆÇಲೀಸ್ ಠಾಣೆಯ 01 ಮನೆಕಳ್ಳತನ ಮತ್ತು 01 ಮೋಟಾರ್ ಸೈಕಲ್ ಕಳ್ಳತನ ಪ್ರಕರಣ, ಚಿತ್ರಹಳ್ಳಿ ಪೆÇಲೀಸ್ ಠಾಣೆಯ 02 ಮನೆಕಳ್ಳತನ ಪ್ರಕರಣ, ಸಂತೆಬೆನ್ನೂರು ಪೆÇಲೀಸ್ ಠಾಣೆಯ 01 ಮನೆಕಳ್ಳತನ ಪ್ರಕರಣ, ಅರಸೀಕೆರೆ ಪೆÇಲೀಸ್ ಠಾಣಿಯ 01 ಮನೆಕಳ್ಳತನ ಸೇರಿದಂತೆ ಒಟ್ಟು 11 ಪ್ರಕರಣಗಳಲ್ಲಿ ಸದರಿ ಆರೋಪಿಗಳು ಬೇಕಾಗಿದ್ದರು.

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು

ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್‌ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.

» Chitradurga News gmail

chitradurganews23@gmail.com

» Whatsapp Number

Share This Article
Leave a Comment

Leave a Reply

Your email address will not be published. Required fields are marked *

Exit mobile version