ನಿಧನವಾರ್ತೆ
ಬಸವೇಶ್ವರ ಟಾಕೀಸ್ ಮಾಲಿಕ ನಟರಾಜ್ ಇನ್ನಿಲ್ಲ
CHITRADURGA NEWS | 02 MARCH 2025
ಚಿತ್ರದುರ್ಗ: ನಗರದ ವಿ.ಪಿ.ಬಡಾವಣೆ ನಿವಾಸಿ, ಪ್ರತಿಷ್ಠಿತ ಬಸವೇಶ್ವರ ಚಿತ್ರಮಂದಿರದ ಮಾಲಿಕರು, ಬಸವೇಶ್ವರ ಮೋಟಾರ್ಸ್ ಸರ್ವೀಸ್ ಮಾಲಕರೂ ಆಗಿದ್ದ (ದಿ.ಅಕ್ಕಿರೆಡ್ಡಿ ಅವರ ಹಿರಿಯ ಪುತ್ರ) ಸಿ.ಪಿ.ನಟರಾಜ್ ಶನಿವಾರ ರಾತ್ರಿ ನಿಧನರಾಗಿದ್ದಾರೆ.
ಇದನ್ನೂ ಓದಿ: ಅತಿಥಿ ಶಿಕ್ಷಕರ ನೇಮಕಾತಿ | ನೇರ ಸಂದರ್ಶನಕ್ಕೆ ಆಹ್ವಾನ
ಮೃತರು ಪತ್ನಿ, ಪುತ್ರಿ ಸೇರಿದಂತೆ ಅಪಾರ ಸಂಖ್ಯೆಯ ಬಂಧು, ಬಳಗವನ್ನು ಅಗಲಿದ್ದಾರೆ.
ನಗರದ ಜೋಗಿಮಟ್ಟಿ ರಸ್ತೆಯಲ್ಲಿರುವ ಮುಕ್ತಿಧಾಮದಲ್ಲಿ ಇಂದು ಸಂಜೆ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.